mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Tuesday, 11 May 2021

ಉತ್ತರಾಖಂಡದಲ್ಲಿ ನೀರ್ಗಲ್ಲು ಸ್ಫೋಟ (Uttarakhand Glacier Burst)

      


 2021ರ ಫೆಬ್ರವರಿ 7 ರಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ಚಮೋಲಿ (Chamoli) ಜಿಲ್ಲೆಯಲ್ಲಿ ದೈತ್ಯ ನೀರ್ಗಲ್ಲು ಸ್ಫೋಟಗೊಂಡ ಪರಿಣಾಮ ಭಾರೀ ಹಿಮಪ್ರವಾಹ ಹಾಗೂ ನೆರೆ ಉಂಟಾಗಿ 170 ಕಾರ್ಮಿಕರು ಮೃತಪಟ್ಟಿದ್ದು, ಸುಮಾರು 175 ಮಂದಿ ನಾಪತ್ತೆಯಾಗಿದ್ದಾರೆ. ನಂದಾದೇವಿ ನೀರ್ಗಲ್ಲಿನ ಒಂದು ಭಾಗ ತುಂಡಾಗಿ ಅದರ ಅಡಿಯಲ್ಲಿ ಶೇಖರಣೆಗೊಂಡಿದ್ದ ನೀರು, ಭಾರೀ ಹಿಮ ಸಮೇತ ಕಣಿವೆಗಳ ಮೂಲಕ ರಭಸವಾಗಿ ನುಗ್ಗಿತ್ತು. ಈ ಪ್ರದೇಶದಲ್ಲಿ ಹರಿಯುತ್ತಿದ್ದ ರಿಷಿ ಗಂಗಾ

ಮತ್ತು ಮೌಲಿ ಗಂಗಾ ನದಿಗಳಿಗೆ ಸೇರ್ಪಡೆಗೊಂಡು ದೈತ್ಯ ಪ್ರವಾಹ ಸೃಷ್ಠಿಯಾಗಿತ್ತು. ನದಿ ಪಾತ್ರದ ಕಣಿವೆಯುದ್ದಕ್ಕೂ ಇದ್ದ ಸೇತುವೆಗಳು, ದಡದಲ್ಲಿದ್ದ ಕಟ್ಟಡಗಳು, ಬೃಹತ್ ಕಲ್ಲು ಬಂಡೆಗಳು, ಮಣ್ಣಿನ ರಾಶಿಯನ್ನು ಕೊಚ್ಚಿಕೊಂಡು ಪ್ರವಾಹ ಮುನ್ನುಗ್ಗಿತು. ಈ ಘಟನೆಯು 2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯವನ್ನು ಜ್ಞಾಪಿಸುವಂತಿತ್ತು.

    ಉತ್ತರಾಖಂಡದಲ್ಲಿ ಸಂಭವಿಸಿರುವುದು

 Glacier

ಉತ್ತರಾಖಂಡದಲ್ಲಿ ಸಂಭವಿಸಿರುವುದು ಹಿಮಪಾತವೋ ಅಥವಾ ಸ್ಟೇಷಿಯರೋ ಎಂದು ಸ್ಪಷ್ಟವಾದ ಮಾಹಿತಿಯಿಲ್ಲ. ಇದು ಹಿಮ ಹರಿಯುವ ಋತುಮಾನವಲ್ಲ. ಹೀಗಾಗಿ ಹಿಮಪಾತ Glacier ಆಗಿರುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ಯಾವುದೇ ಭೂಕಂಪವಾಗದೇ ಇರುವುದರಿಂದ ಗ್ಲೀಷಿಯರ್ ಬ್ರೇಕ್ ಕೂಡ ಆಗಿಲ್ಲ ಎಂದು ತಜ್ಞರು ಹೇಳಿದ್ದಾರೆ.


       ಹಿಮಪಾತ ಅಥವಾ ಅವಲಾಂಜ್ (Avalanche) ಬಗ್ಗೆ ಮಾಹಿತಿ: ಕಡಿದಾದ ಪರ್ವತಗಳ ಮೇಲೆ ಶೇಖರಣೆಯಾಗಿರುವ ಹಿಮರಾಶಿಯು ತಗ್ಗಿನತ್ತ ನುಗ್ಗಿ ಬರುವುದನ್ನು ಹಿಮಪಾತ ಎನ್ನಲಾಗುತ್ತದೆ. ಹಿಮ ಪರ್ವತಗಳ ಮೇಲೆ ಪದರ ಪದರವಾಗಿ ಹಿಮ ಶೇಖರಣೆಯಾಗುತ್ತಾ ಹೋಗಿ ಯಾವುದೋ ಒಂದು ಹಂತದಲ್ಲಿ ಆ ಹಿಮದ ಭಾರವನ್ನು ಕೆಳಗಿನ ಪದರ ಸಹಿಸಲಾಗದೆ ಕುಸಿಯುತ್ತದೆ. ಆಗ ಇಡೀ ಹಿಮಬೆಟ್ಟವೇ ಕುಸಿದಂತೆ ಪ್ರಪಾತಕ್ಕೆ ಹಿಮದ ಹೊಳೆ ಹರಿದು ಬರುತ್ತದೆ. ಇದನ್ನೇ ಹಿಮಪಾತ ಅಥವಾ ಅವಲಾಂಚ್ ಎನ್ನುವರು. ಹಿಮಪಾತಕ್ಕೆ ಸಿಲುಕುವ ಶೇ. 95 ಮಂದಿ ಮೃತಪಡುತ್ತಾರೆ. ಹಿಮರಾಶಿಯ ಮಧ್ಯದಲ್ಲಿ ಸಿಲುಕಿ ಉಸಿರುಗಟ್ಟುವುದರಿಂದ ಸಾವು ಸಂಭವಿಸುತ್ತದೆ.


Centre for Snow and Avalanche Study Estab lishment (SASE): ಚಂಡಿಗಡ


       ಹಿಮ ಮತ್ತು ಅವಲಾಂಚ್ ಈ ಅಧ್ಯಯನ ಕೇಂದ್ರವು ಚಂಡೀಗಢದಲ್ಲಿದೆ. 1991 ರಿಂದ ಈಚೆಗೆ ಕೆಳ ಹಿಮಾಲಯ ಭಾಗದಲ್ಲಿ ಸರಾಸರಿ ಉಷ್ಣ ತಾಪಮಾನ 0.65 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ ಎಂದು ದಾಖಲಿಸಿದೆ. 1940 ರಿಂದ 1960 ರವರೆಗೆ ಯಾವುದೇ ಅವಲಾಂಚ್ ದಾಖಲಾಗಿಲ್ಲ, ಆದರೆ 1970 ರಿಂದ ಈಚೆಗೆ ಸರಾಸರಿ ವರ್ಷಕ್ಕೊಂದು ಅವಲಾಂಚ್ ದಾಖಲಾಗುತ್ತಿದೆ. 

                   ಗ್ಲೀಷಿಯರ್‌ ಬ್ರೇಕ್: 

  ಕೆಲವೊಮ್ಮೆ ಸ್ಟೇಷಿಯರ್‌ಗಳ ನಡುವೆ ಹಿಮದ ಕೊಳಗಳು ನಿರ್ಮಾಣವಾಗುತ್ತವೆ. ಈ ಕೊಳಗಳಲ್ಲಿ ಭೂಕಂಪ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಭಾರೀ ಒತ್ತಡದ ಚಲನೆ ಉಂಟಾದಾಗ ಅವುಗಳ ಅಂಚು ಕುಸಿದು, ಆ ಕೊಳ ಪ್ರಪಾತಕ್ಕೆ ಹರಿದು ಬರಬಹುದು. ಇದನ್ನು ಕ್ಲೀಷಿಯರ್ ಬ್ರೇಕ್ (Glacier Break) ಎನ್ನುತ್ತಾರೆ.


ಹಿಮ ಪ್ರವಾಹಕ್ಕೆ ಕೊಚ್ಚಿಹೋದ ಪ್ರಮುಖ ವಿದ್ಯುತ್ ಘಟಕಗಳು


ದೌಲಿ ಗಂಗಾನದಿಗೆ (Dhauliganga River) ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ತಪೋವನ್ ವಿದ್ಯುತ್ ಘಟಕ ( (Tapovan Power Project) ಹಾಗೂ ರಿಷಿ ಗಂಗಾ ನದಿಗೆ ಅಡ್ಡಲಾಗಿ ನಿಲ್ಲಿಸಲಾಗಿರುವ ರಿಷಿ ಗಂಗಾ ವಿದ್ಯುತ್ ಘಟಕಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.200 ಕಾರ್ಮಿಕರು ಪ್ರವಾಹದ ವೇಳೆ ಈ ಎರಡೂ ಘಟಕಗಳ ಸುಮಾರು  ಕಾಮಗಾರಿಯಲ್ಲಿ ತೊಡಗಿದ್ದರು. ಈ ಕಾರ್ಮಿಕರು ಪ್ರವಾಹದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. 


ರಿಷಿ ಗಂಗಾ ಜಲವಿದ್ಯುತ್ ಯೋಜನೆ (Rishi Ganga Power Project)

      ಹಿಮಪಾತದಿಂದ ಹಾನಿಗೀಡಾಗಿರುವ ರಿಷಿ ಗಂಗಾ ಜಲವಿದ್ಯುತ್ ಯೋಜನೆಯು ವಲಯ ಆರಂಭದಿಂದಲೂ ವಿವಾದಕ್ಕೆ ಒಳಗಾಗಿದೆ. ಈ ಯೋಜನೆಯು ಪರಿಸರ ಸೂಕ್ಷ್ಮವ ಹಾಗೂ ಜೀವ ವೈವಿಧ್ಯತೆಗೆ ಧಕ್ಕೆ ತರಲಿದೆ ಎಂದು ವಾದಿಸಿ ಉತ್ತರಾಖಂಡದ ಹಲವು ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಐತಿಹಾಸಿಕ ಚಿಸ್ಕೋ ಚಳುವಳಿ ನಾಯಕಿ ಗೌರಾದೇವಿ ಮುಂತಾದವರು ಓಡಾಡಿದ ಪ್ರದೇಶವನ್ನೂ ಕೂಡಾ ಈ ಖಾಸಗಿ ಕಂಪನಿಯು ಸಾರ್ವಜನಿಕರಿಂದ ನಿರ್ಬಂಧಿಸಿದೆ ಎಂದು ಪ್ರಕರಣ ದಾಖಲಾಗಿತ್ತು.


ರಕ್ಷಣಾ ಕಾರ್ಯ (Rescue Operation): 

    5 ಎನ್‌ಡಿಆರ್‌ಎಫ್ ತಂಡಗಳು, ಉತ್ತರಾಖಂಡ ರಾಜ್ಯದ ವಿಪತ್ತು ನಿರ್ವಹಣಾ ತಂಡ, ಐಟಿಬಿಪಿ, ಭೂಸೇನೆ, ವಾಯುಪಡೆ ಜಂಟಿಯಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿವೆ. ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿಯಲ್ಲಿ ಸಿಲುಕಿದ್ದ 20 ಮಂದಿಯನ್ನು ರಕ್ಷಿಸಲಾಗಿದೆ. ಸೇನಾ ಹೆಲಿಕಾಪ್ಟರ್‌ ಮೂಲಕ ಹಲವರನ್ನು ರಕ್ಷಿಸಲಾಗಿದೆ.


ನೀರ್ಗಲ್ಲು ಸ್ಪೋಟದ ಪ್ರವಾಹದ ಸಂತ್ರಸ್ತರಿಗೆ ಪರಿಹಾರ: ಮೃತಪಟ್ಟವರಿಗೆ ಕೇಂದ್ರದಿಂದ 2 ಲಕ್ಷ ರೂ., ರಾಜ್ಯ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.


            ನೀರ್ಗಲ್ಲು ಸ್ಫೋಟಕ್ಕೆ ಕಾರಣ: 

     ತಾಪಮಾನ ಏರಿಕೆಯು ನೀರ್ಗಲ್ಲು ಸ್ಪೋಟಕ್ಕೆ ಕಾರಣ ಎನ್ನಲಾಗಿದೆ. ಬಿಸಿ ಹೆಚ್ಚಿದಂತೆ ಹಿಮ ಬಂಡೆಯ ಒಳಭಾಗದಲ್ಲಿ ಹೆಪ್ಪುಗಟ್ಟಿದ್ದ ನೀರು ಕರಗಿ ಸುತ್ತಲೂ ಮಂಜುಗಡ್ಡೆ ಆವರಿಸಿದ ಬೃಹತ್ ಹಿಮಸಾಗರದಂತೆ ಮಾರ್ಪಟ್ಟಿರುತ್ತದೆ. ತಾಪಮಾನ ಮತ್ತಷ್ಟು ಹೆಚ್ಚಾದಂತೆ ಸುತ್ತಲಿನ ಮಂಜುಗಡ್ಡೆ ದುರ್ಬಲಗೊಂಡು ಒಳಗಿರುವ ನೀರು ಒಮ್ಮೆಲೇ ಅಣೆಕಟ್ಟು ಹೊಡೆದ ರೀತಿಯಲ್ಲಿ ಸ್ಫೋಟಿಸಿ ಹೊರ ನುಗ್ಗುತ್ತದೆ. ಇದೇ ರೀತಿಯಲ್ಲಿ ಉತ್ತರಾಖಂಡ ರಾಜ್ಯದಲ್ಲೂ ಹಿಮಸಾಗರ ಸ್ಫೋಟವಾಗಿದೆ ಎಂದು

ಊಹಿಸಲಾಗಿದೆ. 


ನೀರ್ಗಲ್ಲು ಸ್ಫೋಟದಿಂದ ಜಲ ವಿದ್ಯುತ್‌ಗಳಿಗೆ ಅಪಾಯ: 



       ಹಿಮಾಲಯದ ಮೂಲೆಮೂಲೆಯಲ್ಲೂ ಜಲವಿದ್ಯುತ್ ಯೋಜನೆಗಳಿದ್ದು, ಇವು ಮುಂದಿನ ದಿನಗಳಲ್ಲಿ ನೀರ್ಗಲ್ಲು ಸ್ಫೋಟದಿಂದ ಅಪಾಯಕ್ಕೆ ಸಿಲುಕುವ ಸಂಭವವಿದೆ. ಸುಮಾರು 70 ಜಲವಿದ್ಯುತ್ ಯೋಜನೆಗಳು ಸೂಕ್ಷ್ಮಭಾಗದಲ್ಲಿದ್ದು, ಭೂಕಂಪ ಅಥವಾ ಭೂಕುಸಿತದಿಂದ ಅಪಾರ ಹಾನಿ ಸೃಷ್ಟಿಸಬಹುದೆಂದು ತಜ್ಞರು ಮೊದಲೇ ಅಂದಾಜಿಸಿದ್ದರು. ಪ್ರಸ್ತುತ ಈ ಅನಾಹುತದಲ್ಲಿ ರಿಷಿ ಗಂಗಾ ಹೈಡೋ ಎಲೆಕ್ಟಿಕ್ ಘಟಕವು ಅಪಾಯಕ್ಕೆ ಒಳಗಾಗಿದೆ.


No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಕಂಪ್ಯೂಟರ್ ಅಪ್ಲಿಕೇಶನ್ಗಳು application of computer in kannada

ಕಂಪ್ಯೂಟರ್‌ಗಳು ವಿವಿಧ ಕೈಗಾರಿಕೆಗಳು ಮತ್ತು ವಲಯಗಳಲ್ಲಿ ವ್ಯಾಪಕವಾದ ಅಪ್ಲಿಕೇಶನ್‌ಗಳನ್ನು ಹೊಂದಿವೆ. ಕಂಪ್ಯೂಟರ್‌ಗಳ ಕೆಲವು ಸಾಮಾನ್ಯ ಅಪ್ಲಿಕೇಶನ್‌ಗಳು: ವ್ಯಾಪಾರ: ಲೆಕ್ಕಪತ್ರ ನಿರ್ವಹಣೆ, ವೇತನದಾರರ ನಿರ್ವಹಣೆ, ದಾಸ್ತಾನು ನಿರ್ವಹಣೆ ಮತ್ತು ಗ್ರಾಹಕ ಸಂಬಂಧ ನಿರ್ವಹಣೆ (CRM) ನಂತಹ ಕಾರ್ಯಗಳಿಗಾಗಿ ವ್ಯವಹಾರಗಳಲ್ಲಿ ಕಂಪ್ಯೂಟರ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಶಿಕ್ಷಣ: ಆನ್‌ಲೈನ್ ಕಲಿಕೆ, ಸಂಶೋಧನೆ ಮತ್ತು ತರಗತಿಯ ಪ್ರಸ್ತುತಿಗಳಂತಹ ಕಾರ್ಯಗಳಿಗಾಗಿ ಶಿಕ್ಷಣದಲ್ಲಿ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತದೆ. ಹೆಲ್ತ್‌ಕೇರ್: ವೈದ್ಯಕೀಯ ಚಿತ್ರಣ, ಎಲೆಕ್ಟ್ರಾನಿಕ್ ವೈದ್ಯಕೀಯ ದಾಖಲೆಗಳು (ಇಎಂಆರ್‌ಗಳು) ಮತ್ತು ಟೆಲಿಮೆಡಿಸಿನ್‌ನಂತಹ ಕಾರ್ಯಗಳಿಗಾಗಿ ಕಂಪ್ಯೂಟರ್‌ಗಳನ್ನು ಆರೋಗ್ಯ ರಕ್ಷಣೆಯಲ್ಲಿ ಬಳಸಲಾಗುತ್ತದೆ. ವಿಜ್ಞಾನ ಮತ್ತು ಎಂಜಿನಿಯರಿಂಗ್: ಕಂಪ್ಯೂಟರ್‌ಗಳನ್ನು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಸಿಮ್ಯುಲೇಶನ್, ಮಾಡೆಲಿಂಗ್ ಮತ್ತು ಡೇಟಾ ವಿಶ್ಲೇಷಣೆಯಂತಹ ಕಾರ್ಯಗಳಿಗಾಗಿ ಬಳಸಲಾಗುತ್ತದೆ. ಮನರಂಜನೆ: ಗೇಮಿಂಗ್, ವಿಡಿಯೋ ಮತ್ತು ಆಡಿಯೋ ಉತ್ಪಾದನೆ ಮತ್ತು ಸ್ಟ್ರೀಮಿಂಗ್ ಸೇವೆಗಳಂತಹ ಕಾರ್ಯಗಳಿಗಾಗಿ ಕಂಪ್ಯೂಟರ್‌ಗಳನ್ನು ಮನರಂಜನೆಯಲ್ಲಿ ಬಳಸಲಾಗುತ್ತದೆ. ಸಂವಹನ: ಇಮೇಲ್, ಸಂದೇಶ ಕಳುಹಿಸುವಿಕೆ ಮತ್ತು ವೀಡಿಯೊ ಕಾನ್ಫರೆನ್ಸಿಂಗ್‌ನಂತಹ ಸಂವಹನ ಉದ್ದೇಶಗಳಿಗಾಗಿ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತದೆ. ಸಾರಿಗೆ: ಸಂಚರಣೆ, ಮಾರ್...

ವೀರ್ ಸಾವರ್ಕರ್ ಯಾರು ಮತ್ತು ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಹೇಗೆ ಕೊಡುಗೆ ನೀಡಿದರು?

  ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ದೇಶಭಕ್ತ ವೀರ್ ಸಾವರ್ಕರ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸಿದರು.   ಅವರು 28 ಮೇ , 1883 ರಂದು ನಾಸಿಕ್‌ನ ಭಾಗ್‌ಪುರ ಗ್ರಾಮದಲ್ಲಿ ಜನಿಸಿದರು.   ವೀರ್ ಸಾವರ್ಕರ್ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಗಳ ಬಗ್ಗೆ ಇನ್ನಷ್ಟು ಓದೋಣ. ವೀರ್ ಸಾವರ್ಕರ್ ಅವರು 28 ಮೇ , 1883 ರಂದು ನಾಸಿಕ್‌ನ ಭಾಗ್‌ಪುರ ಗ್ರಾಮದಲ್ಲಿ ಜನಿಸಿದರು ಮತ್ತು 26 ಫೆಬ್ರವರಿ 1966 ರಂದು ಬಾಂಬೆ (ಈಗ ಮುಂಬೈ) ರಂದು ನಿಧನರಾದರು.   ಅವರ ಪೂರ್ಣ ಹೆಸರು ವಿನಾಯಕ ದಾಮೋದರ್ ಸಾವರ್ಕರ್.   ಅವರು ಸ್ವಾತಂತ್ರ್ಯ ಹೋರಾಟಗಾರ , ರಾಜಕಾರಣಿ , ವಕೀಲ , ಸಮಾಜ ಸುಧಾರಕ ಮತ್ತು ಹಿಂದುತ್ವದ ತತ್ವಶಾಸ್ತ್ರದ ಸೂತ್ರಧಾರರಾಗಿದ್ದರು.   ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ದೇಶಭಕ್ತ ವೀರ್ ಸಾವರ್ಕರ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.   ಎಂದು ಟ್ವೀಟ್ ಮಾಡಿದ್ದಾರೆ ಅವರ ತಂದೆಯ ಹೆಸರು ದಾಮೋದರಪಂತ್ ಸಾವರ್ಕರ್ ಮತ್ತು ತಾಯಿ ರಾಧಾಬಾಯಿ.   ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡರು.   ಅವರು ತಮ್ಮ ಹಿರಿಯ ಸಹೋದರ ಗಣೇಶ್ (ಬಾಬಾರಾವ್) ನಿಂದ ಬಲವಾಗಿ ಪ್ರಭಾವಿತರಾಗಿದ್ದರು. ವೀರ್ ಸಾವರ್ಕರ್ ಬಗ್ಗೆ ಸತ್ಯಗಳು ಹೆಸರು - ವಿನಾಯಕ ದಾಮೋದರ್ ಸಾವರ್...

ಭಾರತದ ನೆರೆಯ ರಾಷ್ಟ್ರಗಳು, ಪಟ್ಟಿ, ನಕ್ಷೆ, ರಾಜಧಾನಿಗಳು, ಧ್ವಜಗಳು

ಭಾರತದ ನೆರೆಯ ರಾಷ್ಟ್ರಗಳು ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ. UPSC ಗಾಗಿ ಭಾರತದ ನೆರೆಯ ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ     ಪರಿವಿಡಿ ಭಾರತದ ನೆರೆಯ ರಾಷ್ಟ್ರಗಳು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಭಾರತದ ಗಡಿಯಲ್ಲಿರುವ ದೇಶಗಳು. ಮ್ಯಾನ್ಮಾರ್ ಮತ್ತು ಶ್ರೀಲಂಕಾ ಭಾರತದೊಂದಿಗೆ ಕರಾವಳಿ ಗಡಿಯನ್ನು ಹಂಚಿಕೊಂಡಿವೆ. ಭಾರತದ ಭೂ ಗಡಿಯು 15,106.7 ಕಿಮೀ ಉದ್ದವಾಗಿದೆ ಮತ್ತು ಅದರ ಕರಾವಳಿ 7,516.6 ಕಿಮೀ ಉದ್ದವಾಗಿದೆ. ಏಕೈಕ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಮೂರು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ. ಈ ಲೇಖನದಲ್ಲಿ ನಾವು ಭಾರತದ ಗಡಿಯಲ್ಲಿರುವ ನೆರೆಯ ದೇಶಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಚೀನಾ ಮತ್ತು ರಷ್ಯಾ ನಂತರ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ದುರ್ಬಲ ಗಡಿಯಾಗಿದೆ, ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಒಳನುಸುಳುವಿಕ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.