mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Tuesday, 18 May 2021

ಕೃಷಿಯ ವಿಧಗಳು







ಕೃಷಿಯ ಮೇಲೆ ಕೆಲವು ಅಂಶಗಳು ಪ್ರಭಾವ ಬೀರುತ್ತವೆ. ಅವುಗಳೆಂದರೆ ಹವಾಮಾನ, ಮಣ್ಣು, ಭೂಸ್ವರೂಪಗಳು, ಕೃಷಿಗೆ ತಗಲುವ ವೆಚ್ಚ, ಸರಕುಗಳಿಗೆ ಮಾರುಕಟ್ಟೆ, ಸಾರಿಗೆ ಸೌಲಭ್ಯಗಳು, ಕಾರ್ಮಿಕರ ಲಭ್ಯತೆ ಮತ್ತು ಭೂಬಳಕೆ ವಿಧಾನ ಇತ್ಯಾದಿಗಳು ಪ್ರಮುಖವಾಗಿವೆ. ಭೌತಿಕ ಮತ್ತು ಸಾಮಾಜಿಕ ಆರ್ಥಿಕ ಅಂಶಗಳ ಆಧಾರದ ಮೇಲಿಂದ, ಕೃಷಿಯ ವಿಧಾನಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ, ದೇಶದ ವಿವಿಧ ಪ್ರದೇಶಗಳಲ್ಲಿ ವಿವಿಧ ಪ್ರಕಾರದ ಕೃಷಿ ವಿಧಾನಗಳು ರೂಢಿಯಲ್ಲಿವೆ.

1) ಪ್ರಾಚೀನ ಜೀವನಾಧಾರ ವ್ಯವಸಾಯ,

ಆ) ವಲಸೆ ಜೀವನಾಧಾರ ಬೇಸಾಯ 

ಬ) ಸ್ಥಿರ ಜೀವನಾಧರ ಬೇಸಾಯ

2) ಸಾಂದ್ರ ಬೇಸಾಯ

3) ವಾಣಿಜ್ಯ ದೇಸಾಯ

4) ಮಿಶ್ರ ಬೇಸಾಯ

5) ತೋಟಗಾರಿಕೆ ಬೇಸಾಯ

6) ಒಣ ಬೇಸಾಯ

7) ಆರ್ದ ಬೇಸಾಯ

8) ನೀರಾವರಿ ಬೇಸಾಯ


1) ಪ್ರಾಚೀನ ಜೀವನಾಧಾರ ವ್ಯವಸಾಯ,
           ಕುಟುಂಬದ ಬಳಕೆಗಾಗಿ ಅಥವಾ ಜೀವನೋಪಾಯಕ್ಕಾಗಿ ಹಾಗೂ ವಾಣಿಜ್ಯ ಉದ್ದೇಶಕಲ್ಲದೆ ಬೆಳೆಗಳನ್ನು ಬೆಳೆಯುವ ಕೃಷಿ ಪದ್ಧತಿಗೆ "ಪ್ರಾಚೀನ ಜೀವನಾಧಾರ ಬೇಸಾಯ” ಎನ್ನುವರು. ರೈತರು ಪ್ರಾಚೀನ ಕೃಷಿ ವಿಧಾನಗಳನ್ನು ಅನುಸರಿಸುವರು. ಈ ರೀತಿಯ ಕೃಷಿಯು ಗುಡ್ಡಗಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ರೂಢಿಯಲ್ಲಿರುವುದು, ಅವು ಈಶಾನ್ಯ ಭಾರತದ ರಾಜ್ಯಗಳು, ಒಡಿಶಾ ಮತ್ತು ಮಧ್ಯಪ್ರದೇಶಗಳಲ್ಲಿ ರೂಢಿಯಲ್ಲಿದೆ. ಪ್ರಾಚೀನ ಜೀವನಾಧಾರ ಕೃಷಿಯಲ್ಲಿ ಎರಡು ವಿಧ. ಅವು ಅ) ವಲಸೆ ಜೀವನಾಧಾರ ಬೇಸಾಯ ಮತ್ತು ಬ) ಸ್ಥಿರ ಜೀವನಾಧಾರ ಬೇಸಾಯ.

ಆ) ವಲಸೆ ಜೀವನಾಧಾರ ಬೇಸಾಯ

ಉಷ್ಣವಲಯದ ಅತಿ ಹೆಚ್ಚು ಮಳೆಯಾಗುವ ಅರಣ್ಯ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದವರಿಂದ ರೂಢಿಯಲ್ಲಿರುವ ಒಂದು ಪ್ರಾಚೀನ ಬೇಸಾಯ ಪದ್ಧತಿಯಾಗಿದೆ. ಈ ಪದ್ಧತಿಯಲ್ಲಿ ರೈತರು ಆರಣ್ಯಗಳ ಮಧ್ಯದಲ್ಲಿ ಪೊದೆ ಮತ್ತು ಮರಗಳನ್ನು ಕತ್ತರಿಸುವ ಮತ್ತು ಸುಡುವುದರ ಮೂಲಕ ಭೂಮಿಯನ್ನು ತೆರವುಗೊಳಿಸುವರು ಮತ್ತು ಸಾಗುವಳಿ ಮಾಡುವರು. ಕೆಲವು ವರ್ಷಗಳವರೆಗೂ ಈ ಬೇಸಾಯ ಕ್ರಮ ಮುಂದುವರೆಯುತ್ತದೆ. ಅನಂತರ ಆ ಪ್ರದೇಶವನ್ನು ಬಿಟ್ಟು ಬೇರೊಂದು ಭಾಗದ ಆರಣ್ಯ ಪ್ರದೇಶಕ್ಕೆ ಸ್ಥಳಾಂತರ ಹೊಂದುವರು. ಬೆಳೆಗಳನ್ನು ಬೆಳೆಯುವುದರ ಜೊತೆಗೆ, ಬೇಟೆಗಾರಿಕೆ, ಮೀನುಗಾರಿಕೆ ಮತ್ತು ಆರಣ್ಯ ಸಂಪನ್ಮೂಲಗಳ ಸಂಗ್ರಹ ಇತ್ಯಾದಿ ಚಟುವಟಿಕೆಗಳಲ್ಲಿ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಈ ಪ್ರಕಾರದ ಕೃಷಿಯನ್ನು ವಿವಿಧ ಸ್ಥಳೀಯ ಹೆಸರುಗಳಿಂದ ಕರೆಯುವರು, ಉದಾ: ಈಶಾನ್ಯ ಪ್ರದೇಶಗಳಲ್ಲಿ (ಅಸ್ಸಾಂ) 'ಝೂಮ್", ಒಡಿಶಾದಲ್ಲಿ ಕೋಮನ್, ಕೇರಳದಲ್ಲಿ 'ಫೋನಮ್', ಮತ್ತು ಆಂಧ್ರಪ್ರದೇಶದಲ್ಲಿ 'ಪೊಡು, ಇತ್ಯಾದಿ, ಮುಡಿಗೆಣಸು (ಯಾಮ್ಸ್), ನೆಲಗಡಲೆ, ಬೀನ್ಸ್, ಬಾಳೆಹಣ್ಣುಗಳು, ಮಲೆನಾಡಿನ ಭತ್ತ, ಬಕ್‌ಗೋಧಿ, ಮೆಕ್ಕೆಜೋಳ, ದ್ವಿದಳ ಧಾನ್ಯಗಳು ಮತ್ತು ಕೆಲವೊಮ್ಮೆ ತರಕಾರಿಗಳನ್ನೂ ಸಹ ವಲಸೆ ಬೇಸಾಯದಲ್ಲಿ ಬೆಳೆಯಲಾಗುತ್ತದೆ. ಇಂತಹ ಬೇಸಾಯವು ಆಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಮಿರಾಂ, ಅರುಣಾಚಲ ಪ್ರದೇಶ, ಮಧ್ಯಪ್ರದೇಶದ ಕೆಲ ಭಾಗಗಳು, ಓಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ರೂಢಿಯಲ್ಲಿದೆ.

ಬ) ಸ್ಥಿರ ಜೀವನಾಧಾರ ಬೇಸಾಯ

ಜನರು ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಶಾಶ್ವತವಾಗಿ ನೆಲೆಸಿ ರೂಢಿಸಿಕೊಂಡಿರುವ ಒಂದು ಪ್ರಾಚೀನ ಕೃಷಿ ಪದ್ಧತಿಯಾಗಿದೆ. ಇಲ್ಲಿನ ಪ್ರಾಕೃತಿಕ ಅಂಶಗಳು ಸಾಗುವಳಿಗೆ ಅನುಕೂಲವಾಗಿರುತ್ತವೆ. ಕೃಷಿ ಭೂಮಿಯನ್ನು ಪಾಳುಬಿಡದೆ ಪ್ರತಿ ವರ್ಷವೂ ನಿರಂತರವಾಗಿ ಸಾಗುವಳಿ ಮಾಡುವರು, ಆದ್ದರಿಂದ ಈ ಪದ್ಧತಿಯನ್ನು 'ಸ್ಥಿರ ಜೀವನಾಧಾರ ಬೇಸಾಯ' ಎಂದು ಕರೆಯಲಾಗುತ್ತದೆ. ಈ ವಿಧಾನದಲ್ಲಿ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ನೆರೆಯ ಜನರಿಗೆ ಮಾರಾಟ ಮಾಡಲಾಗುತ್ತದೆ. ಅಥವಾ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಸ್ಥಿರ ಜೀವನಾಧಾರ ಬೇಸಾಯದಲ್ಲಿ ಹಾಲು, ಮಾಂಸ, ಉಣ್ಣೆ ಮತ್ತು ತೊಗಲು ಮುಂತಾದ ಉತ್ಪನ್ನಗಳಿಗಾಗಿ ಪ್ರಾಣಿಗಳನ್ನು ಸಾಕಲಾಗುತ್ತದೆ. ಇದನ್ನು ಅಲೆಮಾರಿ ಪಶುಪಾಲನೆ' ಎಂತಲೂ ಕರೆಯುವರು,

2) ಸಾಂದ್ರ ಬೇಸಾಯ

ಅಧಿಕ ಜನ ಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಭೂಹಿಡುವಳಿಯ ಗಾತ್ರವು ಚಿಕ್ಕದಾಗಿದ್ದು, ಬಹಳ ಸಾಂದ್ರ ಮತ್ತು ಹೆಚ್ಚು ಉತ್ಪಾದನೆ ಪಡೆಯುವ ಬೇಸಾಯ ಕ್ರಮವನ್ನು ಸಾಂದ್ರ ಬೇಸಾಯ' ಎನ್ನುವರು.

ಇದು ಹೆಚ್ಚು ಕಾರ್ಮಿಕರು (ಶ್ರಮ) ಮತ್ತು ಬಂಡವಾಳವನ್ನು ತೊಡಗಿಸುವ ಕೃಷಿಯಾಗಿದೆ. ಚಿಕ್ಕ ಭೂಹಿಡುವಳಿಗಳಲ್ಲಿ ಬೆಳೆಗಳ ಗರಿಷ್ಠ ಇಳುವರಿಯನ್ನು ಪಡೆಯುವುದಕ್ಕಾಗಿ ಹೆಚ್ಚು ಶ್ರಮ ಮತ್ತು ಬಂಡವಾಳವನ್ನು ತೊಡಗಿಸಲಾಗುತ್ತದೆ. ಲಭ್ಯವಿರುವ ಸಣ್ಣ ತುಂಡು ಭೂಮಿಯನ್ನು ವರ್ಷದುದ್ದಕ್ಕೂ ಸಾಗುವಳಿಗಾಗಿ ಉಪಯೋಗ ಮಾಡಲಾಗುತ್ತದೆ. ಈ ಪದ್ಧತಿಯಲ್ಲಿ ರೈತರು ಜಾಗರೂಕತೆಯಿಂದ ಮಣ್ಣನ್ನು ಉಳುಮೆ ಮಾಡುವುದರ ಜೊತೆಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯಲು ಪ್ರಯತ್ನಿಸುವರು, ರೈತರು ಪ್ರತಿ ಘಟಕ ಪ್ರದೇಶದಿಂದ ಹೆಚ್ಚು ಇಳುವರಿ ಮತ್ತು ಚಿಕ್ಕ ಭೂಹಿಡುವಳಿಯಲ್ಲೇ ಗರಿಷ್ಠ ಉತ್ಪಾದನೆಯನ್ನು ಪಡೆಯಲು ಪ್ರಯತ್ನಿಸುವುದೇ ಸಾಂದ್ರ ಬೇಸಾಯದ ಗುಣಲಕ್ಷಣ, ಈ ವಿಧದಲ್ಲಿ, ಕೃಷಿ ಕಾರ್ಯಾಚರಣೆಗಳು ಮಾನವನ ದೈಹಿಕ ಶ್ರಮ ಮತ್ತು ಪಾಣಿಗಳಿಂದ ನಿರ್ವಹಿಸಲಾಗುತ್ತದೆ. ಈ ಕೃಷಿ ಪದ್ಧತಿಯು ದೇಶದ ಫಲವತ್ತಾದ ಹಾಗೂ ನೀರಾವರಿ ಸೌಲಭ್ಯವಿರುವ ಭಾಗಗಳಲ್ಲಿ ಸರ್ವೆ ಸಾಮಾನ್ಯವಾದುದು, ಭತ್ತವು ಸಾಂದ್ರ ಬೇಸಾಯದ ಪ್ರಮುಖ ಬೆಳೆಯಾಗಿದೆ.

3) ವಾಣಿಜ್ಯ ಬೇಸಾಯ

ದೇಶೀಯ ಬಳಕೆಗಳಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಕೃಷಿ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದನ್ನು 'ವಾಣಿಜ್ಯ ದೇಸಾಯ' ಎಂದು ಕರೆಯುವರು, ಈ ರೀತಿಯ ಕೃಷಿಯು ಸಾಮಾನ್ಯವಾಗಿ ಉತ್ತಮ ಸಾರಿಗೆ ಸೌಲಭ್ಯ, ಹೆಚ್ಚು ವಿಶಾಲವಾದ ವಿರಳ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ವಿಸ್ತಾರವಾದ ಜಮೀನುಗಳಲ್ಲಿ, ಕಡಿಮೆ ಶ್ರಮ, ದೊಡ್ಡ ಪ್ರಮಾಣದ ಯಂತ್ರೋಪಕರಣಗಳ ಬಳಕೆ, ಮಾರಾಟಕ್ಕಾಗಿ ಹಣದ ಬೆಳೆಗಳನ್ನು ಬೆಳೆಯಲಾಗುವುದು,

4) ಮಿಶ್ರ ಬೇಸಾಯ

ಬೆಳೆಗಳನ್ನು ಬೆಳೆಯುವದರ ಜೊತೆಗೆ ಜಾನುವಾರುಗಳ ಪಾಲನೆಯನ್ನು ಒಳಗೊಂಡಿರುವ ಕೃಷಿ ವಿಧಾನವನ್ನು ಮಾತ್ರ ದೇಸಾಯ' ಎಂದು ಕರೆಯುವರು. ಈ ಪದ್ಧತಿಯಲ್ಲಿ ಜಮೀನನ್ನು ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯುವದಕಲ್ಲದೆ ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅವುಗಳೆಂದರೆ ಜಾನುವಾರುಗಳ ಪಾಲನೆ, ಕೋಳಿ ಸಾಕಣೆ, ರೇಷ್ಮೆ ಕೃಷಿ, ಜೇನು ಸಾಕಣೆ ಇತ್ಯಾದಿ, ರೈತರು ಬೆಳೆ ಮತ್ತು ಜಾನುವಾರು ಸಾಕಣೆ ಎರಡೂ ಕಡೆಯಿಂದ ಹೆಚ್ಚು ಆದಾಯವನ್ನು ಪಡೆಯುವರು ಭಾರತದಲ್ಲಿ ಇದನ್ನು 1951 ರಿಂದ ಜಾರಿಗೆ ತರಲಾಯಿತು. ಇದು ಪ್ರಚಲಿತವಾಗಿರುವ ಪ್ರಮುಖ ರಾಜ್ಯಗಳೆಂದರೆ, ರಾಜಸ್ತಾನ, ಆಂಧ್ರಪ್ರದೇಶ, ಪಂಜಾಟ, ಹರಿಯಾಣ ಮತ್ತು ತಮಿಳುನಾಡು,

5) ನೆಡುತೋಟದ ಬೇಸಾಯ

ಒಂದೇ ತರಹದ ಹಣದ ಬೆಳೆಯನ್ನು ವಿಶಾಲವಾದ ಭೂಮಿ ಅಥವಾ ತೋಟಗಳಲ್ಲಿ ಬೆಳೆಯುವುದಕ್ಕೆ ನೆಡುತೋಟದ ದೇಸಾಯ' ಎಂದು ಕರೆಯುವರು, ವಿಶೇಷ ರೀತಿಯ ವಾಣಿಜ್ಯ ಮಾದರಿ ಬೇಸಾಯ. ಇದಕ್ಕೆ ಅಧಿಕ ಬಂಡವಾಳ ಮತ್ತು ಶ್ರಮದ ಅಗತ್ಯವಿರುತ್ತದೆ. ಮಾನವನ ದೈಹಿಕ ಶ್ರಮ ಮತ್ತು ನುರಿತ ಕಾರ್ಮಿಕರ ಪೂರೈಕೆ ಮುಖ್ಯವಾಗಿರುತ್ತದೆ. ಈ ವ್ಯವಸ್ಥೆಯಲ್ಲಿ ಆಧುನಿಕ ಮತ್ತು ವೈಜ್ಞಾನಿಕ ತಂತ್ರಗಳನ್ನು ಬಳಸಿಕೊಂಡು ಬೆಳೆಗಳನ್ನು ಮುಖ್ಯವಾಗಿ ರಫ್ತು ಮಾಡುವುದಕ್ಕೆ ಬೆಳೆಯಲಾಗುತ್ತದೆ, ಭಾರತದ ಪ್ರಮುಖ ನೆಡು ತೋಟದ ಬೆಳೆಗಳೆಂದರೆ, ಚಹ, ಕಾಫಿ ಮತ್ತು ರಬ್ಬರ್,

6). ಒಣಬೇಸಾಯ
ಕಡಿಮೆ ಮಳೆಯನ್ನು (ಅಂದರೆ 50 ಸೆಂ.ಮೀ ಗಿಂತ ಕಡಿಮೆ) ಪಡೆಯುವ, ನೀರಾವರಿ ಸೌಲಭ್ಯಗಳು ಬಹಳ ಸೀಮಿತ ಅಥವಾ ಇಲ್ಲದ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಬೇಸಾಯ ಪದ್ಧತಿಯನ್ನು 'ಒಣ ಬೇಸಾಯ' ಎಂದು ಕರೆಯುವರು. ಈ ಪ್ರಕಾರದ ಬೇಸಾಯವು ದಕ್ಷಿಣ ಭಾರತದ ದಬ್ಬನ್ ಪ್ರಸ್ಥಭೂಮಿ, ಪಶ್ಚಿಮ ರಾಜಸ್ತಾನ, ಮತ್ತು ಇತರೆ ಶುಷ್ಕ ಮತ್ತು ಆರೆಶುಷ್ಕ ಪ್ರದೇಶಗಳಲ್ಲಿ ರೂಢಿಯಲ್ಲಿರುವುದು, ಕ್ಷಾಮ ಮತ್ತು ಬರಗಾಲಗಳು ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಇಲ್ಲಿ ಬೆಳೆಯುವ ಬೆಳೆಗಳು ಕಡಿಮೆ ಇಳುವರಿ ಒದಗಿಸುತ್ತವೆ. ಅಲ್ಪಾವಧಿಯಲ್ಲಿ ಫಸಲು ನೀಡುವ ಹಾಗೂ ಬರವನ್ನು ನಿಭಾಯಿಸಬಲ್ಲ ಬೆಳೆಗಳನ್ನು ಬೆಳೆಯಲಾಗುತ್ತದೆ. ಜೋಳ, ಸಜ್ಜೆ, ರಾಗಿ, ಎಣ್ಣೆಕಾಳುಗಳು ಒಣ ಬೇಸಾಯದ ಪ್ರಮುಖ ಬೆಳೆಗಳಾಗಿರುತ್ತವೆ.

7) ಅರ್ದ ಬೇಸಾಯ

ಸಾಕಷ್ಟು ಮಳೆಯನ್ನು ಪಡೆಯುವ ಪ್ರದೇಶಗಳಲ್ಲಿ ನೀರಾವರಿಯ ಸಹಾಯವಿಲ್ಲದೇ ಬೆಳೆಗಳನ್ನು ಬೆಳೆಯುವದಕ್ಕೆ ತು ಬೇಸಾಯ ಅಥವಾ ಆರ್ದ ಬೇಸಾಯ ಎಂದು ಕರೆಯುವರು. ಸಾಕಷ್ಟು ಮಳೆಯನ್ನು ಪಡೆಯುವ ಪ್ರದೇಶದಲ್ಲಿ ಅಂದರೆ

100 ರಿಂದ 150 ಸೆಂ.ಮೀ. ವಾರ್ಷಿಕ ಮಳೆಯಾಗುವ ಪ್ರದೇಶದಲ್ಲಿ ಎರಡು ಅಥವಾ ಬಹು ಬೆಳೆ ಪದ್ಧತಿಯು ರೂಢಿಯಲ್ಲಿರುವುದು. ಭತ್ತ, ಕಬ್ಬು, ಸೆಣಬು, ಚಹ, ಕಾಫಿ, ರಬ್ಬರ್ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಸಾಕಷ್ಟು ಮಳೆಯಾಗುವದರಿಂದ ಅಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯಲು ನೆರವಾಗುತ್ತದೆ.

8) ನೀರಾವರಿ ಬೇಸಾಯ

ನೀರಾವರಿ ಪೂರೈಕೆಮಾಡಿ ಬೆಳೆಗಳನ್ನು ಬೆಳೆಯುವುದಕ್ಕೆ “ನೀರಾವರಿ ಬೇಸಾಯ” ಎನ್ನುವರು. ಮಾನ್ಸೂನ್ ಮಳೆಯು ಋತುಕಾಲಿಕ, ಅನಿಶ್ಚಿತ ಮತ್ತು ಅನಿಯಮಿತವಾಗಿರುವುದರಿಂದ ಭಾರತದಲ್ಲಿ ಈ ರೀತಿಯ ಕೃಷಿ ವಿಧಾನವು ಅತ್ಯವಶ್ಯಕವಾಗಿರುತ್ತದೆ. ಭಾರತದಲ್ಲಿ ಹೆಚ್ಚು ವಿಸ್ತಾರ ಪ್ರದೇಶದ ಸಾಗುವಳಿ ಭೂಮಿಯು ನೀರಾವರಿಗೆ ಒಳಪಟ್ಟಿದೆ. ಈ ಪ್ರಕಾರದ ಬೇಸಾಯವು ಹೆಚ್ಚಾಗಿ ಉತ್ತರಪ್ರದೇಶ, ಪಂಜಾಬ, ಹರಿಯಾಣ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ ಮತ್ತು ದೇಶದ ಅನೇಕ ಹಲವು ರಾಜ್ಯಗಳಲ್ಲಿಯೂ ಸಹ ರೂಢಿಯಲ್ಲಿದೆ.

No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳು, ಪಟ್ಟಿ, ನಕ್ಷೆ, ಹೆಸರುಗಳು, ಮೊದಲ, ದೊಡ್ಡದು

  ಭಾರತದಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳು: ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರವು ಭಾರತದ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾಗಿದೆ. ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳ ಪಟ್ಟಿ, ನಕ್ಷೆ, ಹೆಸರುಗಳು, ಮೊದಲ ಮತ್ತು ದೊಡ್ಡದು,       ಪರಿವಿಡಿ ಭಾರತದಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳು ಭಾರತದಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳು:  ರಾಷ್ಟ್ರದ ಶಕ್ತಿಯ ಮಿಶ್ರಣದ ಮಹತ್ವದ ಭಾಗವಾಗಿರುವ ಪರಮಾಣು ಶಕ್ತಿಯನ್ನು ಅನುಸರಿಸುವಾಗ ವಿವಿಧ ಶಕ್ತಿ ಮೂಲಗಳ ನಡುವೆ ಉತ್ತಮವಾದ ಸಮತೋಲನವನ್ನು ಹುಡುಕಲಾಗುತ್ತಿದೆ. ಒಂದು ಕ್ಲೀನ್, ಪರಿಸರ ಪ್ರಯೋಜನಕಾರಿ ಬೇಸ್ ಲೋಡ್ ಶಕ್ತಿಯ ಮೂಲ, ಇದು ಗಡಿಯಾರದ ಸುತ್ತ ಪ್ರವೇಶಿಸಬಹುದಾಗಿದೆ. ಹೆಚ್ಚುವರಿಯಾಗಿ, ಇದು ರಾಷ್ಟ್ರದ ಸುಸ್ಥಿರ ದೀರ್ಘಕಾಲೀನ ಇಂಧನ ಭದ್ರತೆಯನ್ನು ಭದ್ರಪಡಿಸುವ ಅಗಾಧ ಭರವಸೆಯನ್ನು ಹೊಂದಿದೆ. ಕಲ್ಲಿದ್ದಲು, ಅನಿಲ, ಗಾಳಿ ಮತ್ತು ಜಲವಿದ್ಯುತ್ ನಂತರ, ಪರಮಾಣು ಶಕ್ತಿಯು ಭಾರತದಲ್ಲಿ ವಿದ್ಯುತ್ ಉತ್ಪಾದನೆಯ ಐದನೇ ಅತಿದೊಡ್ಡ ಮೂಲವಾಗಿದೆ. ರಾಷ್ಟ್ರದಲ್ಲಿ 22 ರಿಯಾಕ್ಟರ್‌ಗಳು 2021 ರ ಹೊತ್ತಿಗೆ 80% ಪ್ಲಾಂಟ್ ಲೋಡ್ ಫ್ಯಾಕ್ಟರ್‌ಗಿಂತ ಹೆಚ್ಚು ಚಾಲನೆಯಲ್ಲಿವೆ, ಸಂಯೋಜಿತ ಸ್ಥಾಪಿತ ಸಾಮರ್ಥ್ಯ 6780 MW. ನಾಲ್ಕು ಲಘು ನೀರಿನ ರಿಯಾಕ್ಟರ್‌ಗಳು ಮತ್ತು ಹದಿನೆಂಟು ಒತ್ತಡದ ಭಾರೀ ನೀರಿನ ರಿಯಾಕ್ಟರ್‌ಗಳು (...

ಆಮ್ಲಗಳು, ಕ್ಷಾರಗಳು ಮತ್ತು ಲವಣಗಳು ಯಾವುವು?

ಕಿತ್ತಳೆ , ನಿಂಬೆ ಮುಂತಾದ ಹಣ್ಣುಗಳಲ್ಲಿ ಸಿಟ್ರಿಕ್ ಆಮ್ಲ , ಹುಣಸೆ ಹಣ್ಣಿನಲ್ಲಿ ಟಾರ್ಟಾರಿಕ್ ಆಮ್ಲ , ಸೇಬಿನಲ್ಲಿರುವ ಮಾಲಿಕ್ ಆಮ್ಲ ಮತ್ತು ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಲ್ಯಾಕ್ಟಿಕ್ ಆಮ್ಲ , ಗ್ಯಾಸ್ಟ್ರಿಕ್ ಜ್ಯೂಸ್‌ನಲ್ಲಿ ಹೈಡ್ರೋಕ್ಲೋರಿಕ್ ಆಮ್ಲದಂತಹ ಅನೇಕ ಆಮ್ಲಗಳು ಮತ್ತು ಬೇಸ್‌ಗಳು ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಕಂಡುಬರುತ್ತವೆ. ಅಂತೆಯೇ , ಸುಣ್ಣದ ನೀರಿನಂತಹ ಅನೇಕ ನೆಲೆಗಳು ಕಂಡುಬರುತ್ತವೆ.   ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಇಂತಹ ಅನೇಕ ಆಮ್ಲಗಳನ್ನು ಬಳಸುತ್ತೇವೆ , ಉದಾಹರಣೆಗೆ ಅಡುಗೆಮನೆಯಲ್ಲಿ ವಿನೆಗರ್ ಅಥವಾ ಅಸಿಟಿಕ್ ಆಮ್ಲ , ಲಾಂಡ್ರಿಗಾಗಿ ಬೋರಿಕ್ ಆಮ್ಲ , ಅಡುಗೆ ಉದ್ದೇಶಕ್ಕಾಗಿ ಅಡಿಗೆ ಸೋಡಾ , ಸ್ವಚ್ಛಗೊಳಿಸಲು ತೊಳೆಯುವ ಸೋಡಾ ,   ಇತ್ಯಾದಿ   . ವಿಷಯ ಕೋಷ್ಟಕ ವ್ಯಾಖ್ಯಾನಗಳು ಶಿಫಾರಸು ಮಾಡಿದ ವೀಡಿಯೊಗಳು ಆಮ್ಲಗಳು ಆಧಾರಗಳು ಲವಣಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು - FAQ ಗಳು ನಾವು ಮನೆಯಲ್ಲಿ ಸೇವಿಸದ ಅನೇಕ ಆಮ್ಲಗಳನ್ನು ಪ್ರಯೋಗಾಲಯಗಳು ಮತ್ತು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ , ಇದರಲ್ಲಿ HCl, H   2   SO   4   ಇತ್ಯಾದಿ ಆಮ್ಲಗಳು ಮತ್ತು NaOH, KOH ಇತ್ಯಾದಿ ಬೇಸ್‌ಗಳು ಸೇರಿವೆ. ಈ ಆಮ್ಲಗಳು ಮತ್ತು ಬೇಸ್‌ಗಳನ್ನು ಮಿಶ್ರಣ ಮಾಡಿದಾಗ ಸರಿಯಾದ ಪ್ರಮಾಣದಲ್ಲಿ ,   ತಟಸ್ಥೀಕರಣ ಕ್ರಿಯೆಯು   ಉಪ್ಪು ಮತ್ತ...

ಅಸಹಕಾರ ಚಳುವಳಿ, ಕಾರಣಗಳು, ಪರಿಣಾಮಗಳು, ಮಹತ್ವ

ಬ್ರಿಟಿಷ್ ಸರ್ಕಾರದ ನಿಯಮಗಳನ್ನು ಬಹಿಷ್ಕರಿಸಲು ಮತ್ತು ಭಾರತದಲ್ಲಿ ಪೂರ್ಣ ಸ್ವರಾಜ್ಯವನ್ನು ಜಾರಿಗೆ ತರಲು ಮಹಾತ್ಮಾ ಗಾಂಧಿಯವರು 1920 ರಲ್ಲಿ ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದರು.  1922 ರ ವೇಳೆಗೆ ಅಸಹಕಾರ ಚಳುವಳಿ ಕೊನೆಗೊಂಡಿತು. ಪರಿವಿಡಿ ಅಸಹಕಾರ ಚಳುವಳಿ ಎಂದರೇನು ? ಭಾರತಕ್ಕೆ ಸ್ವರಾಜ್ ಅಥವಾ ಸ್ವರಾಜ್ಯ ನೀಡಲು ಭಾರತದ ಬ್ರಿಟಿಷ್ ಸರ್ಕಾರವನ್ನು ಮನವೊಲಿಸಲು ಮಹಾತ್ಮ ಗಾಂಧಿಯವರು 1920-1922 ರಿಂದ   ಅಸಹಕಾರ ಚಳವಳಿಯನ್ನು   ಸಂಘಟಿಸಿದರು .   ಇದು ವ್ಯಾಪಕವಾದ ನಾಗರಿಕ ಅಸಹಕಾರ ಚಳವಳಿಯ  ( ಸತ್ಯಾಗ್ರಹ) ಗಾಂಧಿಯವರ ಆರಂಭಿಕ ಯೋಜಿತ ನಿದರ್ಶನಗಳಲ್ಲಿ ಒಂದಾಗಿದೆ  .  ಅಸಹಕಾರ ಚಳವಳಿಯು ಸೆಪ್ಟೆಂಬರ್ 1920 ಮತ್ತು ಫೆಬ್ರವರಿ 1922 ರ ನಡುವೆ ಅಸ್ತಿತ್ವದಲ್ಲಿತ್ತು ಎಂದು ಹೇಳಲಾಗುತ್ತದೆ. ಇದು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಪ್ರತಿನಿಧಿಸುತ್ತದೆ. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವು ಅಸಹಕಾರ ಚಳವಳಿಯ ಆರಂಭಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಿತು , ನಂತರ 1922 ರ   ಚೌರಿ ಚೌರಾ ಘಟನೆಯ   ಕಾರಣದಿಂದಾಗಿ ಅದನ್ನು ಸ್ಥಗಿತಗೊಳಿಸಲಾಯಿತು . ಮಹಾತ್ಮಾ ಗಾಂಧಿಯವರ   ಅಸಹಕಾರ ಚಳುವಳಿ ಮಹಾತ್ಮಾ ಗಾಂಧಿಯವರು ಅಸಹಕಾರ ಚಳವಳಿಯ   ಪ್ರಮುಖ ಪ್ರತಿಪಾದಕರು  .  ಅವರು ಮಾರ್ಚ್ 1920 ರಲ್ಲಿ ಚಳುವಳಿಯ ಅಹಿಂಸಾತ್ಮಕ ಅ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.