mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Wednesday, 12 May 2021

ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ (TEJAS Advanced Light Combat Aircraft)

        ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (HAL-Hindustan Aeronautics Limited) ನಿಂದ 48,000 ಕೋಟಿ ರೂ. ವೆಚ್ಚದಲ್ಲಿ 83 ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ (TEJAS Advanced Light Combat Aircraft) ಖರೀದಿಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ಸೂಚಿಸಿದೆ. ಇದು ಹೆಚ್‌ಎಎಲ್ & ಭಾರತೀಯ ವಾಯು ರಕ್ಷಣಾ ಕ್ಷೇತ್ರದಲ್ಲಿನ ಅತಿದೊಡ್ಡ ಖರೀದಿ ಒಪ್ಪಂದವಾಗಿದೆ. ದೇಶೀಯ ಸೇನಾ ಯುದ್ಧ ವಿಮಾನ, ಸೇನಾ ಸಲಕರಣೆಗಳ ಉತ್ಪಾದನೆಗೆ ಆದ್ಯತೆ ನೀಡಲು ಸರ್ಕಾರವು ಬದ್ಧವಾಗಿದೆ ಎಂಬ ಇಚ್ಛಾಶಕ್ತಿಯು ಈ ಮೂಲಕ ಪ್ರದರ್ಶನಗೊಂಡಿದೆ. ಈ ಒಪ್ಪಂದವು ಸರ್ಕಾರದ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ & ಆತ್ಮ ನಿರ್ಭರ್ ಭಾರತ್ ಅಭಿಯಾನಗಳಿಗೆ ಪುಷ್ಠಿ ನೀಡಿದಂತಾಗಿದೆ.


   MARK-IA ಆವೃತ್ತಿಯ ತೇಜಸ್ ಯುದ್ಧ ವಿಮಾನಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ., (ಹೆಚ್ಎಎಲ್) ನಿರ್ಮಿತ, ಸುಧಾರಿತ ಮಾರ್ಕ್-[ಎ ಆವೃತ್ತಿಯ ತೇಜಸ್ ವಿಮಾನಗಳನ್ನು ವಾಯುಪಡೆಗೆ ಖರೀದಿಸುವ ಪ್ರಸ್ತಾವಕ್ಕೆ 2020ರ ಮಾರ್ಚ್ ತಿಂಗಳಲ್ಲಿ ರಕ್ಷಣಾ ಉಪಕರಣಗಳ ಸ್ವಾಧೀನ ಮಂಡಳಿ (Defence Acquisition Council) ಅನುಮೋದನೆ ನೀಡಿತ್ತು. ಈ ಒಪ್ಪಂದದ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಭದ್ರತೆ ಕುರಿತ ಸಂಘಟ ಸಮಿತಿ' (CCS-Cabinet Com mittee on Security) ಒಪ್ಪಿಗೆ ನೀಡಿದೆ. ಈ 83 ಫೈಟರ್ ಜೆಟ್‌ಗಳ ಪೈಕಿ 73 ವಿಮಾನಗಳು ದೇಶದ ರಕ್ಷಣೆಗೆ ನಿಯೋಜನೆಗೊಂಡರೆ, 10 ವಿಮಾನಗಳು ತರಬೇತಿಗೆ ಬಳಕೆಯಾಗಲಿವೆ.


  ವಾಯುಪಡೆಯಲ್ಲಿ ಹೆಚ್ಚಳವಾದ ತೇಜಸ್ ಬಲ

ಭಾರತೀಯ ವಾಯುಪಡೆಗೆ ಎರಡು ಹಂತದಲ್ಲಿ ತೇಜಸ್ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 20 ಫೈಟರ್ ಜೆಟ್‌ಗಳು ಪೂರೈಕೆಯಾಗಿದ್ದು, ಎರಡನೇ ಹಂತದಲ್ಲಿ 20 ವಿಮಾನಗಳು ಪೂರೈಕೆಯಾಗುತ್ತಿವೆ. ಪ್ರಸ್ತುತವಾಗಿ 83 ತೇಜಸ್ ಫೈಟರ್ ವಿಮಾನಗಳನ್ನು ಖರೀದಿ ಮಾಡುವ ಒಪ್ಪಂದವನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ ತೇಜಸ್‌ನ ಬಲವು ವಾಯುಪಡೆಯಲ್ಲಿ 123 ಆಗಲಿದೆ. ಈ ಮೂಲಕ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್‌ನ ಬಲವು ಹೆಚ್ಚಳವಾದಂತಾಗಿದೆ.


   ತೇಜಸ್ ಖರೀದಿಯಿಂದ ಕಡಿಮೆಯಾದ ವಿದೇಶಿ ಅವಲಂಬನೆ ಭಾರತದ ಸೇನೆಯು ಅಮೆರಿಕಾ, ರಷ್ಯಾ, ಫ್ರಾನ್ಸ್, ಇಸ್ರೇಲ್ ಮುಂತಾದ ರಾಷ್ಟ್ರಗಳಿಂದ ಯುದ್ಧ ವಿಮಾನಗಳು, ಮದ್ದು ಗುಂಡುಗಳು, ಸೇನಾ ಉಪಕರಣಗಳನ್ನು ಖರೀದಿಸುತ್ತಿತ್ತು. ಇತ್ತೀಚೆಗೆ ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ವೇಳೆ ಹೆಚ್‌ಎಎಲ್‌ನ ಹೊರಗಿಟ್ಟಿದ್ದರಿಂದ ದೇಶಾದ್ಯಂತ ಅಪಾರ ಟೀಕೆಗೆ ಒಳಗಾಗಿತ್ತು. ಪ್ರಸ್ತುತವಾಗಿ ತೇಜಸ್ ಅನ್ನು ಭಾರತೀಯ ವಾಯುಪಡೆಗೆ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ವಿದೇಶದ ಅವಲಂಬನೆ ಕಡಿಮೆಯಾದಂತಾಗಿದೆ. 


ಎರಡನೇ ಸ್ಟ್ಯಾಡ್ರನ್ ಹೊಂದಿರುವ ತೇಜಸ್ : 2020ರ ಮೇ ತಿಂಗಳಲ್ಲಿ ವಾಯುಪಡೆಯ ತೇಜಸ್ MK-IA ಸರಣಿಯ ವಿಮಾನಗಳ 2ನೇ ಸ್ಮಾಟ್ರನ್' ರಚಿಸಿತ್ತು. ಇದಕ್ಕೆ 18 ಕ್ವಾಡ್ರನ್' ಎಂದು ಹೆಸರಿದ್ದು, ಇದನ್ನು ಪ್ರೈಯಿಂಗ್ ಬುಲೆಟ್ಸ್ ಎಂದು ಕರೆಯಲಾಗುತ್ತದೆ. ಇದರ ನೆಲೆ ಕೊಯಮತ್ತೂರು ಬಳಿಯ ಸುಲೂರಿನಲ್ಲಿದೆ. ಮೊದಲ ಸ್ಮಾಡ್ರನ್ ನಂ. (45 ಕೂಡ ಕೊಯಮತ್ತೂರಿನಲ್ಲಿದೆ. ಇದನ್ನು 2016 ರಲ್ಲಿ ರಚಿಸಲಾಗಿತ್ತು.

  

    ಸಕಾಲದಲ್ಲಿ ಪೂರೈಕೆಗೆ ವ್ಯವಸ್ಥೆ


ತೇಜಸ್ ಮಾರ್ಕ್-ಎ ಲಘು ಯುದ್ಧ ವಿಮಾನಗಳನ್ನು ಸಕಾಲದಲ್ಲಿ ಪೂರೈಸುವುದಕ್ಕಾಗಿ ಹೆಚ್‌ಎಎಲ್ ಹಲವು ಕ್ರಮಗಳನ್ನು ಕೈಗೊಂಡಿದೆ.  ಬೆಂಗಳೂರು ಮತ್ತು ನಾಸಿಕ್ ನಲ್ಲಿ ನಿರ್ಮಾಣ ಘಟಕ ಗಳು ಆರಂಭಿಸಲಾಗಿದೆ. ಹೆಚ್‌ಎಎಲ್ ಮತ್ತು ರಕ್ಷಣಾ ಸಚಿವಾಲಯದ ನಡುವೆ ಒಪ್ಪಂದವಾದ 3 ವರ್ಷಗಳ ಬಳಿಕ ವಿಮಾನ ಪೂರೈಕೆ ಆರಂಭವಾಗಲಿದೆ.


ಅತ್ಯನಿರ್ಭ‌್ರ ಭಾರತ (Aatmanirbhar Bharat) ಕ್ಕೆ ಆದ್ಯತೆ

       ಹೆಚ್‌ಎಎಲ್‌ನಿಂದ ಕೇಂದ್ರ ಸರ್ಕಾರ ಖರೀದಿಸುತ್ತಿರುವ 83 ಅತ್ಯಾಧುನಿಕ ತೇಜಸ್ ಯುದ್ಧ ವಿಮಾನಗಳ ಖರೀದಿ ಒಪ್ಪಂದವು ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ್ ಅಭಿಯಾನಗಳಿಗೆ ಪುಷ್ಠಿ ನೀಡಿದಂತಾಗಿದೆ. ಜತೆಗೆ ವಾಯುಪಡೆಯ ಬಲವರ್ಧನೆ ಮತ್ತು ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ. ಬೆಂಗಳೂರು ಹಾಗೂ ನಾಸಿಕ್‌ನಲ್ಲಿ ಹೆಚ್‌ಎಎಲ್ ಹೀಗಾಗಲೇ 2ನೇ ಉತ್ಪಾದಕ ಘಟಕಗಳನ್ನು ಆರಂಭಿಸಿರುವುದರಿಂದ ಕ್ಷಿಪ್ರವಾಗಿ ಈ ವಿಮಾನಗಳ ಪೂರೈಕೆ ಸಾಧ್ಯವಾಗಲಿದೆ. ಒಪ್ಪಂದದ ಭಾಗವಾಗಿ 73 ಏಕ ಇಂಜಿನ್ ತೇಜಸ್ ಲಘು ಯುದ್ಧ ವಿಮಾನಗಳು, ಹಾಗೂ 10 ಡಬ್ಬಲ್ ಇಂಜಿನ್‌ನನ್ನು ಹೊಂದಿರುವ ತೇಜಸ್ ತರಬೇತಿ ವಿಮಾನಗಳನ್ನು ಹೆಚ್‌ಎಎಲ್ ಪೂರೈಸಲಿದೆ. ಪ್ರಸ್ತುತವಾಗಿ ಭಾರತೀಯ ವಾಯುಪಡೆಯಲ್ಲಿ ಬಳಕೆಯಲ್ಲಿರುವ ವಿಮಾನಗಳಿಗೆ ಹೋಲಿಸಿದರೆ ಇದು ಸುಧಾರಿತ ಆವೃತ್ತಿಯಾದ ಮಾರ್ಕ್-1ಎ ಮಾದರಿಯಾಗಿದೆ.


ವಿಮಾನ ತಯಾರಿಕಾ ಕ್ಷೇತ್ರಕ್ಕೆ ಅನುಕೂಲ: ಈ ಒಪ್ಪಂದದಿಂದಾಗಿ ಭಾರತ ವಿಮಾನ ತಯಾರಿಕಾ ಕ್ಷೇತ್ರಕ್ಕೆ ಭಾರೀ ಅನುಕೂಲವಾಗಲಿದ್ದು, ಯೋಜನೆಯಲ್ಲಿ 560 ಕಂಪನಿಗಳು ಭಾಗಿಯಾಗಲಿವೆ. ದೇಶಾದ್ಯಂತ 5,000 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.


ವಿದೇಶದಲ್ಲೂ ಬೇಡಿಕೆ ಹೊಂದಿದ ತೇಜಸ್ ವಿಮಾನ


2016ರಲ್ಲಿ ಹೆಚ್‌ಎಎಲ್ ತೇಜಸ್‌ನ ಮೊದಲ ಜಾಗತಿಕ ಪ್ರದರ್ಶನವು ಬಹರೇನ್‌ನಲ್ಲಿ ಜರುಗಿದ ಬಳಿಕ, ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದನ್ನು ಖರೀದಿಸಲು ಆಸಕ್ತಿ ತೋರಿಸಿವೆ. ಮಲೇಷಿಯಾ, ವಿಯೆಟ್ನಾಂ, ಇಂಡೋನೇಷಿಯಾ ಹಾಗೂ ಶ್ರೀಲಂಕಾಗಳಲ್ಲಿ ಹೆಚ್‌ಎಎಲ್ ತನ್ನ ಸಂಚಾರಿ ವೇಳೆಯನ್ನು ಸ್ಥಾಪಿಸಲು ಮುಂದಾಗಿದೆ. ಇಲ್ಲಿನ ಸ್ಥಳೀಯ - ಹಾಗೂ ಜಾಗತಿಕ ವಿಮಾನಗಳಿಗೆ ಸೇವೆಯನ್ನು ನೀಡಲು ಮುಂದಾಗಿದೆ. ಇವು ಹೆಚ್ಎಎಲ್ ತೇಜಸ್, ದಾಳಿ: ಹೆಲಿಕಾಪ್ಟರ್ ರುದ್ರ ಹಾಗೂ ಆಧುನಿಕ ಪೆಲಿಕಾಪ್ಟರ್ ಧ್ರುವಗಳ ಮಾರಾಟಕ್ಕೆ ವೇದಿಕೆಯಾಗಲಿದೆ.


      ಚೀನಾ ವಿಮಾನಕ್ಕಿಂತ ತೇಜಸ್ ಉತ್ತಮ: ಭಾರತದ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನವು ಚೀನಾ & ಪಾಕಿಸ್ತಾನದ ಜೆಎಫ್-17 ವಿಮಾನಕ್ಕಿಂತ ಬಹುಪಾಲು ಉತ್ತಮವಾದದ್ದು. ತೇಜಸ್ ವಿಮಾನವು ಬಾಲಾಕೋಟ್ ಮಾದರಿ ವೈಮಾನಿಕ ದಾಳಿ ನಡೆಸುವುದಕ್ಕೆ ಉತ್ತಮ ಆಯ್ಕೆ ಆಗಿದೆ.

     ಹೆಚ್‌ಎಎಲ್ ಬಗ್ಗೆ ಮಾಹಿತಿ


ಕೇಂದ್ರ ಕಚೇರಿ: ಬೆಂಗಳೂರು

ವಿಸೃತರೂಪ : Hindustan Aeronautics Limited


ಸ್ಥಾಪನೆ: 1940 ರಲ್ಲಿ ಹಿಂದೂಸ್ತಾನ್ ಏರೋ ಕಾಫ್ಟ್ ಲಿ., ಆಗಿ ಆರಂಭವಾಗಿದ್ದು, ಭಾರತ ಸರ್ಕಾರವು 1941 ರಲ್ಲಿ ಷೇರನ್ನು ಹೊಂದಿತ್ತು. 1942 ರಲ್ಲಿ ಹೆಚ್ಚಿನ ಷೇರನ್ನು ಖರೀದಿಸಿ ಸ್ವಾಮ್ಯ ಪಡೆಯಿತು. 


* 1964 ರಲ್ಲಿ ಇನ್ನೊಂದು ವೈಮಾನಿಕ ಸಂಸ್ಥೆ ಏರೋನಾಟಿಕ್ಸ್ ಇಂಡಿಂ ಯಾ ಲಿ., ಹಾಗೂ ಏರೋಕ್ರಾಫ್ಟ್ ಅನ್ನು ವಿಲೀನಗೊಳಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಎಂದು ಮರುನಾಮಕರಣ ಮಾಡಲಾಯಿತು.


ಸ್ಥಾಪಕರು: ವಾಲ್ ಚಂದ್‌ ಹೀರಾಚಾಂದ್‌ (Walehand Hira


chand Doshi) ಎಂಬುವರು ಅಮೆರಿಕಾದ ತಜ್ಞ ವಿಲಿಯಂ ಡಾಗ್ದಾಲ್ ಪಾಲೆ ಅವರ ಸಹಕಾರದಿಂದ ಹಿಂದೂಸ್ತಾನ್ ಏರೋಕ್ರಾಫ್ಟ್ ಲಿ., ಸ್ಥಾಪಿಸಿದರು. ಸಂಸ್ಥೆ ಸ್ಥಾಪನೆಗೆ ಸ್ಥಳದ ಹುಡುಕಾಟದಲ್ಲಿದ್ದಾಗ ಸೇತ್ ಜೀಗೆ ಮೈಸೂರು ಮಹಾರಾಜರಾದ ಕೃಷ್ಣರಾಜೇಂದ್ರ ಒಡೆಯರ್ ಅವರು ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಸಲಹೆಯಂತೆ ಬೆಂಗಳೂರಿನಲ್ಲಿ 700 ಎಕರೆ ಜಾಗವನ್ನು ಹಣ ಪಡೆಯದೆ ಉಚಿತವಾಗಿ ನೀಡಿದರು. ಇದರೊಂದಿಗೆ ವಿದ್ಯುತ್ ಮತ್ತು ನೀರನ್ನು ಕೂಡ ಒದಗಿಸಿದರು.


ಪ್ರಸ್ತುತ ಮುಖ್ಯಸ್ಥರು : ಆರ್, ಮಾಧವನ್


* ನಿಯಂತ್ರಣ : ಭಾರತದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ನಿರ್ವಹಣೆ.

ಸಂಸ್ಥೆಯ ವಿಶೇಷತೆಗಳು : ಪ್ರಸ್ತುತವಾಗಿ ಸಂಸ್ಥೆಯಲ್ಲಿ 11 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, 20 ಉತ್ಪಾದನಾ ಘಟಕಗಳು, 30 ಸಾವಿರದಷ್ಟು ಉದ್ಯೋಗಗಳನ್ನು ಹೊಂದಿದೆ. ಜಾಗತಿಕವಾಗಿ 100 ವೈಮಾನಿಕ ಸಂಸ್ಥೆಗಳಲ್ಲಿ 34ನೇ ಸ್ಥಾನದಲ್ಲಿದೆ. ಇದುವರೆಗೂ 17 ವಿಧದ 1,476 ವಿಮಾನಗಳನ್ನು ಹೆಚ್‌ಎಎಲ್ ಸ್ಥಳೀಯವಾಗಿ ನಿರ್ಮಿಸಿದೆ.


No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

The President of India (Articles 52-62 ) ಭಾರತದ ರಾಷ್ಟ್ರಪತಿ (ಲೇಖನಗಳು 52-62)

ಭಾರತದ ರಾಷ್ಟ್ರಪತಿಅಧ್ಯಾಯ I ( ಕಾರ್ಯನಿರ್ವಾಹಕ) ಅಡಿಯಲ್ಲಿ ಸಂವಿಧಾನದ ಭಾಗ V ( ದಿ ಯೂನಿಯನ್) ಭಾರತದ ರಾಷ್ಟ್ರಪತಿಗಳ ಅರ್ಹತೆ , ಚುನಾವಣೆ ಮತ್ತು ದೋಷಾರೋಪಣೆಯನ್ನು ಪಟ್ಟಿ ಮಾಡುತ್ತದೆ.   ಭಾರತದ ಅಧ್ಯಕ್ಷರು ಭಾರತ    ಗಣರಾಜ್ಯದ ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ. ಅಧ್ಯಕ್ಷರು ಭಾರತದ ಕಾರ್ಯಾಂಗ , ಶಾಸಕಾಂಗ ಮತ್ತು ನ್ಯಾಯಾಂಗದ ಔಪಚಾರಿಕ ಮುಖ್ಯಸ್ಥರಾಗಿದ್ದಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಕೂಡ ಆಗಿದ್ದಾರೆ.   ಭಾರತದ ಸಂವಿಧಾನದ 53 ನೇ ವಿಧಿಯು ಅಧ್ಯಕ್ಷರು ತಮ್ಮ ಅಧಿಕಾರವನ್ನು ನೇರವಾಗಿ ಅಥವಾ ಅಧೀನ ಅಧಿಕಾರದಿಂದ ಚಲಾಯಿಸಬಹುದು ಎಂದು ಹೇಳುತ್ತದೆಯಾದರೂ , ಕೆಲವು ವಿನಾಯಿತಿಗಳೊಂದಿಗೆ , ಅಧ್ಯಕ್ಷರಿಗೆ ವಹಿಸಲಾದ ಎಲ್ಲಾ ಕಾರ್ಯಕಾರಿ ಅಧಿಕಾರವನ್ನು ಪ್ರಾಯೋಗಿಕವಾಗಿ , ಮಂತ್ರಿಗಳ ಮಂಡಳಿ ( CoM) ನಿರ್ವಹಿಸುತ್ತದೆ. )   ಪರಿವಿಡಿ ಭಾಗ V ಒಕ್ಕೂಟ ಅಧ್ಯಾಯ I ಕಾರ್ಯನಿರ್ವಾಹಕ ವಿಧಿ 52 : ಭಾರತದ ರಾಷ್ಟ್ರಪತಿ ಲೇಖನ 53 : ಒಕ್ಕೂಟದ ಕಾರ್ಯನಿರ್ವಾಹಕ ಅಧಿಕಾರ ವಿಧಿ 54: ಅಧ್ಯಕ್ಷರ ಆಯ್ಕೆ ವಿಧಿ 55: ಅಧ್ಯಕ್ಷರ ಆಯ್ಕೆಯ ವಿಧಾನ ವಿಧಿ 56 : ಅಧ್ಯಕ್ಷರ ಅಧಿಕಾರದ ಅವಧಿ ಅನುಚ್ಛೇದ 57 : ಮರು ಚುನಾವಣೆಗೆ ಅರ್ಹತೆ ವಿಧಿ 58 : ಅಧ್ಯಕ್ಷರಾಗಿ ಆಯ್ಕೆ ಮಾಡಲು ಅರ್ಹತೆಗಳು ಆರ್ಟಿಕಲ್ 59 : ಅಧ್ಯಕ್ಷರ ಕಚೇರಿಯ ಷರತ್ತುಗಳು ಅನುಚ್ಛೇದ 60 : ಅಧ್ಯ...

ವಿಶ್ವ ಜನಸಂಖ್ಯಾ ದಿನ 2023: ದಿನ, ದಿನಾಂಕ, ಥೀಮ್ ಮತ್ತು ಮಹತ್ವ

    ಹೆಚ್ಚುತ್ತಿರುವ ವಿಶ್ವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳು ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜನಸಂಖ್ಯಾ ದಿನ 2023 ಅನ್ನು ವಾರ್ಷಿಕವಾಗಿ ಜುಲೈ 11 ರಂದು ಸ್ಮರಿಸಲಾಗುತ್ತದೆ.   ವಿಶ್ವ ಜನಸಂಖ್ಯಾ ದಿನ , ಅದರ ಥೀಮ್ ಮತ್ತು ಸಂಗತಿಗಳ ಬಗ್ಗೆ ಎಲ್ಲವನ್ನೂ ಓದಿ.     ವಿಶ್ವ ಜನಸಂಖ್ಯಾ ದಿನ ಪ್ರತಿ ವರ್ಷ ಜುಲೈ 11 ರಂದು , ಪ್ರಪಂಚದಾದ್ಯಂತದ ಜನರು ಜನಸಂಖ್ಯೆಯ ಬೆಳವಣಿಗೆಯ ಸಮಸ್ಯೆಗಳು ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುತ್ತಾರೆ  .  ಈ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಜಗತ್ತಿನಲ್ಲಿರುವ ಪ್ರತಿಯೊಬ್ಬರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಇದು ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.   ವಿಶ್ವ ಜನಸಂಖ್ಯಾ ದಿನದ ಗುರಿಯು ಜ್ಞಾನವನ್ನು ಹೆಚ್ಚಿಸುವುದು ಮತ್ತು ಜನಸಂಖ್ಯೆಯ ಬೆಳವಣಿಗೆಯ ಪರಿಣಾಮಗಳನ್ನು ಪರಿಹರಿಸಲು ಗುಂಪು ಚಟುವಟಿಕೆಗಳನ್ನು ಉತ್ತೇಜಿಸುವುದು. ಜುಲೈ 2023 ರಲ್ಲಿ ಪ್ರಮುಖ ದಿನಗಳು ವಿಶ್ವ ಜನಸಂಖ್ಯಾ ದಿನದ ಅರ್ಥ ಈ ದಿನವು ಲಿಂಗ ಸಮಾನತೆ , ಕುಟುಂಬ ಯೋಜನೆ , ಸಂತಾನೋತ್ಪತ್ತಿ ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಂಭಾಷಣೆಗಳನ್ನು ಉತ್ತೇಜಿಸುತ್ತದೆ.   ಇದು ನೈತಿಕ ಜನಸಂಖ್ಯೆ ನಿಯಂತ್ರಣ ಮತ್ತು ಆರೋಗ್ಯ ಮತ್ತು ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವ...

ಭಾರತದಲ್ಲಿ ಆರ್ಥಿಕ ಉದಾರೀಕರಣ, ಪರಿಕಲ್ಪನೆ, ಉದ್ದೇಶ, ಪರಿಣಾಮಗಳು

ಭಾರತದಲ್ಲಿನ ಆರ್ಥಿಕ ಉದಾರೀಕರಣವು ಬೆಳವಣಿಗೆಯನ್ನು ಉತ್ತೇಜಿಸಲು , ಹೂಡಿಕೆಗಳನ್ನು ಆಕರ್ಷಿಸಲು ಮತ್ತು ದೇಶದ ಉದ್ಯಮಶೀಲತಾ ಮನೋಭಾವವನ್ನು ಹೊರಹಾಕಲು ವೇದಿಕೆಯನ್ನು ಸ್ಥಾಪಿಸಿತು.   ಆರ್ಥಿಕ ಉದಾರೀಕರಣದ ಪರಿಕಲ್ಪನೆಯನ್ನು ಇಲ್ಲಿ ತಿಳಿಯಿರಿ.   ಭಾರತದಲ್ಲಿ ಆರ್ಥಿಕ ಉದಾರೀಕರಣ ಭಾರತದ ಆರ್ಥಿಕ ಅಭಿವೃದ್ಧಿಯ ಇತಿಹಾಸದಲ್ಲಿ , ಆರ್ಥಿಕ ಉದಾರೀಕರಣದ ಪ್ರಾರಂಭದೊಂದಿಗೆ ಮಹತ್ವದ ತಿರುವು ಬಂದಿತು.   ಈ ಪರಿವರ್ತಕ ಯುಗವು ಹಿಂದಿನ ಕಾಲದಿಂದ ನಿರ್ಗಮನವನ್ನು ಗುರುತಿಸಿತು ಮತ್ತು ದೇಶದ ಆರ್ಥಿಕ ಭೂದೃಶ್ಯವನ್ನು ಮರುರೂಪಿಸುವ ಗುರಿಯನ್ನು ಹೊಂದಿರುವ ಸುಧಾರಣೆಗಳ ಸರಣಿಯನ್ನು ತಂದಿತು.   ಹೊಸ ನೀತಿಗಳು ಮತ್ತು ಕ್ರಮಗಳ ಅಳವಡಿಕೆಯೊಂದಿಗೆ , ಭಾರತವು ಮುಕ್ತತೆ , ಅನಿಯಂತ್ರಣ ಮತ್ತು ಜಾಗತಿಕ ಆರ್ಥಿಕತೆಯೊಂದಿಗೆ ಏಕೀಕರಣದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸಿತು.   ಭಾರತದಲ್ಲಿ ಆರ್ಥಿಕ ಉದಾರೀಕರಣದ ಯುಗವು ಆಳವಾದ ಬದಲಾವಣೆಗಳಿಗೆ , ಬೆಳವಣಿಗೆಯನ್ನು ಉತ್ತೇಜಿಸಲು , ಹೂಡಿಕೆಗಳನ್ನು ಆಕರ್ಷಿಸಲು ಮತ್ತು ದೇಶದ ಉದ್ಯಮಶೀಲತಾ ಮನೋಭಾವವನ್ನು ಹೊರಹಾಕಲು ವೇದಿಕೆಯನ್ನು ಸ್ಥಾಪಿಸಿತು. ಇದರ ಬಗ್ಗೆ ಓದಿ:   ಭಾರತದಲ್ಲಿ LPG ಸುಧಾರಣೆಗಳು ಉದಾರೀಕರಣದ ಪರಿಕಲ್ಪನೆ ಉದಾರೀಕರಣದ ಪರಿಕಲ್ಪನೆಯು ಆರ್ಥಿಕತೆಯ ವಿವಿಧ ವಲಯಗಳಲ್ಲಿನ ಸರ್ಕಾರದ ನಿಯಮಗಳು ಮತ್ತು ನಿರ್ಬಂಧಗಳ ಸಡಿಲಿಕೆಯನ್ನು ಸೂಚಿಸುತ್ತದೆ.   ಇದು ವ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.