mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Thursday, 27 May 2021

ಕರ್ನಾಟಕದ ಏಕೀಕರಣ

       ಭಾರತದ ಸ್ವಾತಂತ್ರ್ಯ ಕಾಯ್ದೆ 1947 (Indian Independence Act 1947) ಭಾರತ ಮತ್ತು ಪಾಕಿಸ್ತಾನದ ರಚನೆಯನ್ನು ಮಾಡಿತು. 562 ದೇಶೀಯ ರಾಜ್ಯಗಳಿಗೆ ಭಾರತ ಅಥವಾ ಪಾಕಿಸ್ತಾನವನ್ನುಸೇರುವ ಇಲ್ಲವೇ ಸ್ವತಂತ್ರವಾಗಿರುವ ಆಯ್ಕೆ ನೀಡಿತು. ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಬಭಾಯಿ ಪಟೇಲ್ ಸ್ವತಂತ್ರವಾಗಿರಬಯಸಿದ್ದ ದೇಶೀಯ ರಾಜ್ಯಗಳನ್ನು ಭಾರತದ ಒಕ್ಕೂಟವನ್ನು ಸೇರುವಂತೆ ಮನವೊಲಿಸಿದರು. ವಿಲೀನ ಒಪ್ಪಂದಕ್ಕೆ (Irnstrument of Accesion) ಸಹಿ ಹಾಕಿದ ರಾಜರಿಗೆ ಸರ್ಕಾರವು ನಿಗದಿತ ಮೊತ್ತದ 'ರಾಜಧನವನ್ನು ನೀಡಿತು ಹಾಗು ಕೆಲವು ಸವಲತ್ತುಗಳನ್ನು ಮತ್ತು ಬಿರುದುಗಳನ್ನು ಹೊಂದಿರಲು ಅನುಮತಿಸಿತು. ಹೈದರಾಬಾದ್, ಕಾಶ್ಮೀರ ಹಾಗು ಜೂನಾಗಡದ ರಾಜರು ಭಾರತದ ಒಕ್ಕೂಟವನ್ನು ಸೇರಲು ನಿರಾಕರಿಸಿದರು. ಜೂನಾಗಡದ ನವಾಬ ಪಾಕಿಸ್ತಾನಕ್ಕೆ ಸೇರಲು ಪ್ರಯತ್ನಗಳನ್ನು ನಡೆಸಿದ್ದ ಹಾಗು ಜನರು ಅವನ ವಿರುದ್ಧ ದಂಗೆಯೆದ್ದದ್ದರಿಂದ ನವಾಬ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಸರ್ದಾರ್ ಪಟೇಲರು ಜೂನಾಗಡವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು. ಕಾಶ್ಮೀರದ ರಾಜ ಹರಿಸಿಂಗ್ ಭಾರತದ ಒಕ್ಕೂಟವನ್ನು ಸೇರುವ ನಿರ್ಧಾರವನ್ನು ನಿಧಾನ ಮಾಡುತ್ತಿದ್ದುದರಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ದಾಳಿ ಕೋರರನ್ನು ಕಳುಹಿಸುವ ಅವಕಾಶ ಪಾಕಿಸ್ತಾನಕ್ಕೆ ದೊರೆಯಿತು. ಭಾರತದ ಸೇನೆಯು ಈ ದಾಳಿಕೋರರನ್ನು ಹಿಮ್ಮೆಟ್ಟಿಸಿತು. ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್‌ಫರೆನ್ಸ್‌ನ ನಾಯಕರಾದ ಷೇಕ್ ಅಬ್ದುಲ್ಲಾ ಭಾರತದ ಒಕ್ಕೂಟವನ್ನು ಸೇರಲು ಒಪ್ಪಿದರು. ಆಗಿನಿಂದಲೂ ಪಾಕಿಸ್ತಾನ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಅನೇಕ ಸಲ ಪ್ರಯತ್ನಿಸಿದೆ ಹಾಗು ಕಾಶ್ಮೀರದ ಹಲವು ಭಾಗಗಳನ್ನು ವಶಪಡಿಸಿಕೊಂಡಿದೆ. ಭಾರತದಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಆದು ಈಗ ಭಯೋತ್ಪಾದಕರನ್ನು ಕಳುಹಿಸುತ್ತಿದೆ. ಪೊಲೀಸ್ ಕಾರ್ಯಾಚರಣೆಯ ನಂತರ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸಲಾಯಿತು. ಹೈದರಾಬಾದಿನ ಜನರ ಮೇಲೆ ನಿಜಾಮನ ದಬ್ಬಾಳಿಕೆಯಿಂದಾಗಿ ಈ ಕ್ರಮ ಅನಿವಾರ್ಯ ವಾಯಿತು.


ರಾಜ್ಯಗಳ ಪುನರ್ ಸಂಘಟನೆ:


ಹೈದರಾಬಾದಿನ ವಿಲೀನದ ನಂತರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತೆಲುಗು ಭಾಷೆಯನ್ನು ಮಾತನಾಡುವ ಜನರನ್ನೆಲ್ಲಾ ಒಗ್ಗೂಡಿಸಿ, ಆಂಧ್ರಪ್ರದೇಶವನ್ನು ಸೃಷ್ಟಿಸಲು ಒಪ್ಪಿತು, ಹೊಟ್ಟಿ ಶ್ರೀರಾಮುಲು ಆಂಧ್ರಪ್ರದೇಶದ ರಚನೆಯನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿ 58ನೇ ದಿನದಂದು 1952ರಲ್ಲಿ ಸಾವನ್ನಪ್ಪಿದರು. ಇದು ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿರ್ಮಿಸಿತು. ಈ ಪುಬ್ಧತೆಯು ಭಾಷೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಏಕೀಕರಣವನ್ನು ಬಯಸುತ್ತಿದ್ದ ಇತರೆ ಸಾಂತ್ಯಗಳಿಗೂ ಪರಡಿತು.


ಕನ್ನಡ ಮಾತನಾಡುತ್ತಿದ್ದ ಪ್ರದೇಶಗಳೂ ಏಕೀಕರಣ ಬಯಸುತ್ತಿದ್ದವು. ಆದರೆ ಆ ಪ್ರದೇಶಗಳು ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯಾಡಳಿತ ಹಾಗು ಉಳಿದ ಭಾಗಗಳು ಮೈಸೂರು ರಾಜ್ಯ, ಹೈದರಾಬಾದ್, ಸಾಂಗ್ಲಿ, ಮೀರಜ್, ಜಮಖಂಡಿ, ಸಂಡೂರು, ಸವಣೂರು, ಮುಧೋಳ, ಅಕ್ಕಲ್‌ಕೋಟೆ, ಜತ್ತ, ರಾಮದುರ್ಗ, ಮುಂತಾದ ದೇಶೀಯ ಆಡಳಿತಗಳಲ್ಲಿದ್ದವು.


ಐಕ್ಯತೆಗೆ ಕಾರಣವಾದ ಪ್ರಮುಖ ಅಂಶಗಳು


1. ಸಂಯುಕ್ತ ಕರ್ನಾಟಕ, ವಿಶಾಲ ಕರ್ನಾಟಕ, ಕರ್ನಾಟಕ ವೃತ್ತ ಮುಂತಾದ ವೃತ್ತ ಪತ್ರಿಕೆಗಳು,


2. ಆಲೂರು ವೆಂಕಟರಾಯರ ಪ್ರಸಿದ್ಧ ಕೃತಿ 'ಕರ್ನಾಟಕ ಗತ ವೈಭವ' ಮತ್ತು ಅಂತಹ ಇತರ ಕೃತಿಗಳು. 3. ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ಸಾಹಿತ್ಯ ಪರಿಷತ್, ಮುಂತಾದ ಸಂಘ-ಸಂಸ್ಥೆಗಳು,


4. ಹುಯಿಲಗೋಳ ನಾರಾಯಣರಾಯರ 'ಉದಯವಾಗಲಿ


ನಮ್ಮ ಚೆಲುವ ಕನ್ನಡ ನಾಡು, ಶಾಂತ


ಕವಿಯ 'ರಕ್ಷಿಸು ಕರ್ನಾಟಕ ದೇವಿ', ಕುವೆಂಪುರವರ 'ಜಯ ಭಾರತ ಜನನಿಯ ತನುಜಾತೆ' ಬಿ.ಎಂ.ಶ್ರೀಯವರ 'ಏರಿಸು ಹಾರಿಸು ಕನ್ನಡದ ಬಾವುಟ', ಮಂಗೇಶ ಪೈಯವರ 'ತಾಯೆ ಬಾರ ಮೊಗವ ತೋರ


ಕನ್ನಡಿಗರ ಮಾತೆಯೇ' ಮುಂತಾದ ಕವನಗಳು 5. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಕರ್ನಾಟಕ ಸಭಾ, ಮುಂತಾದವು ಏಕಿಕರಣದ ಕಾರ್ಯವನ್ನು


ಕೈಗೆತ್ತಿಕೊಂಡವು. ಕರ್ನಾಟಕ ಸಭಾ ಮುಂದೆ ಕರ್ನಾಟಕ ಏಕೀಕರಣ ಸಮಿತಿಯಾಯಿತು. ಸಿದ್ದಪ ಕಂಬ್ಳೆ ಇದರ ಪ್ರಥಮ ಅಧ್ಯಕ್ಷರಾಗಿದ್ದರು.


6. ಭಾಷಾಧಾರಿತ ರಾಜ್ಯಗಳ ರಚನೆಯನ್ನು ಗಾಂಧೀಜಿ ಸಹ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಒಪ್ಪಿಕೊಂಡರು. 7. 1928ರ ನೆಹರೂ ಸಮಿತಿ ಕರ್ನಾಟಕದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತ್ತು.


8. ಆಲೂರು ವೆಂಕಟರಾಯರು, ಸಿದ್ದಪ್ಪ ಕಂಬಿ, ಗುದ್ದೆಪ್ಪ ಹಳ್ಳಿಕೇರಿ, ಆರ್.ಎಚ್. ದೇಶಪಾಂಡೆ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಶ್ರೀನಿವಾಸರಾವ್ ಮಂಗಳವೇಡೆ, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ಅಂದಾನಪ್ಪ ದೊಡ್ಡಮೇಟಿ ಮುಂತಾದ ನಾಯಕರ ಪ್ರಯತ್ನಗಳು.


ರಾಜ್ಯಗಳ ಪುನರ್‌ರಚನೆಯ ಪ್ರಶ್ನೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು 'ಧಾರ್‌ ಸಮಿತಿಯನ್ನು ನೇಮಿಸಿತು. ಈ ಸಮಿತಿಯು


ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ತಿರಸ್ಕರಿಸಿತು ಹಾಗು ಇದು ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯುಂಟು ಮಾಡುತ್ತದೆ' ಎಂದು ಅಭಿಪ್ರಾಯಪಟ್ಟಿತು. ಇದರಿಂದ ಜನರು ಅತೃಪ್ತಗೊಂಡರು ಮತ್ತು ಹೋರಾಟಗಳು ಮುಂದುವರೆದವು. 1949ರಲ್ಲಿ ಜೆ.ವಿ.ಪಿ ಸಮಿತಿ'ಯನ್ನು (ಜವಹಾರ್‌ಲಾಲ್ ನೆಹರು, ವಲ್ಲಬಭಾಯಿ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ) ರಚಿಸಲಾಯಿತು. ಈ ಸಮಿತಿಯು ಆಂಧ್ರಪ್ರದೇಶದ ರಚನೆಗೆ ಒಪ್ಪಿಗೆ ಸೂಚಿಸಿತಾದರೂ ಕರ್ನಾಟಕದ ರಚನೆಯನ್ನು ತಿರಸ್ಕರಿಸಿತು. ಆಗ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಅಂದಾನಪ್ಪ ದೊಡ್ಡಮೇಟಿ ಬಾಂಬೆ ಶಾಸನ ಸಭೆಗೆ ರಾಜೀನಾಮೆ ನೀಡಿ, ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಉಪವಾಸವನ್ನು ಆರಂಭಿಸಿದರು. ಅಂತಿಮವಾಗಿ ರಾಜ್ಯಗಳ ಪುನರ್ವಿಂಗಡನಾ ಸಮಿತಿಯನ್ನು 1953ರಲ್ಲಿ ರಚಿಸಲಾಯಿತು. ಈ ಸಮಿತಿಯಲ್ಲಿ ಫಜಲ್ ಆಲಿ ಚೇರಮನ್ನರಾಗಿದ್ದರು ಮತ್ತು ಎಚ್.ಎನ್, ಬಂಜು ಹಾಗು ಕೆ.ಎಂ. ಪಣಿಕ್ಕರ್ ಸದಸ್ಯರಾಗಿದ್ದರು. ಆದ್ದರಿಂದ ಇದನ್ನು 'ಫಜಲ್ ಅಲಿ ಸಮಿತಿ' ಎಂದೂ ಕರೆಯಲಾಗಿದೆ. 1955ರಲ್ಲಿಅದು ವರದಿ ಸಲ್ಲಿಸಿತು. ಈ ಸಮಿತಿಯ ಶಿಫಾರಸ್ಸುಗಳು 1 ನವೆಂಬರ್ 1956ರಂದು ಅನುಷ್ಠಾನಗೊಂಡು ಮನರ್‌ ಸಂಘಟಿತ ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದಿತು. ಇದನ್ನು ಹೊಸ ಮೈಸೂರು ರಾಜ್ಯ ಎಂದು ಕರೆಯಲಾಯಿತು.


ಹಳೆಯ ಮೈಸೂರು ರಾಜ್ಯ, ಹೈದರಾಬಾದ್ ಪ್ರಾಂತ್ಯದಿಂದ ರಾಯಚೂರು, ಬೀದರ್‌ ಮತ್ತು ಗುಲ್ಬರ್ಗಾ ಜಿಲ್ಲೆಗಳು, ಬಾಂಬೆ ಪ್ರಾಂತ್ಯದಿಂದ ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗು ಮದ್ರಾಸ್ ಪ್ರಾಂತ್ಯದಿಂದ ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಕೊಳ್ಳೇಗಾಲ ಹಾಗು ಕೊಡಗುಗಳನ್ನು ಒಗ್ಗೂಡಿಸಿ 1 ನವೆಂಬರ್ 1956ರಂದು ಏಕೀಕೃತ ನವ ಮೈಸೂರು ರಾಜ್ಯ ರಚಿಸಲ್ಪಟ್ಟಿತು. ಇದರಲ್ಲಿ 19ಜಿಲ್ಲೆಗಳಿದ್ದವು, ಎಸ್. ನಿಜಲಿಂಗಪ್ಪನವರು ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. 1 ನವೆಂಬರ್ 1973ರಂದು ಇದು ಕರ್ನಾಟಕ ಎಂದು ಮರು ನಾಮಕರಣಗೊಂಡಿತು. ಆಗ ದೇವರಾಜ ಅರಸ್ ಮುಖ್ಯಮಂತ್ರಿಯಾಗಿದ್ದರು.

ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು https://www.mahitiloka.co.in/2021/05/blog-post_26.html ಮೈಸೂರು ಒಂದು ಮಾದರಿ ರಾಜ್ಯ https://www.mahitiloka.co.in/2021/05/blog-post_38.html 

 ಭೂಮಿ ನಮ್ಮ ಜೀವಂತ ಗ್ರಹ https://www.mahitiloka.co.in/2021/05/blog-post_37.html

ರಾಷ್ಟ್ರಕೂಟರು https://www.mahitiloka.co.in/2021/05/blog-post_48.html 

 ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು https://www.mahitiloka.co.in/2021/05/blog-post_91.html

📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು 📌https://www.mahitiloka.co.in/2021/05/blog-post_20.html 

 ➡ ಕೃಷಿ ವಿಧಗಳು 👉https://tinyurl.com/yf9437kz 

 ➡ ವಾಯುಮಂಡಲದ ರಚನೆ 👉https://tinyurl.com/yj8wkk36 

 ➡ ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು 👉https://tinyurl.com/yj4rzwog 



 ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ 🙏🙏🙏🙏🙏🙏🙏🙏🙏🙏🙏🙏🙏 




No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

Kanchanjunga Express accident

WhatsApp Group Join Now degreetech Join Now The investigation by the Commissioner of Railway Safety (CRS) into the accident involving the Kanchanjunga Express and a goods train on June 17 in West Bengal’s Darjeeling district, which resulted in 10 fatalities, has been completed, and a final report is awaited. Officials have confirmed that three railway employees—the superintendent of Rangapani Station, the signal technician for the Rangapani-Chattarhat section, and the guard of the goods train that collided with the Kanchanjunga Express—have been suspended. The accident occurred at 8:55 a.m. on June 17, between the Rangapani and Chattarhat stations of the Katihar Division of the Northeast Frontier Railway. A high-speed, container-carrying goods train collided with the Kanchanjunga Express on the same track, causing the derailment of four rear coaches of the passenger train and five wagons of the goods train. Concerns were raised re...

ಭಾರತದ ಕೇಂದ್ರಾಡಳಿತ ಪ್ರದೇಶಗಳು, ಪಟ್ಟಿ, ನಕ್ಷೆ, ಹೆಸರುಗಳು, ರಾಜಧಾನಿ, 8 UTಗಳ ಪ್ರದೇಶ

  ಭಾರತದ ಕೇಂದ್ರಾಡಳಿತ ಪ್ರದೇಶಗಳು: ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಪಟ್ಟಿಯನ್ನು ಹುಡುಕಿ. ಗಾತ್ರದ ದೃಷ್ಟಿಯಿಂದ ಲಡಾಖ್ ಭಾರತದ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶವಾಗಿದೆ. ಭಾರತದ 8 ಯುಟಿಗಳು. ಪರಿವಿಡಿ ಭಾರತದ ಕೇಂದ್ರಾಡಳಿತ ಪ್ರದೇಶಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು:  ಭಾರತವು ಪ್ರಜಾಪ್ರಭುತ್ವ, ಸಮಾಜವಾದಿ, ಜಾತ್ಯತೀತ ಮತ್ತು ಗಣರಾಜ್ಯ ಶೈಲಿಯ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಜ್ಯಗಳ ಒಕ್ಕೂಟವಾಗಿದೆ. ಭಾರತದಲ್ಲಿ, ಕೇಂದ್ರಾಡಳಿತ ಪ್ರದೇಶ ಎಂದು ಕರೆಯಲ್ಪಡುವ ಒಂದು ರೀತಿಯ ಆಡಳಿತ ವಿಭಾಗವು ನೇರವಾಗಿ ಕೇಂದ್ರ ಸರ್ಕಾರದಿಂದ (ಕೇಂದ್ರ ಸರ್ಕಾರ) ಆಡಳಿತ ನಡೆಸುತ್ತದೆ. ಆದ್ದರಿಂದ ಇದನ್ನು "ಕೇಂದ್ರಾಡಳಿತ ಪ್ರದೇಶ" ಎಂದು ಕರೆಯಲಾಗುತ್ತದೆ. ಸಂವಿಧಾನದ ಪ್ರಕಾರ ಅಧ್ಯಕ್ಷರು ಒಕ್ಕೂಟದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದಾರೆ. ಅಧ್ಯಕ್ಷರು ಅವರು ಅಥವಾ ಅವಳು ಗೊತ್ತುಪಡಿಸಿದ ನಿರ್ವಾಹಕರ ಮೂಲಕ ಕೇಂದ್ರಾಡಳಿತ ಪ್ರದೇಶಗಳನ್ನು ನೋಡಿಕೊಳ್ಳುತ್ತಾರೆ. ಅವುಗಳ ಮೂಲ ಮತ್ತು ವಿಕಾಸದ ಕಾರಣದಿಂದಾಗಿ, ಭಾರತದ ಕೇಂದ್ರಾಡಳಿತ ಪ್ರದೇಶಗಳು ಅನನ್ಯ ಹಕ್ಕುಗಳು ಮತ್ತು ಸ್ಥಾನಮಾನವನ್ನು ಹೊಂದಿವೆ. ಸ್ಥಳೀಯ ಸಂಸ್ಕೃತಿಗಳ ಹಕ್ಕುಗಳನ್ನು ರಕ್ಷಿಸಲು, ಆಡಳಿತದ ಸಮಸ್ಯೆಗಳ ಮೇಲೆ ರಾಜಕೀಯ ಅಶಾಂತಿಯನ್ನು ತಡೆಗಟ್ಟಲು ಮತ್ತು ಇತರ ಕಾರಣಗಳಿಗಾಗಿ ಭಾರತೀಯ ಉಪವಿಭಾಗಕ್ಕೆ "ಕೇಂ...

ಭಾರತದ ಹಣಕಾಸು ಮಂತ್ರಿಗಳು 2023, ಪಟ್ಟಿ, ಹೆಸರುಗಳು, ಸಾಧನೆಗಳು

ಭಾರತದ ಹಣಕಾಸು ಮಂತ್ರಿಗಳು: ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಭಾರತದ ಹಣಕಾಸು ಮಂತ್ರಿಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ. ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತ ಭಾರತದ ಹಣಕಾಸು ಸಚಿವರಾಗಿದ್ದಾರೆ. UPSC ಗಾಗಿ ಹಣಕಾಸು ಮಂತ್ರಿಗಳ ಪಟ್ಟಿ ಪರಿವಿಡಿ ಭಾರತದ ಹಣಕಾಸು ಮಂತ್ರಿಗಳು ಭಾರತದ ಹಣಕಾಸು ಸಚಿವರು  ಕೇಂದ್ರ ಸಚಿವ ಸಂಪುಟದ ಉನ್ನತ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿದ್ದಾರೆ. ವಾರ್ಷಿಕ ಕೇಂದ್ರ ಬಜೆಟ್ ಅನ್ನು ಭಾರತದ ಹಣಕಾಸು ಸಚಿವರು ಪ್ರತಿ ವರ್ಷ ಸಂಸತ್ತಿಗೆ ಸಿದ್ಧಪಡಿಸುವ ಮತ್ತು ಮಂಡಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಭಾರತದ ಹಣಕಾಸು ಸಚಿವರು ಸರ್ಕಾರದ ಹಣಕಾಸಿನ ಕಾರ್ಯತಂತ್ರದ ಉಸ್ತುವಾರಿ ವಹಿಸುತ್ತಾರೆ. ಹಣಕಾಸು ಸಚಿವಾಲಯವು ಕೇಂದ್ರ ಬಜೆಟ್, ರಾಜ್ಯ ಮತ್ತು ಫೆಡರಲ್ ಬಜೆಟ್‌ಗಳು, ಹಣಕಾಸು ಸಂಸ್ಥೆಗಳು, ಬಂಡವಾಳ ಮಾರುಕಟ್ಟೆಗಳು, ತೆರಿಗೆ ಮತ್ತು ಹಣಕಾಸು ಶಾಸನಗಳನ್ನು ನೋಡಿಕೊಳ್ಳುತ್ತದೆ. RK ಷಣ್ಮುಖಂ ಚೆಟ್ಟಿ ಅವರು ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವ ರಾಷ್ಟ್ರವಾಗಿ ಸೇವೆ ಸಲ್ಲಿಸಿದರು ಮತ್ತು ರಾಷ್ಟ್ರದ ಮೊದಲ ಬಜೆಟ್ ಅನ್ನು ಮಂಡಿಸಿದರು. ಇದರ ಬಗ್ಗೆ ಓದಿ:  ಭಾರತದ ಕ್ಯಾಬಿನೆಟ್ ಮಂತ್ರಿಗಳು ಪ್ರಸ್ತುತ ಭಾರತದ ಹಣಕಾಸು ಮಂತ್ರಿ 2023 ಭಾರತದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.