mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Thursday, 27 May 2021

ಕರ್ನಾಟಕದ ಏಕೀಕರಣ

       ಭಾರತದ ಸ್ವಾತಂತ್ರ್ಯ ಕಾಯ್ದೆ 1947 (Indian Independence Act 1947) ಭಾರತ ಮತ್ತು ಪಾಕಿಸ್ತಾನದ ರಚನೆಯನ್ನು ಮಾಡಿತು. 562 ದೇಶೀಯ ರಾಜ್ಯಗಳಿಗೆ ಭಾರತ ಅಥವಾ ಪಾಕಿಸ್ತಾನವನ್ನುಸೇರುವ ಇಲ್ಲವೇ ಸ್ವತಂತ್ರವಾಗಿರುವ ಆಯ್ಕೆ ನೀಡಿತು. ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಬಭಾಯಿ ಪಟೇಲ್ ಸ್ವತಂತ್ರವಾಗಿರಬಯಸಿದ್ದ ದೇಶೀಯ ರಾಜ್ಯಗಳನ್ನು ಭಾರತದ ಒಕ್ಕೂಟವನ್ನು ಸೇರುವಂತೆ ಮನವೊಲಿಸಿದರು. ವಿಲೀನ ಒಪ್ಪಂದಕ್ಕೆ (Irnstrument of Accesion) ಸಹಿ ಹಾಕಿದ ರಾಜರಿಗೆ ಸರ್ಕಾರವು ನಿಗದಿತ ಮೊತ್ತದ 'ರಾಜಧನವನ್ನು ನೀಡಿತು ಹಾಗು ಕೆಲವು ಸವಲತ್ತುಗಳನ್ನು ಮತ್ತು ಬಿರುದುಗಳನ್ನು ಹೊಂದಿರಲು ಅನುಮತಿಸಿತು. ಹೈದರಾಬಾದ್, ಕಾಶ್ಮೀರ ಹಾಗು ಜೂನಾಗಡದ ರಾಜರು ಭಾರತದ ಒಕ್ಕೂಟವನ್ನು ಸೇರಲು ನಿರಾಕರಿಸಿದರು. ಜೂನಾಗಡದ ನವಾಬ ಪಾಕಿಸ್ತಾನಕ್ಕೆ ಸೇರಲು ಪ್ರಯತ್ನಗಳನ್ನು ನಡೆಸಿದ್ದ ಹಾಗು ಜನರು ಅವನ ವಿರುದ್ಧ ದಂಗೆಯೆದ್ದದ್ದರಿಂದ ನವಾಬ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಸರ್ದಾರ್ ಪಟೇಲರು ಜೂನಾಗಡವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು. ಕಾಶ್ಮೀರದ ರಾಜ ಹರಿಸಿಂಗ್ ಭಾರತದ ಒಕ್ಕೂಟವನ್ನು ಸೇರುವ ನಿರ್ಧಾರವನ್ನು ನಿಧಾನ ಮಾಡುತ್ತಿದ್ದುದರಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ದಾಳಿ ಕೋರರನ್ನು ಕಳುಹಿಸುವ ಅವಕಾಶ ಪಾಕಿಸ್ತಾನಕ್ಕೆ ದೊರೆಯಿತು. ಭಾರತದ ಸೇನೆಯು ಈ ದಾಳಿಕೋರರನ್ನು ಹಿಮ್ಮೆಟ್ಟಿಸಿತು. ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್‌ಫರೆನ್ಸ್‌ನ ನಾಯಕರಾದ ಷೇಕ್ ಅಬ್ದುಲ್ಲಾ ಭಾರತದ ಒಕ್ಕೂಟವನ್ನು ಸೇರಲು ಒಪ್ಪಿದರು. ಆಗಿನಿಂದಲೂ ಪಾಕಿಸ್ತಾನ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಅನೇಕ ಸಲ ಪ್ರಯತ್ನಿಸಿದೆ ಹಾಗು ಕಾಶ್ಮೀರದ ಹಲವು ಭಾಗಗಳನ್ನು ವಶಪಡಿಸಿಕೊಂಡಿದೆ. ಭಾರತದಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಆದು ಈಗ ಭಯೋತ್ಪಾದಕರನ್ನು ಕಳುಹಿಸುತ್ತಿದೆ. ಪೊಲೀಸ್ ಕಾರ್ಯಾಚರಣೆಯ ನಂತರ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸಲಾಯಿತು. ಹೈದರಾಬಾದಿನ ಜನರ ಮೇಲೆ ನಿಜಾಮನ ದಬ್ಬಾಳಿಕೆಯಿಂದಾಗಿ ಈ ಕ್ರಮ ಅನಿವಾರ್ಯ ವಾಯಿತು.


ರಾಜ್ಯಗಳ ಪುನರ್ ಸಂಘಟನೆ:


ಹೈದರಾಬಾದಿನ ವಿಲೀನದ ನಂತರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತೆಲುಗು ಭಾಷೆಯನ್ನು ಮಾತನಾಡುವ ಜನರನ್ನೆಲ್ಲಾ ಒಗ್ಗೂಡಿಸಿ, ಆಂಧ್ರಪ್ರದೇಶವನ್ನು ಸೃಷ್ಟಿಸಲು ಒಪ್ಪಿತು, ಹೊಟ್ಟಿ ಶ್ರೀರಾಮುಲು ಆಂಧ್ರಪ್ರದೇಶದ ರಚನೆಯನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿ 58ನೇ ದಿನದಂದು 1952ರಲ್ಲಿ ಸಾವನ್ನಪ್ಪಿದರು. ಇದು ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿರ್ಮಿಸಿತು. ಈ ಪುಬ್ಧತೆಯು ಭಾಷೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಏಕೀಕರಣವನ್ನು ಬಯಸುತ್ತಿದ್ದ ಇತರೆ ಸಾಂತ್ಯಗಳಿಗೂ ಪರಡಿತು.


ಕನ್ನಡ ಮಾತನಾಡುತ್ತಿದ್ದ ಪ್ರದೇಶಗಳೂ ಏಕೀಕರಣ ಬಯಸುತ್ತಿದ್ದವು. ಆದರೆ ಆ ಪ್ರದೇಶಗಳು ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯಾಡಳಿತ ಹಾಗು ಉಳಿದ ಭಾಗಗಳು ಮೈಸೂರು ರಾಜ್ಯ, ಹೈದರಾಬಾದ್, ಸಾಂಗ್ಲಿ, ಮೀರಜ್, ಜಮಖಂಡಿ, ಸಂಡೂರು, ಸವಣೂರು, ಮುಧೋಳ, ಅಕ್ಕಲ್‌ಕೋಟೆ, ಜತ್ತ, ರಾಮದುರ್ಗ, ಮುಂತಾದ ದೇಶೀಯ ಆಡಳಿತಗಳಲ್ಲಿದ್ದವು.


ಐಕ್ಯತೆಗೆ ಕಾರಣವಾದ ಪ್ರಮುಖ ಅಂಶಗಳು


1. ಸಂಯುಕ್ತ ಕರ್ನಾಟಕ, ವಿಶಾಲ ಕರ್ನಾಟಕ, ಕರ್ನಾಟಕ ವೃತ್ತ ಮುಂತಾದ ವೃತ್ತ ಪತ್ರಿಕೆಗಳು,


2. ಆಲೂರು ವೆಂಕಟರಾಯರ ಪ್ರಸಿದ್ಧ ಕೃತಿ 'ಕರ್ನಾಟಕ ಗತ ವೈಭವ' ಮತ್ತು ಅಂತಹ ಇತರ ಕೃತಿಗಳು. 3. ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ಸಾಹಿತ್ಯ ಪರಿಷತ್, ಮುಂತಾದ ಸಂಘ-ಸಂಸ್ಥೆಗಳು,


4. ಹುಯಿಲಗೋಳ ನಾರಾಯಣರಾಯರ 'ಉದಯವಾಗಲಿ


ನಮ್ಮ ಚೆಲುವ ಕನ್ನಡ ನಾಡು, ಶಾಂತ


ಕವಿಯ 'ರಕ್ಷಿಸು ಕರ್ನಾಟಕ ದೇವಿ', ಕುವೆಂಪುರವರ 'ಜಯ ಭಾರತ ಜನನಿಯ ತನುಜಾತೆ' ಬಿ.ಎಂ.ಶ್ರೀಯವರ 'ಏರಿಸು ಹಾರಿಸು ಕನ್ನಡದ ಬಾವುಟ', ಮಂಗೇಶ ಪೈಯವರ 'ತಾಯೆ ಬಾರ ಮೊಗವ ತೋರ


ಕನ್ನಡಿಗರ ಮಾತೆಯೇ' ಮುಂತಾದ ಕವನಗಳು 5. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಕರ್ನಾಟಕ ಸಭಾ, ಮುಂತಾದವು ಏಕಿಕರಣದ ಕಾರ್ಯವನ್ನು


ಕೈಗೆತ್ತಿಕೊಂಡವು. ಕರ್ನಾಟಕ ಸಭಾ ಮುಂದೆ ಕರ್ನಾಟಕ ಏಕೀಕರಣ ಸಮಿತಿಯಾಯಿತು. ಸಿದ್ದಪ ಕಂಬ್ಳೆ ಇದರ ಪ್ರಥಮ ಅಧ್ಯಕ್ಷರಾಗಿದ್ದರು.


6. ಭಾಷಾಧಾರಿತ ರಾಜ್ಯಗಳ ರಚನೆಯನ್ನು ಗಾಂಧೀಜಿ ಸಹ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಒಪ್ಪಿಕೊಂಡರು. 7. 1928ರ ನೆಹರೂ ಸಮಿತಿ ಕರ್ನಾಟಕದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತ್ತು.


8. ಆಲೂರು ವೆಂಕಟರಾಯರು, ಸಿದ್ದಪ್ಪ ಕಂಬಿ, ಗುದ್ದೆಪ್ಪ ಹಳ್ಳಿಕೇರಿ, ಆರ್.ಎಚ್. ದೇಶಪಾಂಡೆ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಶ್ರೀನಿವಾಸರಾವ್ ಮಂಗಳವೇಡೆ, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ಅಂದಾನಪ್ಪ ದೊಡ್ಡಮೇಟಿ ಮುಂತಾದ ನಾಯಕರ ಪ್ರಯತ್ನಗಳು.


ರಾಜ್ಯಗಳ ಪುನರ್‌ರಚನೆಯ ಪ್ರಶ್ನೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು 'ಧಾರ್‌ ಸಮಿತಿಯನ್ನು ನೇಮಿಸಿತು. ಈ ಸಮಿತಿಯು


ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ತಿರಸ್ಕರಿಸಿತು ಹಾಗು ಇದು ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯುಂಟು ಮಾಡುತ್ತದೆ' ಎಂದು ಅಭಿಪ್ರಾಯಪಟ್ಟಿತು. ಇದರಿಂದ ಜನರು ಅತೃಪ್ತಗೊಂಡರು ಮತ್ತು ಹೋರಾಟಗಳು ಮುಂದುವರೆದವು. 1949ರಲ್ಲಿ ಜೆ.ವಿ.ಪಿ ಸಮಿತಿ'ಯನ್ನು (ಜವಹಾರ್‌ಲಾಲ್ ನೆಹರು, ವಲ್ಲಬಭಾಯಿ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ) ರಚಿಸಲಾಯಿತು. ಈ ಸಮಿತಿಯು ಆಂಧ್ರಪ್ರದೇಶದ ರಚನೆಗೆ ಒಪ್ಪಿಗೆ ಸೂಚಿಸಿತಾದರೂ ಕರ್ನಾಟಕದ ರಚನೆಯನ್ನು ತಿರಸ್ಕರಿಸಿತು. ಆಗ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಅಂದಾನಪ್ಪ ದೊಡ್ಡಮೇಟಿ ಬಾಂಬೆ ಶಾಸನ ಸಭೆಗೆ ರಾಜೀನಾಮೆ ನೀಡಿ, ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಉಪವಾಸವನ್ನು ಆರಂಭಿಸಿದರು. ಅಂತಿಮವಾಗಿ ರಾಜ್ಯಗಳ ಪುನರ್ವಿಂಗಡನಾ ಸಮಿತಿಯನ್ನು 1953ರಲ್ಲಿ ರಚಿಸಲಾಯಿತು. ಈ ಸಮಿತಿಯಲ್ಲಿ ಫಜಲ್ ಆಲಿ ಚೇರಮನ್ನರಾಗಿದ್ದರು ಮತ್ತು ಎಚ್.ಎನ್, ಬಂಜು ಹಾಗು ಕೆ.ಎಂ. ಪಣಿಕ್ಕರ್ ಸದಸ್ಯರಾಗಿದ್ದರು. ಆದ್ದರಿಂದ ಇದನ್ನು 'ಫಜಲ್ ಅಲಿ ಸಮಿತಿ' ಎಂದೂ ಕರೆಯಲಾಗಿದೆ. 1955ರಲ್ಲಿಅದು ವರದಿ ಸಲ್ಲಿಸಿತು. ಈ ಸಮಿತಿಯ ಶಿಫಾರಸ್ಸುಗಳು 1 ನವೆಂಬರ್ 1956ರಂದು ಅನುಷ್ಠಾನಗೊಂಡು ಮನರ್‌ ಸಂಘಟಿತ ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದಿತು. ಇದನ್ನು ಹೊಸ ಮೈಸೂರು ರಾಜ್ಯ ಎಂದು ಕರೆಯಲಾಯಿತು.


ಹಳೆಯ ಮೈಸೂರು ರಾಜ್ಯ, ಹೈದರಾಬಾದ್ ಪ್ರಾಂತ್ಯದಿಂದ ರಾಯಚೂರು, ಬೀದರ್‌ ಮತ್ತು ಗುಲ್ಬರ್ಗಾ ಜಿಲ್ಲೆಗಳು, ಬಾಂಬೆ ಪ್ರಾಂತ್ಯದಿಂದ ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗು ಮದ್ರಾಸ್ ಪ್ರಾಂತ್ಯದಿಂದ ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಕೊಳ್ಳೇಗಾಲ ಹಾಗು ಕೊಡಗುಗಳನ್ನು ಒಗ್ಗೂಡಿಸಿ 1 ನವೆಂಬರ್ 1956ರಂದು ಏಕೀಕೃತ ನವ ಮೈಸೂರು ರಾಜ್ಯ ರಚಿಸಲ್ಪಟ್ಟಿತು. ಇದರಲ್ಲಿ 19ಜಿಲ್ಲೆಗಳಿದ್ದವು, ಎಸ್. ನಿಜಲಿಂಗಪ್ಪನವರು ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. 1 ನವೆಂಬರ್ 1973ರಂದು ಇದು ಕರ್ನಾಟಕ ಎಂದು ಮರು ನಾಮಕರಣಗೊಂಡಿತು. ಆಗ ದೇವರಾಜ ಅರಸ್ ಮುಖ್ಯಮಂತ್ರಿಯಾಗಿದ್ದರು.

ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು https://www.mahitiloka.co.in/2021/05/blog-post_26.html ಮೈಸೂರು ಒಂದು ಮಾದರಿ ರಾಜ್ಯ https://www.mahitiloka.co.in/2021/05/blog-post_38.html 

 ಭೂಮಿ ನಮ್ಮ ಜೀವಂತ ಗ್ರಹ https://www.mahitiloka.co.in/2021/05/blog-post_37.html

ರಾಷ್ಟ್ರಕೂಟರು https://www.mahitiloka.co.in/2021/05/blog-post_48.html 

 ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು https://www.mahitiloka.co.in/2021/05/blog-post_91.html

📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು 📌https://www.mahitiloka.co.in/2021/05/blog-post_20.html 

 ➡ ಕೃಷಿ ವಿಧಗಳು 👉https://tinyurl.com/yf9437kz 

 ➡ ವಾಯುಮಂಡಲದ ರಚನೆ 👉https://tinyurl.com/yj8wkk36 

 ➡ ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು 👉https://tinyurl.com/yj4rzwog 



 ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ 🙏🙏🙏🙏🙏🙏🙏🙏🙏🙏🙏🙏🙏 




No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

The President of India (Articles 52-62 ) ಭಾರತದ ರಾಷ್ಟ್ರಪತಿ (ಲೇಖನಗಳು 52-62)

ಭಾರತದ ರಾಷ್ಟ್ರಪತಿಅಧ್ಯಾಯ I ( ಕಾರ್ಯನಿರ್ವಾಹಕ) ಅಡಿಯಲ್ಲಿ ಸಂವಿಧಾನದ ಭಾಗ V ( ದಿ ಯೂನಿಯನ್) ಭಾರತದ ರಾಷ್ಟ್ರಪತಿಗಳ ಅರ್ಹತೆ , ಚುನಾವಣೆ ಮತ್ತು ದೋಷಾರೋಪಣೆಯನ್ನು ಪಟ್ಟಿ ಮಾಡುತ್ತದೆ.   ಭಾರತದ ಅಧ್ಯಕ್ಷರು ಭಾರತ    ಗಣರಾಜ್ಯದ ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ. ಅಧ್ಯಕ್ಷರು ಭಾರತದ ಕಾರ್ಯಾಂಗ , ಶಾಸಕಾಂಗ ಮತ್ತು ನ್ಯಾಯಾಂಗದ ಔಪಚಾರಿಕ ಮುಖ್ಯಸ್ಥರಾಗಿದ್ದಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಕೂಡ ಆಗಿದ್ದಾರೆ.   ಭಾರತದ ಸಂವಿಧಾನದ 53 ನೇ ವಿಧಿಯು ಅಧ್ಯಕ್ಷರು ತಮ್ಮ ಅಧಿಕಾರವನ್ನು ನೇರವಾಗಿ ಅಥವಾ ಅಧೀನ ಅಧಿಕಾರದಿಂದ ಚಲಾಯಿಸಬಹುದು ಎಂದು ಹೇಳುತ್ತದೆಯಾದರೂ , ಕೆಲವು ವಿನಾಯಿತಿಗಳೊಂದಿಗೆ , ಅಧ್ಯಕ್ಷರಿಗೆ ವಹಿಸಲಾದ ಎಲ್ಲಾ ಕಾರ್ಯಕಾರಿ ಅಧಿಕಾರವನ್ನು ಪ್ರಾಯೋಗಿಕವಾಗಿ , ಮಂತ್ರಿಗಳ ಮಂಡಳಿ ( CoM) ನಿರ್ವಹಿಸುತ್ತದೆ. )   ಪರಿವಿಡಿ ಭಾಗ V ಒಕ್ಕೂಟ ಅಧ್ಯಾಯ I ಕಾರ್ಯನಿರ್ವಾಹಕ ವಿಧಿ 52 : ಭಾರತದ ರಾಷ್ಟ್ರಪತಿ ಲೇಖನ 53 : ಒಕ್ಕೂಟದ ಕಾರ್ಯನಿರ್ವಾಹಕ ಅಧಿಕಾರ ವಿಧಿ 54: ಅಧ್ಯಕ್ಷರ ಆಯ್ಕೆ ವಿಧಿ 55: ಅಧ್ಯಕ್ಷರ ಆಯ್ಕೆಯ ವಿಧಾನ ವಿಧಿ 56 : ಅಧ್ಯಕ್ಷರ ಅಧಿಕಾರದ ಅವಧಿ ಅನುಚ್ಛೇದ 57 : ಮರು ಚುನಾವಣೆಗೆ ಅರ್ಹತೆ ವಿಧಿ 58 : ಅಧ್ಯಕ್ಷರಾಗಿ ಆಯ್ಕೆ ಮಾಡಲು ಅರ್ಹತೆಗಳು ಆರ್ಟಿಕಲ್ 59 : ಅಧ್ಯಕ್ಷರ ಕಚೇರಿಯ ಷರತ್ತುಗಳು ಅನುಚ್ಛೇದ 60 : ಅಧ್ಯ...

ವಿಶ್ವ ಜನಸಂಖ್ಯಾ ದಿನ 2023: ದಿನ, ದಿನಾಂಕ, ಥೀಮ್ ಮತ್ತು ಮಹತ್ವ

    ಹೆಚ್ಚುತ್ತಿರುವ ವಿಶ್ವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳು ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜನಸಂಖ್ಯಾ ದಿನ 2023 ಅನ್ನು ವಾರ್ಷಿಕವಾಗಿ ಜುಲೈ 11 ರಂದು ಸ್ಮರಿಸಲಾಗುತ್ತದೆ.   ವಿಶ್ವ ಜನಸಂಖ್ಯಾ ದಿನ , ಅದರ ಥೀಮ್ ಮತ್ತು ಸಂಗತಿಗಳ ಬಗ್ಗೆ ಎಲ್ಲವನ್ನೂ ಓದಿ.     ವಿಶ್ವ ಜನಸಂಖ್ಯಾ ದಿನ ಪ್ರತಿ ವರ್ಷ ಜುಲೈ 11 ರಂದು , ಪ್ರಪಂಚದಾದ್ಯಂತದ ಜನರು ಜನಸಂಖ್ಯೆಯ ಬೆಳವಣಿಗೆಯ ಸಮಸ್ಯೆಗಳು ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುತ್ತಾರೆ  .  ಈ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಜಗತ್ತಿನಲ್ಲಿರುವ ಪ್ರತಿಯೊಬ್ಬರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಇದು ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.   ವಿಶ್ವ ಜನಸಂಖ್ಯಾ ದಿನದ ಗುರಿಯು ಜ್ಞಾನವನ್ನು ಹೆಚ್ಚಿಸುವುದು ಮತ್ತು ಜನಸಂಖ್ಯೆಯ ಬೆಳವಣಿಗೆಯ ಪರಿಣಾಮಗಳನ್ನು ಪರಿಹರಿಸಲು ಗುಂಪು ಚಟುವಟಿಕೆಗಳನ್ನು ಉತ್ತೇಜಿಸುವುದು. ಜುಲೈ 2023 ರಲ್ಲಿ ಪ್ರಮುಖ ದಿನಗಳು ವಿಶ್ವ ಜನಸಂಖ್ಯಾ ದಿನದ ಅರ್ಥ ಈ ದಿನವು ಲಿಂಗ ಸಮಾನತೆ , ಕುಟುಂಬ ಯೋಜನೆ , ಸಂತಾನೋತ್ಪತ್ತಿ ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಂಭಾಷಣೆಗಳನ್ನು ಉತ್ತೇಜಿಸುತ್ತದೆ.   ಇದು ನೈತಿಕ ಜನಸಂಖ್ಯೆ ನಿಯಂತ್ರಣ ಮತ್ತು ಆರೋಗ್ಯ ಮತ್ತು ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವ...

ಭಾರತದಲ್ಲಿ ಆರ್ಥಿಕ ಉದಾರೀಕರಣ, ಪರಿಕಲ್ಪನೆ, ಉದ್ದೇಶ, ಪರಿಣಾಮಗಳು

ಭಾರತದಲ್ಲಿನ ಆರ್ಥಿಕ ಉದಾರೀಕರಣವು ಬೆಳವಣಿಗೆಯನ್ನು ಉತ್ತೇಜಿಸಲು , ಹೂಡಿಕೆಗಳನ್ನು ಆಕರ್ಷಿಸಲು ಮತ್ತು ದೇಶದ ಉದ್ಯಮಶೀಲತಾ ಮನೋಭಾವವನ್ನು ಹೊರಹಾಕಲು ವೇದಿಕೆಯನ್ನು ಸ್ಥಾಪಿಸಿತು.   ಆರ್ಥಿಕ ಉದಾರೀಕರಣದ ಪರಿಕಲ್ಪನೆಯನ್ನು ಇಲ್ಲಿ ತಿಳಿಯಿರಿ.   ಭಾರತದಲ್ಲಿ ಆರ್ಥಿಕ ಉದಾರೀಕರಣ ಭಾರತದ ಆರ್ಥಿಕ ಅಭಿವೃದ್ಧಿಯ ಇತಿಹಾಸದಲ್ಲಿ , ಆರ್ಥಿಕ ಉದಾರೀಕರಣದ ಪ್ರಾರಂಭದೊಂದಿಗೆ ಮಹತ್ವದ ತಿರುವು ಬಂದಿತು.   ಈ ಪರಿವರ್ತಕ ಯುಗವು ಹಿಂದಿನ ಕಾಲದಿಂದ ನಿರ್ಗಮನವನ್ನು ಗುರುತಿಸಿತು ಮತ್ತು ದೇಶದ ಆರ್ಥಿಕ ಭೂದೃಶ್ಯವನ್ನು ಮರುರೂಪಿಸುವ ಗುರಿಯನ್ನು ಹೊಂದಿರುವ ಸುಧಾರಣೆಗಳ ಸರಣಿಯನ್ನು ತಂದಿತು.   ಹೊಸ ನೀತಿಗಳು ಮತ್ತು ಕ್ರಮಗಳ ಅಳವಡಿಕೆಯೊಂದಿಗೆ , ಭಾರತವು ಮುಕ್ತತೆ , ಅನಿಯಂತ್ರಣ ಮತ್ತು ಜಾಗತಿಕ ಆರ್ಥಿಕತೆಯೊಂದಿಗೆ ಏಕೀಕರಣದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸಿತು.   ಭಾರತದಲ್ಲಿ ಆರ್ಥಿಕ ಉದಾರೀಕರಣದ ಯುಗವು ಆಳವಾದ ಬದಲಾವಣೆಗಳಿಗೆ , ಬೆಳವಣಿಗೆಯನ್ನು ಉತ್ತೇಜಿಸಲು , ಹೂಡಿಕೆಗಳನ್ನು ಆಕರ್ಷಿಸಲು ಮತ್ತು ದೇಶದ ಉದ್ಯಮಶೀಲತಾ ಮನೋಭಾವವನ್ನು ಹೊರಹಾಕಲು ವೇದಿಕೆಯನ್ನು ಸ್ಥಾಪಿಸಿತು. ಇದರ ಬಗ್ಗೆ ಓದಿ:   ಭಾರತದಲ್ಲಿ LPG ಸುಧಾರಣೆಗಳು ಉದಾರೀಕರಣದ ಪರಿಕಲ್ಪನೆ ಉದಾರೀಕರಣದ ಪರಿಕಲ್ಪನೆಯು ಆರ್ಥಿಕತೆಯ ವಿವಿಧ ವಲಯಗಳಲ್ಲಿನ ಸರ್ಕಾರದ ನಿಯಮಗಳು ಮತ್ತು ನಿರ್ಬಂಧಗಳ ಸಡಿಲಿಕೆಯನ್ನು ಸೂಚಿಸುತ್ತದೆ.   ಇದು ವ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.