mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Wednesday, 12 May 2021

ಭಾರತದಲ್ಲಿ ಟೆಸ್ಲಾ ಕಾರ್ ಕಂಪನಿ ಘಟಕ

 

       ಜಗತ್ತಿನ ಶ್ರೀಮಂತ ಉದ್ಯಮಿ' ಎಲಾನ್ ಮಸ್ (ELON MUSK) ಅವರ ಒಡೆತನದ ಅಮೆರಿಕಾ ಮೂಲದ ಎಲೆಕ್ನಿಕ್ ಕಾರು ಉತ್ಪಾದನಾ ಕಂಪನಿ (American Electric Vehicle Maker) ಯಾದ ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ. ಈ ಮೂಲಕ ಬೆಂಗಳೂರು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಂತಾಗಿದೆ. ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಕಾರ್ಪೊರೇಟ್ ಕಚೇರಿ ತೆರೆಯಲಿದ್ದು, 1 ಲಕ್ಷ ರೂ. ಆರಂಭಿಕ ಶುಲ್ಕದೊಂದಿಗೆ Tesla India Motors and Energy PVT LTD ಹೆಸರಿನಲ್ಲಿ ಕಂಪನಿಯನ್ನು ಬೆಂಗಳೂರಿನಲ್ಲಿ ನೊಂದಾಯಿಸಲಾಗಿದೆ. ಬೆಂಗಳೂರಿನ ಲ್ಯಾವೆಲೆ ರಸ್ತೆಯಲ್ಲಿ ಕಾರ್ಪೊರೇಟ್ ಕಚೇರಿ ಹೊಂದಿದೆ. ಈ ಸಂಬಂಧ ಮೂವರು ನಿರ್ದೇಶಕರನ್ನು ನಿಯುಕ್ತಿಗೊಳಿಸಲಾಗಿದೆ. ವೈಭವ್ ತನೇಜಾ (Vaibhav Taneja), ವೆಂಕಟರಂಗಂ ಶ್ರೀರಾಮ್ (Venkatrangam Sreeram) ಹಾಗೂ ಡೇವಿಡ್ ಜಾನ್ ಫಿನ್‌ಸ್ಟಿನ್ (David Jon Feinstein) ಅವರು ಕಂಪನಿಯ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ಇವರು ಭಾರತದ ಟೆಸ್ಲಾ ಇವಿ ಮಾರುಕಟ್ಟೆಯನ್ನು ನೋಡಿಕೊಳ್ಳಲಿದ್ದಾರೆ.


   ಎಲೆಕ್ಟ್ರಿಕ ಸ್ಟಾರ್ಟ್‌ಅಪ್ ತಾಣ - ಬೆಂಗಳೂರು

         ಬೆಂಗಳೂರಿನಲ್ಲಿ ಸುಮಾರು 45ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ನವೋದ್ಯಮ(StartUp)ಗಳಿವೆ. ಮಹೇಂದ್ರ ಎಲೆಕ್ನಿಕ್, ಆಥರ್ ಎನರ್ಜಿ, ಆಲ್ಫಾ ವೈಲೆಟ್ ಆಟೋಮೋಟಿವ್‌ನಂತಹ ಹಲವಾರು ನವೋದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಹೆಚ್ಚಿನ ಉದ್ಯಮಗಳು ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲು ಗಮನ ಹರಿಸಿವೆ.

    ಬೆಂಗಳೂರು ನಗರವು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (R & D)ಗಳಿಗೆ ಜಾಗತಿಕ ಮಟ್ಟದಲ್ಲಿ ನೆಲೆಯಾಗಿದೆ. ಐಟಿ & ಇಂಜಿನಿಯರಿಂಗ್ ಪ್ರತಿಭೆಗಳು ಅಪಾರ ಪ್ರಮಾಣದಲ್ಲಿದ್ದಾರೆ. ಜರ್ಮನಿ ಮೂಲದ ಮರ್ಸಿಡೀಸ್ ಬೆಂನ್ಸ್, ಚೀನಾದ ಗ್ರೇಟ್ ವಾಲ್ ಮೋಟಾರ್, ಅಮೆರಿಕಾದ ಜನರಲ್ ಮೋಟಾರ್, ಕಾಂಟಿನೆಂಟಲ್ ಮಹೇಂದ್ರ ಅಂಡ್ ಮಹೇಂದ್ರ ಭಾಷ್, ಡೆಲ್ಲಿ, ಓಲ್ವಾ ಮುಂತಾದ ಕಂಪನಿಗಳು ಆರ್ ಅಂಡ್ ಡಿ ಕೇಂದ್ರಗಳನ್ನು ಹೊಂದಿವೆ.

ಟೆಸ್ಲಾ ಕಂಪನಿಯು ಬೆಂಗಳೂರನ್ನು ಆಯ್ಕೆ ಮಾಡಲು ಕಾರಣ. ಬೆಂಗಳೂರಿನಲ್ಲಿ ಬ್ಯಾಟರಿ ಚಾಲಿತವಾದ ವಾಹನ ತಯಾರಿಸುವ 10ಕ್ಕೂ ಹೆಚ್ಚು ಕಂಪನಿಗಳಿವೆ. ಬೆಂಗಳೂರಿನಲ್ಲಿ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ, ಹುಬ್ಬಳ್ಳಿ-ಧಾರವಾಡದಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ತಯಾರಿಕೆ ಘಟಕಗಳನ್ನು ಒಳಗೊಂಡಂತೆ ಇವಿ ಹಬ್ ಸ್ಥಾಪನೆಗೆ ಕರ್ನಾಟಕವು ಹೆಚ್ಚು ಉತ್ತೇಜನ ನೀಡುತ್ತಿದೆ. ಸ್ಟಾಂಪ್‌ಡ್ಯೂಟಿಗೆ ಪ್ರತಿಶತ 100ರ ವಿನಾಯಿತಿ ನೀಡಿದ್ದು, ಭೂ ಪರಿವರ್ತನೆ ಶುಲ್ಕ ಮರುಪಾವತಿ, ಹೂಡಿಕೆ ಪ್ರಚಾರ ಸಬ್ಸಿಡಿ ಮುಂತಾದ ಸರ್ಕಾರದ ಪ್ರೋತ್ಸಾಹ ಕ್ರಮಗಳಿಂದ ಕಂಪನಿಗಳು ರಾಜ್ಯಕ್ಕೆ ಬರುತ್ತಿವೆ.


ಎಲೆಕ್ಟ್ರಿಕ್ ವಾಹನ ನೀತಿ ರಚಿಸಿದ ದೇಶದ ಮೊದಲ ರಾಜ್ಯ - ಕರ್ನಾಟಕ ಭಾರತದಲ್ಲಿ ಮೊದಲ ಬಾರಿಗೆ 2017 ರಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪ್ರತ್ಯೇಕ ನೀತಿಯನ್ನು ಕರ್ನಾಟಕ ರಾಜ್ಯ ರಚಿಸಿತು. ಭಾರತದ ಎಲೆಕ್ಟ್ರಿಕ್ ವಾಹನಗಳ ತಾಣವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿತ್ತು.

60 ಲಕ್ಷದ ಕಾರುಗಳು - ಭಾರತಕ್ಕೆ ಆಮದು

ಟೆಸ್ಲಾ ಕಂಪನಿಯ ಆರಂಭದಲ್ಲಿ ಕಾರುಗಳನ್ನು ಆಮದು ಮಾಡಿಕೊಳ್ಳಲಿದೆ. ಮಾಡೆಲ್ 3 ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಇವು ಸಂಪೂರ್ಣ ತಯಾರಾದ ಸ್ಥಿತಿಯಲ್ಲಿ ಭಾರತಕ್ಕೆ ಬರಲಿವೆ. ಬೇಡಿಕೆ ನೋಡಿ ಕೊಂಡು ಭಾರತದಲ್ಲೇ ಕಾರುಗಳನ್ನು ಉತ್ಪಾದನೆ ಮಾಡುವ ಸಾಧ್ಯತೆ ಇದೆ. ಮಾಡೆಲ್-3 ಎಸ್ಆರ್ ಹೆಸರಿನ ಟೆಸ್ಲಾ ಹೆಸರಿನ ಕಾರುಗಳು 55 ಲಕ್ಷ ರೂ.ನಿಂದ 60 ಲಕ್ಷ ರೂ. ಬೆಲೆಗೆ ಲಭ್ಯವಾಗಬಹುದು. ಆರಂಭದಲ್ಲಿ 2,500 ಕಾರುಗಳು ಭಾರತಕ್ಕೆ ಆಮದಾಗಲಿವೆ. ಹೀಗಾಗಿ ಬೆಲೆಯು ಗಮನಾರ್ಹವಾಗಿ ಕಡಿತವಾಗಬಹುದು. 2021ರ ಮಧ್ಯದಲ್ಲಿ ದೇಶದಲ್ಲಿ ಟೆಸ್ಲಾ ಕಾರುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.


ಜಗತ್ತಿನಾದ್ಯಂತ ಎಲೆಕ್ನಿಕ್ ಕಾರುಗಳ ಉತ್ಪಾದನೆ, ಗುಣಮಟ್ಟ ಮತ್ತು ಸಂಶೋಧನೆಗೆ ಟೆಸ್ಲಾ ಕಂಪನಿಯು ಹೆಸರುವಾಸಿಯಾಗಿದೆ. ಉದ್ಯಮಿ ಎಲಾನ್ ಮಸ್ ನೇತೃತ್ವದಲ್ಲಿ ಟೆಸ್ಲಾ ಕಂಪನಿಯು - 2003 ರಲ್ಲಿ ಸ್ಥಾಪನೆಯಾಗಿದ್ದು, ಸುಮಾರು 48 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಕಾರುಗಳು Mercedes Benz ಗೆ ಪ್ರತಿಸ್ಪರ್ಧಿಯಾಗಿವೆ. ಟೆಸ್ಲಾ ಕಾರುಗಳನ್ನು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ. ದೂರ ಸಾಗಬಲ್ಲವು. ಎಲಾನ್ ಮಸ್ಕ್ ಅವರು 1971ರ ಜೂನ್ 28 ರಂದು ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು. ಅಲ್ಲಿನ ಕಡ್ಡಾಯ ಮಿಲಿಟರಿ ಸೇವೆ ನಿಯಮದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೆನಡಾಕ್ಕೆ ವಲಸೆ ಹೋದರು. ಕೆನಡಾಕ್ಕೆ ವಲಸೆ ಹೋದರೆ ಅಮೆರಿಕಾದ ವೀಸಾ ಪಡೆಯಲು

ಸುಲಭವಾಗುವುದು ಎಂಬುದು ಕಾರಣವಾಗಿತ್ತು.

ಕಂಪ್ಯೂಟರ್ ಗೇಮಿಂಗ್ ಸ್ಟಾಫ್ಟ್‌ವೇರ್ Blaster ಅಭಿವೃದ್ಧಿ

ಎಲಾನ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಕಂಪ್ಯೂಟರ್ ತಂತ್ರಾಂಶವನ್ನು ರೂಪಿಸುವುದನ್ನು ಕಲಿತು, ತಮ್ಮ 12ನೇ ವಯಸ್ಸಿನಲ್ಲೇ ಬ್ಲಾಸ್ಟಾರ್ ಎಂಬ ಕಂಪ್ಯೂಟರ್ ಗೇಮಿಂಗ್ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಿದರು.


1995 ರಲ್ಲಿ ಸೋದರ ಕಿಂಬಲ್ ಮಸ್ತ್ ಅವರೊಂದಿಗೆ ಸೇರಿ ಝಿಪ್-2 ಕಾರ್ಪೊರೇಷನ್ ಎಂಬ ಕಂಪನಿ ಆರಂಭಿಸಿದರು. 1999 ರಲ್ಲಿ ಕಾಂಪ್ಯಾಕ್ಟ್ ಕಂಪ್ಯೂಟರ್ ಕಾರ್ಪೊರೇಷನ್ ಸಂಸ್ಥೆಯ ಅಂಗಸಂಸ್ಥೆಯೊಂದು ಝಿಪ್-2 ಕಂಪನಿಯನ್ನು ಸುಮಾರು 2,200 ಕೋಟಿ ರೂ.ಗಳಿಗೆ ಖರೀದಿಸಿತು. ಅದೇ ವರ್ಷ ಇಬ್ಬರು ಸೋದರರು ಸೇರಿ X.COM ಎಂಬ ಹಣಕಾಸು ಸೇವಾ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದು Paypal ಎಂದು ಹೆಸರು ಬದಲಿಸಿಕೊಂಡಿತು. 2002 ರಲ್ಲಿ ಆ ಕಂಪನಿಯನ್ನು e-Bay ಕಂಪನಿಯು ಖರೀದಿಸಿತು.


SpaceX: 2002 ರಲ್ಲಿ ತಮ್ಮ 3ನೇ ಕಂಪನಿ ಬಾಹ್ಯಾಕಾಶ ನೌಕೆಗಳನ್ನು ತಯಾರಿಸುವ Space Exploration Technologies Corp. (SpaceX) ಆರಂಭಿಸಿದರು. 2020ರ ಮೇ 30 ರಂದು ಗಗನಯಾತ್ರಿಗಳಾದ ಡ ಹರ್ಲಿ ಮತ್ತು ಬಾಬ್ ಬೆಕ್ನಿಕನ್ ಅವರನ್ನು ಕ್ರೂಡ್ರಾಗನ್ ಸ್ಪೇಸ್ ಕ್ರಾಫ್ಟ್ ಮೂಲಕ ಐಎಸ್‌ಎಸ್‌ಗೆ ಈ ಸಂಸ್ಥೆಯು ಕಳುಹಿಸಿತ್ತು. 2021ರ ಜನವರಿಯಲ್ಲಿ ಎಲಾನ್ ಅವರು ಅಮೆಜಾನ್‌ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಜಗತ್ತಿನ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.


ಇತರ ಸಂಸ್ಥೆಗಳು: ಸೋಲಾರ್ ಸಿಟಿ ಕಾರ್ಪೊರೇಷನ್ ಸಂಸ್ಥೆ (2016) ರಸ್ತೆ ಮೇಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 2017 ರಲ್ಲಿ ಸುರಂಗ ಕೊರೆಯುವ 'ಟಿಬಿಸಿ' ಎಂಬ ಕಂಪನಿಯನ್ನು ಆರಂಭಿಸಿದರು. (2013 ರಲ್ಲಿ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ಘೋಷಣೆ)

No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದ ಪ್ರಮುಖ ಗವರ್ನರ್‌ಗಳು-ಜನರಲ್ ಮತ್ತು ವೈಸ್‌ರಾಯ್

  ಪರಿಚಯ 1600 ರ ಡಿಸೆಂಬರ್ 31 ರಂದು ಈಸ್ಟ್ ಇಂಡಿಯಾ ಕಂಪನಿಯು ರಾಣಿ ಎಲಿಜಬೆತ್ I ರಿಂದ ರಾಯಲ್ ಚಾರ್ಟರ್ ಪಡೆದಾಗ ಭಾರತದ ಮೇಲೆ ಬ್ರಿಟಿಷ್ ಆಡಳಿತವು ಒಂದು ವ್ಯಾಪಾರ ಘಟಕವಾಗಿ ಪ್ರಾರಂಭವಾಯಿತು . ಸುಮಾರು ಮೂರು ಶತಮಾನಗಳ ಅವಧಿಯಲ್ಲಿ , ಬ್ರಿಟಿಷರು ವ್ಯಾಪಾರ ಶಕ್ತಿಯಿಂದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದರು ಜಗತ್ತಿನಲ್ಲಿ . ಸಣ್ಣ ದ್ವೀಪ ದೇಶವಾದ ನಂತರವೂ ಬ್ರಿಟನ್ ವಿಶ್ವದ ಅತಿದೊಡ್ಡ ಸಾಮ್ರಾಜ್ಯಗಳಲ್ಲಿ ಒಂದನ್ನು ಸ್ಥಾಪಿಸಲು ಸಾಧ್ಯವಾಯಿತು .  " ಸೂರ್ಯನು ಎಂದಿಗೂ ಅಸ್ತಮಿಸದ ಸಾಮ್ರಾಜ್ಯ " ಎಂಬ   ಪದಗುಚ್ by ದಿಂದ ಸಾಮ್ರಾಜ್ಯದ ವ್ಯಾಪ್ತಿಯನ್ನು ಚಿತ್ರಿಸಬಹುದು   . ತನ್ನ ವಸಾಹತುಗಳಲ್ಲಿ ಸ್ಥಾಪಿಸಿದ ಬಲವಾದ ಮತ್ತು ಪರಿಣಾಮಕಾರಿ ಅಧಿಕಾರಶಾಹಿಯ ಹಿನ್ನೆಲೆಯಲ್ಲಿ ಬ್ರಿಟನ್ ಈ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು .  ಭಾರತದಲ್ಲಿ , ಗವರ್ನರ್ - ಜನರಲ್ ಮತ್ತು ವೈಸ್ ‌ ರಾಯ್ ‌ ಗಳ ಮೂಲಕ ಬ್ರಿಟಿಷರು ಈ ನಿಯಂತ್ರಣವನ್ನು ಸ್ಥಾಪಿಸಲು ಸಾಧ್ಯವಾಯಿತು . §   ಬಂಗಾಳದ ಗವರ್ನರ್ - ಜನರಲ್ (1773-1833):   ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದಾಗ , ಅದು " ಬಂಗಾಳದ ಗವರ್ನರ್ "  (   ಬಂಗಾಳದ   ಮೊದಲ ಗವರ್ನರ್ : ರಾಬರ್ಟ್ ಕ್ಲೈವ್ )   ಎಂಬ ಹುದ್ದೆ...

Microsoft Word Shortcut Keys: Mastering Document Creation 📝✨

  Creating documents in Microsoft Word can be a seamless and efficient experience if you harness the power of keyboard shortcuts. In this blog post, we will dive into all the essential Microsoft Word shortcut keys, exploring their uses and practical applications. We'll also sprinkle in some helpful emojis, keywords, hashtags, and related article web links to enhance your reading experience. Let's get started! Table of Contents Introduction to Microsoft Word Shortcuts Basic Navigation and Selection Shortcuts Formatting Text and Paragraphs Working with Documents and Files Inserting and Editing Content Miscellaneous Shortcuts Practical Applications and Tips Conclusion 1. Introduction to Microsoft Word Shortcuts 🚀 Microsoft Word is a powerful word processing tool, but navigating through menus and ribbons can be time-consuming. By using keyboard shortcuts, you can speed up your workflow, reduce repetitive strain, and become more efficient in creating and editing documents. 2. Bas...

ಭಾರತದ ನದಿಗಳು, ನಕ್ಷೆ, ಪಟ್ಟಿ, ಹೆಸರು, ಭಾರತದ ಉದ್ದವಾದ ನದಿಗಳು Rivers of India, Map, List, Name, Longest Rivers of India..

  ಭಾರತದ ನದಿಗಳು ಭಾರತದ ಜನರು ಮತ್ತು ಪರಿಸರದ ಜೀವನ ಮತ್ತು ಪರಿಸರದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಭಾರತದ ನದಿಗಳ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ. UPSC, ಮುಖ್ಯಾಂಶಗಳು. ಪರಿವಿಡಿ   ಭಾರತದ ನದಿಗಳು ಭಾರತೀಯ ಜನರ ಜೀವನವು ಭಾರತದ ನದಿಗಳಿಂದ ಗಮನಾರ್ಹವಾಗಿ ಪ್ರಭಾವಿತವಾಗಿದೆ. ಶಕ್ತಿ , ಕೈಗೆಟುಕುವ ಸಾರಿಗೆ , ನೀರಾವರಿ ಮತ್ತು ಕುಡಿಯುವ ನೀರನ್ನು ಒದಗಿಸುವುದರ ಜೊತೆಗೆ , ರಾಷ್ಟ್ರದ ನದಿ ವ್ಯವಸ್ಥೆಗಳು ಹೆಚ್ಚಿನ ಸಂಖ್ಯೆಯ ಜನರ ಜೀವನೋಪಾಯವನ್ನು ಬೆಂಬಲಿಸುತ್ತವೆ. ಭಾರತದ ಪ್ರತಿಯೊಂದು ಪ್ರಮುಖ ನಗರವು ನದಿಯ ಉದ್ದಕ್ಕೂ ಏಕೆ ನೆಲೆಗೊಂಡಿದೆ ಎಂಬುದನ್ನು ಇದು ವಿವರಿಸುತ್ತದೆ. ದೇಶದ ಎಲ್ಲಾ ಹಿಂದೂಗಳು ನದಿಗಳನ್ನು ಪವಿತ್ರವೆಂದು ಪರಿಗಣಿಸುತ್ತಾರೆ ಏಕೆಂದರೆ ಅವು ಹಿಂದೂ ಪುರಾಣಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.   ಭಾರತೀಯ ನದಿ ವ್ಯವಸ್ಥೆಯು ಏಳು ಪ್ರಮುಖ ನದಿಗಳಿಂದ (ಸಿಂಧೂ , ಬ್ರಹ್ಮಪುತ್ರ , ನರ್ಮದಾ , ತಾಪಿ , ಗೋದಾವರಿ , ಕೃಷ್ಣ ಮತ್ತು ಮಹಾನದಿ) ದೊಡ್ಡ ಸಂಖ್ಯೆಯ ಉಪನದಿಗಳನ್ನು ಹೊಂದಿದೆ. ಬಂಗಾಳ ಕೊಲ್ಲಿಯು ಬಹುಪಾಲು ನದಿಗಳಿಂದ ನೀರನ್ನು ಪಡೆಯುತ್ತದೆ. ರಾಷ್ಟ್ರದ ಪಶ್ಚಿಮ ಪ್ರದೇಶದ ಮೂಲಕ ಮತ್ತು ಪೂರ್ವಕ್ಕೆ ಹಿಮಾಚಲ ಪ್ರದೇಶ ರಾಜ್ಯದ ಮೂಲಕ ಹರಿಯುವ ಕೆಲವು ನದಿಗಳು ಅರಬ್ಬಿ ಸಮುದ್ರಕ್ಕೆ ಬಿಡುತ್ತವೆ. ಒಳನಾಡಿನ ಒಳಚರಂಡಿಯನ್ನು ಲಡಾಖ್ , ಉತ್ತರ ಅರಾವಳಿ ಶ್ರೇಣಿ ಮತ್...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.