mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Wednesday, 12 May 2021

ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ (TEJAS Advanced Light Combat Aircraft)

        ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (HAL-Hindustan Aeronautics Limited) ನಿಂದ 48,000 ಕೋಟಿ ರೂ. ವೆಚ್ಚದಲ್ಲಿ 83 ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ (TEJAS Advanced Light Combat Aircraft) ಖರೀದಿಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ಸೂಚಿಸಿದೆ. ಇದು ಹೆಚ್‌ಎಎಲ್ & ಭಾರತೀಯ ವಾಯು ರಕ್ಷಣಾ ಕ್ಷೇತ್ರದಲ್ಲಿನ ಅತಿದೊಡ್ಡ ಖರೀದಿ ಒಪ್ಪಂದವಾಗಿದೆ. ದೇಶೀಯ ಸೇನಾ ಯುದ್ಧ ವಿಮಾನ, ಸೇನಾ ಸಲಕರಣೆಗಳ ಉತ್ಪಾದನೆಗೆ ಆದ್ಯತೆ ನೀಡಲು ಸರ್ಕಾರವು ಬದ್ಧವಾಗಿದೆ ಎಂಬ ಇಚ್ಛಾಶಕ್ತಿಯು ಈ ಮೂಲಕ ಪ್ರದರ್ಶನಗೊಂಡಿದೆ. ಈ ಒಪ್ಪಂದವು ಸರ್ಕಾರದ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ & ಆತ್ಮ ನಿರ್ಭರ್ ಭಾರತ್ ಅಭಿಯಾನಗಳಿಗೆ ಪುಷ್ಠಿ ನೀಡಿದಂತಾಗಿದೆ.


   MARK-IA ಆವೃತ್ತಿಯ ತೇಜಸ್ ಯುದ್ಧ ವಿಮಾನಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ., (ಹೆಚ್ಎಎಲ್) ನಿರ್ಮಿತ, ಸುಧಾರಿತ ಮಾರ್ಕ್-[ಎ ಆವೃತ್ತಿಯ ತೇಜಸ್ ವಿಮಾನಗಳನ್ನು ವಾಯುಪಡೆಗೆ ಖರೀದಿಸುವ ಪ್ರಸ್ತಾವಕ್ಕೆ 2020ರ ಮಾರ್ಚ್ ತಿಂಗಳಲ್ಲಿ ರಕ್ಷಣಾ ಉಪಕರಣಗಳ ಸ್ವಾಧೀನ ಮಂಡಳಿ (Defence Acquisition Council) ಅನುಮೋದನೆ ನೀಡಿತ್ತು. ಈ ಒಪ್ಪಂದದ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಭದ್ರತೆ ಕುರಿತ ಸಂಘಟ ಸಮಿತಿ' (CCS-Cabinet Com mittee on Security) ಒಪ್ಪಿಗೆ ನೀಡಿದೆ. ಈ 83 ಫೈಟರ್ ಜೆಟ್‌ಗಳ ಪೈಕಿ 73 ವಿಮಾನಗಳು ದೇಶದ ರಕ್ಷಣೆಗೆ ನಿಯೋಜನೆಗೊಂಡರೆ, 10 ವಿಮಾನಗಳು ತರಬೇತಿಗೆ ಬಳಕೆಯಾಗಲಿವೆ.


  ವಾಯುಪಡೆಯಲ್ಲಿ ಹೆಚ್ಚಳವಾದ ತೇಜಸ್ ಬಲ

ಭಾರತೀಯ ವಾಯುಪಡೆಗೆ ಎರಡು ಹಂತದಲ್ಲಿ ತೇಜಸ್ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 20 ಫೈಟರ್ ಜೆಟ್‌ಗಳು ಪೂರೈಕೆಯಾಗಿದ್ದು, ಎರಡನೇ ಹಂತದಲ್ಲಿ 20 ವಿಮಾನಗಳು ಪೂರೈಕೆಯಾಗುತ್ತಿವೆ. ಪ್ರಸ್ತುತವಾಗಿ 83 ತೇಜಸ್ ಫೈಟರ್ ವಿಮಾನಗಳನ್ನು ಖರೀದಿ ಮಾಡುವ ಒಪ್ಪಂದವನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ ತೇಜಸ್‌ನ ಬಲವು ವಾಯುಪಡೆಯಲ್ಲಿ 123 ಆಗಲಿದೆ. ಈ ಮೂಲಕ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್‌ನ ಬಲವು ಹೆಚ್ಚಳವಾದಂತಾಗಿದೆ.


   ತೇಜಸ್ ಖರೀದಿಯಿಂದ ಕಡಿಮೆಯಾದ ವಿದೇಶಿ ಅವಲಂಬನೆ ಭಾರತದ ಸೇನೆಯು ಅಮೆರಿಕಾ, ರಷ್ಯಾ, ಫ್ರಾನ್ಸ್, ಇಸ್ರೇಲ್ ಮುಂತಾದ ರಾಷ್ಟ್ರಗಳಿಂದ ಯುದ್ಧ ವಿಮಾನಗಳು, ಮದ್ದು ಗುಂಡುಗಳು, ಸೇನಾ ಉಪಕರಣಗಳನ್ನು ಖರೀದಿಸುತ್ತಿತ್ತು. ಇತ್ತೀಚೆಗೆ ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ವೇಳೆ ಹೆಚ್‌ಎಎಲ್‌ನ ಹೊರಗಿಟ್ಟಿದ್ದರಿಂದ ದೇಶಾದ್ಯಂತ ಅಪಾರ ಟೀಕೆಗೆ ಒಳಗಾಗಿತ್ತು. ಪ್ರಸ್ತುತವಾಗಿ ತೇಜಸ್ ಅನ್ನು ಭಾರತೀಯ ವಾಯುಪಡೆಗೆ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ವಿದೇಶದ ಅವಲಂಬನೆ ಕಡಿಮೆಯಾದಂತಾಗಿದೆ. 


ಎರಡನೇ ಸ್ಟ್ಯಾಡ್ರನ್ ಹೊಂದಿರುವ ತೇಜಸ್ : 2020ರ ಮೇ ತಿಂಗಳಲ್ಲಿ ವಾಯುಪಡೆಯ ತೇಜಸ್ MK-IA ಸರಣಿಯ ವಿಮಾನಗಳ 2ನೇ ಸ್ಮಾಟ್ರನ್' ರಚಿಸಿತ್ತು. ಇದಕ್ಕೆ 18 ಕ್ವಾಡ್ರನ್' ಎಂದು ಹೆಸರಿದ್ದು, ಇದನ್ನು ಪ್ರೈಯಿಂಗ್ ಬುಲೆಟ್ಸ್ ಎಂದು ಕರೆಯಲಾಗುತ್ತದೆ. ಇದರ ನೆಲೆ ಕೊಯಮತ್ತೂರು ಬಳಿಯ ಸುಲೂರಿನಲ್ಲಿದೆ. ಮೊದಲ ಸ್ಮಾಡ್ರನ್ ನಂ. (45 ಕೂಡ ಕೊಯಮತ್ತೂರಿನಲ್ಲಿದೆ. ಇದನ್ನು 2016 ರಲ್ಲಿ ರಚಿಸಲಾಗಿತ್ತು.

  

    ಸಕಾಲದಲ್ಲಿ ಪೂರೈಕೆಗೆ ವ್ಯವಸ್ಥೆ


ತೇಜಸ್ ಮಾರ್ಕ್-ಎ ಲಘು ಯುದ್ಧ ವಿಮಾನಗಳನ್ನು ಸಕಾಲದಲ್ಲಿ ಪೂರೈಸುವುದಕ್ಕಾಗಿ ಹೆಚ್‌ಎಎಲ್ ಹಲವು ಕ್ರಮಗಳನ್ನು ಕೈಗೊಂಡಿದೆ.  ಬೆಂಗಳೂರು ಮತ್ತು ನಾಸಿಕ್ ನಲ್ಲಿ ನಿರ್ಮಾಣ ಘಟಕ ಗಳು ಆರಂಭಿಸಲಾಗಿದೆ. ಹೆಚ್‌ಎಎಲ್ ಮತ್ತು ರಕ್ಷಣಾ ಸಚಿವಾಲಯದ ನಡುವೆ ಒಪ್ಪಂದವಾದ 3 ವರ್ಷಗಳ ಬಳಿಕ ವಿಮಾನ ಪೂರೈಕೆ ಆರಂಭವಾಗಲಿದೆ.


ಅತ್ಯನಿರ್ಭ‌್ರ ಭಾರತ (Aatmanirbhar Bharat) ಕ್ಕೆ ಆದ್ಯತೆ

       ಹೆಚ್‌ಎಎಲ್‌ನಿಂದ ಕೇಂದ್ರ ಸರ್ಕಾರ ಖರೀದಿಸುತ್ತಿರುವ 83 ಅತ್ಯಾಧುನಿಕ ತೇಜಸ್ ಯುದ್ಧ ವಿಮಾನಗಳ ಖರೀದಿ ಒಪ್ಪಂದವು ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ್ ಅಭಿಯಾನಗಳಿಗೆ ಪುಷ್ಠಿ ನೀಡಿದಂತಾಗಿದೆ. ಜತೆಗೆ ವಾಯುಪಡೆಯ ಬಲವರ್ಧನೆ ಮತ್ತು ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ. ಬೆಂಗಳೂರು ಹಾಗೂ ನಾಸಿಕ್‌ನಲ್ಲಿ ಹೆಚ್‌ಎಎಲ್ ಹೀಗಾಗಲೇ 2ನೇ ಉತ್ಪಾದಕ ಘಟಕಗಳನ್ನು ಆರಂಭಿಸಿರುವುದರಿಂದ ಕ್ಷಿಪ್ರವಾಗಿ ಈ ವಿಮಾನಗಳ ಪೂರೈಕೆ ಸಾಧ್ಯವಾಗಲಿದೆ. ಒಪ್ಪಂದದ ಭಾಗವಾಗಿ 73 ಏಕ ಇಂಜಿನ್ ತೇಜಸ್ ಲಘು ಯುದ್ಧ ವಿಮಾನಗಳು, ಹಾಗೂ 10 ಡಬ್ಬಲ್ ಇಂಜಿನ್‌ನನ್ನು ಹೊಂದಿರುವ ತೇಜಸ್ ತರಬೇತಿ ವಿಮಾನಗಳನ್ನು ಹೆಚ್‌ಎಎಲ್ ಪೂರೈಸಲಿದೆ. ಪ್ರಸ್ತುತವಾಗಿ ಭಾರತೀಯ ವಾಯುಪಡೆಯಲ್ಲಿ ಬಳಕೆಯಲ್ಲಿರುವ ವಿಮಾನಗಳಿಗೆ ಹೋಲಿಸಿದರೆ ಇದು ಸುಧಾರಿತ ಆವೃತ್ತಿಯಾದ ಮಾರ್ಕ್-1ಎ ಮಾದರಿಯಾಗಿದೆ.


ವಿಮಾನ ತಯಾರಿಕಾ ಕ್ಷೇತ್ರಕ್ಕೆ ಅನುಕೂಲ: ಈ ಒಪ್ಪಂದದಿಂದಾಗಿ ಭಾರತ ವಿಮಾನ ತಯಾರಿಕಾ ಕ್ಷೇತ್ರಕ್ಕೆ ಭಾರೀ ಅನುಕೂಲವಾಗಲಿದ್ದು, ಯೋಜನೆಯಲ್ಲಿ 560 ಕಂಪನಿಗಳು ಭಾಗಿಯಾಗಲಿವೆ. ದೇಶಾದ್ಯಂತ 5,000 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.


ವಿದೇಶದಲ್ಲೂ ಬೇಡಿಕೆ ಹೊಂದಿದ ತೇಜಸ್ ವಿಮಾನ


2016ರಲ್ಲಿ ಹೆಚ್‌ಎಎಲ್ ತೇಜಸ್‌ನ ಮೊದಲ ಜಾಗತಿಕ ಪ್ರದರ್ಶನವು ಬಹರೇನ್‌ನಲ್ಲಿ ಜರುಗಿದ ಬಳಿಕ, ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದನ್ನು ಖರೀದಿಸಲು ಆಸಕ್ತಿ ತೋರಿಸಿವೆ. ಮಲೇಷಿಯಾ, ವಿಯೆಟ್ನಾಂ, ಇಂಡೋನೇಷಿಯಾ ಹಾಗೂ ಶ್ರೀಲಂಕಾಗಳಲ್ಲಿ ಹೆಚ್‌ಎಎಲ್ ತನ್ನ ಸಂಚಾರಿ ವೇಳೆಯನ್ನು ಸ್ಥಾಪಿಸಲು ಮುಂದಾಗಿದೆ. ಇಲ್ಲಿನ ಸ್ಥಳೀಯ - ಹಾಗೂ ಜಾಗತಿಕ ವಿಮಾನಗಳಿಗೆ ಸೇವೆಯನ್ನು ನೀಡಲು ಮುಂದಾಗಿದೆ. ಇವು ಹೆಚ್ಎಎಲ್ ತೇಜಸ್, ದಾಳಿ: ಹೆಲಿಕಾಪ್ಟರ್ ರುದ್ರ ಹಾಗೂ ಆಧುನಿಕ ಪೆಲಿಕಾಪ್ಟರ್ ಧ್ರುವಗಳ ಮಾರಾಟಕ್ಕೆ ವೇದಿಕೆಯಾಗಲಿದೆ.


      ಚೀನಾ ವಿಮಾನಕ್ಕಿಂತ ತೇಜಸ್ ಉತ್ತಮ: ಭಾರತದ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನವು ಚೀನಾ & ಪಾಕಿಸ್ತಾನದ ಜೆಎಫ್-17 ವಿಮಾನಕ್ಕಿಂತ ಬಹುಪಾಲು ಉತ್ತಮವಾದದ್ದು. ತೇಜಸ್ ವಿಮಾನವು ಬಾಲಾಕೋಟ್ ಮಾದರಿ ವೈಮಾನಿಕ ದಾಳಿ ನಡೆಸುವುದಕ್ಕೆ ಉತ್ತಮ ಆಯ್ಕೆ ಆಗಿದೆ.

     ಹೆಚ್‌ಎಎಲ್ ಬಗ್ಗೆ ಮಾಹಿತಿ


ಕೇಂದ್ರ ಕಚೇರಿ: ಬೆಂಗಳೂರು

ವಿಸೃತರೂಪ : Hindustan Aeronautics Limited


ಸ್ಥಾಪನೆ: 1940 ರಲ್ಲಿ ಹಿಂದೂಸ್ತಾನ್ ಏರೋ ಕಾಫ್ಟ್ ಲಿ., ಆಗಿ ಆರಂಭವಾಗಿದ್ದು, ಭಾರತ ಸರ್ಕಾರವು 1941 ರಲ್ಲಿ ಷೇರನ್ನು ಹೊಂದಿತ್ತು. 1942 ರಲ್ಲಿ ಹೆಚ್ಚಿನ ಷೇರನ್ನು ಖರೀದಿಸಿ ಸ್ವಾಮ್ಯ ಪಡೆಯಿತು. 


* 1964 ರಲ್ಲಿ ಇನ್ನೊಂದು ವೈಮಾನಿಕ ಸಂಸ್ಥೆ ಏರೋನಾಟಿಕ್ಸ್ ಇಂಡಿಂ ಯಾ ಲಿ., ಹಾಗೂ ಏರೋಕ್ರಾಫ್ಟ್ ಅನ್ನು ವಿಲೀನಗೊಳಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಎಂದು ಮರುನಾಮಕರಣ ಮಾಡಲಾಯಿತು.


ಸ್ಥಾಪಕರು: ವಾಲ್ ಚಂದ್‌ ಹೀರಾಚಾಂದ್‌ (Walehand Hira


chand Doshi) ಎಂಬುವರು ಅಮೆರಿಕಾದ ತಜ್ಞ ವಿಲಿಯಂ ಡಾಗ್ದಾಲ್ ಪಾಲೆ ಅವರ ಸಹಕಾರದಿಂದ ಹಿಂದೂಸ್ತಾನ್ ಏರೋಕ್ರಾಫ್ಟ್ ಲಿ., ಸ್ಥಾಪಿಸಿದರು. ಸಂಸ್ಥೆ ಸ್ಥಾಪನೆಗೆ ಸ್ಥಳದ ಹುಡುಕಾಟದಲ್ಲಿದ್ದಾಗ ಸೇತ್ ಜೀಗೆ ಮೈಸೂರು ಮಹಾರಾಜರಾದ ಕೃಷ್ಣರಾಜೇಂದ್ರ ಒಡೆಯರ್ ಅವರು ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಸಲಹೆಯಂತೆ ಬೆಂಗಳೂರಿನಲ್ಲಿ 700 ಎಕರೆ ಜಾಗವನ್ನು ಹಣ ಪಡೆಯದೆ ಉಚಿತವಾಗಿ ನೀಡಿದರು. ಇದರೊಂದಿಗೆ ವಿದ್ಯುತ್ ಮತ್ತು ನೀರನ್ನು ಕೂಡ ಒದಗಿಸಿದರು.


ಪ್ರಸ್ತುತ ಮುಖ್ಯಸ್ಥರು : ಆರ್, ಮಾಧವನ್


* ನಿಯಂತ್ರಣ : ಭಾರತದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ನಿರ್ವಹಣೆ.

ಸಂಸ್ಥೆಯ ವಿಶೇಷತೆಗಳು : ಪ್ರಸ್ತುತವಾಗಿ ಸಂಸ್ಥೆಯಲ್ಲಿ 11 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, 20 ಉತ್ಪಾದನಾ ಘಟಕಗಳು, 30 ಸಾವಿರದಷ್ಟು ಉದ್ಯೋಗಗಳನ್ನು ಹೊಂದಿದೆ. ಜಾಗತಿಕವಾಗಿ 100 ವೈಮಾನಿಕ ಸಂಸ್ಥೆಗಳಲ್ಲಿ 34ನೇ ಸ್ಥಾನದಲ್ಲಿದೆ. ಇದುವರೆಗೂ 17 ವಿಧದ 1,476 ವಿಮಾನಗಳನ್ನು ಹೆಚ್‌ಎಎಲ್ ಸ್ಥಳೀಯವಾಗಿ ನಿರ್ಮಿಸಿದೆ.


No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

Current Affairs Quiz - September, 2021

  1 ಇತ್ತೀಚೆಗೆ ನಿಧನರಾದ ಬುದ್ಧದೇವ್ ಗುಹಾ ಯಾವ ವೃತ್ತಿಯೊಂದಿಗೆ ಸಂಬಂಧ ಹೊಂದಿದ್ದರು ? [A] ಕ್ರೀಡಾಪಟು [B] ಬರಹಗಾರ [C] ರಾಜಕಾರಣಿ [D] ವ್ಯಾಪಾರ-ವ್ಯಕ್ತಿ answar ಸರಿಯಾದ ಉತ್ತರ:   ಬಿ [ಬರಹಗಾರ] ಟಿಪ್ಪಣಿಗಳು: ಮಧುಕಾರಿ ಸೇರಿದಂತೆ ಹಲವಾರು ಜನಪ್ರಿಯ ಪುಸ್ತಕಗಳನ್ನು ಬರೆದ ಖ್ಯಾತ ಬಂಗಾಳಿ ಬರಹಗಾರ ಬುದ್ಧದೇವ್ ಗುಹಾ ಇತ್ತೀಚೆಗೆ ನಿಧನರಾದರು. ಬರಹಗಾರ ತನ್ನ 85 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಆನಂದ ಪುರಸ್ಕಾರ ಮತ್ತು ಶರತ್ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ಬಂಗಾಳಿ ಸಾಹಿತ್ಯದ ಲೇಖಕರು , ' ಕೋಯೆಲ್ ', ' ಕೋಜಗರ್ ', ' ಮಧುಕರಿ ', ' ಜಂಗಲಮಹಲ್ ', ' ಚರಿಬೇತಿ ' ಇತ್ಯಾದಿಗಳನ್ನು ಒಳಗೊಂಡಂತೆ ಗಮನಾರ್ಹ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬಂಗಾಳಿ ಸಾಹಿತ್ಯದಲ್ಲಿ ' ರಿವು ಮತ್ತು ರಿಜುಡಾ ' ಹೆಸರಿನ ಎರಡು ಜನಪ್ರಿಯ ಕಾಲ್ಪನಿಕ ಪಾತ್ರಗಳ ಸೃಷ್ಟಿಕರ್ತ. Current Affairs Quiz - October, 2021     2. ಇತ್ತೀಚೆಗೆ ಭಾರತ ಮತ್ತು ಅಲ್ಜೀರಿಯಾ ನಡುವಿನ ನೌಕಾ ವ್ಯಾಯಾಮವನ್ನು ಎಲ್ಲಿ ನಡೆಸಲಾಯಿತು ? [A] ಬಂಗಾಳ ಕೊಲ್ಲಿ [B] ಅರೇಬಿಯನ್ ಸಮುದ್ರ [C] ಹಿಂದೂ ಮಹಾಸಾಗರ [D] ಮೆಡಿಟರೇನಿಯನ್ ಸಮುದ್ರ answar ಸರಿಯಾದ ಉತ್ತರ:   ಡಿ [ಮೆಡಿಟರೇನಿಯನ್ ಸಮುದ್ರ] ಟಿಪ್ಪಣಿಗಳು: ಇತ್ತ...

ಆರ್ಕಿಮಿಡಿಸ್ ತತ್ವ

ಸಾರಾಂಶ ·    ತೇಲುವ ಬಲವನ್ನು ವಿವರಿಸಿ. ·    ರಾಜ್ಯ ಆರ್ಕಿಮಿಡಿಸ್ ತತ್ವ. ·    ವಸ್ತುಗಳು ಏಕೆ ತೇಲುತ್ತವೆ ಅಥವಾ ಮುಳುಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ·    ಸಾಂದ್ರತೆ ಮತ್ತು ಆರ್ಕಿಮಿಡಿಸ್ ತತ್ವದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಿ. ನೀವು ಬೆಚ್ಚಗಿನ ಸ್ನಾನದಲ್ಲಿ ವಿಶ್ರಾಂತಿ ಪಡೆಯುವುದರಿಂದ , ನಿಮ್ಮ ತೋಳುಗಳು ವಿಚಿತ್ರವಾಗಿ ಭಾರವಾಗಿರುತ್ತದೆ.   ಏಕೆಂದರೆ ನೀವು ಇನ್ನು ಮುಂದೆ ನೀರಿನ ತೇಲುವ ಬೆಂಬಲವನ್ನು ಹೊಂದಿಲ್ಲ.   ಈ ತೇಲುವ ಶಕ್ತಿ ಎಲ್ಲಿಂದ ಬರುತ್ತದೆ ?   ಕೆಲವು ವಿಷಯಗಳು ತೇಲುತ್ತವೆ ಮತ್ತು ಇತರವು ಏಕೆ ಆಗುವುದಿಲ್ಲ ?   ಮುಳುಗುವ ವಸ್ತುಗಳು ದ್ರವದಿಂದ ಯಾವುದೇ ಬೆಂಬಲವನ್ನು ಪಡೆಯುತ್ತವೆಯೇ ?   ನಿಮ್ಮ ದೇಹವು ವಾತಾವರಣದಿಂದ ತೇಲುತ್ತದೆಯೇ ಅಥವಾ ಹೀಲಿಯಂ ಬಲೂನ್‌ಗಳು ಮಾತ್ರ ಪರಿಣಾಮ ಬೀರುತ್ತವೆಯೇ ?   (   ಚಿತ್ರ 1   ನೋಡಿ .) ಚಿತ್ರ 1.   (a) ಈ ಆಂಕರ್‌ನಂತೆ ಮುಳುಗುವ ವಸ್ತುಗಳು ಸಹ ಮುಳುಗಿದಾಗ ನೀರಿನಿಂದ ಭಾಗಶಃ ಬೆಂಬಲಿತವಾಗಿದೆ.   (b) ಜಲಾಂತರ್ಗಾಮಿ ನೌಕೆಗಳು ಹೊಂದಾಣಿಕೆಯ ಸಾಂದ್ರತೆಯನ್ನು ಹೊಂದಿರುತ್ತವೆ (ನಿಲುಭಾರ ಟ್ಯಾಂಕ್‌ಗಳು) ಆದ್ದರಿಂದ ಅವು ಬಯಸಿದಂತೆ ತೇಲಬಹುದು ಅಥವಾ ಮುಳುಗಬಹುದು.   ( ಕ್ರೆಡಿಟ್: ಅಲೈಡ್ ನೇವಿ) (ಸಿ) ಹೀಲಿಯಂ ತುಂಬಿದ ಬಲೂನ...

ಭಾರತ ಸರ್ಕಾರದ ಕಾಯಿದೆ, 1858: ಪ್ರಮುಖ ಲಕ್ಷಣಗಳು

  ಕಂಪನಿಯ ಆಡಳಿತವನ್ನು ಕೊನೆಗೊಳಿಸಲು 1858 ರ ಭಾರತ ಸರ್ಕಾರದ ಕಾಯಿದೆಯನ್ನು ಅಂಗೀಕರಿಸಲಾಯಿತು ಮತ್ತು ಅದನ್ನು 1857 ರ ದಂಗೆಯ ಪರಿಣಾಮವಾಗಿ ಬ್ರಿಟಿಷ್ ಕಿರೀಟಕ್ಕೆ ವರ್ಗಾಯಿಸಲಾಯಿತು. ಭಾರತದ ಬ್ರಿಟಿಷ್ ಗವರ್ನರ್-ಜನರಲ್‌ಗೆ ವೈಸ್‌ರಾಯ್ ಎಂಬ ಬಿರುದನ್ನು ನೀಡಲಾಯಿತು , ಅವರು ರಾಜನ ಪ್ರತಿನಿಧಿಯಾದರು.   ಆಗಸ್ಟ್ 1858 ರಲ್ಲಿ , ಬ್ರಿಟಿಷ್ ಸಂಸತ್ತು ಕಂಪನಿಯ ಆಡಳಿತವನ್ನು ಕೊನೆಗೊಳಿಸುವ ಕಾಯಿದೆಯನ್ನು ಅಂಗೀಕರಿಸಿತು.   ಭಾರತದಲ್ಲಿ ಬ್ರಿಟಿಷ್ ಸರ್ಕಾರದ ನಿಯಂತ್ರಣವನ್ನು ಬ್ರಿಟಿಷ್ ಕಿರೀಟಕ್ಕೆ ವರ್ಗಾಯಿಸಲಾಯಿತು.   ಈ ಸಮಯದಲ್ಲಿ , ವಿಕ್ಟೋರಿಯಾ ಬ್ರಿಟನ್ನಿನ ರಾಣಿಯಾಗಿದ್ದಳು.   ಬ್ರಿಟನ್‌ನಲ್ಲಿನ ಸರ್ವೋಚ್ಚ ಸಂಸ್ಥೆಯು ಬ್ರಿಟಿಷ್ ಸಂಸತ್ತಾಗಿತ್ತು , ಇದಕ್ಕೆ ಬ್ರಿಟಿಷ್ ಸರ್ಕಾರವು ಜವಾಬ್ದಾರನಾಗಿದ್ದನು.   ಆದಾಗ್ಯೂ , ಬ್ರಿಟಿಷ್ ಸರ್ಕಾರದ ಎಲ್ಲಾ ಚಟುವಟಿಕೆಗಳನ್ನು ರಾಜನ ಹೆಸರಿನಲ್ಲಿ ನಡೆಸಲಾಯಿತು.   ರಾಜ್ಯ ಕಾರ್ಯದರ್ಶಿ ಎಂದು ಕರೆಯಲ್ಪಡುವ ಬ್ರಿಟಿಷ್ ಸರ್ಕಾರದ ಮಂತ್ರಿಯನ್ನು ಭಾರತ ಸರ್ಕಾರದ ಜವಾಬ್ದಾರಿಯನ್ನು ವಹಿಸಲಾಯಿತು.   ಬ್ರಿಟಿಷ್ ಸರ್ಕಾರವು ಸಂಸತ್ತಿಗೆ ಜವಾಬ್ದಾರರಾಗಿದ್ದರಿಂದ , ಭಾರತದ ಸರ್ವೋಚ್ಚ ಸಂಸ್ಥೆಯು ಬ್ರಿಟಿಷ್ ಸಂಸತ್ತಾಗಿತ್ತು.   ಭಾರತದ ಬ್ರಿಟಿಷ್ ಗವರ್ನರ್-ಜನರಲ್‌ಗೆ ಈಗ ವೈಸರಾಯ್ ಎಂಬ ಬಿರುದನ್ನು ನೀಡಲಾಯಿತು , ಅಂದರೆ ರಾಜನ ಪ್ರತಿನಿಧಿ. ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.