mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Friday, 7 May 2021

ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಎನ್ ವಿ ರಮಣ್

 



ಸುಪ್ರೀಂ ಕೋರ್ಟಿನ ಮುಂದಿನ ಮತ್ತು 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಪೈಕಿ ಸೇವಾ ಹಿರಿತನದಲ್ಲಿ ಮೊದಲಿಗರಾಗಿರುವ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ್ ರವರ ಹೆಸರನ್ನು ಶಿಫಾರಸ್ಸು ಮಾಡಿ ಸುಪ್ರೀಂ ಕೋರ್ಟಿನ ಹಾಲಿ ಮತ್ತು 47ನೇ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಬೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಿಜೆಐ ಹುದ್ದೆಯಿಂದ ನಿವೃತ್ತರಾಗುವವರು ತಮ್ಮ ನಂತರ ದೇಶದ ಅತ್ಯುನ್ನತ ನ್ಯಾಯಿಕ ಹುದ್ದೆಗೆ ಯಾರು

ಸೂಕ್ತ ಎಂಬುದನ್ನು ಶಿಫಾರಸ್ಸು ಮಾಡುವುದು ವಾಡಿಕೆಯಾಗಿದೆ. ಇದೇ ರೀತಿ ಹಾಲಿ ಸಿಜೆ ತಮ್ಮ ನಿವೃತ್ತಿಗೆ ಒಂದು ತಿಂಗಳು ಮೊದಲು ಉತ್ತರಾಧಿಕಾರಿಗಳ ಹೆಸರನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಕೂಡ ವಾಡಿಕೆಯಾಗಿ ನಡೆದು ಬಂದಿದೆ. ರಾಷ್ಟ್ರಪತಿಗಳಿಂದ 2021ರ ಏಪ್ರಿಲ್ 6 ರಂದು ನೂತನ ಸಿಜೆ ಎನ್.ವಿ.ರಮಣ ಅವರ ನೇಮಕಾತಿಯು ಅಂಗೀಕಾರವಾಗಿದ್ದು, ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಇದರನ್ವಯ ನ್ಯಾಯಮೂರ್ತಿ ಎನ್.ವಿ. ರಮಣ್ ರವರು ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ 2021ರ ಏಪ್ರಿಲ್ 24 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ 2021ರ ಏಪ್ರಿಲ್ 23 ರಂದು ನ್ಯಾಯಮೂರ್ತಿ ಎಸ್‌.ಎ. ಬೊಬ್ಬೆ ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ್ ರವರು ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನ್ಯಾಯಮೂರ್ತಿ ಎನ್.ವಿ.ರಮಣ್ ರವರು 2022ರ ಆಗಸ್ಟ್ 26 ರವರೆಗೂ ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.


ನೂತನ ಮತ್ತು 48ನೇ ಸಿಜೆ : ನ್ಯಾ. ಎನ್.ವಿ. ರಮಣ್  ನ್ಯಾಯಾಮೂರ್ತಿ ಎನ್.ವಿ. ರಮಣ್ ರವರು ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪನ್ನಾವರಂನವರು. 1957ರ ಆಗಸ್ಟ್ 27 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು 1983ರ ಫೆಬ್ರವರಿ 10 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಆಂಧ್ರಪ್ರದೇಶ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು. ಸರ್ಕಾರ ವಿವಿಧ ಕಾನೂನಾತ್ಮಕ ಸಮಿತಿಗಳಲ್ಲಿ ನ್ಯಾ. ಎನ್.ವಿ. ರಮಣ್ ರವರು ಕಾರ್ಯ ನಿರ್ವಹಿಸಿದ್ದಾರೆ. ಇವರು ಆಂಧ್ರಪ್ರದೇಶದ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 2000ನೇ ಜೂನ್ 27 ರಂದು ಆಂಧ್ರ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾದರು. 2013ರ ಮಾರ್ಚ್ 10 ರಿಂದ ಮೇ 20 ರವರೆಗೆ ಆಂಧ್ರ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. 2013ರ ಸೆಪ್ಟೆಂಬರ್ 2 ರಂದು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದ ಅವರು, 2014ರ ಫೆಬ್ರವರಿ 17 ರಿಂದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿದ್ದಾರೆ.


ನ್ಯಾಯಮೂರ್ತಿಗಳಾಗಿ ನೀಡಿದ ಮಹತ್ವದ ತೀರ್ಪುಗಳು ಕಛೇರಿಗಳಲ್ಲಿ ನೌಕರಿ ಮಾಡುವ ಪತಿಗಿಂತ ಗೃಹ ಕಾರ್ಯ ಮಾಡುವ ಪತ್ನಿಯ ದುಡಿಮೆ ಏನು ಕಡಿಮೆ ಇಲ್ಲ ಎಂಬ ತೀರ್ಪು ನೀಡಿದ್ದರು. ಜಮ್ಮು-ಕಾಶ್ಮೀರದಲ್ಲಿ ಇಂಟರ್‌ನೆಟ್ ಮರುಸ್ಥಾಪನೆ. ಸಿಜೆಐ ಕೂಡ ಆರ್‌ಟಿಐ ವ್ಯಾಪ್ತಿಗೆ ಬರುತ್ತದೆ ಎಂಬ ಮಹತ್ವದ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ನ್ಯಾಯಮೂರ್ತಿ ಎನ್.ವಿ.ರಮಣ್ ಕೂಡಾ ಒಬ್ಬರು.


ನ್ಯಾಯಮೂರ್ತಿ ರಮಣ್ ರವರಿಗೆ ಕ್ಲೀನ್‌ಚಿಟ್ : ನ್ಯಾ. ಎನ್.ವಿ. ರಮಣ್ ರವರ ವಿರುದ್ಧ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ 2020ರ ಅಕ್ಟೋಬರ್ 6 ರಂದು ನೀಡಿದ್ದ ದೂರಿನ ಬಗ್ಗೆ ಆಂತರಿಕ ತನಿಖೆ ನಡೆದಿದ್ದು, ಆರೋಪದಲ್ಲಿ ಹುರುಳಿಲ್ಲ ಎಂಬ ಕಾರಣಕ್ಕೆ ದೂರನ್ನು ವಜಾ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆಂತರಿಕ ತನಿಖೆ ಅತ್ಯಂತ ಗೌಪ್ಯ ವಿಷಯವಾದ ಕಾರಣ ಈ ಪ್ರಕ್ರಿಯೆಯ ಮಾಹಿತಿಗಳನ್ನು ಸಾರ್ವಜನಿಕಗೊಳಿಸಲಾಗದು ಎಂಬುದಾಗಿ ಮಾಹಿತಿ ನೀಡಿದೆ.


47ನೇ ಸಿಜೆ ಶರದ್ ಅರವಿಂದ್ ಬೊಬ್ಬೆ

2019ರ ನವೆಂಬರ್ 18 ರಿಂದ ಸುಪ್ರೀಂಕೋರ್ಟ್‌ನ 47ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಎಸ್.ಎ. ಬೊಬ್ಬೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅಧಿಕಾರವಧಿಯು 2021ರ ಏಪ್ರಿಲ್ 23 ರಂದು ಅಂತ್ಯವಾಗಲಿದೆ. ಅಯೋಧ್ಯೆಯ ರಾಮಜನ್ಮಭೂಮಿ, ಬಾಬ್ರಿ ಕಟ್ಟಡ ವಿವಾದ, ಬಿಸಿಸಿಐ ಪ್ರಕರಣ, ಆಧಾರ್‌ ಮತ್ತಿತರ ಮಹತ್ವದ ಪ್ರಕರಣಗಳ ವಿಚಾರಣೆ ಪೀಠದಲ್ಲೂ ಬೊಬ್ಬೆ ಅವರು ಸೇವೆ ಸಲ್ಲಿಸಿದ್ದಾರೆ.


46ನೇ ಸಿಜೆ: ಅಸ್ಸಾಂ ರಾಜ್ಯದ ಮತ್ತು ಈಶಾನ್ಯ ಭಾಗದ ಮೊದಲ ನ್ಯಾಯಾಧೀಶರು ಖ್ಯಾತಿಯ ರಂಜನ್ ಗೊಗೋಯಿ ಅವರು 2018ರ ಅಕ್ಟೋಬರ್ 3 ರಿಂದ 2019ರ ನವೆಂಬರ್ 17ರವರೆಗೆ ಸೇವೆ ಸಲ್ಲಿಸಿದ್ದರು. ಇವರು 2020ರ ಮಾರ್ಚ್ 19 ರಿಂದ ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಹೊಂದಿದ್ದಾರೆ.


ಭಾರತದ ಸರ್ವೋಚ್ಛ ನ್ಯಾಯಾಲಯ (SUPREME COURT OF INDIA)


ಭಾರತದ ಸಂವಿಧಾನದಲ್ಲಿ ಅವಕಾಶ: ಭಾರತ ಸಂವಿಧಾನದ 5ನೇ ಭಾಗದ 4ನೇ ಅಧ್ಯಾಯದಲ್ಲಿ 124 ರಿಂದ 147ನೇ ವಿಧಿಗಳು.


ವಿಶೇಷತೆ: ಭಾರತ ಸಂವಿಧಾನದ ಪೋಷಕ ಮತ್ತು ಭಾರತದ ಅತ್ಯುನ್ನತ ನ್ಯಾಯಾಲಯವಾಗಿ ಕಾರ್ಯ ನಿರ್ವಹಣೆ. > ಸ್ಥಾಪನೆ: 1950 ಜನವರಿ 28, 

* ಒಟ್ಟು ನ್ಯಾಯಾಧೀಶರ ಸಂಖ್ಯೆ: 34 (l-ಮುಖ್ಯ ನ್ಯಾಯಾಧೀಶ, 33 ಮಂದಿ ನ್ಯಾಯಾಧೀಶರು) 


ಸ್ಥಾಪನೆ ಹಿನ್ನಲೆ: 1935ರ ಭಾರತ ಸರ್ಕಾರ ಕಾಯಿದೆಯಂತೆ ಫೆಡರಲ್ ಕೋರ್ಟ್ ಆಗಿ 1937 ಅಕ್ಟೋಬರ್ 1 ರಂದು ಅಸ್ಥಿತ್ವಕ್ಕೆ ಬಂದ ನ್ಯಾಯಾಲಯವು ಸಂವಿಧಾನ ಜಾರಿಗೆ ಬಂದ ನಂತರ ಸುಪ್ರಿಂಕೋರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ.


ಸುಪ್ರಿಂಕೋರ್ಟ್‌ನ ಮುಖ್ಯ & ಇತರೆ ನ್ಯಾಯಾಧೀಶರ ನೇಮಕ, ರಾಜೀನಾಮೆ & ಪ್ರಮಾಣ ವಚನ: ಭಾರತದ ರಾಷ್ಟ್ರಪತಿಗಳು. ವೇತನ ನೀಡಿವೆ: ಕೇಂದ್ರ ಸರ್ಕಾರದ ಸಂಚಿತ ನಿಧಿ.


ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮಾಸಿಕ ವೇತನ : 2,80,000, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವೇತನ & ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವೇತನ 2,50,000 ಹಾಗೂ ಹೈಕೋರ್ಟ್ ನ್ಯಾಯಾಧೀಶರ ವೇತನ 2.25,000)


ಸುಪ್ರೀಂಕೋರ್ಟ್ ಕಟ್ಟಡದ ವಿಶೇಷತೆ


ಧೈಯವಾಕ್ಯ: “ಯಥೋ ಧರ್ಮಸ್ತತೋ ಜಯಹಾ", ಶಿಲಾನ್ಯಾಸ: ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ (1954 ಅಕ್ಟೋಬರ್ 29), ವಾಸ್ತುಶಿಲ್ಪ ಶೈಲಿ: ಇಂಡೋ-ಬ್ರಿಟಿಷ್ ಶೈಲಿ


ವಾಸ್ತುಶಿಲ್ಪ: ಗಣೇಶ್ ಬಿಕಾಜಿ ದಿಯೋಲಾಲಿಕಾರ್


ಉದ್ಘಾಟನೆ: 1958


 * ಮೊದಲು ಸಂಸತ್ತಿನ ಚೇಂಬರ್ ಆಫ್ ಪ್ರಿನ್ಸಸ್‌ನಲ್ಲಿ ಸುಪ್ರಿಂಕೋರ್ಟ್‌ನ ಕಾರ್ಯಾಚರಣೆ ನಡೆಯುತ್ತಿತ್ತು.



No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಕ್ರೇ-1 cray-1 super computer

ಕ್ರೇ-1 ಅನ್ನು 1976 ರಲ್ಲಿ ಸೆಮೌರ್ ಕ್ರೇ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಸೂಪರ್‌ಕಂಪ್ಯೂಟರ್. ಇದು ವೆಕ್ಟರ್ ಸಂಸ್ಕರಣೆಯನ್ನು ಬಳಸಿದ ಮೊದಲ ಸೂಪರ್‌ಕಂಪ್ಯೂಟರ್ ಆಗಿದ್ದು, ಇದು ಏಕಕಾಲದಲ್ಲಿ ದತ್ತಾಂಶದ ದೊಡ್ಡ ಶ್ರೇಣಿಗಳ ಮೇಲೆ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಾಗಿಸಿತು. ಕ್ರೇ-1 ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯನ್ನು ಬಳಸಿದ ಮೊದಲ ಸೂಪರ್‌ಕಂಪ್ಯೂಟರ್ ಆಗಿದೆ, ಇದು ಅಧಿಕ ಬಿಸಿಯಾಗದೆ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿತು. ಕ್ರೇ-1 ಅತ್ಯಂತ ದೊಡ್ಡ ಕಂಪ್ಯೂಟರ್ ಆಗಿತ್ತು, ಆರು ಅಡಿ ಎತ್ತರ ಮತ್ತು 5,000 ಪೌಂಡ್‌ಗಳಿಗಿಂತ ಹೆಚ್ಚು ತೂಕವಿತ್ತು. ಹೆಚ್ಚಿನ ವೇಗದ ಪ್ರೊಸೆಸರ್, ಹೆಚ್ಚಿನ ಪ್ರಮಾಣದ ಮೆಮೊರಿ ಮತ್ತು ವಿಶೇಷವಾದ ಇನ್‌ಪುಟ್/ಔಟ್‌ಪುಟ್ (I/O) ವ್ಯವಸ್ಥೆಗಳನ್ನು ಒಳಗೊಂಡಂತೆ ಕಸ್ಟಮ್-ವಿನ್ಯಾಸಗೊಳಿಸಿದ ಘಟಕಗಳೊಂದಿಗೆ ಇದನ್ನು ನಿರ್ಮಿಸಲಾಗಿದೆ. Cray-1 ಅನ್ನು ಸಂಕೀರ್ಣವಾದ ವೈಜ್ಞಾನಿಕ ಲೆಕ್ಕಾಚಾರಗಳನ್ನು ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಹವಾಮಾನ ಮುನ್ಸೂಚನೆ, ಪರಮಾಣು ಸಂಶೋಧನೆ ಮತ್ತು ದ್ರವ ಡೈನಾಮಿಕ್ಸ್ ಸಿಮ್ಯುಲೇಶನ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಅನ್ವಯಿಕೆಗಳಿಗೆ ಬಳಸಲಾಯಿತು. ಕ್ರೇ-1 ನ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ವಿಶಿಷ್ಟ ವಿನ್ಯಾಸ. ಇದನ್ನು C ಆಕಾರದಲ್ಲಿ ನಿರ್ಮಿಸಲಾಗಿದೆ, ಪ್ರೊಸೆಸರ್ ಮತ್ತು ಮೆಮೊರಿಯು ಯಂತ್ರದ ಮಧ್ಯಭಾಗದಲ್ಲಿದೆ ಮತ್ತು I/O ಸಿಸ್ಟಮ್‌ಗಳನ್...

ಭಾರತದ ಹವಾಮಾನ, ವಿಧಗಳು, ವಲಯಗಳು, ನಕ್ಷೆ, ಭಾರತದ ಹವಾಮಾನದ ಮೇಲೆ ಪರಿಣಾಮ ಬೀರುವ ಅಂಶಗಳು.

    ಭಾರತದ ಹವಾಮಾನ - ವಿಧಗಳು , ವಲಯಗಳು , ನಕ್ಷೆ , ಋತುಗಳು , ಹವಾಮಾನ. ಭಾರತದ ಹವಾಮಾನದ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಇನ್ನಷ್ಟು ಓದಿ.     ಪರಿವಿಡಿ   ಭಾರತದ ಹವಾಮಾನ ಭಾರತವು "ಮಾನ್ಸೂನ್" ಹವಾಮಾನವನ್ನು ಹೊಂದಿದೆ , ಇದು ಪ್ರಾಥಮಿಕವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಅರೇಬಿಕ್ ಪದ "ಮೌಸಿಮ್" ಎಂದರೆ ಋತುಗಳು , ಇಲ್ಲಿ "ಮಾನ್ಸೂನ್" ಎಂಬ ಪದವು ಹುಟ್ಟಿಕೊಂಡಿದೆ. ಹಲವಾರು ಶತಮಾನಗಳ ಹಿಂದೆ , ಅರಬ್ ನ್ಯಾವಿಗೇಟರ್‌ಗಳು ಮೊದಲು "ಮಾನ್ಸೂನ್" ಎಂಬ ಪದವನ್ನು ಹಿಂದೂ ಮಹಾಸಾಗರದ ಕರಾವಳಿಯ ಉದ್ದಕ್ಕೂ , ವಿಶೇಷವಾಗಿ ಅರೇಬಿಯನ್ ಸಮುದ್ರದ ಮೇಲೆ ಕಾಲೋಚಿತ ಗಾಳಿಯ ಹಿಮ್ಮುಖ ವ್ಯವಸ್ಥೆಯನ್ನು ಉಲ್ಲೇಖಿಸಲು ಬಳಸಿದರು , ಇದರಲ್ಲಿ ಬೇಸಿಗೆಯಲ್ಲಿ ನೈಋತ್ಯದಿಂದ ಈಶಾನ್ಯಕ್ಕೆ ಗಾಳಿ ಬೀಸುತ್ತದೆ. ಮತ್ತು ಚಳಿಗಾಲದಲ್ಲಿ ಈಶಾನ್ಯದಿಂದ ನೈಋತ್ಯಕ್ಕೆ. ಬೇರೆ ರೀತಿಯಲ್ಲಿ ಹೇಳುವುದಾದರೆ , ಮಾನ್ಸೂನ್ ಕಾಲೋಚಿತ ಮಾರುತಗಳು ನಿಯತಕಾಲಿಕವಾಗಿ ಸಂಭವಿಸುತ್ತವೆ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಸಂಪೂರ್ಣವಾಗಿ ಹಿಮ್ಮುಖ ದಿಕ್ಕನ್ನು ಹೊಂದಿರುತ್ತವೆ.   ಭಾರತವು ಮಾನ್ಸೂನ್ ಶೈಲಿಯ ಹವಾಮಾನವನ್ನು ಹೊಂದಿದ್ದರೂ ಸಹ , ದೇಶದ ಹವಾಮಾನದಲ್ಲಿ ಭೌಗೋಳಿಕ ವ್ಯತ್ಯಾಸಗಳಿವೆ. ಈ ಪ್ರಾದೇಶಿಕ ವ್ಯತ್ಯಾಸಗಳನ್ನು ಮಾನ್ಸೂನ್ ಹವಾಮಾನ ಉಪವಿಭಾಗಗಳಾಗಿ ವರ್ಗೀಕರಿಸಬಹುದು.   ತ...

anlog ಕಂಪ್ಯೂಟರ್ಗಳು

  anlog ಕಂಪ್ಯೂಟರ್ಗಳು ಅನಲಾಗ್ ಕಂಪ್ಯೂಟರ್‌ಗಳು ಒಂದು ರೀತಿಯ ಕಂಪ್ಯೂಟರ್ ಆಗಿದ್ದು ಅದು ಲೆಕ್ಕಾಚಾರಗಳನ್ನು ನಿರ್ವಹಿಸಲು ವಿದ್ಯುತ್ ಅಥವಾ ಯಾಂತ್ರಿಕ ಸಂಕೇತಗಳಂತಹ ಭೌತಿಕ ವಿದ್ಯಮಾನಗಳನ್ನು ಬಳಸುತ್ತದೆ. ಡಿಸ್ಕ್ರೀಟ್ ಡಿಜಿಟಲ್ ಸಿಗ್ನಲ್‌ಗಳ ಬದಲಿಗೆ ನಿರಂತರ ವೇರಿಯೇಬಲ್‌ಗಳನ್ನು ಬಳಸಿಕೊಂಡು ಗಣಿತದ ಸಮಸ್ಯೆಗಳನ್ನು ರೂಪಿಸಲು ಮತ್ತು ಪರಿಹರಿಸಲು ಈ ಕಂಪ್ಯೂಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅನಲಾಗ್ ಕಂಪ್ಯೂಟರ್‌ಗಳನ್ನು 20 ನೇ ಶತಮಾನದ ಆರಂಭದಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು 1950 ಮತ್ತು 1960 ರ ದಶಕದಲ್ಲಿ ಡಿಜಿಟಲ್ ಕಂಪ್ಯೂಟರ್‌ಗಳ ಆಗಮನದವರೆಗೆ ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಅಪ್ಲಿಕೇಶನ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಹವಾಮಾನ ಮುನ್ಸೂಚನೆ, ಫ್ಲೈಟ್ ಸಿಮ್ಯುಲೇಶನ್ ಮತ್ತು ಎಲೆಕ್ಟ್ರಾನಿಕ್ ಸರ್ಕ್ಯೂಟ್ ವಿನ್ಯಾಸದಂತಹ ಭೌತಿಕ ವ್ಯವಸ್ಥೆಗಳ ನೈಜ-ಸಮಯದ ಸಿಮ್ಯುಲೇಶನ್‌ಗಳ ಅಗತ್ಯವಿರುವ ಸಮಸ್ಯೆಗಳನ್ನು ಪರಿಹರಿಸಲು ಅವು ವಿಶೇಷವಾಗಿ ಉಪಯುಕ್ತವಾಗಿವೆ. ಅನಲಾಗ್ ಕಂಪ್ಯೂಟರ್‌ಗಳು ಅನಲಾಗ್ ಸರ್ಕ್ಯೂಟ್ರಿಯನ್ನು ಬಳಸಿಕೊಂಡು ಕೆಲಸ ಮಾಡುತ್ತವೆ, ಇದು ವೋಲ್ಟೇಜ್, ಕರೆಂಟ್ ಮತ್ತು ಆವರ್ತನದಂತಹ ವೇರಿಯಬಲ್‌ಗಳನ್ನು ಪ್ರತಿನಿಧಿಸಲು ನಿರಂತರ ಸಂಕೇತಗಳನ್ನು ಬಳಸುತ್ತದೆ. ಈ ಸಂಕೇತಗಳನ್ನು ನಂತರ ಆಂಪ್ಲಿಫೈಯರ್‌ಗಳು, ಫಿಲ್ಟರ್‌ಗಳು ಮತ್ತು ಇಂಟಿಗ್ರೇಟರ್‌ಗಳಂತಹ ಅನಲಾಗ್ ಘಟಕಗಳಿಂದ ಮ್ಯಾನಿಪ್ಯುಲೇಟ್ ಮಾಡಲಾಗುತ್ತದೆ, ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.