mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Wednesday, 12 May 2021

ರಾಷ್ಟ್ರೀಯ ಹೆಣ್ಣು ಮಗುವಿನ ದಿನ : ಜನವರಿ 24

         ಭಾರತದಲ್ಲಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನವಾದ ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ (National Day of Girl Child) ಆಚರಿಸಲಾಗುತ್ತದೆ. ಇದರ ಅಂಗವಾಗಿ 2021ರ

ಜನವರಿ 24 ರಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವತಿಯಿಂದ ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಲಾಯಿತು. 2008 ರಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಬಗ್ಗೆ ಜಾಗೃತಿ, ಮಹಿಳಾ ಸ್ಥಿತಿ-ಗತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.


ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಆಚರಣೆ ಬಗ್ಗೆ ಮಾಹಿತಿ

      ಇಂದಿರಾ ಗಾಂಧಿಯವರು 1966ರ ಜನವರಿ 24ಇಂದಿರಾ ಗಾಂಧಿಯವರು ಭಾರತದ ಮೊದಲ ಮಹಿಳಾ ಪ್ರಧಾನಿ ಅಧಿಕಾರ ವಹಿಸಿಕೊಂಡರು. ಈ ಹಿನ್ನೆಲೆಯಲ್ಲಿ 2008 ರಿಂದ ಪ್ರತೀ ವರ್ಷ ಜನವರಿ 24 ರಂದು ಒಂದು ಧೈಯವಾಕ್ಯದೊಂದಿಗೆ ರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನಾಗಿ ಆಚರಿಸಲಾಗುತ್ತಿದೆ. 2021ರ ಜನವರಿ 24 ರಂದು 14ನೇ ರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನು ಆಚರಿಸಲಾಯಿತು. 2020ರಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು 'ಉಜ್ವಲ ನಾಳೆಗಾಗಿ ಹೆಣ್ಣು ಮಗುವಿನ ಸಬಲೀಕರಣ' ಎಂಬ ಧೈಯವಾಕ್ಯದಲ್ಲಿ ಆಚರಿಸಲಾಗಿತ್ತು. ಕೇಂದ್ರ ಸರ್ಕಾರವು 2015ರ ಜನವರಿ 22 ರಂದು ಜಾರಿಗೆ ತಂದ ಬೇಟಿ ಬಚಾವೋ ಬೇಟಿ ಪಡಾವೋ (BBBP- Beti Bachao Beti Padhao) ಯೋಜನೆಯ 6ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಮಕ್ಕಳ ಲಿಂಗಾನುಪಾತ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ತಡೆಯುವುದು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಉದ್ದೇಶ ಹೊಂದಿದೆ. ಸುಕನ್ಯಾ ಸಮೃದ್ಧಿ ಯೋಜನೆಯು 2015ರ ಜನವರಿ 22 ರಂದು ಜಾರಿಗೆ ತಂದ ಕಾರ್ಯಕ್ರಮವಾಗಿದ್ದು ಮತ್ತು ಹೆಣ್ಣು ಮಕ್ಕಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯುವ ಮತ್ತು ಆರ್ಥಿಕ ಸಬಲೀಕರಣ ಯೋಜನೆಯಾಗಿದೆ.


ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ (International Day For The Girl Child) : ಅಕ್ಟೋಬರ್ 11 2012 ರಿಂದ ಪ್ರತೀ ವರ್ಷ ಅಕ್ಟೋಬರ್ 11 ಅನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಆಚರಿಸಲಾಗುತ್ತಿದೆ. 2020ರ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು “My Voice, Our Equal Future' ಧೈಯವಾಕ್ಯದಲ್ಲಿ ಆಚರಿಸಲಾಯಿತು.


ಉತ್ತರಾಖಂಡ ರಾಜ್ಯದಲ್ಲಿ ಒಂದು ದಿನದ ಮುಖ್ಯಮಂತ್ರಿಯಾಗಿ ಸೃಷ್ಟಿ ಗೋಸ್ವಾಮಿ


ONE DAY-CM 2021ರ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ಉತ್ತರಾಖಂಡ ರಾಜ್ಯದ ಸರ್ಕಾರವು ರಾಜ್ಯದ ಬೇಸಿಗೆ ಕಾಲದ ರಾಜಧಾನಿಯಾದ ಗೈರ್‌ ಸೈನ್ (ಚಳಿಗಾಲದ ರಾಜಧಾನಿ: ಡೆಹರಾಡೂನ್) ನಿಂದ ಒಂದು ದಿನದ ಮುಖ್ಯಮಂತ್ರಿಯಾಗಿ 19 ವರ್ಷದ ಸೃಷ್ಠಿ ಗೋಸ್ವಾಮಿ (Srishti Goswami) ಅವರು ಕಾರ್ಯನಿರ್ವಹಿಸಿದರು. ಮುಖ್ಯಮಂತ್ರಿಗಳ ಅಧಿಕೃತ ಸಭೆಯಲ್ಲಿ ಭಾಗಿಯಾಗಿ ಅಟಲ್ ಆಯುಷ್ಮಾನ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಪ್ರವಾಸೋದ್ಯಮ ಇಲಾಖೆಯ ಹೋಮ್-ಸ್ಟೇ ಯೋಜನೆಗಳ ಕಡತಗಳನ್ನು ಪರಿಶೀಲಿಸಿದರು. ಹರಿದ್ವಾರ ಮೂಲದ ಸೃಷ್ಠಿ ಗೋಸ್ವಾಮಿ ಅವರಿಗೆ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಹೆಣ್ಣು ಮಗು ದಿನದ ಶುಭಾಶಯ ಕೋರಿದರು. ಸೃಷ್ಟಿ ಗೋಸ್ವಾಮಿ ಅವರು 2018ರಲ್ಲಿ ರಾಜ್ಯದ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

            ಸೃಷ್ಟಿ ಗೋಸ್ವಾಮಿ ಅವರು ಬಾಲ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಾಲಕಿಯರ ಸಬಲೀಕರಣದ ಸಂದೇಶವನ್ನು ರವಾನಿಸುವ ಸಲುವಾಗಿ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಸಮ್ಮತಿಸಿದ್ದರು. ರಾಜ್ಯದಲ್ಲಿ ಇಂತಹ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲಾಗಿದೆ. ರೂರ್ಕಿಯಾ ಪಿಎಸ್‌ಎಂ ಪಿಜಿ ಕಾಲೇಜಿನಲ್ಲಿ ಬಿ.ಎಸ್ಸಿ. ಕೃಷಿಯ 7ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸೃಷ್ಠಿ ಹರಿದ್ವಾರ ಜಿಲ್ಲೆಯ ದೌಲತ್ ಪುರ ನಿವಾಸಿ, ಈಕೆಯ ತಂದೆ ಉದ್ಯಮಿಯಾಗಿದ್ದು, ತಾಯಿ ಗೃಹಿಣಿ.

ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸಂಬಂಧಿಸಿದ ಅನೇಕ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. 2018 ರಲ್ಲಿ ಉತ್ತರಾಖಂಡದ ಬಾಲ ವಿಧಾನ ಸಭೆಯ ಮುಖ್ಯಮಂತ್ರಿಯಾಗಿ ಸೃಷ್ಟಿ ಆಯ್ಕೆಯಾಗಿದ್ದರು.


ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಮಧ್ಯಪ್ರದೇಶ ಸರ್ಕಾರದ ಫಂಖ್ ಅಭಿಯಾನ: ರಾಷ್ಟ್ರೀಯ ಹೆಣ್ಣು


ಮಗುವಿನ ದಿನದ ಅಭಿಯಾನದಲ್ಲಿ ಮಧ್ಯಪ್ರದೇಶ ಸರ್ಕಾರವು ಫಂಖ್ (PANKH) ಅಭಿಯಾನಕ್ಕೆ ಚಾಲನೆ ನೀಡಿತು. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಈ ಅಭಿಯಾನ ಆರಂಭಿಸಲಾಗಿದ್ದು, P-ರಕ್ಷಣೆ (Protection), A-ಜಾಗೃತಿ (Awareness), N-ಪೌಷ್ಠಿಕತೆ (Nutrition), K-ಜ್ಞಾನ (Knowledge), H-ಆರೋಗ್ಯ (Health) ಎಂಬುದನ್ನು ಪ್ರತಿನಿಧಿಸುತ್ತದೆ. ಈ ಅಭಿಯಾನವು ಒಂದು ವರ್ಷ ಜರುಗಲಿದೆ. ಇದರೊಂದಿಗೆ ಮಧ್ಯಪ್ರದೇಶ ರಾಜ್ಯ ಸರ್ಕಾರವು 2021ರ ಜನವರಿ 24 ರಿಂದ 30 ರವರೆಗೆ ರಾಜ್ಯ ಮಟ್ಟದಲ್ಲಿ Aware Girl Child, Able Madhya Pradesh ಧೈಯವಾಕ್ಯದಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ಸಪ್ತಾಹವನ್ನು ಆಚರಿಸಿದೆ.


ಪಂಜಾಬ್‌ನಲ್ಲಿ ಆಚರಣೆ: ಹೆಣ್ಣುಮಗುವಿನ ದಿನದ ಅಂಗವಾಗಿ 2021ರ ಜನವರಿ ತಿಂಗಳನ್ನು ಪಂಜಾಬ್ ರಾಜ್ಯ ಸರ್ಕಾರವು ಹೆಣ್ಣುಮಗುವಿನ ಮಾಸ (Month Of Girl Child) ಎಂದು ಘೋಷಣೆ

& Dheeiyan Di Lohri ಕಾರ್ಯಕ್ರಮವನ್ನು ಜಾರಿಗೆ ತಂದಿದೆ. * ಒಡಿಶಾದಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ: ಒಡಿಶಾ ರಾಜ್ಯ ಸರ್ಕಾರವು ಹೆಣ್ಣು ಮಗುವಿನ ದಿನದ ಅಂಗವಾಗಿ ಭಾರತದಲ್ಲಿ ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಂಗ ಸಮನ್ವಯ ನಿಧಿ: 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೆಣ್ಣು ಮಗುವಿನ ಸಮಾನ ಮತ್ತು ಗುಣಮಟ್ಟ ಶಿಕ್ಷಣದ ಅಭಿವೃದ್ಧಿಗಾಗಿ ಲಿಂಗಸಮನ್ವಯ ನಿಧಿಯನ್ನು

(Gender Inclusion Fund) ರಚಿಸಲಾಗಿದೆ.

No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದ ನೆರೆಯ ರಾಷ್ಟ್ರಗಳು, ಪಟ್ಟಿ, ನಕ್ಷೆ, ರಾಜಧಾನಿಗಳು, ಧ್ವಜಗಳು

ಭಾರತದ ನೆರೆಯ ರಾಷ್ಟ್ರಗಳು ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ. UPSC ಗಾಗಿ ಭಾರತದ ನೆರೆಯ ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ     ಪರಿವಿಡಿ ಭಾರತದ ನೆರೆಯ ರಾಷ್ಟ್ರಗಳು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಭಾರತದ ಗಡಿಯಲ್ಲಿರುವ ದೇಶಗಳು. ಮ್ಯಾನ್ಮಾರ್ ಮತ್ತು ಶ್ರೀಲಂಕಾ ಭಾರತದೊಂದಿಗೆ ಕರಾವಳಿ ಗಡಿಯನ್ನು ಹಂಚಿಕೊಂಡಿವೆ. ಭಾರತದ ಭೂ ಗಡಿಯು 15,106.7 ಕಿಮೀ ಉದ್ದವಾಗಿದೆ ಮತ್ತು ಅದರ ಕರಾವಳಿ 7,516.6 ಕಿಮೀ ಉದ್ದವಾಗಿದೆ. ಏಕೈಕ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಮೂರು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ. ಈ ಲೇಖನದಲ್ಲಿ ನಾವು ಭಾರತದ ಗಡಿಯಲ್ಲಿರುವ ನೆರೆಯ ದೇಶಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಚೀನಾ ಮತ್ತು ರಷ್ಯಾ ನಂತರ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ದುರ್ಬಲ ಗಡಿಯಾಗಿದೆ, ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಒಳನುಸುಳುವಿಕ...

ಭಾರತದಲ್ಲಿನ ಒಟ್ಟು ರಾಷ್ಟ್ರೀಯ ಉದ್ಯಾನಗಳು ನಕ್ಷೆ, ರಾಜ್ಯವಾರು ಪಟ್ಟಿ Total National Parks in India

    ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳು: ಭಾರತದಲ್ಲಿ 106 ರಾಷ್ಟ್ರೀಯ ಉದ್ಯಾನವನಗಳು 44,378 ಚ.ಕಿ.ಮೀ. ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳ ಪಟ್ಟಿ  , ನಕ್ಷೆ , UPSC ಪರೀಕ್ಷೆಗಾಗಿ ಭಾರತದ ರಾಷ್ಟ್ರೀಯ ಉದ್ಯಾನವನಗಳ ರಾಜ್ಯವಾರು ಪಟ್ಟಿ.   ಪರಿವಿಡಿ   ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳು ಭಾರತದಲ್ಲಿ ರಾಷ್ಟ್ರೀಯ ಉದ್ಯಾನಗಳು 2023 : ಭಾರತವು ವೈವಿಧ್ಯಮಯ ಜಾತಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮಲ್ಲಿ ವೈವಿಧ್ಯಮಯ ಸಸ್ಯಗಳು ಮತ್ತು ಪ್ರಾಣಿಗಳಿವೆ. ಇಂಡೋ-ಹಿಮಾಲಯನ್ ಪರಿಸರ ವಲಯವು ಸರಿಸುಮಾರು 6.2 ಪ್ರತಿಶತ ಸರೀಸೃಪಗಳು , 7.6 ಪ್ರತಿಶತ ಸಸ್ತನಿಗಳು , 6.0 ಪ್ರತಿಶತ ಹೂಬಿಡುವ ಸಸ್ಯಗಳು ಮತ್ತು 12.6 ಪ್ರತಿಶತ ಪಕ್ಷಿ ಪ್ರಭೇದಗಳನ್ನು ಒಳಗೊಂಡಿದೆ. ಅರಣ್ಯದ ವ್ಯಾಪ್ತಿಯು ಹಿಮಾಲಯ ಪ್ರದೇಶದಲ್ಲಿನ ಕೋನಿಫೆರಸ್ ಕಾಡುಗಳು ಮತ್ತು ಈಶಾನ್ಯ ಭಾರತ , ಪಶ್ಚಿಮ ಘಟ್ಟಗಳು ಮತ್ತು ಉಷ್ಣವಲಯದ ಉಷ್ಣವಲಯದ ಮಳೆಕಾಡುಗಳನ್ನು ಒಳಗೊಂಡಿದೆ.   ಭಾರತದ ನದಿಗಳು ,   ನಕ್ಷೆ ,   ಪಟ್ಟಿ ,   ಹೆಸರು ,   ಭಾರತದ ಉದ್ದವಾದ ನದಿಗಳು ಭಾರತದ ರಾಷ್ಟ್ರೀಯ ಉದ್ಯಾನಗಳ ಪಟ್ಟಿ ಭಾರತದಲ್ಲಿನ ರಾಷ್ಟ್ರೀಯ ಉದ್ಯಾನವನಗಳ ಸಂಪೂರ್ಣ ರಾಜ್ಯವಾರು ಪಟ್ಟಿ ಇಲ್ಲಿದೆ :   ಸ.ನಂ.    ರಾಜ್ಯ ( NP ಗಳ ಸಂಖ್ಯೆ)   ಭಾರತದಲ್ಲಿ ರಾಷ್ಟ್ರೀಯ ಉದ್ಯಾ...

ಅಲಿಪ್ತ ಚಳವಳಿ (NAM)

The Non Aligned Movement (NAM) ಸ್ಥಾಪನೆಯ ದಿನಾಂಕ:  1961 ಪ್ರಧಾನ ಕಛೇರಿ:  ಬೆಲ್‌ಗ್ರೇಡ್ ಸದಸ್ಯ ರಾಷ್ಟ್ರಗಳು:  120 ರಂತೆ 2012 ಯುಗೊಸ್ಲಾವಿಯನ್ ಅಧ್ಯಕ್ಷ ಟಿಟೊ ಅವರ ಉಪಕ್ರಮದ ಮೂಲಕ ಸೆಪ್ಟೆಂಬರ್ 1961 ರಲ್ಲಿ ಬೆಲ್‌ಗ್ರೇಡ್‌ನಲ್ಲಿ 25 ದೇಶಗಳನ್ನು ಪ್ರತಿನಿಧಿಸುವ ಅಲಿಪ್ತ ರಾಷ್ಟ್ರಗಳ ಮುಖ್ಯಸ್ಥರ ಮೊದಲ ಸಮ್ಮೇಳನವನ್ನು ಕರೆಯಲಾಯಿತು.  ವೇಗವರ್ಧಿತ ಶಸ್ತ್ರಾಸ್ತ್ರ ಸ್ಪರ್ಧೆಯು ಸೋವಿಯತ್ ಒಕ್ಕೂಟ ಮತ್ತು ಯುಎಸ್ಎ ನಡುವೆ ಯುದ್ಧಕ್ಕೆ ಕಾರಣವಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು. ನಂತರದ ಸಮ್ಮೇಳನಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಒಳಗೊಂಡಿವೆ.  47 ದೇಶಗಳನ್ನು ಪ್ರತಿನಿಧಿಸುವ ಕೈರೋದಲ್ಲಿ 1964 ರ ಸಮ್ಮೇಳನವು ಪಾಶ್ಚಿಮಾತ್ಯ ವಸಾಹತುಶಾಹಿ ಮತ್ತು ವಿದೇಶಿ ಮಿಲಿಟರಿ ಸ್ಥಾಪನೆಗಳ ಧಾರಣವನ್ನು ವ್ಯಾಪಕವಾಗಿ ಖಂಡಿಸಿತು.  ಅದರ ನಂತರ, ಗಮನವು ಮೂಲಭೂತವಾಗಿ ರಾಜಕೀಯ ಸಮಸ್ಯೆಗಳಿಂದ ದೂರ ಸರಿಯಿತು, ಜಾಗತಿಕ ಆರ್ಥಿಕ ಮತ್ತು ಇತರ ಸಮಸ್ಯೆಗಳಿಗೆ ಪರಿಹಾರಗಳ ಪ್ರತಿಪಾದನೆಯತ್ತ. NAM ರಚನೆ ಮತ್ತು ಸಂಸ್ಥೆ ಅಲಿಪ್ತ ಚಳವಳಿಯ ಸಂಸ್ಥಾಪಕರು ಮತ್ತು ಅವರ ಉತ್ತರಾಧಿಕಾರಿಗಳು ಆಂದೋಲನಕ್ಕೆ ಸಂವಿಧಾನ ಮತ್ತು ಆಂತರಿಕ ಕಾರ್ಯದರ್ಶಿಯಾಗಿ ಅಂತಹ ಔಪಚಾರಿಕ ರಚನೆಗಳನ್ನು ರಚಿಸಿದರೆ ಬಹುಶಃ ಚಳವಳಿಯು ನಾಶವಾಗಬಹುದು ಎಂದು ಗುರುತಿಸಿದರು.  ವಿಭಿನ್...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.