mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Saturday, 8 May 2021

ಭಾರತದ ಮೊದಲ ಅಂತರ್‌ರಾಜ್ಯ ನದಿ ಜೋಡಣೆ: ಕೆನ್-ಬೆಟ್ವಾ ನದಿ ಜೋಡಣೆ

 


ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪರಿಕಲ್ಪನೆಯಾದ ಅಂತರ್‌ರಾಜ್ಯ ನದಿ ಜೋಡಣೆಯು

ಪ್ರಸ್ತುತವಾಗಿ ಸಾಕಾರಗೊಂಡಿದೆ. 2021ರ ಮಾರ್ಚ್ 22 ರಂದು ವಿಶ್ವ ಜಲದಿನದ ಅಂಗವಾಗಿ ಆರಂಭಗೊಂಡ ಜಲಶಕ್ತಿ ಅಭಿಯಾನ ಮಳೆಯನ್ನು ಹಿಡಿಯಿರಿ (Jal Shakti Abhiyan - Catch the Rain) ಆಂದೋಲನದ ಭಾಗವಾಗಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳ ನಡುವಿನ ಕೆನ್-ಬೆಟ್ಟಾ ನದಿ ಜೋಡಣೆಯ ಯೋಜನೆಯ Ken Betwa Link Project (KBLP) ಒಪ್ಪಂದಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಸಹಿ ಹಾಕಿವೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ನದಿ ಜೋಡಣೆಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ರಾಷ್ಟ್ರೀಯ ಸ್ವರೂಪ ಹೊಂದಿರುವ ನದಿ ಜೋಡಣೆಯ ಮೊದಲ ಯೋಜನೆಯು National Perspective Plan for interlinking of river ಇದಾಗಿದೆ. ಇದರೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಸ್ತಾಪಿಸಿದ ಯೋಜನೆಯು ಜಾರಿಗೆ ಬಂದಂತಾಗಿದೆ.


   ಅಂತರ್ ನದಿ ಜೋಡಣೆಯ ರಾಷ್ಟ್ರೀಯ ಮಹಾ ಯೋಜನೆ


KEN BETWA RIVER LINKING PROJECT


ಭಾರತದ ಮೊದಲ ಅಂತರ್‌ನದಿ 

ಜೋಡಣಾ ಯೋಜನೆಯ ಎನಿಸಿರುವ ಕೆನ -ಬೆಟ್ವಾ ನದಿ ಜೋಡಣಾ ಯೋಜನೆಯ ಅನುಷ್ಠಾನದ ಐತಿಹಾಸಿಕ ಒಪ್ಪಂದವು 2021ರ ಮಾರ್ಚ್‌ನಲ್ಲಿ ನಡೆದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಂತರ್ ನದಿ ಜೋಡಣೆಯ ಮೂಲಕ ಹೆಚ್ಚಿನ ನೀರಿರುವ ಪ್ರದೇಶಗಳಿಂದ ಬರಪೀಡಿತ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ನೀರನ್ನು ಒದಗಿಸುವ ಕನಸು ಕಂಡಿದ್ದರು. ಭಾರತದ ಜಲ ಸಂಬಂಧಿತ ಉಜ್ವಲ ಭವಿಷ್ಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಒಪ್ಪಂದ ಇದಾಗಿದೆ. ನಮ್ಮ ಕೃಷಿ ಭೂಮಿಯನ್ನು


ಹಸಿರು ಮಾಡುವ ಗರಿಷ್ಟ ಪ್ರಯತ್ನ ಇದಾಗಲಿದೆ.


ಅಂತರ್‌ನದಿ ಜೋಡಣೆ ಯೋಜನೆಯ ಸ್ವರೂಪ


ದೌಧಾನ್‌ ಅಣೆಕಟ್ಟು (Dhaudhan Dam) ಹಾಗೂ ಕಾಲುವೆ ನಿರ್ಮಾಣ ಮಾಡಿ ಕೆನ್ ನದಿಯ ನೀರನ್ನು ಬೆಟ್ಟಾ ನದಿಗೆ ಹರಿಸಲಾಗುತ್ತಿದೆ. ಎರಡು ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣ, ಲೋವರ್ ಓಆರ್‌ಆರ್ ಯೋಜನೆ, ಕೋಥಾ ಬ್ಯಾರೇಜ್ ಮತ್ತು ಬಿನಾ ಕಾಂಪ್ಲೆಕ್ಸ್ ನಿರ್ಮಾಣ ಸೇರಿದಂತೆ ವಿವಿಧೋದ್ದೇಶ ಯೋಜನೆಗಳನ್ನು ಇದು ಒಳಗೊಂಡಿದೆ.


ಪ್ರಯೋಜನಗಳು

      10.62 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಮತ್ತು 62 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಲಭಿಸಿದೆ. 103 ಮೆಗಾ ವ್ಯಾಟ್ ಜಲವಿದ್ಯುತ್ ಉತ್ಪಾದನೆಯೂ ಕೂಡ ಆಗಲಿದೆ. ಮಧ್ಯಪ್ರದೇಶದ 9 ಮತ್ತು ಉತ್ತರ ಪ್ರದೇಶದ 4 ಜಿಲ್ಲೆಗಳು ಈ ಯೋಜನೆಯ ಪ್ರಯೋಜನ ಪಡೆಯಲಿವೆ. ಈ ಯೋಜನೆಯು ನೀರಿನ ಕೊರತೆಯಿಂದ ಬಳಲುತ್ತಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ಉಪಯುಕ್ತವಾಗಲಿದೆ.


ಯೋಜನೆಯ ಪರಿಣಾಮಗಳು

       ಕೆನ್ ಮತ್ತು ಬೆಟ್ಟಾ ನದಿಗಳ ಜೋಡಣೆಯಿಂದ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶವು ನಾಶವಾಗಲಿದೆ ಎಂಬುದು ಅನೇಕ ಪರಿಸರವಾದಿಗಳ ವಾದವಾಗಿದೆ. ಯೋಜನೆ ಅನುಷ್ಠಾನ ಮತ್ತು ನಿರ್ವಹಣೆ ಅಧಿಕ ವೆಚ್ಚ ಆಗಲಿದೆ.


ರಾಷ್ಟ್ರೀಯ ಅಂತರ್ ನದಿ ಜೋಡಣೆಯ ದೂರದೃಷ್ಟಿ ಯೋಜನೆ (NATIONAL PERSPECTIVE PLAN FOR INTERLINKING OF RIVERS)

ರಾಷ್ಟ್ರೀಯ ದೂರದೃಷ್ಟಿ ಯೋಜನೆ ಅಥವಾ ರಾಷ್ಟ್ರೀಯ ನದಿ ಸಂಪರ್ಕಿತ ಯೋಜನೆ (National River Linking Project) ಎಂಬುದು ನೀರಿನ

ಕೊರತೆಯಿರುವ ಪ್ರದೇಶಗಳಿಗೆ ಹೆಚ್ಚು ನೀರು ಇರುವ ಪ್ರದೇಶಗಳಿಂದ ಸಂಪರ್ಕಿಸುವುದು. ಪ್ರವಾಹದಿಂದ ಉಂಟಾದ ಹೆಚ್ಚುವರಿ ನೀರನ್ನು ಕೊರತೆಯಿರುವ ಪ್ರದೇಶಗಳಿಗೆ ಪೂರೈಸುವುದು. ಇದನ್ನು ಅಂತರ್‌ ಜಲ ವರ್ಗಾವಣಾ ಯೋಜನೆ ಎನ್ನಲಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ಯ ರಾಷ್ಟ್ರೀಯ ದೂರದೃಷ್ಟಿ ಯೋಜನೆಯ ಅನ್ವಯ 1980ರ ನಂತರ ಭಾರತದಲ್ಲಿ ಒಟ್ಟು 30 ನದಿ ಸಂಪರ್ಕಿತ ಯೋಜನೆಗಳ ಸಾಧ್ಯತಾ ವರದಿಯು ವಿವಿಧ ಹಂತಗಳಲ್ಲಿ ಸಿದ್ಧವಾಗುತ್ತಿದೆ. ಇವುಗಳಲ್ಲಿ 16 ಪರ್ಯಾಯ ಪ್ರಸ್ಥಭೂಮಿ, 14 ಹಿಮಾಲಯನ್ ಪ್ರಾಂತ್ಯಗಳಿಗೆ ಸಂಬಂಧಿಸಿವೆ.


No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಪ್ರಾಚೀನ ಮೆಸೊಪಟ್ಯಾಮಿಯಾದ ಜಿಗ್ಗುರಾಟ್

ಪ್ರತಿಯೊಂದು ಪ್ರಮುಖ ನಗರದ ಮಧ್ಯಭಾಗದಲ್ಲಿ ಜಿಗ್ಗುರಾಟ್ ಎಂಬ ದೊಡ್ಡ ರಚನೆ ಇತ್ತು. ನಗರದ ಮುಖ್ಯ ದೇವರನ್ನು ಗೌರವಿಸಲು ಜಿಗ್ಗುರಾಟ್ ಅನ್ನು ನಿರ್ಮಿಸಲಾಗಿದೆ. ಜಿಗ್ಗುರಾಟ್ ಅನ್ನು ನಿರ್ಮಿಸುವ ಸಂಪ್ರದಾಯವನ್ನು ಸುಮೇರಿಯನ್ನರು ಪ್ರಾರಂಭಿಸಿದರು , ಆದರೆ ಮೆಸೊಪಟ್ಯಾಮಿಯಾದ ಇತರ ನಾಗರಿಕತೆಗಳಾದ ಅಕ್ಕಾಡಿಯನ್ನರು, ಬ್ಯಾಬಿಲೋನಿಯನ್ನರು ಮತ್ತು ಅಸಿರಿಯನ್ನರು ಸಹ ಜಿಗ್ಗುರಾಟ್ಗಳನ್ನು ನಿರ್ಮಿಸಿದರು.   ಉರ್ ನಗರದ ಜಿಗ್ಗುರಾಟ್ 1939 ರಲ್ಲಿ ಲಿಯೊನಾರ್ಡ್ ವೂಲ್ಲಿ ಅವರ ರೇಖಾಚಿತ್ರವನ್ನು ಆಧರಿಸಿದ ಉರ್ ನಗರದ ಜಿಗ್ಗುರಾಟ್ ಅವರು ಹೇಗಿದ್ದರು? ಜಿಗ್ಗುರಾಟ್‌ಗಳು ಹೆಜ್ಜೆ ಪಿರಮಿಡ್‌ಗಳಂತೆ ಕಾಣುತ್ತವೆ. ಅವರು 2 ರಿಂದ 7 ಹಂತಗಳು ಅಥವಾ ಹಂತಗಳನ್ನು ಹೊಂದಿರುತ್ತಾರೆ. ಪ್ರತಿ ಹಂತವು ಮೊದಲಿಗಿಂತ ಚಿಕ್ಕದಾಗಿರುತ್ತದೆ. ವಿಶಿಷ್ಟವಾಗಿ ಜಿಗ್ಗುರಾಟ್ ತಳದಲ್ಲಿ ಚೌಕಾಕಾರವಾಗಿರುತ್ತದೆ. ಅವರು ಎಷ್ಟು ದೊಡ್ಡವರಾದರು? ಕೆಲವು ಜಿಗ್ಗುರಾಟ್‌ಗಳು ದೊಡ್ಡದಾಗಿವೆ ಎಂದು ನಂಬಲಾಗಿದೆ. ಬಹುಶಃ ದೊಡ್ಡ ಜಿಗ್ಗುರಾಟ್ ಬ್ಯಾಬಿಲೋನ್‌ನಲ್ಲಿದೆ. ಇದು ಏಳು ಹಂತಗಳನ್ನು ಹೊಂದಿದ್ದು ಸುಮಾರು 300 ಅಡಿ ಎತ್ತರವನ್ನು ತಲುಪಿದೆ ಎಂದು ದಾಖಲಾದ ಆಯಾಮಗಳು ತೋರಿಸುತ್ತವೆ. ಇದರ ಬುಡದಲ್ಲಿ 300 ಅಡಿ 300 ಅಡಿ ಚದರ ಕೂಡ ಇತ್ತು.     ಅವರು ಅವುಗಳನ್ನು ಏಕೆ ನಿರ್ಮಿಸಿದರು? ಜಿಗ್ಗುರಾಟ್ ನಗರದ ಮುಖ್ಯ ದೇವರ ದೇವಾಲಯವಾಗಿತ್ತು. ಮೆಸೊಪ...

ಭಾರತದ ನೆರೆಯ ರಾಷ್ಟ್ರಗಳು, ಪಟ್ಟಿ, ನಕ್ಷೆ, ರಾಜಧಾನಿಗಳು, ಧ್ವಜಗಳು

ಭಾರತದ ನೆರೆಯ ರಾಷ್ಟ್ರಗಳು ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ. UPSC ಗಾಗಿ ಭಾರತದ ನೆರೆಯ ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ     ಪರಿವಿಡಿ ಭಾರತದ ನೆರೆಯ ರಾಷ್ಟ್ರಗಳು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಭಾರತದ ಗಡಿಯಲ್ಲಿರುವ ದೇಶಗಳು. ಮ್ಯಾನ್ಮಾರ್ ಮತ್ತು ಶ್ರೀಲಂಕಾ ಭಾರತದೊಂದಿಗೆ ಕರಾವಳಿ ಗಡಿಯನ್ನು ಹಂಚಿಕೊಂಡಿವೆ. ಭಾರತದ ಭೂ ಗಡಿಯು 15,106.7 ಕಿಮೀ ಉದ್ದವಾಗಿದೆ ಮತ್ತು ಅದರ ಕರಾವಳಿ 7,516.6 ಕಿಮೀ ಉದ್ದವಾಗಿದೆ. ಏಕೈಕ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಮೂರು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ. ಈ ಲೇಖನದಲ್ಲಿ ನಾವು ಭಾರತದ ಗಡಿಯಲ್ಲಿರುವ ನೆರೆಯ ದೇಶಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಚೀನಾ ಮತ್ತು ರಷ್ಯಾ ನಂತರ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ದುರ್ಬಲ ಗಡಿಯಾಗಿದೆ, ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಒಳನುಸುಳುವಿಕ...

ಟ್ರಾಫಿಕ್ ಸಂಬಂಧಿತ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

  1 ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗುವ ಮೊದಲು ನಾನು ಸ್ಟಾಪ್ ಲೈನ್ ಅನ್ನು ದಾಟಿದೆ, ಅದು ಇನ್ನೂ ಹಳದಿಯಾಗಿದೆ. ಆದರೆ ಮುಂದೆ ಜನದಟ್ಟಣೆಯಿಂದಾಗಿ ಜಂಕ್ಷನ್ ಅನ್ನು ತೆರವುಗೊಳಿಸಲು ನನಗೆ ಸಾಧ್ಯವಾಗಲಿಲ್ಲ. ಸಿಗ್ನಲ್ ಜಂಪಿಂಗ್‌ಗಾಗಿ ನನಗೆ ಏಕೆ ದಂಡ ವಿಧಿಸಲಾಯಿತು? ಜಂಕ್ಷನ್ ಅನ್ನು ತೆರವುಗೊಳಿಸಲು ಈಗಾಗಲೇ ಸ್ಟಾಪ್ ಲೈನ್ ದಾಟಿದ ವಾಹನಗಳಿಗೆ ಮಾತ್ರ ಹಳದಿ ಸಿಗ್ನಲ್ ನೀಡಲಾಗುತ್ತದೆ. ನೀವು ನಿರೀಕ್ಷಿಸಲಾಗುವುದಿಲ್ಲ. 2 ಬೇರೆ ರಾಜ್ಯದ ನಂಬರ್ ಪ್ಲೇಟ್ ಇರುವ ವಾಹನಗಳಿಗೆ ಪೊಲೀಸರು ದಂಡ ವಿಧಿಸಬಹುದೇ? ಇಲ್ಲ. ಔಟ್ ಸ್ಟೇಷನ್ ನಂಬರ್ ಪ್ಲೇಟ್‌ಗಳಿಗೆ ಯಾವುದೇ ಒಬ್ಬರಿಗೆ ದಂಡ ವಿಧಿಸಲು ಪೊಲೀಸರಿಗೆ ಅಧಿಕಾರವಿಲ್ಲ. ಇದು ಪೊಲೀಸರ ಆದೇಶವಲ್ಲ. 3 ಮಾಲಿನ್ಯ ತಪಾಸಣೆ ಬಗ್ಗೆ ಏನು? ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.