mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Thursday, 20 May 2021

ಕುಶಾನರು

 ಮೂಲತ: ಕುಶಾನರು 'ಯೂ-ಚೀ' ಎಂಬ ಹೆಸರಿನ ಅಲೆಮಾರಿ ಜನಾಂಗಕ್ಕೆ ಸೇರಿದವರು ಮತ್ತು ಅವರು ಚೀನಾದಲ್ಲಿ ವಾಸವಾಗಿದ್ದರು. ಹೂಣರಂತಹ ಪ್ರಬಲ ಬುಡಕಟ್ಟುಗಳು ಈ ಜನಾಂಗವನ್ನು ಅವರ ತಾಯ್ಯಾಡಿನಿಂದ ಹೊರದಬ್ಬಿದವು. ಕುಶಾನರು ಬ್ಯಾಕ್ಷೀಯಾವನ್ನು ಆಕ್ರಮಿಸಿದರು ಮತ್ತು ಕಾಬೂಲ್ ಕಣಿವೆಗೆ ಸಾಗಿದರು ಮತ್ತು ಗಾಂಧಾರವನ್ನು ವಶಪಡಿಸಿಕೊಂಡರು. ಸಾಶ 10ರ ಹೊತ್ತಿಗೆ ಅವರು ಶಕ, ಗ್ರೀಕ್ ಮತ್ತು ಇತರರನ್ನು ಸ್ಥಳಾಂತರಿಸಿ ಸಿಂಧೂ ಮತ್ತು ಗಂಗಾನದಿ ಬಯಲು ಪ್ರದೇಶದ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಿದರು. ಕುಶಾನರ ಅವಧಿ ಕೇವಲ ರಾಜಕೀಯ ಐಕ್ಯತೆಯ ಶಕೆಯಾಗಿರದೇ, ಭಾರತದ ಸಾಂಸ್ಕೃತಿಕ ಬೆಳವಣಿಗೆಯ ಇತಿಹಾಸದಲ್ಲಿ ಒಂದು ಹೊಸ ಯುಗಕ್ಕೆ ನಾಂದಿ ಹಾಡಿತು.


ರಾಜಕೀಯ ಇತಿಹಾಸ:


ಕುಶಾನರ ಮೊದಲ ದೊರೆ ಕುಜುಲ ಕ್ಯಾಡ್‌ಫೈಸೆಸ್ ಅಥವಾ ಮೊದಲನೇ ಕಾಡ್‌ಫೈಸೆಸ್, ಎರಡನೇ ಕ್ಯಾಡ್‌ಫೈಸೆಸ್ ಅಥವಾ ವೆಮಾಕ್ಯಾಡ್‌ಫೈಸೆಸ್ ಇವನ ಉತ್ತರಾಧಿಕಾರಿ, ಕಾನಿಷ್ಕ ಕುಶಾನ ವಂಶದ 3ನೇ


ಕಾನಿಷ್ಕನು ಕುಶಾನರ ಅತ್ಯಂತ ಶ್ರೇಷ್ಠ ದೊರೆ. ಆತನ ಪ್ರಾರಂಭಿಕ ಜೀವನದ ಬಗೆಗೆ ನಮಗೆ ನಿರ್ದಿಷ್ಟ ಮಾಹಿತಿ ಲಭ್ಯವಿಲ್ಲ. ಹಾಗೆಯೇ ಕಾನಿಷ್ಯನ ಸಿಂಹಾಸನಾರೋಹಣದ ದಿನಾಂಕದ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಡಾ| ವಿ.ಎ. ಸ್ಮಿತ್‌ರವರು~ ಕಾನಿಷ್ಕನು ಸಾಶ 120ರಲ್ಲಿ ಸಿಂಹಾಸನಕ್ಕೆ ಬಂದನೆಂದು ಅಭಿಪ್ರಾಯಪಡುತ್ತಾರೆ. ಇನ್ನೊಂದು ವಿದ್ವಾಂಸರ ಪರಂಪರೆ (ಲ್ಯಾಪ್ಸನ್ ಮತ್ತು ಥಾಮಸ್) ಕಾನಿಷ್ಕನನ್ನು


'ಶಕಯುಗ'ದ ಸ್ಥಾಪಕನೆಂದು ಬಿಂಬಿಸುತ್ತದೆ ಮತ್ತು ಆತನ ಸಿಂಹಾಸನಾರೋಹಣವನ್ನು ಸಾಶ 78 ಎಂದು ತಿಳಿಸುತ್ತದೆ. ಪುರುಷಪುರ ಅವನ ರಾಜಧಾನಿಯಾಗಿತ್ತು(ಪಾಕಿಸ್ತಾನದ ಇಂದಿನ ಪೆಷಾವರ್)


ದಿಗ್ವಿಜಯಗಳು;


ಕಾನಿಷ್ಕನು ಒಬ್ಬ ಮಹಾನ್ ಯೋಧನಾಗಿದ್ದು ಅಧಿಕಾರಕ್ಕೆ ಬಂದ ನಂತರ ತನ್ನ ಸಾಮ್ರಾಜ್ಯದ ಎಲ್ಲೆಗಳನ್ನು ಎಲ್ಲಾ ದಿಕ್ಕುಗಳಲ್ಲಿ ತ್ವರಿತವಾಗಿ ವಿಸ್ತರಿಸಿದನು. ಆತನ ಸಾಮ್ರಾಜ್ಯವು ಬ್ಯಾಕ್ಷೀಯ, ಪರ್ಷಿಯ, ಆಫ್ಘಾನಿಸ್ಥಾನ, ಪಂಜಾಬ್ ಮತ್ತು ಸಿಂಧನ ವಿಸ್ತಾರವಾದ ಪ್ರದೇಶವನ್ನು ಹೊಂದಿತ್ತು. ಕಾನಿಷ್ಠ ದಿಗ್ವಿಜಯಗಳ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು.


ಕಾಶ್ಮೀರ: ಕಾನಿಷ್ಕನು ಕಾಶ್ಮೀರವನ್ನು ಗೆದ್ದುಕೊಂಡನು. ಅಲ್ಲಿ ಅನೇಕ ಸ್ಮಾರಕಗಳನ್ನು ಕಟ್ಟಿಸಿದನು. 'ಕಾನಿಪುರ' ಎಂಬ ಪಟ್ಟಣಕ್ಕೆ ಅಡಿಪಾಯ ಹಾಕಿದನು. ಇದು ಕಾನಿಷ್ಕಪುರ' ಎಂದೂ ಹೆಸರಾಗಿತ್ತು. ಇಂದು ಇದು ಶ್ರೀನಗರ ಎಂದು ಹೆಸರಾಗಿದೆ.


ಮಗಧ: ಕಾನಿಷ್ಟನು ಮಗಧದ ಮೇಲೆ ದಾಳಿ ಮಾಡಿ ಅದನ್ನು ಆಕ್ರಮಿಸಿಕೊಂಡನೆಂದು ಹೇಳಲಾಗಿದೆ. ಆದರೆ, ಕೆಲವು ವಿದ್ವಾಂಸರು ಮಗಧದ ಕೆಲವು ಭಾಗಗಳನ್ನು ಮಾತ್ರ ಆಕ್ರಮಿಸಿದನೆಂದು ಅಭಿಪ್ರಾಯಪಡುತ್ತಾರೆ.


ಶಕ-ಸತ್ತವರೊಡನೆ ಯುದ್ಧ: ಉತ್ತರಭಾರತದಲ್ಲಿ ಇನ್ನೂ ಶಕ ಸತ್ರಪರು ಪ್ರಬಲರಾಗಿದ್ದರು. ಕಾನಿಷ್ಕನು ಪಂಜಾಬ್ ಮತ್ತು ಮಥುರಾಗಳ ತನ್ನ ಪ್ರಭುತ್ವ ಸ್ಥಾಪಿಸಿದನು. ಶಕ ಸತ್ರಪರ ಮೇಲೆ ಸರಣಿ ಯುದ್ಧಗಳನ್ನು ಮಾಡಿದನು ಮತ್ತು ಅಂತಿಮವಾಗಿ


ಚೀನಾದ ಮೇಲೆ ಯುದ್ಧ: ಉತ್ತರಭಾರತದ ದಂಡಯಾತ್ರೆಯ ನಂತರ ಕಾನಿಷ್ಠ ತನ್ನ ಗಮನವನ್ನು ಚೀನಾದತ್ತ ಹರಿಸಿದನು. ಎರಡನೇ ಕ್ಯಾಡ್‌ಫೈಸೆಸ್‌ನು ಚೀನಾದ ಸೇನಾನಿ ಪಾನ್-ಚೌ ನಿಂದ ತೀವ್ರ ಸೋಲು ಅನುಭವಿಸಿದ್ದನು. ಮತ್ತು ಇದರ ಪರಿಣಾಮವಾಗಿ ಕುಶಾನರು ಚೀನಾದ ಅರಸನಿಗೆ ವಾರ್ಷಿಕ ಕಪ್ಪಕಾಣಿಕೆ ನೀಡಬೇಕಾಗಿತ್ತು. ಕಾನಿಷ್ಕ ಕಪ್ಪಕಾಣಿಕೆಯನ್ನು ನಿಲ್ಲಿಸಿ ಚೀನಾದ ಮೇಲೆ ದಾಳಿ ಮಾಡಿದನು. ಆದರೆ, ಚೀನಾದ ಸೇನಾನಿ ಪಾನ್-ಚೌ ರನನ್ನು ಸೋಲಿಸಿದನು. ಇದು ಕಾನಿಷ್ಠನ ರಾಜಕೀಯ ಮಹಾತ್ವಾಕಾಂಕ್ಷೆಗಳಿಗೆ ಕೆಲಕಾಲ ಹಿನ್ನಡೆಯನ್ನುಂಟುಮಾಡಿತು. ಆದಾಗ್ಯೂ ಸಿದ್ಧತೆ ಮಾಡಿಕೊಂಡ ನಂತರ ಕಾನಿಷ್ಕನು ಇನ್ನೊಂದು ಬಾರಿ ಚೀನಾದ ಮೇಲೆ ದಾಳಿ ಮಾಡಿದನು. ಈ ಮೊದಲೇ ಚೀನಾದ ಶ್ರೇಷ್ಠ ಸೇನಾನಿ ಪಾನ್-ಚೌ ಮರಣ ಹೊಂದಿದ್ದನು ಮತ್ತು ಆತನ ಮಗ ಪಾನ್ ಚಿಯಾಂಗ್ ಸೇನಾನಿಯಾಗಿದ್ದನು. ಕಾನಿಷ್ಕನು ಚೀನಾದ ಪಡೆಗಳ ಮೇಲೆ ವಿಜಯ ದಾಖಲಿಸಿ, ಚೀನಾದ ಮೂರು ಪ್ರಾಂತ್ಯಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.


ಈ ಮೂರು ಪ್ರಾಂತ್ಯಗಳೆಂದರೆ- ಕಾಷ್‌ಗರ್, ಯಾರ್ ಖಂಡ್ ಮತ್ತು ಕೋಥಾನ್, ಕಾನಿಷ್ಠ ಭಾರತೀಯ ಉಪಖಂಡದ ಹೊರಗೆ ಭೂಪ್ರದೇಶಗಳನ್ನು ಹೊಂದಿದ ಮೊದಲ ಭಾರತೀಯ ಅರಸನಾಗಿದ್ದಾನೆ.


ಕಾನಿಷ್ಠನ ಸಾಮ್ರಾಜ್ಯದ ಎಲ್ಲೆಗಳು ಉತ್ತರದಲ್ಲಿ ಕಾವ್ಯಗರ್‌ವರೆಗೆ ಹಬ್ಬಿದ್ದರೆ, ದಕ್ಷಿಣದಲ್ಲಿ ಸಿಂಥ್, ಪೂರ್ವದಲ್ಲಿ ಬನಾರಸ್ ಹಾಗೂ ಪಶ್ಚಿಮದಲ್ಲಿ ಆಫ್ಘಾನಿಸ್ಥಾನದವರಗೆ ಹಬ್ಬಿತ್ತು.


ಧರ್ಮ: ಯೂ-ಚೀ ಪಂಗಡಕ್ಕೆ ಸೇರಿದವರಾಗಿದ್ದ ಕುಶಾನರು, ಬುಡಕಟ್ಟು ಧರ್ಮದ ಸಂಪ್ರದಾಯ ಗಳನ್ನು ಅನುಸರಿಸುತ್ತಿದ್ದರು. ಭಾರತದಲ್ಲಿ ನೆಲೆಸಿದ ನಂತರ ಅವರು ಭಾರತೀಯ ಸಂಸ್ಕೃತಿ ಮತ್ತು ಹಿಂದೂಧರ್ಮವನ್ನು ಅನುಸರಿಸಿದರು. ಅವರು ಆರಂಭದಲ್ಲಿ ಸೂರ್ಯದೇವನ ಜೊತೆಗೆ ಇತರ ದೇವರುಗಳನ್ನು ಆರಾಧಿಸುತ್ತಿದ್ದರು. ಕುಜುಲ ಮತ್ತು ವೆಮಾಕ್ಕಾಡ್ ಪೀಸಸ್‌ರವರು ಹಿಂದೂಧರ್ಮದ ಅನುಯಾಯಿಗಳಾಗಿದ್ದರು.


ಕಾನಿಷ್ಠನು ಕೂಡಾ ಹಿಂದೂಧರ್ಮದ ಅನುಯಾಯಿಯಗಿದ್ದನು. ಆತನ ಆರಂಭಿಕ ನಾಣ್ಯಗಳು ಪರ್ಷಿಯನ್,


ಗ್ರೀಕ್ ಮತ್ತು ಹಿಂದೂ ದೇವತೆಗಳ ಚಿತ್ರಗಳನ್ನು ಹೊಂದಿವೆ. ಕಾಲಾನಂತರದಲ್ಲಿ ಅವನು ಅಶ್ವಘೋಷನ


ಪ್ರಭಾವದಿಂದ ಬೌದ್ಧಧರ್ಮವನ್ನು ಸ್ವೀಕರಿಸಿದನು. ನಂತರ ಅವನು ಅಶೋಕನ ರೀತಿಯಲ್ಲಿ ಬೌದ್ಧಧರ್ಮದ ಪ್ರಚಾರಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡನು ಮತ್ತು ಆತನ ಪ್ರಯತ್ನದಿಂದ ಬೌದ್ಧಧರ್ಮ ಚೀನಾ, ಟಿಬೆಟ್, ಜಪಾನ್ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ಹರಡಿತು. ಬೌದ್ಧಧರ್ಮದ ಪ್ರಚಾರಕ್ಕಾಗಿ ಕಾನಿಷ್ಕನು ತೆಗೆದುಕೊಂಡ ಕ್ರಮಗಳೆಂದರೆ:


1. ಬೌದ್ಧಧರ್ಮಕ್ಕೆ ರಾಜಾಶ್ರಯವನ್ನು ನೀಡಲಾಯಿತು ಮತ್ತು ಇದನ್ನು ಬೌದ್ಧಭಿಕ್ಷುಗಳಿಗೆ ವಿಸ್ತರಿಸಲಾಯಿತು.


2. ವಿಹಾರಗಳು ಮತ್ತು ಮಠಗಳನ್ನು ಭಿಕ್ಷುಗಳ ಉಪಯೋಗಕ್ಕಾಗಿ ಕಟ್ಟಲಾಯಿತು. 3. ಬೌದ್ಧಧರ್ಮದ ಪ್ರಸಾರಕ್ಕಾಗಿ ಅನೇಕ ನಿಯೋಗಗಳನ್ನು ಜಪಾನ್, ಟಿಬೆಟ್ ಮತ್ತು ಮಧ್ಯಏಷ್ಯಾದರಾಷ್ಟ್ರಗಳಿಗೆ ಕಳುಹಿಸಲಾಯಿತು.


4. ಸಾ.ಶ. 102ರಲ್ಲಿ ಇವನು ಕಾಶ್ಮೀರದ ಕುಂಡಲವನದಲ್ಲಿ 4ನೇ ಬೌದಮಹಾಸಮ್ಮೇಳನ ವನ್ನು ಏರ್ಪಡಿಸಿದನು. ಇದರ ಅಧ್ಯಕ್ಷತೆಯನ್ನು ವಸುಮಿತ್ತನು ವಹಿಸಿದ್ದರು. ಅಂದು ಬೌದ್ಧಧರ್ಮದಲ್ಲಿ ತಲೆದೋರಿದ ವಿವಾದಗಳನ್ನು ಪರಿಹರಿಸುವುದೇ ಇದರ ಪ್ರಮುಖ ಉದ್ದೇಶವಾಗಿತ್ತು. ಪವಿತ್ರ ಗ್ರಂಥಗಳಾದ ಪಿಟಕಗಳ ಮೇಲೆ ವಿಮರ್ಶೆಯನ್ನು ಸಿದ್ಧಪಡಿಸಲಾಯಿತು. ನಂತರ ಇವುಗಳನ್ನು ಮಹಾವಿಭಾಷ' ಎಂದು ಕರೆಯಲ್ಪಡುವ ಪುಸ್ತಕರೂಪಕ್ಕೆ ತರಲಾಯಿತು. ಇದು ಬೌದ್ಧತತ್ವಶಾಸ್ತ್ರದ ಪ್ರಮಾಣಬದ್ಧ ಗ್ರಂಥಗಳಲ್ಲಿ ಒಂದಾಗಿದೆ.


ಗಾಂಧಾರ ಕಲೆ,


ಕಾನಿಷ್ಕನು ಮಹಾನ್ ಕಲಾಪೋಷಕನಾಗಿದ್ದನು. ಆತನ ಪ್ರಮುಖ ಕಟ್ಟಡಗಳು ಮತ್ತು ನಿರ್ಮಾಣಗಳು ಹೆಚ್ಚಾಗಿ ಗಾಂಧಾರ, ಮಥುರಾ, ಕಾನಿಷ್ಕಪುರ ಮತ್ತು ತಕ್ಷಶಿಲಗಳಲ್ಲಿ ಕಂಡುಬಂದಿವೆ. ಕುಶಾನರ ಅವಧಿಯು ಗಾಂಧಾರ ಕಲೆಯ ಅಥವಾ ಗ್ರೀಕೋ-ಬೌದ್ಧಶೈಲಿಯ ಬೆಳವಣಿಗೆಗೆ ಪ್ರಾಮುಖ್ಯತೆ ಪಡೆದಿದೆ. ಭಾರತೀಯ ಮತ್ತು ಗ್ರೀಕ್ ಸಂಸ್ಕೃತಿಗಳ ಮಧ್ಯೆ ಮುಕ್ತ ಸಂಪರ್ಕದಿಂದಾಗಿ 'ಗಾಂಧಾರ ಕಲಾ ಪರಂಪರೆ' (Gandhara School of Art) ಎಂಬ ಹೊಸ ಕಲಾ ಪರಂಪರೆಯು ಉಗಮಿಸಿತು. ಇದು ಭಾರತ ಮತ್ತು ಗ್ರೀಕ್ ಕಲಾಶೈಲಿಗಳ ಸಮಿಶ್ರಣವನ್ನು ಪ್ರತಿನಿಧಿಸುತ್ತದೆ. ಈ ಕಲಾಶೈಲಿಯು ಗಾಂಧಾರ ಪ್ರದೇಶದಲ್ಲಿ ಉಗಮಿಸಿದ್ದರಿಂದ ಇದನ್ನು 'ಗಾಂಧಾರ ಕಲೆ' ಎಂದು ಕರೆಯಲಾಗಿದೆ. ಈ ಪ್ರದೇಶವು ಪ್ರಸ್ತುತ ಆಫ್ಘಾನಿಸ್ಥಾನದಲ್ಲಿದೆ.


ಗಾಂಧಾರ ಕಲಾಶೈಯ ಪ್ರಮುಖ ಲಕ್ಷಣಗಳು:


1. ಈ ಕಲಾಶೈಲಿಯಲ್ಲಿ ಆಳೆತ್ತರದ ಗೌತಮ ಬುದ್ಧನ ವಿಗ್ರಹಗಳನ್ನು ಕೆತ್ತಲಾಗಿದೆ. ಅಲ್ಲಿಯವರೆಗೆ ಬುದ್ಧನ ಅಸ್ತಿತ್ವವನ್ನು ಕಮಲ, ಛತ್ರಿ ಮುಂತಾದ ಚಿಹ್ನೆಗಳ ರೂಪದಲ್ಲಿ ತೋರಿಸಲಾಗುತ್ತಿತ್ತು.


 2. ವಿಗ್ರಹಗಳನ್ನು ಕೆತ್ತುವಾಗ ದೇಹ ವಿನ್ಯಾಸದ ಅನುಪಾತದೊಂದಿಗೆ ಸ್ನಾಯುಗಳು, ಮೀಸೆ ಮುಂತಾದವುಗಳಿಗೆ ಹೆಚ್ಚಿನ ಗಮನ ಹರಿಸಿ ಸ್ವಾಭಾವಿಕ ಜೋಡಣೆಯೊಂದಿಗೆ ಮೂಡಿಸಲಾಗಿದೆ.


3, ಕಲಾಕೌಶಲ್ಯದಿಂದ ಕೂಡಿದ ಈ ಕಲೆಯ ನಮೂನೆಗಳಲ್ಲಿ ಬಟ್ಟೆಯ ಮಡಿಕೆಗಳು ಮತ್ತು ನೆರಿಗೆಗಳನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಕಲಾತ್ಮಕವಾಗಿ ಪ್ರದರ್ಶಿಸಲಾಗಿದೆ.


4. ವಿಗ್ರಹಗಳ ಮೇಲಿರುವ ಆಭರಣಗಳ ಮೇಲಿನ ಕೆತ್ತನೆಗೆ ಹೆಚ್ಚಿನ ಆಸಕ್ತಿ ತೋರಿಸಲಾಗಿದ್ದು, ಅವುಗಳ ಭೌತಿಕ ಸೌಂದರ್ಯವನ್ನು ವೃದ್ಧಿಸಿದೆ.


 5. ವಿಗ್ರಹಗಳಿಗೆ ಮೆರುಗು ನೀಡುವುದು (Polish) ಈ ಕಲೆಯ ಪ್ರಮುಖ ಲಕ್ಷಣವಾಗಿದೆ.


6. ಬಹುತೇಕ ಈ ನಮೂನೆಗಳನ್ನು ಕಲ್ಲು, ಅರಲುಗಚ್ಚು (Terracotta) ಮತ್ತು ಜೇಡಿಮಣ್ಣಿನಿಂದ ತಯಾರಿಸಲಾಗಿದೆ.

 7. ಈ ವಿಗ್ರಹಗಳಲ್ಲಿ ಬಳಸಲಾಗಿರುವ ತಾಂತ್ರಿಕತೆ ಗ್ರೀಕ್ ಶೈಲಿಯದ್ದಾದರೆ, ಆದರ ಆದರ್ಶ, ಸ್ಫೂರ್ತಿ ಮತ್ತು ವ್ಯಕ್ತಿತ್ವ ಎಲ್ಲವೂ ಭಾರತೀಯವಾದುದಾಗಿದೆ.


ಡಾ. ಆರ್.ಸಿ. ಮಜುಮ್‌ದಾರ್ ಹೇಳುವಂತೆ – “ಗಾಂಧಾರ ಕಲಾಕಾರನು ಗೀಕ್ ಕರಕುಶಲತೆ ಹಾಗೂ ಭಾರತೀಯ ಹೃದಯವನ್ನು ಹೊಂದಿದ್ದನು”, ಈ ಕಾರಣದಿಂದ ಈ ಕಲೆಯಲ್ಲಿ ನಿರ್ಮಿತವಾದ ವಿಗ್ರಹಗಳು ಮತ್ತು ಪ್ರತಿಮೆಗಳಲ್ಲಿ ಬುದ್ಧನನ್ನು ಗ್ರೀಕ್ ದೇವತೆ ಆಬೊಲೊನನ್ನು ಹೋಲುವಂತೆ ಕೆತ್ತುವ ಪ್ರಯತ್ನ ಮಾಡಲಾಗಿದೆ.




2 comments:

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದಲ್ಲಿನ ಒಟ್ಟು ರಾಷ್ಟ್ರೀಯ ಉದ್ಯಾನಗಳು ನಕ್ಷೆ, ರಾಜ್ಯವಾರು ಪಟ್ಟಿ Total National Parks in India

    ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳು: ಭಾರತದಲ್ಲಿ 106 ರಾಷ್ಟ್ರೀಯ ಉದ್ಯಾನವನಗಳು 44,378 ಚ.ಕಿ.ಮೀ. ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳ ಪಟ್ಟಿ  , ನಕ್ಷೆ , UPSC ಪರೀಕ್ಷೆಗಾಗಿ ಭಾರತದ ರಾಷ್ಟ್ರೀಯ ಉದ್ಯಾನವನಗಳ ರಾಜ್ಯವಾರು ಪಟ್ಟಿ.   ಪರಿವಿಡಿ   ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳು ಭಾರತದಲ್ಲಿ ರಾಷ್ಟ್ರೀಯ ಉದ್ಯಾನಗಳು 2023 : ಭಾರತವು ವೈವಿಧ್ಯಮಯ ಜಾತಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮಲ್ಲಿ ವೈವಿಧ್ಯಮಯ ಸಸ್ಯಗಳು ಮತ್ತು ಪ್ರಾಣಿಗಳಿವೆ. ಇಂಡೋ-ಹಿಮಾಲಯನ್ ಪರಿಸರ ವಲಯವು ಸರಿಸುಮಾರು 6.2 ಪ್ರತಿಶತ ಸರೀಸೃಪಗಳು , 7.6 ಪ್ರತಿಶತ ಸಸ್ತನಿಗಳು , 6.0 ಪ್ರತಿಶತ ಹೂಬಿಡುವ ಸಸ್ಯಗಳು ಮತ್ತು 12.6 ಪ್ರತಿಶತ ಪಕ್ಷಿ ಪ್ರಭೇದಗಳನ್ನು ಒಳಗೊಂಡಿದೆ. ಅರಣ್ಯದ ವ್ಯಾಪ್ತಿಯು ಹಿಮಾಲಯ ಪ್ರದೇಶದಲ್ಲಿನ ಕೋನಿಫೆರಸ್ ಕಾಡುಗಳು ಮತ್ತು ಈಶಾನ್ಯ ಭಾರತ , ಪಶ್ಚಿಮ ಘಟ್ಟಗಳು ಮತ್ತು ಉಷ್ಣವಲಯದ ಉಷ್ಣವಲಯದ ಮಳೆಕಾಡುಗಳನ್ನು ಒಳಗೊಂಡಿದೆ.   ಭಾರತದ ನದಿಗಳು ,   ನಕ್ಷೆ ,   ಪಟ್ಟಿ ,   ಹೆಸರು ,   ಭಾರತದ ಉದ್ದವಾದ ನದಿಗಳು ಭಾರತದ ರಾಷ್ಟ್ರೀಯ ಉದ್ಯಾನಗಳ ಪಟ್ಟಿ ಭಾರತದಲ್ಲಿನ ರಾಷ್ಟ್ರೀಯ ಉದ್ಯಾನವನಗಳ ಸಂಪೂರ್ಣ ರಾಜ್ಯವಾರು ಪಟ್ಟಿ ಇಲ್ಲಿದೆ :   ಸ.ನಂ.    ರಾಜ್ಯ ( NP ಗಳ ಸಂಖ್ಯೆ)   ಭಾರತದಲ್ಲಿ ರಾಷ್ಟ್ರೀಯ ಉದ್ಯಾ...

World Milk Day: History, Significance & More 🥛🌍

                                         Introduction World Milk Day, celebrated every year on June 1st, is a global event that highlights the importance of milk as a global food. Initiated by the Food and Agriculture Organization (FAO) of the United Nations, this day serves to recognize the contributions of the dairy sector to sustainability, economic development, livelihoods, and nutrition. In this blog post, we delve into the history, significance, and various facets of World Milk Day. 🐄🥛 History of World Milk Day World Milk Day was established by the FAO in 2001. The primary aim was to acknowledge the importance of milk in the diet of humans across the globe and to celebrate the dairy sector. June 1st was chosen because several countries were already celebrating milk-related events around this time. This alignment helped to maximize the global impact of the celebrations. The fi...

ಭಾರತದ ಹವಾಮಾನ, ವಿಧಗಳು, ವಲಯಗಳು, ನಕ್ಷೆ, ಭಾರತದ ಹವಾಮಾನದ ಮೇಲೆ ಪರಿಣಾಮ ಬೀರುವ ಅಂಶಗಳು.

    ಭಾರತದ ಹವಾಮಾನ - ವಿಧಗಳು , ವಲಯಗಳು , ನಕ್ಷೆ , ಋತುಗಳು , ಹವಾಮಾನ. ಭಾರತದ ಹವಾಮಾನದ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಇನ್ನಷ್ಟು ಓದಿ.     ಪರಿವಿಡಿ   ಭಾರತದ ಹವಾಮಾನ ಭಾರತವು "ಮಾನ್ಸೂನ್" ಹವಾಮಾನವನ್ನು ಹೊಂದಿದೆ , ಇದು ಪ್ರಾಥಮಿಕವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಅರೇಬಿಕ್ ಪದ "ಮೌಸಿಮ್" ಎಂದರೆ ಋತುಗಳು , ಇಲ್ಲಿ "ಮಾನ್ಸೂನ್" ಎಂಬ ಪದವು ಹುಟ್ಟಿಕೊಂಡಿದೆ. ಹಲವಾರು ಶತಮಾನಗಳ ಹಿಂದೆ , ಅರಬ್ ನ್ಯಾವಿಗೇಟರ್‌ಗಳು ಮೊದಲು "ಮಾನ್ಸೂನ್" ಎಂಬ ಪದವನ್ನು ಹಿಂದೂ ಮಹಾಸಾಗರದ ಕರಾವಳಿಯ ಉದ್ದಕ್ಕೂ , ವಿಶೇಷವಾಗಿ ಅರೇಬಿಯನ್ ಸಮುದ್ರದ ಮೇಲೆ ಕಾಲೋಚಿತ ಗಾಳಿಯ ಹಿಮ್ಮುಖ ವ್ಯವಸ್ಥೆಯನ್ನು ಉಲ್ಲೇಖಿಸಲು ಬಳಸಿದರು , ಇದರಲ್ಲಿ ಬೇಸಿಗೆಯಲ್ಲಿ ನೈಋತ್ಯದಿಂದ ಈಶಾನ್ಯಕ್ಕೆ ಗಾಳಿ ಬೀಸುತ್ತದೆ. ಮತ್ತು ಚಳಿಗಾಲದಲ್ಲಿ ಈಶಾನ್ಯದಿಂದ ನೈಋತ್ಯಕ್ಕೆ. ಬೇರೆ ರೀತಿಯಲ್ಲಿ ಹೇಳುವುದಾದರೆ , ಮಾನ್ಸೂನ್ ಕಾಲೋಚಿತ ಮಾರುತಗಳು ನಿಯತಕಾಲಿಕವಾಗಿ ಸಂಭವಿಸುತ್ತವೆ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಸಂಪೂರ್ಣವಾಗಿ ಹಿಮ್ಮುಖ ದಿಕ್ಕನ್ನು ಹೊಂದಿರುತ್ತವೆ.   ಭಾರತವು ಮಾನ್ಸೂನ್ ಶೈಲಿಯ ಹವಾಮಾನವನ್ನು ಹೊಂದಿದ್ದರೂ ಸಹ , ದೇಶದ ಹವಾಮಾನದಲ್ಲಿ ಭೌಗೋಳಿಕ ವ್ಯತ್ಯಾಸಗಳಿವೆ. ಈ ಪ್ರಾದೇಶಿಕ ವ್ಯತ್ಯಾಸಗಳನ್ನು ಮಾನ್ಸೂನ್ ಹವಾಮಾನ ಉಪವಿಭಾಗಗಳಾಗಿ ವರ್ಗೀಕರಿಸಬಹುದು.   ತ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.