mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Tuesday, 11 May 2021

ಉತ್ತರಾಖಂಡದಲ್ಲಿ ನೀರ್ಗಲ್ಲು ಸ್ಫೋಟ (Uttarakhand Glacier Burst)

      


 2021ರ ಫೆಬ್ರವರಿ 7 ರಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ಚಮೋಲಿ (Chamoli) ಜಿಲ್ಲೆಯಲ್ಲಿ ದೈತ್ಯ ನೀರ್ಗಲ್ಲು ಸ್ಫೋಟಗೊಂಡ ಪರಿಣಾಮ ಭಾರೀ ಹಿಮಪ್ರವಾಹ ಹಾಗೂ ನೆರೆ ಉಂಟಾಗಿ 170 ಕಾರ್ಮಿಕರು ಮೃತಪಟ್ಟಿದ್ದು, ಸುಮಾರು 175 ಮಂದಿ ನಾಪತ್ತೆಯಾಗಿದ್ದಾರೆ. ನಂದಾದೇವಿ ನೀರ್ಗಲ್ಲಿನ ಒಂದು ಭಾಗ ತುಂಡಾಗಿ ಅದರ ಅಡಿಯಲ್ಲಿ ಶೇಖರಣೆಗೊಂಡಿದ್ದ ನೀರು, ಭಾರೀ ಹಿಮ ಸಮೇತ ಕಣಿವೆಗಳ ಮೂಲಕ ರಭಸವಾಗಿ ನುಗ್ಗಿತ್ತು. ಈ ಪ್ರದೇಶದಲ್ಲಿ ಹರಿಯುತ್ತಿದ್ದ ರಿಷಿ ಗಂಗಾ

ಮತ್ತು ಮೌಲಿ ಗಂಗಾ ನದಿಗಳಿಗೆ ಸೇರ್ಪಡೆಗೊಂಡು ದೈತ್ಯ ಪ್ರವಾಹ ಸೃಷ್ಠಿಯಾಗಿತ್ತು. ನದಿ ಪಾತ್ರದ ಕಣಿವೆಯುದ್ದಕ್ಕೂ ಇದ್ದ ಸೇತುವೆಗಳು, ದಡದಲ್ಲಿದ್ದ ಕಟ್ಟಡಗಳು, ಬೃಹತ್ ಕಲ್ಲು ಬಂಡೆಗಳು, ಮಣ್ಣಿನ ರಾಶಿಯನ್ನು ಕೊಚ್ಚಿಕೊಂಡು ಪ್ರವಾಹ ಮುನ್ನುಗ್ಗಿತು. ಈ ಘಟನೆಯು 2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯವನ್ನು ಜ್ಞಾಪಿಸುವಂತಿತ್ತು.

    ಉತ್ತರಾಖಂಡದಲ್ಲಿ ಸಂಭವಿಸಿರುವುದು

 Glacier

ಉತ್ತರಾಖಂಡದಲ್ಲಿ ಸಂಭವಿಸಿರುವುದು ಹಿಮಪಾತವೋ ಅಥವಾ ಸ್ಟೇಷಿಯರೋ ಎಂದು ಸ್ಪಷ್ಟವಾದ ಮಾಹಿತಿಯಿಲ್ಲ. ಇದು ಹಿಮ ಹರಿಯುವ ಋತುಮಾನವಲ್ಲ. ಹೀಗಾಗಿ ಹಿಮಪಾತ Glacier ಆಗಿರುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ಯಾವುದೇ ಭೂಕಂಪವಾಗದೇ ಇರುವುದರಿಂದ ಗ್ಲೀಷಿಯರ್ ಬ್ರೇಕ್ ಕೂಡ ಆಗಿಲ್ಲ ಎಂದು ತಜ್ಞರು ಹೇಳಿದ್ದಾರೆ.


       ಹಿಮಪಾತ ಅಥವಾ ಅವಲಾಂಜ್ (Avalanche) ಬಗ್ಗೆ ಮಾಹಿತಿ: ಕಡಿದಾದ ಪರ್ವತಗಳ ಮೇಲೆ ಶೇಖರಣೆಯಾಗಿರುವ ಹಿಮರಾಶಿಯು ತಗ್ಗಿನತ್ತ ನುಗ್ಗಿ ಬರುವುದನ್ನು ಹಿಮಪಾತ ಎನ್ನಲಾಗುತ್ತದೆ. ಹಿಮ ಪರ್ವತಗಳ ಮೇಲೆ ಪದರ ಪದರವಾಗಿ ಹಿಮ ಶೇಖರಣೆಯಾಗುತ್ತಾ ಹೋಗಿ ಯಾವುದೋ ಒಂದು ಹಂತದಲ್ಲಿ ಆ ಹಿಮದ ಭಾರವನ್ನು ಕೆಳಗಿನ ಪದರ ಸಹಿಸಲಾಗದೆ ಕುಸಿಯುತ್ತದೆ. ಆಗ ಇಡೀ ಹಿಮಬೆಟ್ಟವೇ ಕುಸಿದಂತೆ ಪ್ರಪಾತಕ್ಕೆ ಹಿಮದ ಹೊಳೆ ಹರಿದು ಬರುತ್ತದೆ. ಇದನ್ನೇ ಹಿಮಪಾತ ಅಥವಾ ಅವಲಾಂಚ್ ಎನ್ನುವರು. ಹಿಮಪಾತಕ್ಕೆ ಸಿಲುಕುವ ಶೇ. 95 ಮಂದಿ ಮೃತಪಡುತ್ತಾರೆ. ಹಿಮರಾಶಿಯ ಮಧ್ಯದಲ್ಲಿ ಸಿಲುಕಿ ಉಸಿರುಗಟ್ಟುವುದರಿಂದ ಸಾವು ಸಂಭವಿಸುತ್ತದೆ.


Centre for Snow and Avalanche Study Estab lishment (SASE): ಚಂಡಿಗಡ


       ಹಿಮ ಮತ್ತು ಅವಲಾಂಚ್ ಈ ಅಧ್ಯಯನ ಕೇಂದ್ರವು ಚಂಡೀಗಢದಲ್ಲಿದೆ. 1991 ರಿಂದ ಈಚೆಗೆ ಕೆಳ ಹಿಮಾಲಯ ಭಾಗದಲ್ಲಿ ಸರಾಸರಿ ಉಷ್ಣ ತಾಪಮಾನ 0.65 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ ಎಂದು ದಾಖಲಿಸಿದೆ. 1940 ರಿಂದ 1960 ರವರೆಗೆ ಯಾವುದೇ ಅವಲಾಂಚ್ ದಾಖಲಾಗಿಲ್ಲ, ಆದರೆ 1970 ರಿಂದ ಈಚೆಗೆ ಸರಾಸರಿ ವರ್ಷಕ್ಕೊಂದು ಅವಲಾಂಚ್ ದಾಖಲಾಗುತ್ತಿದೆ. 

                   ಗ್ಲೀಷಿಯರ್‌ ಬ್ರೇಕ್: 

  ಕೆಲವೊಮ್ಮೆ ಸ್ಟೇಷಿಯರ್‌ಗಳ ನಡುವೆ ಹಿಮದ ಕೊಳಗಳು ನಿರ್ಮಾಣವಾಗುತ್ತವೆ. ಈ ಕೊಳಗಳಲ್ಲಿ ಭೂಕಂಪ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಭಾರೀ ಒತ್ತಡದ ಚಲನೆ ಉಂಟಾದಾಗ ಅವುಗಳ ಅಂಚು ಕುಸಿದು, ಆ ಕೊಳ ಪ್ರಪಾತಕ್ಕೆ ಹರಿದು ಬರಬಹುದು. ಇದನ್ನು ಕ್ಲೀಷಿಯರ್ ಬ್ರೇಕ್ (Glacier Break) ಎನ್ನುತ್ತಾರೆ.


ಹಿಮ ಪ್ರವಾಹಕ್ಕೆ ಕೊಚ್ಚಿಹೋದ ಪ್ರಮುಖ ವಿದ್ಯುತ್ ಘಟಕಗಳು


ದೌಲಿ ಗಂಗಾನದಿಗೆ (Dhauliganga River) ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ತಪೋವನ್ ವಿದ್ಯುತ್ ಘಟಕ ( (Tapovan Power Project) ಹಾಗೂ ರಿಷಿ ಗಂಗಾ ನದಿಗೆ ಅಡ್ಡಲಾಗಿ ನಿಲ್ಲಿಸಲಾಗಿರುವ ರಿಷಿ ಗಂಗಾ ವಿದ್ಯುತ್ ಘಟಕಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.200 ಕಾರ್ಮಿಕರು ಪ್ರವಾಹದ ವೇಳೆ ಈ ಎರಡೂ ಘಟಕಗಳ ಸುಮಾರು  ಕಾಮಗಾರಿಯಲ್ಲಿ ತೊಡಗಿದ್ದರು. ಈ ಕಾರ್ಮಿಕರು ಪ್ರವಾಹದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. 


ರಿಷಿ ಗಂಗಾ ಜಲವಿದ್ಯುತ್ ಯೋಜನೆ (Rishi Ganga Power Project)

      ಹಿಮಪಾತದಿಂದ ಹಾನಿಗೀಡಾಗಿರುವ ರಿಷಿ ಗಂಗಾ ಜಲವಿದ್ಯುತ್ ಯೋಜನೆಯು ವಲಯ ಆರಂಭದಿಂದಲೂ ವಿವಾದಕ್ಕೆ ಒಳಗಾಗಿದೆ. ಈ ಯೋಜನೆಯು ಪರಿಸರ ಸೂಕ್ಷ್ಮವ ಹಾಗೂ ಜೀವ ವೈವಿಧ್ಯತೆಗೆ ಧಕ್ಕೆ ತರಲಿದೆ ಎಂದು ವಾದಿಸಿ ಉತ್ತರಾಖಂಡದ ಹಲವು ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಐತಿಹಾಸಿಕ ಚಿಸ್ಕೋ ಚಳುವಳಿ ನಾಯಕಿ ಗೌರಾದೇವಿ ಮುಂತಾದವರು ಓಡಾಡಿದ ಪ್ರದೇಶವನ್ನೂ ಕೂಡಾ ಈ ಖಾಸಗಿ ಕಂಪನಿಯು ಸಾರ್ವಜನಿಕರಿಂದ ನಿರ್ಬಂಧಿಸಿದೆ ಎಂದು ಪ್ರಕರಣ ದಾಖಲಾಗಿತ್ತು.


ರಕ್ಷಣಾ ಕಾರ್ಯ (Rescue Operation): 

    5 ಎನ್‌ಡಿಆರ್‌ಎಫ್ ತಂಡಗಳು, ಉತ್ತರಾಖಂಡ ರಾಜ್ಯದ ವಿಪತ್ತು ನಿರ್ವಹಣಾ ತಂಡ, ಐಟಿಬಿಪಿ, ಭೂಸೇನೆ, ವಾಯುಪಡೆ ಜಂಟಿಯಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿವೆ. ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿಯಲ್ಲಿ ಸಿಲುಕಿದ್ದ 20 ಮಂದಿಯನ್ನು ರಕ್ಷಿಸಲಾಗಿದೆ. ಸೇನಾ ಹೆಲಿಕಾಪ್ಟರ್‌ ಮೂಲಕ ಹಲವರನ್ನು ರಕ್ಷಿಸಲಾಗಿದೆ.


ನೀರ್ಗಲ್ಲು ಸ್ಪೋಟದ ಪ್ರವಾಹದ ಸಂತ್ರಸ್ತರಿಗೆ ಪರಿಹಾರ: ಮೃತಪಟ್ಟವರಿಗೆ ಕೇಂದ್ರದಿಂದ 2 ಲಕ್ಷ ರೂ., ರಾಜ್ಯ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.


            ನೀರ್ಗಲ್ಲು ಸ್ಫೋಟಕ್ಕೆ ಕಾರಣ: 

     ತಾಪಮಾನ ಏರಿಕೆಯು ನೀರ್ಗಲ್ಲು ಸ್ಪೋಟಕ್ಕೆ ಕಾರಣ ಎನ್ನಲಾಗಿದೆ. ಬಿಸಿ ಹೆಚ್ಚಿದಂತೆ ಹಿಮ ಬಂಡೆಯ ಒಳಭಾಗದಲ್ಲಿ ಹೆಪ್ಪುಗಟ್ಟಿದ್ದ ನೀರು ಕರಗಿ ಸುತ್ತಲೂ ಮಂಜುಗಡ್ಡೆ ಆವರಿಸಿದ ಬೃಹತ್ ಹಿಮಸಾಗರದಂತೆ ಮಾರ್ಪಟ್ಟಿರುತ್ತದೆ. ತಾಪಮಾನ ಮತ್ತಷ್ಟು ಹೆಚ್ಚಾದಂತೆ ಸುತ್ತಲಿನ ಮಂಜುಗಡ್ಡೆ ದುರ್ಬಲಗೊಂಡು ಒಳಗಿರುವ ನೀರು ಒಮ್ಮೆಲೇ ಅಣೆಕಟ್ಟು ಹೊಡೆದ ರೀತಿಯಲ್ಲಿ ಸ್ಫೋಟಿಸಿ ಹೊರ ನುಗ್ಗುತ್ತದೆ. ಇದೇ ರೀತಿಯಲ್ಲಿ ಉತ್ತರಾಖಂಡ ರಾಜ್ಯದಲ್ಲೂ ಹಿಮಸಾಗರ ಸ್ಫೋಟವಾಗಿದೆ ಎಂದು

ಊಹಿಸಲಾಗಿದೆ. 


ನೀರ್ಗಲ್ಲು ಸ್ಫೋಟದಿಂದ ಜಲ ವಿದ್ಯುತ್‌ಗಳಿಗೆ ಅಪಾಯ: 



       ಹಿಮಾಲಯದ ಮೂಲೆಮೂಲೆಯಲ್ಲೂ ಜಲವಿದ್ಯುತ್ ಯೋಜನೆಗಳಿದ್ದು, ಇವು ಮುಂದಿನ ದಿನಗಳಲ್ಲಿ ನೀರ್ಗಲ್ಲು ಸ್ಫೋಟದಿಂದ ಅಪಾಯಕ್ಕೆ ಸಿಲುಕುವ ಸಂಭವವಿದೆ. ಸುಮಾರು 70 ಜಲವಿದ್ಯುತ್ ಯೋಜನೆಗಳು ಸೂಕ್ಷ್ಮಭಾಗದಲ್ಲಿದ್ದು, ಭೂಕಂಪ ಅಥವಾ ಭೂಕುಸಿತದಿಂದ ಅಪಾರ ಹಾನಿ ಸೃಷ್ಟಿಸಬಹುದೆಂದು ತಜ್ಞರು ಮೊದಲೇ ಅಂದಾಜಿಸಿದ್ದರು. ಪ್ರಸ್ತುತ ಈ ಅನಾಹುತದಲ್ಲಿ ರಿಷಿ ಗಂಗಾ ಹೈಡೋ ಎಲೆಕ್ಟಿಕ್ ಘಟಕವು ಅಪಾಯಕ್ಕೆ ಒಳಗಾಗಿದೆ.


No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

Current Affairs Quiz - September, 2021

  1 ಇತ್ತೀಚೆಗೆ ನಿಧನರಾದ ಬುದ್ಧದೇವ್ ಗುಹಾ ಯಾವ ವೃತ್ತಿಯೊಂದಿಗೆ ಸಂಬಂಧ ಹೊಂದಿದ್ದರು ? [A] ಕ್ರೀಡಾಪಟು [B] ಬರಹಗಾರ [C] ರಾಜಕಾರಣಿ [D] ವ್ಯಾಪಾರ-ವ್ಯಕ್ತಿ answar ಸರಿಯಾದ ಉತ್ತರ:   ಬಿ [ಬರಹಗಾರ] ಟಿಪ್ಪಣಿಗಳು: ಮಧುಕಾರಿ ಸೇರಿದಂತೆ ಹಲವಾರು ಜನಪ್ರಿಯ ಪುಸ್ತಕಗಳನ್ನು ಬರೆದ ಖ್ಯಾತ ಬಂಗಾಳಿ ಬರಹಗಾರ ಬುದ್ಧದೇವ್ ಗುಹಾ ಇತ್ತೀಚೆಗೆ ನಿಧನರಾದರು. ಬರಹಗಾರ ತನ್ನ 85 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಆನಂದ ಪುರಸ್ಕಾರ ಮತ್ತು ಶರತ್ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ಬಂಗಾಳಿ ಸಾಹಿತ್ಯದ ಲೇಖಕರು , ' ಕೋಯೆಲ್ ', ' ಕೋಜಗರ್ ', ' ಮಧುಕರಿ ', ' ಜಂಗಲಮಹಲ್ ', ' ಚರಿಬೇತಿ ' ಇತ್ಯಾದಿಗಳನ್ನು ಒಳಗೊಂಡಂತೆ ಗಮನಾರ್ಹ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬಂಗಾಳಿ ಸಾಹಿತ್ಯದಲ್ಲಿ ' ರಿವು ಮತ್ತು ರಿಜುಡಾ ' ಹೆಸರಿನ ಎರಡು ಜನಪ್ರಿಯ ಕಾಲ್ಪನಿಕ ಪಾತ್ರಗಳ ಸೃಷ್ಟಿಕರ್ತ. Current Affairs Quiz - October, 2021     2. ಇತ್ತೀಚೆಗೆ ಭಾರತ ಮತ್ತು ಅಲ್ಜೀರಿಯಾ ನಡುವಿನ ನೌಕಾ ವ್ಯಾಯಾಮವನ್ನು ಎಲ್ಲಿ ನಡೆಸಲಾಯಿತು ? [A] ಬಂಗಾಳ ಕೊಲ್ಲಿ [B] ಅರೇಬಿಯನ್ ಸಮುದ್ರ [C] ಹಿಂದೂ ಮಹಾಸಾಗರ [D] ಮೆಡಿಟರೇನಿಯನ್ ಸಮುದ್ರ answar ಸರಿಯಾದ ಉತ್ತರ:   ಡಿ [ಮೆಡಿಟರೇನಿಯನ್ ಸಮುದ್ರ] ಟಿಪ್ಪಣಿಗಳು: ಇತ್ತ...

ಆರ್ಕಿಮಿಡಿಸ್ ತತ್ವ

ಸಾರಾಂಶ ·    ತೇಲುವ ಬಲವನ್ನು ವಿವರಿಸಿ. ·    ರಾಜ್ಯ ಆರ್ಕಿಮಿಡಿಸ್ ತತ್ವ. ·    ವಸ್ತುಗಳು ಏಕೆ ತೇಲುತ್ತವೆ ಅಥವಾ ಮುಳುಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ·    ಸಾಂದ್ರತೆ ಮತ್ತು ಆರ್ಕಿಮಿಡಿಸ್ ತತ್ವದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಿ. ನೀವು ಬೆಚ್ಚಗಿನ ಸ್ನಾನದಲ್ಲಿ ವಿಶ್ರಾಂತಿ ಪಡೆಯುವುದರಿಂದ , ನಿಮ್ಮ ತೋಳುಗಳು ವಿಚಿತ್ರವಾಗಿ ಭಾರವಾಗಿರುತ್ತದೆ.   ಏಕೆಂದರೆ ನೀವು ಇನ್ನು ಮುಂದೆ ನೀರಿನ ತೇಲುವ ಬೆಂಬಲವನ್ನು ಹೊಂದಿಲ್ಲ.   ಈ ತೇಲುವ ಶಕ್ತಿ ಎಲ್ಲಿಂದ ಬರುತ್ತದೆ ?   ಕೆಲವು ವಿಷಯಗಳು ತೇಲುತ್ತವೆ ಮತ್ತು ಇತರವು ಏಕೆ ಆಗುವುದಿಲ್ಲ ?   ಮುಳುಗುವ ವಸ್ತುಗಳು ದ್ರವದಿಂದ ಯಾವುದೇ ಬೆಂಬಲವನ್ನು ಪಡೆಯುತ್ತವೆಯೇ ?   ನಿಮ್ಮ ದೇಹವು ವಾತಾವರಣದಿಂದ ತೇಲುತ್ತದೆಯೇ ಅಥವಾ ಹೀಲಿಯಂ ಬಲೂನ್‌ಗಳು ಮಾತ್ರ ಪರಿಣಾಮ ಬೀರುತ್ತವೆಯೇ ?   (   ಚಿತ್ರ 1   ನೋಡಿ .) ಚಿತ್ರ 1.   (a) ಈ ಆಂಕರ್‌ನಂತೆ ಮುಳುಗುವ ವಸ್ತುಗಳು ಸಹ ಮುಳುಗಿದಾಗ ನೀರಿನಿಂದ ಭಾಗಶಃ ಬೆಂಬಲಿತವಾಗಿದೆ.   (b) ಜಲಾಂತರ್ಗಾಮಿ ನೌಕೆಗಳು ಹೊಂದಾಣಿಕೆಯ ಸಾಂದ್ರತೆಯನ್ನು ಹೊಂದಿರುತ್ತವೆ (ನಿಲುಭಾರ ಟ್ಯಾಂಕ್‌ಗಳು) ಆದ್ದರಿಂದ ಅವು ಬಯಸಿದಂತೆ ತೇಲಬಹುದು ಅಥವಾ ಮುಳುಗಬಹುದು.   ( ಕ್ರೆಡಿಟ್: ಅಲೈಡ್ ನೇವಿ) (ಸಿ) ಹೀಲಿಯಂ ತುಂಬಿದ ಬಲೂನ...

ಭಾರತ ಸರ್ಕಾರದ ಕಾಯಿದೆ, 1858: ಪ್ರಮುಖ ಲಕ್ಷಣಗಳು

  ಕಂಪನಿಯ ಆಡಳಿತವನ್ನು ಕೊನೆಗೊಳಿಸಲು 1858 ರ ಭಾರತ ಸರ್ಕಾರದ ಕಾಯಿದೆಯನ್ನು ಅಂಗೀಕರಿಸಲಾಯಿತು ಮತ್ತು ಅದನ್ನು 1857 ರ ದಂಗೆಯ ಪರಿಣಾಮವಾಗಿ ಬ್ರಿಟಿಷ್ ಕಿರೀಟಕ್ಕೆ ವರ್ಗಾಯಿಸಲಾಯಿತು. ಭಾರತದ ಬ್ರಿಟಿಷ್ ಗವರ್ನರ್-ಜನರಲ್‌ಗೆ ವೈಸ್‌ರಾಯ್ ಎಂಬ ಬಿರುದನ್ನು ನೀಡಲಾಯಿತು , ಅವರು ರಾಜನ ಪ್ರತಿನಿಧಿಯಾದರು.   ಆಗಸ್ಟ್ 1858 ರಲ್ಲಿ , ಬ್ರಿಟಿಷ್ ಸಂಸತ್ತು ಕಂಪನಿಯ ಆಡಳಿತವನ್ನು ಕೊನೆಗೊಳಿಸುವ ಕಾಯಿದೆಯನ್ನು ಅಂಗೀಕರಿಸಿತು.   ಭಾರತದಲ್ಲಿ ಬ್ರಿಟಿಷ್ ಸರ್ಕಾರದ ನಿಯಂತ್ರಣವನ್ನು ಬ್ರಿಟಿಷ್ ಕಿರೀಟಕ್ಕೆ ವರ್ಗಾಯಿಸಲಾಯಿತು.   ಈ ಸಮಯದಲ್ಲಿ , ವಿಕ್ಟೋರಿಯಾ ಬ್ರಿಟನ್ನಿನ ರಾಣಿಯಾಗಿದ್ದಳು.   ಬ್ರಿಟನ್‌ನಲ್ಲಿನ ಸರ್ವೋಚ್ಚ ಸಂಸ್ಥೆಯು ಬ್ರಿಟಿಷ್ ಸಂಸತ್ತಾಗಿತ್ತು , ಇದಕ್ಕೆ ಬ್ರಿಟಿಷ್ ಸರ್ಕಾರವು ಜವಾಬ್ದಾರನಾಗಿದ್ದನು.   ಆದಾಗ್ಯೂ , ಬ್ರಿಟಿಷ್ ಸರ್ಕಾರದ ಎಲ್ಲಾ ಚಟುವಟಿಕೆಗಳನ್ನು ರಾಜನ ಹೆಸರಿನಲ್ಲಿ ನಡೆಸಲಾಯಿತು.   ರಾಜ್ಯ ಕಾರ್ಯದರ್ಶಿ ಎಂದು ಕರೆಯಲ್ಪಡುವ ಬ್ರಿಟಿಷ್ ಸರ್ಕಾರದ ಮಂತ್ರಿಯನ್ನು ಭಾರತ ಸರ್ಕಾರದ ಜವಾಬ್ದಾರಿಯನ್ನು ವಹಿಸಲಾಯಿತು.   ಬ್ರಿಟಿಷ್ ಸರ್ಕಾರವು ಸಂಸತ್ತಿಗೆ ಜವಾಬ್ದಾರರಾಗಿದ್ದರಿಂದ , ಭಾರತದ ಸರ್ವೋಚ್ಚ ಸಂಸ್ಥೆಯು ಬ್ರಿಟಿಷ್ ಸಂಸತ್ತಾಗಿತ್ತು.   ಭಾರತದ ಬ್ರಿಟಿಷ್ ಗವರ್ನರ್-ಜನರಲ್‌ಗೆ ಈಗ ವೈಸರಾಯ್ ಎಂಬ ಬಿರುದನ್ನು ನೀಡಲಾಯಿತು , ಅಂದರೆ ರಾಜನ ಪ್ರತಿನಿಧಿ. ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.