mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Friday, 7 May 2021

2020ರ ಸಾಲಿನ 30ನೇ ಸರಸ್ವತಿ ಸಮ್ಮಾನ್ ಸಾಹಿತ್ಯ ಪ್ರಶಸ್ತಿ


     2020ರ ಸಾಲಿನ 30ನೇ ಸರಸ್ವತಿ ಸಮ್ಮಾನ್ ಸಾಹಿತ್ಯ ಪ್ರಶಸ್ತಿಗೆ ಮರಾಠಿ ಲೇಖಕ ಶರಣ್‌ಕುಮಾರ್ ಅಂಬಾಲೆ ಅವರ ಸನಾತನ ಕೃತಿಯು ಆಯ್ಕೆಯಾಗಿದೆ. ಈ ಮೂಲಕ ಅಂಬಾಲೆ ಅವರು 15 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಪಡೆಯಲಿದ್ದಾರೆ. 2018 ರಲ್ಲಿ ಅಡುಗಡೆಯಾಗಿರುವ ಸನಾತನ ಕೃತಿಯು ದಂತ ಹೋರಾಟದ ಸಾಮಾಜಿಕ ಮತ್ತು ಐತಿಹಾಸಿಕ ದಾಖಲೆಯಾಗಿ ಮಹತ್ವತೆಯನ್ನು ಪಡೆದಿದೆ. ಕೆ.ಕೆ. ಜರ್ಲಾ ಪೌಂಡೇಷನ್ ಸಂಸ್ಥೆಯು ಪ್ರತೀ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೃತಿಗಳಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳನ್ನು ನೀಡುತ್ತಿದೆ. 2019ನೇ ಸಾಲಿನ 29ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಹಿಂದಿ ಸಾಹಿತಿ ವಾಸುದೇವರವರ ಕೃತಿಗೆ ಚೆಕ್ ಬುಕ್ ನೀಡಲಾಗಿತ್ತು


ಸರಸ್ವತಿ ಸಮ್ಮಾನ್ ಪ್ರಶಸ್ತಿ - ಸಾಹಿತ್ಯ ಕ್ಷೇತ್ರದ ಪ್ರಶಸ್ತಿ 

*ಆರಂಭ: 1991 (ಕೃಷ್ಣ ಕುಮಾರ್ ಬಿರ್ಲಾ ಅವರಿಂದ ನವದೆಹಲಿಯಲ್ಲಿ ಆರಂಭ)


* ಸ್ಥಾಪಕರು: ಕೆ.ಕೆ. ಬಿರ್ಲಾ ಫೌಂಡೇಷನ್ * ಪ್ರಶಸ್ತಿಯ ಅರ್ಹತೆ: ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳ ಉತ್ತಮ ಸಾಹಿತ್ಯ ರಚನೆಯ ಕೃತಿಗಳಿಗೆ ನೀಡಲಾಗುತ್ತದೆ.


* ಪ್ರಶಸ್ತಿಯ ಮೊತ್ತ : 15 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ, ಫಲಕ.


ಶರಣಕುಮಾರ ಲಿಂಬಾಲೆ ಬಗ್ಗೆ ಮಾಹಿತಿ

      2020ರ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯದ ಶರಣ್ ಕುಮಾರ್ (Sharankumar Limbale) ಅವರು ಮರಾಠಿ ಭಾಷೆಯ ಲೇಖಕ, ಕವಿ ಮತ್ತು ಸಾಹಿತ್ಯ ವಿಮರ್ಶಕ, ಮರಾಠಿ ದಲಿತ ಸಾಹಿತ್ಯ ಮತ್ತು ಅಮೆರಿಕಾದ ಕಪ್ಪು ಸಾಹಿತ್ಯದ ನಡುವಿನ ಹೋಲಿಕೆಗಾಗಿ ಇವರು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದಿದ್ದರು. 40ಕ್ಕೂಹೆಚ್ಚು ಪುಸ್ತಕಗಳನ್ನು ಇವರು ಬರೆದಿದ್ದಾರೆ.


ಇವರ ಆತ್ಮಚರಿತ್ರೆಯಾದ Akkarmashi ಎಂಬುದು ಇಂಗ್ಲಿಷ್ ಭಾಷೆ ಸೇರಿದಂತೆ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ.


ಸನಾತನ ಕೃತಿಯ ಬಗ್ಗೆ ಮಾಹಿತಿ:-

       ಮರಾಠಿ ಲೇಖಕ ಶರಣ್‌ಕುಮಾರ್‌ ಅವರಿಂದ ಮರಾಠಿ ಭಾಷೆಯಲ್ಲಿ ರಚಿತವಾದ ಸನಾತನ ಕಾದಂಬರಿಯು 2018 ರಲ್ಲಿ ಪ್ರಕಟಗೊಂಡಿತ್ತು. ಇದು ದಲಿತ ಹೋರಾಟದ ಸಾಮಾಜಿಕ ಮತ್ತು ಐತಿಹಾಸಿಕ ಘಟನೆಗಳನ್ನು ತಿಳಿಸುವುದು. 2020ರ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಈ ಕಾದಂಬರಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಸನಾತನ ಕಾದಂಬರಿಯು ಅಸ್ಪೃಶ್ಯರ ಸಾಮಾಜಿಕ, ಸಾಂಸ್ಕೃತಿಕ ಹೋರಾಟದ ಕಥೆಯನ್ನು ವಿಶೇಷ ಶೈಲಿಯಲ್ಲಿ ಬಿಂಬಿಸಿದೆ. ಲೋಕಸಭಾ ಮಾಜಿ ಸೆಕ್ರೆಟರಿ ಜನರಲ್ ಸುಭಾಷ್ ಕಶ್ಯಪ್ ಅವರ ನೇತೃತ್ವದ ವಿದ್ವಾಂಸರ ಆಯ್ಕೆ ಸಮಿತಿಯು ಲಿಂಬಾಲೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.


ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಸಾಹಿತಿಗಳು

         ಎಸ್.ಎಲ್. ಭೈರಪ್ಪ: ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪರವರ 'ಮಂದ್ರಾ' ಕೃತಿಗೆ 2010ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ಎಸ್.ಎಲ್. ಭೈರಪ್ಪನವರು ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡ ಸಾಹಿತಿ, 2016 ರಲ್ಲಿ ಕೇಂದ್ರ ಸರ್ಕಾರವು ಪದ್ಮಶ್ರೀ ಗೌರವವನ್ನು ನೀಡಿ ಗೌರವಿಸಿದೆ. 2017 ಕ.ಸಾ.ಪ ಮತ್ತು ಬಿಎಂಟಿಸಿ ಸಹಭಾಗಿತ್ವದಲ್ಲಿ ನೀಡುವ ನೃಪತುಂಗ ಪ್ರಶಸ್ತಿ ಲಭಿಸಿತ್ತು. 2020 ರಲ್ಲಿ ಕರ್ನಾಟಕ ಕೇಂದ್ರೀಯ ವಿವಿಯು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಭಿತ್ತಿ ಎಂಬುದು ಭೈರಪ್ಪ ಅವರ ಆತ್ಮಚರಿತ್ರೆಯಾಗಿದೆ. 2020ರ ಅಕ್ಟೋಬರ್‌ನಲ್ಲಿ ಇವರ ಅಂಚು ಕಾದಂಬರಿಯು ಇಂಗ್ಲಿಷ್‌ಗೆ ಆರ್‌.ರಂಗನಾಥ್ ಪ್ರಸಾದ್ ಅವರಿಂದ ಭಾಷಾಂತರಗೊಂಡಿದೆ.


ಎಂ. ವೀರಪ್ಪ ಮೊಯ್ಲಿ: ಕನ್ನಡದ ಸಾಹಿತಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿರವರ “ಶ್ರೀ ರಾಮಾಯಣ ಮಹಾನ್ವೇಷಣಂ” ಕೃತಿಗೆ 2014ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮೂಲಕ ಎಂ.ವೀರಪ್ಪ ಮೊಯ್ಲಿ ಅವರು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಕನ್ನಡದ 2ನೇ ಸಾಹಿತಿ ಎನಿಸಿದ್ದಾರೆ. ವೀರಪ್ಪ ಮೊಯ್ಲಿ ಅವರ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯಕ್ಕೆ 2020ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 2007 ರಲ್ಲಿ ರಾಮಾಯಣ ಮಹಾನ್ವೇಷಣಂ ಕೃತಿಗೆ ಮೂರ್ತಿದೇವಿ ಪ್ರಶಸ್ತಿ ಲಭಿಸಿದೆ.


ಕೆ.ಕೆ.ಜರ್ಲಾ ಫೌಂಡೇಷನ್

        ಕೃಷ್ಣಕುಮಾರ್ ಬಿರ್ಲಾ ಅವರಿಂದ 1991ರಲ್ಲಿ ದೆಹಲಿಯಲ್ಲಿ ಕೆ.ಕೆ.ಬಿರ್ಲಾ ಪೌಂಡೇಷನ್ ಸ್ಥಾಪನೆಗೊಂಡಿತು. ಈ ಫೌಂಡೇಷನ್ ಮೂಲಕ ಸಾಹಿತ್ಯದ ಉತ್ತೇಜನ, ಕಲೆ, ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ KRISHNMAR BIRLA ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.

      ಈ ಸಂಸ್ಥೆ ವತಿಯಿಂದ ನೀಡಲಾಗುವ ಪ್ರಮುಖ ಪ್ರಶಸ್ತಿಗಳು: ಸರಸ್ವತಿ ಸಮ್ಮಾನ್, ವ್ಯಾಸ ಸಮ್ಮಾನ್, ಬಿಹಾರಿ ಪುರಸ್ಕಾರ್, ಶಂಕರ್ ಪುರಸ್ಕಾರ್‌, ವಾಚಸ್ಪತಿ ಪುರಸ್ಕಾರ, ವೈಜ್ಞಾನಿಕ ಸಂಶೋಧನೆಗೆ ಜಿ.ಡಿ.ಬಿರ್ಲಾ ಪ್ರಶಸ್ತಿ ನೀಡಲಾಗುತ್ತದೆ.


No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಕ್ರೇ-1 cray-1 super computer

ಕ್ರೇ-1 ಅನ್ನು 1976 ರಲ್ಲಿ ಸೆಮೌರ್ ಕ್ರೇ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಸೂಪರ್‌ಕಂಪ್ಯೂಟರ್. ಇದು ವೆಕ್ಟರ್ ಸಂಸ್ಕರಣೆಯನ್ನು ಬಳಸಿದ ಮೊದಲ ಸೂಪರ್‌ಕಂಪ್ಯೂಟರ್ ಆಗಿದ್ದು, ಇದು ಏಕಕಾಲದಲ್ಲಿ ದತ್ತಾಂಶದ ದೊಡ್ಡ ಶ್ರೇಣಿಗಳ ಮೇಲೆ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಾಗಿಸಿತು. ಕ್ರೇ-1 ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯನ್ನು ಬಳಸಿದ ಮೊದಲ ಸೂಪರ್‌ಕಂಪ್ಯೂಟರ್ ಆಗಿದೆ, ಇದು ಅಧಿಕ ಬಿಸಿಯಾಗದೆ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿತು. ಕ್ರೇ-1 ಅತ್ಯಂತ ದೊಡ್ಡ ಕಂಪ್ಯೂಟರ್ ಆಗಿತ್ತು, ಆರು ಅಡಿ ಎತ್ತರ ಮತ್ತು 5,000 ಪೌಂಡ್‌ಗಳಿಗಿಂತ ಹೆಚ್ಚು ತೂಕವಿತ್ತು. ಹೆಚ್ಚಿನ ವೇಗದ ಪ್ರೊಸೆಸರ್, ಹೆಚ್ಚಿನ ಪ್ರಮಾಣದ ಮೆಮೊರಿ ಮತ್ತು ವಿಶೇಷವಾದ ಇನ್‌ಪುಟ್/ಔಟ್‌ಪುಟ್ (I/O) ವ್ಯವಸ್ಥೆಗಳನ್ನು ಒಳಗೊಂಡಂತೆ ಕಸ್ಟಮ್-ವಿನ್ಯಾಸಗೊಳಿಸಿದ ಘಟಕಗಳೊಂದಿಗೆ ಇದನ್ನು ನಿರ್ಮಿಸಲಾಗಿದೆ. Cray-1 ಅನ್ನು ಸಂಕೀರ್ಣವಾದ ವೈಜ್ಞಾನಿಕ ಲೆಕ್ಕಾಚಾರಗಳನ್ನು ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಹವಾಮಾನ ಮುನ್ಸೂಚನೆ, ಪರಮಾಣು ಸಂಶೋಧನೆ ಮತ್ತು ದ್ರವ ಡೈನಾಮಿಕ್ಸ್ ಸಿಮ್ಯುಲೇಶನ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಅನ್ವಯಿಕೆಗಳಿಗೆ ಬಳಸಲಾಯಿತು. ಕ್ರೇ-1 ನ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ವಿಶಿಷ್ಟ ವಿನ್ಯಾಸ. ಇದನ್ನು C ಆಕಾರದಲ್ಲಿ ನಿರ್ಮಿಸಲಾಗಿದೆ, ಪ್ರೊಸೆಸರ್ ಮತ್ತು ಮೆಮೊರಿಯು ಯಂತ್ರದ ಮಧ್ಯಭಾಗದಲ್ಲಿದೆ ಮತ್ತು I/O ಸಿಸ್ಟಮ್‌ಗಳನ್...

ಭಾರತದ ಹವಾಮಾನ, ವಿಧಗಳು, ವಲಯಗಳು, ನಕ್ಷೆ, ಭಾರತದ ಹವಾಮಾನದ ಮೇಲೆ ಪರಿಣಾಮ ಬೀರುವ ಅಂಶಗಳು.

    ಭಾರತದ ಹವಾಮಾನ - ವಿಧಗಳು , ವಲಯಗಳು , ನಕ್ಷೆ , ಋತುಗಳು , ಹವಾಮಾನ. ಭಾರತದ ಹವಾಮಾನದ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಇನ್ನಷ್ಟು ಓದಿ.     ಪರಿವಿಡಿ   ಭಾರತದ ಹವಾಮಾನ ಭಾರತವು "ಮಾನ್ಸೂನ್" ಹವಾಮಾನವನ್ನು ಹೊಂದಿದೆ , ಇದು ಪ್ರಾಥಮಿಕವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಅರೇಬಿಕ್ ಪದ "ಮೌಸಿಮ್" ಎಂದರೆ ಋತುಗಳು , ಇಲ್ಲಿ "ಮಾನ್ಸೂನ್" ಎಂಬ ಪದವು ಹುಟ್ಟಿಕೊಂಡಿದೆ. ಹಲವಾರು ಶತಮಾನಗಳ ಹಿಂದೆ , ಅರಬ್ ನ್ಯಾವಿಗೇಟರ್‌ಗಳು ಮೊದಲು "ಮಾನ್ಸೂನ್" ಎಂಬ ಪದವನ್ನು ಹಿಂದೂ ಮಹಾಸಾಗರದ ಕರಾವಳಿಯ ಉದ್ದಕ್ಕೂ , ವಿಶೇಷವಾಗಿ ಅರೇಬಿಯನ್ ಸಮುದ್ರದ ಮೇಲೆ ಕಾಲೋಚಿತ ಗಾಳಿಯ ಹಿಮ್ಮುಖ ವ್ಯವಸ್ಥೆಯನ್ನು ಉಲ್ಲೇಖಿಸಲು ಬಳಸಿದರು , ಇದರಲ್ಲಿ ಬೇಸಿಗೆಯಲ್ಲಿ ನೈಋತ್ಯದಿಂದ ಈಶಾನ್ಯಕ್ಕೆ ಗಾಳಿ ಬೀಸುತ್ತದೆ. ಮತ್ತು ಚಳಿಗಾಲದಲ್ಲಿ ಈಶಾನ್ಯದಿಂದ ನೈಋತ್ಯಕ್ಕೆ. ಬೇರೆ ರೀತಿಯಲ್ಲಿ ಹೇಳುವುದಾದರೆ , ಮಾನ್ಸೂನ್ ಕಾಲೋಚಿತ ಮಾರುತಗಳು ನಿಯತಕಾಲಿಕವಾಗಿ ಸಂಭವಿಸುತ್ತವೆ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಸಂಪೂರ್ಣವಾಗಿ ಹಿಮ್ಮುಖ ದಿಕ್ಕನ್ನು ಹೊಂದಿರುತ್ತವೆ.   ಭಾರತವು ಮಾನ್ಸೂನ್ ಶೈಲಿಯ ಹವಾಮಾನವನ್ನು ಹೊಂದಿದ್ದರೂ ಸಹ , ದೇಶದ ಹವಾಮಾನದಲ್ಲಿ ಭೌಗೋಳಿಕ ವ್ಯತ್ಯಾಸಗಳಿವೆ. ಈ ಪ್ರಾದೇಶಿಕ ವ್ಯತ್ಯಾಸಗಳನ್ನು ಮಾನ್ಸೂನ್ ಹವಾಮಾನ ಉಪವಿಭಾಗಗಳಾಗಿ ವರ್ಗೀಕರಿಸಬಹುದು.   ತ...

anlog ಕಂಪ್ಯೂಟರ್ಗಳು

  anlog ಕಂಪ್ಯೂಟರ್ಗಳು ಅನಲಾಗ್ ಕಂಪ್ಯೂಟರ್‌ಗಳು ಒಂದು ರೀತಿಯ ಕಂಪ್ಯೂಟರ್ ಆಗಿದ್ದು ಅದು ಲೆಕ್ಕಾಚಾರಗಳನ್ನು ನಿರ್ವಹಿಸಲು ವಿದ್ಯುತ್ ಅಥವಾ ಯಾಂತ್ರಿಕ ಸಂಕೇತಗಳಂತಹ ಭೌತಿಕ ವಿದ್ಯಮಾನಗಳನ್ನು ಬಳಸುತ್ತದೆ. ಡಿಸ್ಕ್ರೀಟ್ ಡಿಜಿಟಲ್ ಸಿಗ್ನಲ್‌ಗಳ ಬದಲಿಗೆ ನಿರಂತರ ವೇರಿಯೇಬಲ್‌ಗಳನ್ನು ಬಳಸಿಕೊಂಡು ಗಣಿತದ ಸಮಸ್ಯೆಗಳನ್ನು ರೂಪಿಸಲು ಮತ್ತು ಪರಿಹರಿಸಲು ಈ ಕಂಪ್ಯೂಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅನಲಾಗ್ ಕಂಪ್ಯೂಟರ್‌ಗಳನ್ನು 20 ನೇ ಶತಮಾನದ ಆರಂಭದಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು 1950 ಮತ್ತು 1960 ರ ದಶಕದಲ್ಲಿ ಡಿಜಿಟಲ್ ಕಂಪ್ಯೂಟರ್‌ಗಳ ಆಗಮನದವರೆಗೆ ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಅಪ್ಲಿಕೇಶನ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಹವಾಮಾನ ಮುನ್ಸೂಚನೆ, ಫ್ಲೈಟ್ ಸಿಮ್ಯುಲೇಶನ್ ಮತ್ತು ಎಲೆಕ್ಟ್ರಾನಿಕ್ ಸರ್ಕ್ಯೂಟ್ ವಿನ್ಯಾಸದಂತಹ ಭೌತಿಕ ವ್ಯವಸ್ಥೆಗಳ ನೈಜ-ಸಮಯದ ಸಿಮ್ಯುಲೇಶನ್‌ಗಳ ಅಗತ್ಯವಿರುವ ಸಮಸ್ಯೆಗಳನ್ನು ಪರಿಹರಿಸಲು ಅವು ವಿಶೇಷವಾಗಿ ಉಪಯುಕ್ತವಾಗಿವೆ. ಅನಲಾಗ್ ಕಂಪ್ಯೂಟರ್‌ಗಳು ಅನಲಾಗ್ ಸರ್ಕ್ಯೂಟ್ರಿಯನ್ನು ಬಳಸಿಕೊಂಡು ಕೆಲಸ ಮಾಡುತ್ತವೆ, ಇದು ವೋಲ್ಟೇಜ್, ಕರೆಂಟ್ ಮತ್ತು ಆವರ್ತನದಂತಹ ವೇರಿಯಬಲ್‌ಗಳನ್ನು ಪ್ರತಿನಿಧಿಸಲು ನಿರಂತರ ಸಂಕೇತಗಳನ್ನು ಬಳಸುತ್ತದೆ. ಈ ಸಂಕೇತಗಳನ್ನು ನಂತರ ಆಂಪ್ಲಿಫೈಯರ್‌ಗಳು, ಫಿಲ್ಟರ್‌ಗಳು ಮತ್ತು ಇಂಟಿಗ್ರೇಟರ್‌ಗಳಂತಹ ಅನಲಾಗ್ ಘಟಕಗಳಿಂದ ಮ್ಯಾನಿಪ್ಯುಲೇಟ್ ಮಾಡಲಾಗುತ್ತದೆ, ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.