ಆರ್‌ಬಿಐನ ಸಂಸ್ಥಾಪನಾ ದಿನ ಏಪ್ರಿಲ್ 1

https://www.google.com/url?sa=i&url=https%3A%2F%2Fwww.flickr.com%2Fphotos%2Fravikaran%2F9670674620&psig=AOvVaw1ohWr5C1ufAnxTDWUCNirC&ust=1620581229081000&source=images&cd=vfe&ved=0CAMQjB1qFwoTCKDSntfNuvACFQAAAAAdAAAAABAD


2021ರ ಏಪ್ರಿಲ್ 1 ರಂದು ಭಾರತದ ಕೇಂದ್ರ ಬ್ಯಾಂಕ್ ಆದ ಆರ್‌ಬಿಐ 86ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಂಡಿದೆ.


        ಆರ್.ಬಿ.ಐನ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಡಾ|| ಬಿ.ಆರ್. ಅಂಬೇಡ್ಕರ್ ಅವರು ತಮ್ಮ 'The Prob lem of the Rupee -Its Origin and Its Solu tion ಕೃತಿಯಲ್ಲಿ ಮೊದಲ ಬಾರಿಗೆ ತಿಳಿಸಿದ್ದರು. ಆದರೆ 1926 ರಲ್ಲಿ ನೇಮಕವಾದ ಹಿಲ್ಟನ್ ಯಂಗ್ ಸಮಿತಿಯ ಶಿಫಾರಸ್ಸಿನ ಮೇರೆಗೆ 1934ರ ಆರ್‌ಬಿಐ ಕಾಯ್ದೆಯನ್ವಯ 1935ರ ಏಪ್ರಿಲ್ 1 ರಂದು ಆರ್‌ಬಿಐ ಅನ್ನು ಸ್ಥಾಪಿಸಲಾಯಿತು. 1949ರ ಜನವರಿ 1 ರಂದು ಇದು ರಾಷ್ಟ್ರೀಕರಣಗೊಂಡಿತು. 1947ರ ವರೆಗೆ ಮಯನ್ಮಾರ್ ಮತ್ತು ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆಗಿ ಆರ್‌ಬಿಐ ಕಾರ್ಯನಿರ್ವಹಿಸಿತ್ತು. ಆರ್‌ಬಿಐ ನ ಲಾಂಛನ ಬಂಗಾಳದ ಹುಲಿ & ಪಾಮ್ ಮರ ಆಗಿದೆ.


      ಆರ್‌ಬಿಐನ ಮೊದಲ ಗೌವರ್ನರ್ ಆಗಿ ಸರ್. ಓಸ್ಮಿತ್‌ ಹಾಗೂ ಮೊದಲ ಭಾರತೀಯ ಗೌವರ್ನರ್ ಆಗಿ ಸಿ.ಡಿ.ದೇಶ್ ಮುಖ್ ಸೇವೆ ಸಲ್ಲಿಸಿದ್ದಾರೆ. ಆರ್‌ಬಿಐನ 23ನೇ ಗೌವರ್ನರ್ ಆಗಿ ರಘುರಾಮ್ ರಾಜನ್, 24ನೇ ಗೌವರ್ನರ್ ಆಗಿ ಊರ್ಜಿತ್ ಪಟೇಲ್ ಹಾಗೂ 25ನೇ ಮತ್ತು ಪ್ರಸ್ತುತ ಗೌವರ್ನರ್ ಅಗಿ ಶಕ್ತಿಕಾಂತ್ ದಾಸ್ ಕಾರ್ಯನಿರ್ವಹಿಸುತ್ತಿದ್ದಾರೆ.


          ಪ್ರಮುಖ ವರದಿಗಳು: ಭಾರತದ ಹಣಕಾಸು ಸ್ಥಿರತೆ ವರದಿ (ವರ್ಷಕ್ಕೆ ಎರಡು ಬಾರಿ) ಹಣಕಾಸು ನೀತಿ (ದೈಮಾಸಿಕ), ಗ್ರಾಹಕರ ಆತ್ಮವಿಶ್ವಾಸ ಸಮೀಕ್ಷೆ (e 3ones), Trends and Progress Of Banking In India (ಪ್ರತೀ ವರ್ಷ) ಪ್ರಕಟಿಸುವುದು. ಸರ್ಕಾರದ ಬ್ಯಾಂಕ್ ಆಗಿ ಬ್ಯಾಂಕುಗಳ ಬ್ಯಾಂಕ್ ಆಗಿ, ವಿದೇಶಿ ವಿನಿಮಯ ಪಾಲಕ, ಅಂತಿಮ ಋಣದಾತನಾಗಿ ಕಾರ್ಯನಿರ್ವಹಿಸುವುದು.


 ಆರ್‌ಬಿಐನ ಹಣಕಾಸು ನೀತಿ ಮೇಣನ ಸಮಿತಿ (MPC) ಯನ್ನು

      ಕೇಂದ್ರ ಸರ್ಕಾರವು 2016 ಸೆಪ್ಟೆಂಬರ್ 29 ರಲ್ಲಿ ನೇಮಕ ಮಾಡಿದ್ದು, ಮೊದಲ ಸಭೆಯು 2016 ಅಕ್ಟೋಬರ್ 4 ರಂದು ಪದನಿಮಿತ್ತ ಅಧ್ಯಕ್ಷರಾಗಿದ್ದ ಆರ್.ಬಿ.ಐ ಗೌರರ್ (ಅಂದು ಊರ್ಜಿತ್ ಪಟೇಲ್) ನೇತೃತ್ವದಲ್ಲಿ ಜರುಗಿತು. 2016 ಆಗಸ್ಟ್ 5 ರಿಂದ 2021 ಮಾರ್ಚ್ 31 ವರೆಗಿನ ಅವಧಿಯಲ್ಲಿ ಸರ್ಕಾರ ಹಣದುಬ್ಬರದ ದರವನ್ನು ಶೇ 4 ರಷ್ಟು ನಿರ್ಧರಿಸಿದ್ದು (+2 ಅಥವಾ -2) ಅಂದರೆ ಇದು ಶೇ 2 ರಷ್ಟು ದರವನ್ನು ಕನಿಷ್ಠ ಮತ್ತು ಶೇ 6 ರಷ್ಟು ಗರಿಷ್ಠ ದರದ ಮಿತಿಯಲ್ಲಿ ಹಣದುಬ್ಬರವು ವ್ಯತ್ಯಾಸಗೊಳ್ಳಬಹುದು ಎಂದಿತ್ತು. ಆದರೆ 2021 ಮಾರ್ಚ್ ಅಂತ್ಯದಲ್ಲಿ ಈ ಹಣದುಬ್ಬರದ ಮಿತಿಯನ್ನು 2021ರ ಏಪ್ರಿಲ್ 1 ರಿಂದ 2026ರ ಮಾರ್ಚ್ 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.


. ಆರ್‌ಐ ನ ದೈ ಮಾಸಿಕ ಹಣಕಾಸು ನೀತಿ

    2021ರ ಏಪ್ರಿಲ್ 2021 ರ ಏಪ್ರಿಲ್ 5 ರಿಂದ 7 ರವರೆಗೆ ಮುಂಬೈನಲ್ಲಿ ಆರ್‌ಬಿಐನ ಗೌವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ 6 ಜನ ಸದಸ್ಯರ ಹಣಕಾಸು ನೀತಿ ಪರಿಷ್ಕರಣಾ ಸಮಿತಿಯ ಸಭೆ ನಡೆಯಿತು. ಇದರಲ್ಲಿ 2021-22ರ ಹಣಕಾಸು ವರ್ಷದ ದೈಮಾಸಿಕ ಹಣಕಾಸು ನೀತಿ ಪ್ರಕಟಗೊಂಡಿತು. ಇದರನ್ವಯ ನಿರ್ಧಾರವಾದ ದರಗಳು

Post a Comment (0)
Previous Post Next Post