mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Saturday, 8 May 2021

ಭಾರತದ ಮೊದಲ ಅಂತರ್‌ರಾಜ್ಯ ನದಿ ಜೋಡಣೆ: ಕೆನ್-ಬೆಟ್ವಾ ನದಿ ಜೋಡಣೆ

 


ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪರಿಕಲ್ಪನೆಯಾದ ಅಂತರ್‌ರಾಜ್ಯ ನದಿ ಜೋಡಣೆಯು

ಪ್ರಸ್ತುತವಾಗಿ ಸಾಕಾರಗೊಂಡಿದೆ. 2021ರ ಮಾರ್ಚ್ 22 ರಂದು ವಿಶ್ವ ಜಲದಿನದ ಅಂಗವಾಗಿ ಆರಂಭಗೊಂಡ ಜಲಶಕ್ತಿ ಅಭಿಯಾನ ಮಳೆಯನ್ನು ಹಿಡಿಯಿರಿ (Jal Shakti Abhiyan - Catch the Rain) ಆಂದೋಲನದ ಭಾಗವಾಗಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳ ನಡುವಿನ ಕೆನ್-ಬೆಟ್ಟಾ ನದಿ ಜೋಡಣೆಯ ಯೋಜನೆಯ Ken Betwa Link Project (KBLP) ಒಪ್ಪಂದಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಸಹಿ ಹಾಕಿವೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ನದಿ ಜೋಡಣೆಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ರಾಷ್ಟ್ರೀಯ ಸ್ವರೂಪ ಹೊಂದಿರುವ ನದಿ ಜೋಡಣೆಯ ಮೊದಲ ಯೋಜನೆಯು National Perspective Plan for interlinking of river ಇದಾಗಿದೆ. ಇದರೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಸ್ತಾಪಿಸಿದ ಯೋಜನೆಯು ಜಾರಿಗೆ ಬಂದಂತಾಗಿದೆ.


   ಅಂತರ್ ನದಿ ಜೋಡಣೆಯ ರಾಷ್ಟ್ರೀಯ ಮಹಾ ಯೋಜನೆ


KEN BETWA RIVER LINKING PROJECT


ಭಾರತದ ಮೊದಲ ಅಂತರ್‌ನದಿ 

ಜೋಡಣಾ ಯೋಜನೆಯ ಎನಿಸಿರುವ ಕೆನ -ಬೆಟ್ವಾ ನದಿ ಜೋಡಣಾ ಯೋಜನೆಯ ಅನುಷ್ಠಾನದ ಐತಿಹಾಸಿಕ ಒಪ್ಪಂದವು 2021ರ ಮಾರ್ಚ್‌ನಲ್ಲಿ ನಡೆದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಂತರ್ ನದಿ ಜೋಡಣೆಯ ಮೂಲಕ ಹೆಚ್ಚಿನ ನೀರಿರುವ ಪ್ರದೇಶಗಳಿಂದ ಬರಪೀಡಿತ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ನೀರನ್ನು ಒದಗಿಸುವ ಕನಸು ಕಂಡಿದ್ದರು. ಭಾರತದ ಜಲ ಸಂಬಂಧಿತ ಉಜ್ವಲ ಭವಿಷ್ಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಒಪ್ಪಂದ ಇದಾಗಿದೆ. ನಮ್ಮ ಕೃಷಿ ಭೂಮಿಯನ್ನು


ಹಸಿರು ಮಾಡುವ ಗರಿಷ್ಟ ಪ್ರಯತ್ನ ಇದಾಗಲಿದೆ.


ಅಂತರ್‌ನದಿ ಜೋಡಣೆ ಯೋಜನೆಯ ಸ್ವರೂಪ


ದೌಧಾನ್‌ ಅಣೆಕಟ್ಟು (Dhaudhan Dam) ಹಾಗೂ ಕಾಲುವೆ ನಿರ್ಮಾಣ ಮಾಡಿ ಕೆನ್ ನದಿಯ ನೀರನ್ನು ಬೆಟ್ಟಾ ನದಿಗೆ ಹರಿಸಲಾಗುತ್ತಿದೆ. ಎರಡು ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣ, ಲೋವರ್ ಓಆರ್‌ಆರ್ ಯೋಜನೆ, ಕೋಥಾ ಬ್ಯಾರೇಜ್ ಮತ್ತು ಬಿನಾ ಕಾಂಪ್ಲೆಕ್ಸ್ ನಿರ್ಮಾಣ ಸೇರಿದಂತೆ ವಿವಿಧೋದ್ದೇಶ ಯೋಜನೆಗಳನ್ನು ಇದು ಒಳಗೊಂಡಿದೆ.


ಪ್ರಯೋಜನಗಳು

      10.62 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಮತ್ತು 62 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಲಭಿಸಿದೆ. 103 ಮೆಗಾ ವ್ಯಾಟ್ ಜಲವಿದ್ಯುತ್ ಉತ್ಪಾದನೆಯೂ ಕೂಡ ಆಗಲಿದೆ. ಮಧ್ಯಪ್ರದೇಶದ 9 ಮತ್ತು ಉತ್ತರ ಪ್ರದೇಶದ 4 ಜಿಲ್ಲೆಗಳು ಈ ಯೋಜನೆಯ ಪ್ರಯೋಜನ ಪಡೆಯಲಿವೆ. ಈ ಯೋಜನೆಯು ನೀರಿನ ಕೊರತೆಯಿಂದ ಬಳಲುತ್ತಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ಉಪಯುಕ್ತವಾಗಲಿದೆ.


ಯೋಜನೆಯ ಪರಿಣಾಮಗಳು

       ಕೆನ್ ಮತ್ತು ಬೆಟ್ಟಾ ನದಿಗಳ ಜೋಡಣೆಯಿಂದ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶವು ನಾಶವಾಗಲಿದೆ ಎಂಬುದು ಅನೇಕ ಪರಿಸರವಾದಿಗಳ ವಾದವಾಗಿದೆ. ಯೋಜನೆ ಅನುಷ್ಠಾನ ಮತ್ತು ನಿರ್ವಹಣೆ ಅಧಿಕ ವೆಚ್ಚ ಆಗಲಿದೆ.


ರಾಷ್ಟ್ರೀಯ ಅಂತರ್ ನದಿ ಜೋಡಣೆಯ ದೂರದೃಷ್ಟಿ ಯೋಜನೆ (NATIONAL PERSPECTIVE PLAN FOR INTERLINKING OF RIVERS)

ರಾಷ್ಟ್ರೀಯ ದೂರದೃಷ್ಟಿ ಯೋಜನೆ ಅಥವಾ ರಾಷ್ಟ್ರೀಯ ನದಿ ಸಂಪರ್ಕಿತ ಯೋಜನೆ (National River Linking Project) ಎಂಬುದು ನೀರಿನ

ಕೊರತೆಯಿರುವ ಪ್ರದೇಶಗಳಿಗೆ ಹೆಚ್ಚು ನೀರು ಇರುವ ಪ್ರದೇಶಗಳಿಂದ ಸಂಪರ್ಕಿಸುವುದು. ಪ್ರವಾಹದಿಂದ ಉಂಟಾದ ಹೆಚ್ಚುವರಿ ನೀರನ್ನು ಕೊರತೆಯಿರುವ ಪ್ರದೇಶಗಳಿಗೆ ಪೂರೈಸುವುದು. ಇದನ್ನು ಅಂತರ್‌ ಜಲ ವರ್ಗಾವಣಾ ಯೋಜನೆ ಎನ್ನಲಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ಯ ರಾಷ್ಟ್ರೀಯ ದೂರದೃಷ್ಟಿ ಯೋಜನೆಯ ಅನ್ವಯ 1980ರ ನಂತರ ಭಾರತದಲ್ಲಿ ಒಟ್ಟು 30 ನದಿ ಸಂಪರ್ಕಿತ ಯೋಜನೆಗಳ ಸಾಧ್ಯತಾ ವರದಿಯು ವಿವಿಧ ಹಂತಗಳಲ್ಲಿ ಸಿದ್ಧವಾಗುತ್ತಿದೆ. ಇವುಗಳಲ್ಲಿ 16 ಪರ್ಯಾಯ ಪ್ರಸ್ಥಭೂಮಿ, 14 ಹಿಮಾಲಯನ್ ಪ್ರಾಂತ್ಯಗಳಿಗೆ ಸಂಬಂಧಿಸಿವೆ.


No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

Current Affairs Quiz - September, 2021

  1 ಇತ್ತೀಚೆಗೆ ನಿಧನರಾದ ಬುದ್ಧದೇವ್ ಗುಹಾ ಯಾವ ವೃತ್ತಿಯೊಂದಿಗೆ ಸಂಬಂಧ ಹೊಂದಿದ್ದರು ? [A] ಕ್ರೀಡಾಪಟು [B] ಬರಹಗಾರ [C] ರಾಜಕಾರಣಿ [D] ವ್ಯಾಪಾರ-ವ್ಯಕ್ತಿ answar ಸರಿಯಾದ ಉತ್ತರ:   ಬಿ [ಬರಹಗಾರ] ಟಿಪ್ಪಣಿಗಳು: ಮಧುಕಾರಿ ಸೇರಿದಂತೆ ಹಲವಾರು ಜನಪ್ರಿಯ ಪುಸ್ತಕಗಳನ್ನು ಬರೆದ ಖ್ಯಾತ ಬಂಗಾಳಿ ಬರಹಗಾರ ಬುದ್ಧದೇವ್ ಗುಹಾ ಇತ್ತೀಚೆಗೆ ನಿಧನರಾದರು. ಬರಹಗಾರ ತನ್ನ 85 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಆನಂದ ಪುರಸ್ಕಾರ ಮತ್ತು ಶರತ್ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ಬಂಗಾಳಿ ಸಾಹಿತ್ಯದ ಲೇಖಕರು , ' ಕೋಯೆಲ್ ', ' ಕೋಜಗರ್ ', ' ಮಧುಕರಿ ', ' ಜಂಗಲಮಹಲ್ ', ' ಚರಿಬೇತಿ ' ಇತ್ಯಾದಿಗಳನ್ನು ಒಳಗೊಂಡಂತೆ ಗಮನಾರ್ಹ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬಂಗಾಳಿ ಸಾಹಿತ್ಯದಲ್ಲಿ ' ರಿವು ಮತ್ತು ರಿಜುಡಾ ' ಹೆಸರಿನ ಎರಡು ಜನಪ್ರಿಯ ಕಾಲ್ಪನಿಕ ಪಾತ್ರಗಳ ಸೃಷ್ಟಿಕರ್ತ. Current Affairs Quiz - October, 2021     2. ಇತ್ತೀಚೆಗೆ ಭಾರತ ಮತ್ತು ಅಲ್ಜೀರಿಯಾ ನಡುವಿನ ನೌಕಾ ವ್ಯಾಯಾಮವನ್ನು ಎಲ್ಲಿ ನಡೆಸಲಾಯಿತು ? [A] ಬಂಗಾಳ ಕೊಲ್ಲಿ [B] ಅರೇಬಿಯನ್ ಸಮುದ್ರ [C] ಹಿಂದೂ ಮಹಾಸಾಗರ [D] ಮೆಡಿಟರೇನಿಯನ್ ಸಮುದ್ರ answar ಸರಿಯಾದ ಉತ್ತರ:   ಡಿ [ಮೆಡಿಟರೇನಿಯನ್ ಸಮುದ್ರ] ಟಿಪ್ಪಣಿಗಳು: ಇತ್ತ...

ಭಾರತ ಸರ್ಕಾರದ ಕಾಯಿದೆ, 1858: ಪ್ರಮುಖ ಲಕ್ಷಣಗಳು

  ಕಂಪನಿಯ ಆಡಳಿತವನ್ನು ಕೊನೆಗೊಳಿಸಲು 1858 ರ ಭಾರತ ಸರ್ಕಾರದ ಕಾಯಿದೆಯನ್ನು ಅಂಗೀಕರಿಸಲಾಯಿತು ಮತ್ತು ಅದನ್ನು 1857 ರ ದಂಗೆಯ ಪರಿಣಾಮವಾಗಿ ಬ್ರಿಟಿಷ್ ಕಿರೀಟಕ್ಕೆ ವರ್ಗಾಯಿಸಲಾಯಿತು. ಭಾರತದ ಬ್ರಿಟಿಷ್ ಗವರ್ನರ್-ಜನರಲ್‌ಗೆ ವೈಸ್‌ರಾಯ್ ಎಂಬ ಬಿರುದನ್ನು ನೀಡಲಾಯಿತು , ಅವರು ರಾಜನ ಪ್ರತಿನಿಧಿಯಾದರು.   ಆಗಸ್ಟ್ 1858 ರಲ್ಲಿ , ಬ್ರಿಟಿಷ್ ಸಂಸತ್ತು ಕಂಪನಿಯ ಆಡಳಿತವನ್ನು ಕೊನೆಗೊಳಿಸುವ ಕಾಯಿದೆಯನ್ನು ಅಂಗೀಕರಿಸಿತು.   ಭಾರತದಲ್ಲಿ ಬ್ರಿಟಿಷ್ ಸರ್ಕಾರದ ನಿಯಂತ್ರಣವನ್ನು ಬ್ರಿಟಿಷ್ ಕಿರೀಟಕ್ಕೆ ವರ್ಗಾಯಿಸಲಾಯಿತು.   ಈ ಸಮಯದಲ್ಲಿ , ವಿಕ್ಟೋರಿಯಾ ಬ್ರಿಟನ್ನಿನ ರಾಣಿಯಾಗಿದ್ದಳು.   ಬ್ರಿಟನ್‌ನಲ್ಲಿನ ಸರ್ವೋಚ್ಚ ಸಂಸ್ಥೆಯು ಬ್ರಿಟಿಷ್ ಸಂಸತ್ತಾಗಿತ್ತು , ಇದಕ್ಕೆ ಬ್ರಿಟಿಷ್ ಸರ್ಕಾರವು ಜವಾಬ್ದಾರನಾಗಿದ್ದನು.   ಆದಾಗ್ಯೂ , ಬ್ರಿಟಿಷ್ ಸರ್ಕಾರದ ಎಲ್ಲಾ ಚಟುವಟಿಕೆಗಳನ್ನು ರಾಜನ ಹೆಸರಿನಲ್ಲಿ ನಡೆಸಲಾಯಿತು.   ರಾಜ್ಯ ಕಾರ್ಯದರ್ಶಿ ಎಂದು ಕರೆಯಲ್ಪಡುವ ಬ್ರಿಟಿಷ್ ಸರ್ಕಾರದ ಮಂತ್ರಿಯನ್ನು ಭಾರತ ಸರ್ಕಾರದ ಜವಾಬ್ದಾರಿಯನ್ನು ವಹಿಸಲಾಯಿತು.   ಬ್ರಿಟಿಷ್ ಸರ್ಕಾರವು ಸಂಸತ್ತಿಗೆ ಜವಾಬ್ದಾರರಾಗಿದ್ದರಿಂದ , ಭಾರತದ ಸರ್ವೋಚ್ಚ ಸಂಸ್ಥೆಯು ಬ್ರಿಟಿಷ್ ಸಂಸತ್ತಾಗಿತ್ತು.   ಭಾರತದ ಬ್ರಿಟಿಷ್ ಗವರ್ನರ್-ಜನರಲ್‌ಗೆ ಈಗ ವೈಸರಾಯ್ ಎಂಬ ಬಿರುದನ್ನು ನೀಡಲಾಯಿತು , ಅಂದರೆ ರಾಜನ ಪ್ರತಿನಿಧಿ. ...

ಗ್ರಹಗಳ ಚಲನೆಯ ಕೆಪ್ಲರ್ ನಿಯಮಗಳು

ಖಗೋಳಶಾಸ್ತ್ರದಲ್ಲಿ ,   ಕೆಪ್ಲರ್ನ ಗ್ರಹಗಳ ಚಲನೆಯ ನಿಯಮಗಳು   ಸೂರ್ಯನ ಸುತ್ತ ಗ್ರಹಗಳ ಚಲನೆಯನ್ನು ವಿವರಿಸುವ ಮೂರು ವೈಜ್ಞಾನಿಕ ಕಾನೂನುಗಳಾಗಿವೆ. ಕೆಪ್ಲರ್ನ ಮೊದಲ ನಿಯಮ - ಕಕ್ಷೆಗಳ ನಿಯಮ ಕೆಪ್ಲರ್ನ ಎರಡನೇ ನಿಯಮ - ಸಮಾನ ಪ್ರದೇಶಗಳ ಕಾನೂನು ಕೆಪ್ಲರ್ನ ಮೂರನೇ ನಿಯಮ - ಅವಧಿಗಳ ನಿಯಮ ಪರಿವಿಡಿ ಪರಿಚಯ ಮೊದಲ ಕಾನೂನು ಎರಡನೇ ಕಾನೂನು ಮೂರನೇ ಕಾನೂನು ಕೆಪ್ಲರ್ ಕಾನೂನುಗಳ ಪರಿಚಯ ಚಲನೆ ಯಾವಾಗಲೂ ಸಾಪೇಕ್ಷವಾಗಿರುತ್ತದೆ.   ಚಲನೆಯಲ್ಲಿರುವ ಕಣದ ಶಕ್ತಿಯ ಆಧಾರದ ಮೇಲೆ , ಚಲನೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ: ಬೌಂಡೆಡ್ ಮೋಷನ್ ಅನಿಯಮಿತ ಚಲನೆ ಸೀಮಿತ ಚಲನೆಯಲ್ಲಿ , ಕಣವು ಋಣಾತ್ಮಕ ಒಟ್ಟು ಶಕ್ತಿಯನ್ನು ಹೊಂದಿರುತ್ತದೆ ( E <0) ಮತ್ತು ಒಟ್ಟು ಶಕ್ತಿಯು ಯಾವಾಗಲೂ ಕಣದ ಸಂಭಾವ್ಯ ಶಕ್ತಿಗೆ   ಸಮನಾಗಿರುವ ಎರಡು ಅಥವಾ ಹೆಚ್ಚು ತೀವ್ರವಾದ ಬಿಂದುಗಳನ್ನು ಹೊಂದಿರುತ್ತದೆ   , ಅಂದರೆ , ಕಣದ ಚಲನ ಶಕ್ತಿಯು ಶೂನ್ಯವಾಗುತ್ತದೆ. ವಿಕೇಂದ್ರೀಯತೆಗೆ 0 ≤ e <1, E < 0 ದೇಹವು ಸೀಮಿತ ಚಲನೆಯನ್ನು ಸೂಚಿಸುತ್ತದೆ.   ವೃತ್ತಾಕಾರದ ಕಕ್ಷೆಯು ವಿಕೇಂದ್ರೀಯತೆಯನ್ನು ಹೊಂದಿದೆ e = 0, ಮತ್ತು ದೀರ್ಘವೃತ್ತದ ಕಕ್ಷೆಯು ವಿಕೇಂದ್ರೀಯತೆಯನ್ನು ಹೊಂದಿದೆ e <1. ಅನಿಯಮಿತ ಚಲನೆಯಲ್ಲಿ , ಕಣವು ಧನಾತ್ಮಕ ಒಟ್ಟು ಶಕ್ತಿಯನ್ನು ಹೊಂದಿರುತ್ತದೆ ( E...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.