mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Monday, 17 May 2021

ಮಹಾನಿಯಂತ್ರಕ ಮಹಾ ಲೆಕ್ಕ ಪರಿಶೋಧಕ

 ಸ೦ವಿಧಾನದ 148ನೇ ವಿಧಿಯು ಭಾರತದ ಮಹಾನಿಯಂತ್ರಕ ಮಹಾ ಲೆಕ್ಕ ಪರಿಶೋಧಕರ ಹುದ್ದೆಗೆ ಅವಕಾಶ ಮಾಡಿಕೊಡುತ್ತದೆ.ಕಾರ್ಯವು ಸ್ವತಂತ್ರವೂ ಪ್ರತ್ಯೇಕವೂ ಆಗಿರುತ್ತದೆ. ಇವರು ಭಾರತದ ಲೆಕ್ಕಪತ್ರ ಇಲಾಖೆಯ ಮುಖ್ಯ ಸ್ಥರಾಗಿರುತ್ತಾರೆ. ಸಾರ್ವಜನಿಕ ಹಣಕಾಸಿನ ರಕ್ಷಕ ಎಂದು ಕರೆಯಲ್ಪಡುತ್ತಾರೆ. ಅಂದರೆ ಕೇಂದ್ರ ಹಾಗೂ ಎಲ್ಲ ರಾಜ್ಯಗಳ


ಹಣಕಾಸು ವ್ಯವಸ್ಥೆಯನ್ನು ಇವರು ನಿಯಂತ್ರಿಸುತ್ತಾರೆ ಎಂದು ಇದರ ಅರ್ಥ, ಭಾರತದ ಸಂವಿಧಾನವನ್ನು ಎತ್ತಿಹಿಡಿಯುವುದು ಮತ್ತು ಹಣಕಾಸು ಆಡಳಿತದಲ್ಲಿ ಸಂಸತ್ತಿನ ಕಾನೂನುಗಳನ್ನು ಎತ್ತಿ ಹಿಡಿಯುವುದು ಇವರ ಕರ್ತವ್ಯವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್‌ರವರು ಒಮ್ಮೆ ಸಂವಿಧಾನ ರಿಚಾ ಸಭೆಯ ಚರ್ಚೆಯಲ್ಲಿ 'ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರು ಭಾರತ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಅತ್ಯಂತ ಪ್ರಮುಖ ಅಧಿಕಾರಿ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಸಂವಿಧಾನದ 148ನೇ ವಿಧಿಯನ್ವಯ ಭಾರತದ ರಾಷ್ಟ್ರಾಧ್ಯಕ್ಷರು ಮಂತ್ರಿಮಂಡಲದ ಸಲಹೆಯ ಮೇರೆಗೆ ಭಾರತದ ಮಹಾನಿಯಂತ್ರಕ ಹಾಗೂ ಲೆಕ್ಕ ಪರಿಶೋಧಕರನ್ನು ನೇಮಕ ಮಾಡುತ್ತಾರೆ.


ಪ್ರಮಾಣ ವಚನ


ಭಾರತದ ಮಹಾ ನಿಯಂತ್ರಕ ಮತ್ತು ಲೆಕ್ಕಪರಿಶೋಧಕನಾಗಿ ನಿಯೋಜಿತಗೊಂಡ ವ್ಯಕ್ತಿಯು ಅಧಿಕಾರ ಸ್ವೀಕರಿಸುವ ಮುನ್ನ ರಾಷ್ಟ್ರಾಧ್ಯಕ್ಷರ ಎದುರಿನಲ್ಲಿ ಅಥವಾ ಅವರಿಂದ ನಿಯುಕ್ತಿಗೊಂಡವರ ಎದುರಿನಲ್ಲಿ ಸಂವಿಧಾನದ ಮೂರನೆಯ ಅನುಸೂಚಿಯಲ್ಲಿ ನಮೂದಿಸಿದ ಪ್ರಕಾರ ಪ್ರತಿಜ್ಞಾವಿಧಿ ಸ್ವೀಕರಿಸಬೇಕು.


ಅವರು 6 ವರ್ಷಗಳ ಕಾಲ ಅಥವಾ 65 ವರ್ಷ ವಯಸ್ಸಾಗುವವರೆಗೆ, ಯಾವುದು ಮೊದಲಾಗುತ್ತದೆಯೋ ಅಲ್ಲಿಯವರೆಗೆ ಅಧಿಕಾರದಲ್ಲಿಮುಂದುವರೆಯುತ್ತಾರೆ.


ಪದಚ್ಯುತಿ


ರಾಷ್ಟ್ರಾಧ್ಯಕ್ಷರು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಯಾವ ಆಧಾರದ ಮೇಲೆ ಮತ್ತು ಯಾವ ವಿಧಾನದ ಮೂಲಕ ಅಧಿಕಾರದಿಂದ ಪದಚ್ಯುತಿಗೊಳಿಸುತ್ತಾರೆಯೇ ಅದೇ ಆಧಾರದ ಮೇಲೆ ಮತ್ತು ಅದೇ ವಿಧಾನದ ಮೂಲಕ ಇವರನ್ನು ಪದಚ್ಯುತಿಗೊಳಿಸುತ್ತಾರೆ.


ವೇತನ ಮತ್ತು ಸೇವಾ ನಿಯಮಗಳು


ಮಹಾನಿಯಂತ್ರಕ ಮತ್ತು ಲೆಕ್ಕ ಪರಿಶೋಧಕನ ವೇತನ ಮತ್ತು ಇನ್ನಿತರ ಸೇವಾ ನಿಯಮಗಳು ಸಂಸತ್ತು ಕಾನೂನಿಗೆ ಅನುಗುಣವಾ ನಿರ್ಧರಿಸಿದಂತೆ ಇರುತ್ತವೆ. ಈ ನಿರ್ಧಾರವು ಸಂವಿಧಾನದ ಎರಡನೇ ಅನುಸೂಚಿಯಲ್ಲಿ ಇರುವ ನಿರ್ದೇಶನಕ್ಕೆ ಅನುಗುಣವಾಗಿರುತ್ತದೆ. ಇವರ ವೇತನ, ರಜೆ, ನಿವೃತ್ತಿಯ ವಯಸ್ಸು ಇತರೆ ಸೇವಾ ನಿಯಮಗಳನ್ನು ಇವರ ನೇಮಕಾತಿಯ ನಂತರ, ಇವರಿಗೆ ಅನಾನುಕೂಲವಾಗುವು ಬದಲಾಯಿಸುವಂತಿಲ್ಲ, ಇವರ ವೇತನ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ವೇತನಕ್ಕೆ ಸಮನಾಗಿರುತ್ತದೆ. ಮಹಾನಿಯಂತ್ರಕ ಮತ್ತು ಲೆಕ್ಕ ಮಶೋಧಕರು ಹಾಗೂ ಅವರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ವೇತನ, ಭತ್ಯೆ ನಿವೃತ್ತಿ ವೇತನವನ್ನೊಳಗೊಂಡಂತೆ ಎಲ್ಲ ಆಡಳಿತಾತ್ಮಕ ಮೇಳಗಳನ್ನು ಭಾರತದ ಸಂಚಿತ ನಿಧಿಯಿಂದ ಭರಿಸಲಾಗುವದು.


ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರ ಹುದ್ದೆಯ ಸ್ವಾತಂತ್ರ


ಭಾರತ ಸಂವಿಧಾನದ ನಿರ್ಮಾತೃಗಳು, ಮಹಾ ನಿಯಂತ್ರಕ ಮತ್ತ ಲೆಕ್ಕ ಪರಿಶೋಧಕರ ಹುದ್ದೆ ಸ್ವತಂತ್ರವಾಗಿದ್ದಾಗ ಮಾತ್ರ ಆ ಹುದ್ದೆ ನೇಮಕವಾದ ವ್ಯಕ್ತಿನಿಪಕ್ಷವಾತವಾಗಿ ಮತ್ತು ನಿರ್ಬೀತವಾಗಿ ಕಾರ್ಯನಿರ್ವಹಿಸಬಲ್ಲನು ಎಂಬ ಸತ್ಯವನ್ನು ಅರ್ಥಮಾಡಿಕೊಂಡಿದ್ದರು. ಆದ್ದರಿಂದ ಅವರು ಈ ಹುದ್ದೆಯ ಸ್ವತಂತ್ರವನ್ನು ರಕ್ಷಿಸಲು ಈ ಕೆಳಗಿನ ನಿಯಮಗಳನ್ನು ಸಂವಿಧಾನಕ್ಕೆ ಅಳವಡಿಸಿದರು.


1. ಸಂವಿಧಾನವು ಮಹಾನಿಯಂತ್ರಿಕ ಮತ್ತು ಲೆಕ್ಕವರಿಶೋಧಕರಿಗೆ ಸೇವಾ ಭದ್ರತೆಯನ್ನು ಒದಗಿಸುತ್ತದೆ. ಇವರನ್ನು ಸಂವಿಧಾನದಲ್ಲಿ ನಿರ್ದಿಷ್ಟಪಡಿಸಲಾಗಿರುವ ವಿಧಾನದ ಮೂಲಕ ಮಾತ್ರ ರಾಷ್ಟ್ರಾಧ್ಯಕ್ಷರು ಪದಚ್ಯುತಿಗೊಳಿಸಬಹುದು. ಅಂದರೆ ಇವರ ಅಧಿಕಾರಾವಧಿ ತಮ್ಮನ್ನು ನೇಮಕಗೊಳಿಸಿದ ರಾಜ್ಯಾಧ್ಯಕ್ಷರ ಇಚ್ಛೆಯನ್ನು ಅವಲಂಬಿಸಿಲ್ಲ ಎಂದರ್ಥ, ರಾಷ್ಟ್ರಾಧ್ಯಕ್ಷರು ತಮಗೆ ಬೇಕೆನಿಸಿದಾಗ ಇವರನ್ನು ಪದಚ್ಯುತಿಗೊಳಿಸುವಂತಿಲ್ಲ.


2. ಇವರು ತಮ್ಮ ಅಧಿಕಾರಾವಧಿ ಮುಗಿದ ಬಳಿಕ ಕೇಂದ್ರ ಅಥವಾ ರಾಜ್ಯ ಸರ್ಕಾರದ ಜತರೆ ಯಾವುದೇ ಹುದ್ದೆಯನ್ನು ಸ್ವೀಕರಿಸಲು ಅರ್ಹರಲ್ಲ,


3.ಇವರ ವೇತನ ಮತ್ತು ಇತರೆ ಸೇವಾ ನಿಯಮಗಳು ಸಂಸತ್ತಿನಿಂದ ನಿರ್ಧರಿಸಲ್ಪಡುತ್ತವೆ. ಇವರ ವೇತನ ಸುಪ್ರೀಂಕೋರ್ಟ್‌ ನ್ಯಾದಲ್ಲಿ


ಶರ ವೇತನಕ್ಕೆ ಸಮನಾಗಿರುತ್ತದೆ.


ನೇಮಕಾತಿಯ ನಂತರ ಇವರ ವೇತನ, ರಜ, ನಿವೃತ್ತಿಯ ವಯಸ್ಸು, ನಿವೃತ್ತಿ ವೇತನ ಮುಂತಾದ ಸೇವಾ ನಿಯಮಗಳನ್ನು ಮ ಅವನು ಕೂಲವಾಗುವಂತೆ ಬದಲಾಯಿಸುವಂತಿಲ್ಲ.


5. ಭಾರತದ ಲೆಕ್ಕಪತ್ರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಸೇವಾ ನಿಯಮಗಳು ಮತ್ತು ೩.೧.ಜಿಯ ಆಡಳಿತಾತ್ಮಕ ರಾಜ್ಯಾಧ್ಯಕ್ಷರು ಸಿ.ಎ.ಜಿ.ಯೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ನಿರ್ಧರಿಸುತ್ತಾರೆ.


ಅಧಿಕಾರಿಗಳು


ಸಿ.ಎ.ಜಿ, ಮತ್ತು ಅವರ ಕಚೇರಿ ಸಿಬ್ಬಂದಿಯ ವೇತನ, ಭತ್ಯೆ ನಿವೃತ್ತಿ ವೇತನವನ್ನೊಳಗೊಂಡಂತೆ ಎಲ್ಲ ಆಡಳಿತಾತ್ಮಕ ವೆಚ್ಚವನ್ನು ಭಾರತ ಸಂಚಿತ ನಿಧಿಯಿಂದ ಭರಿಸಲಾಗುತ್ತದೆ. ಹೀಗೆ ಈ ವೆಚ್ಚ ಸಂಸತ್ತಿನಿಂದ ಮತದಾನಕ್ಕೆ ಒಳಪಟ್ಟಿಲ್ಲ.


ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರ ಅಧಿಕಾರ ಮತ್ತು ಕಾರ್ಯಗಳು ಸಂವಿಧಾನದ 149ನೇ ವಿಧಿಯ ಪ್ರಕಾರ ಕೇಂದ್ರ ರಾಜ್ಯ ಹಾಗೂ ಇತರೆ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆಯ ಲೆಕ್ಕಗಳಿಗೆ ಸಂಬ


ಸಿದಂತೆ ಸಿ.ಎ.ಜಿಯವರ ಕರ್ತವ್ಯ ಮತ್ತು ಅಧಿಕಾರಗಳನ್ನು ಗೊತ್ತುಪಡಿಸುವ ಅಧಿಕಾರ ಸಂಸತ್ತಿಗೆ ಇದೆ. ಅವರಂತೆ ಸಂಸತ್ತು ಸಿ.ಎ.ಜಿ ಕರ್ತವ್ಯಗಳು ಅಧಿಕಾರಗಳು ಮತ್ತು ಸೇವಾ ನಿಯಮಗಳು) ಕಾಯ್ದೆ 1971ನ್ನು ರೂಪಿಸಿತು. ಲೆಕ್ಕಪತ್ರ ಇಡುವ ಕಾರ್ಯವನ್ನು ಲೆಕ್ಕಪರಿಶೋಧನೆಯ ಕಾರದಿ ಬೇರ್ಪಡಿಸಲು 1976ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಸಂಸತ್ತು ಮತ್ತು ಸಂವಿಧಾನದಿಂದ ನಿರ್ಧರಿಸಲ್ಪಟ್ಟಿರುವ ಈ ಕೆಳ


1. ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ ಎಲ್ಲ ವೆಚ್ಚಗಳಿಗೆ ಸಂಬಂಧಿಸಿದ ಲೆಕ್ಕವ ಪರಿಶೀಲಿಸುತ್ತಾರೆ (149ನೇ ಐಪ


ಕೇಂದ್ರ ಅಥವಾ ರಾಜ್ಯದ ಆದಾಯದಿಂದ ಧನ ಸಹಾಯ ಪಡೆದ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ಲೆಕ್ಕವನ್ನು ಪರಿಶೀಲಿಸುತ್ತಾರೆ, ಇದ


ನಿಗಮಗಳು, ಕಂಪನಿಗಳು ಇತ್ಯಾದಿ (149ನೇ ವಿಧಿ),


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವ ನಮೂನೆಯಲ್ಲಿ ತಮ್ಮ ಲೆಕ್ಕಪತ್ರಗಳನ್ನು ಇಡಬೇಕು ಎಂಬುದರ ಬಗ್ಗೆ ರಾಷ್ಟ್ರಾಧ್ಯಕ್ಷರಿಗೆ


ಸಲಹೆ ನೀಡಬೇಕು (150ನೇ ವಿಧಿ),


ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕಳು ತಾವು ನಿಗದಿ ಪಡಿಸಿದ ನಮೂನೆಯಲ್ಲಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ -: ಕೇಂದ್ರದ ಲೆಕ್ಕಪತ್ರಗಳಿಗೆ ಸಂಬಂಧಿಸಿದ ತನ್ನ ಪರಿಶೀಲನಾ ವರದಿಯನ್ನು ರಾಜ್ಯಾಧ್ಯಕ್ಷರಿಗೆ ಸಲ್ಲಿಸುತ್ತಾರೆ. ರಾಷ್ಟ್ರಾಧ್ಯಕ್ಷರು ಈ ವರದಿಯನ್ನು


ಲೆಕ್ಕಪತ್ರ ಇಡುವಂತೆ ಕೇಳಬಹುದು (150ನೇ ವಿಧಿ).


ಸಂಸತ್ತಿನ ಉಭಯ ಸದನಗಳ ಮುಂದೆ ಇಡುತ್ತಾರೆ (151(1)ನೇ ವಿಧಿ), ಸಿ.ವಿ.ಜಿಯ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ


ಪರಿಶೀಲಿಸುತ್ತದೆ. 1. ರಾಜ್ಯಗಳ ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ತಮ್ಮ ಪರಿಶೀಲನಾ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸುತ್ತಾರೆ. ರಾಜ್ಯಪಾಲರು ಅದನ್ನು ರಾಜ್ಯ ಶಾಸಕಾಂಗದ ಮುಂದೆ ಇಡುತ್ತಾರೆ (151(2)ನೇ ವಿಧಿ)


ಇವರು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮಾರ್ಗದರ್ಶಕ, ಸ್ನೇಹಿತ ಮತ್ತು ತತ್ವಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಅಂದರೆ


ಇವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯದಲ್ಲಿ ನೆರವಾಗುತ್ತಾರೆ ಎಂದರ್ಥ. 1916ರವರೆಗೆ ಭಾರತದಲ್ಲಿ ಲೆಕ್ಕಪತ್ರ ಇಡುವ ಮತ್ತು ಲೆಕ್ಕಪರಿಶೋಧನೆಯ ಕಾರ್ಯಗಳೆರಡೂ ಸಿಎಜಿ ಕೈಯಲ್ಲಿ ಕೇಂದ್ರೀಕೃತವಾಗಿದ್ದವು.


ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕನೇ ಈ ಎರಡೂ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದನು. ಆದರೆ 1976ರಲ್ಲಿ ಕೇಂದ್ರ ಸರ್ಕಾರವು ಲೆಕ್ಕಪತ್ರವನ್ನು ಲೆಕ್ಕಪರಿಶೋಧನೆಯಿಂದ ಪ್ರತ್ಯೇಕಿಸಿತು. ಇದರಿಂದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕನು ಕೇಂದ್ರ ಸರ್ಕಾರದ ಲೆಕ್ಕಪತ್ರದ ಸಂಕಲನದ ಜವಾಬ್ದಾರಿಯಿಂದ ವಿಮುಕ್ತನಾದನು. ಈಗ ಲೆಕ್ಕಪರಿಶೋಧನೆಯ ಜವಾಬ್ದಾರಿಯಷ್ಟೇ ಅವನ ಪಾಲಿಗೆ ಬಂದಿದೆ. ಆದರೆ ರಾಜ್ಯಗಳಲ್ಲಿ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಕಾರ್ಯಗಳನ್ನು ಪರಸ್ಪರ ಪ್ರತ್ಯೇಕಿಸಿಲ್ಲವಾದ್ದರಿಂದ ಮಹಾನಿಯಂತ್ರಕನೇ ಲೆಕ್ಕಪತ್ರದ ಸಂಕಲನ ಮತ್ತು ಲೆಕ್ಕಪರಿಶೋಧನೆ ಈ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾನೆ.


ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರ ಪಾತ್ರ


ಭಾರತ ಸಂವಿಧಾನವನ್ನು ಎತ್ತಿಹಿಡಿಯುವ ಮತ್ತು ಹಣಕಾಸು ಆಡಳಿತ ಕ್ಷೇತ್ರದಲ್ಲಿ ಸಂಸತ್ತಿನ ಕಾನೂನುಗಳನ್ನು ಎತ್ತಿ ಹಿಡಿಯುವ ನಿರ್ಣಾಯಕ ಪಾತ್ರವನ್ನು ಸಿ.ಎ.ಜಿ. ನಿರ್ವಹಿಸುತ್ತಾನೆ. ಹಣಕಾಸು ಕ್ಷೇತ್ರದಲ್ಲಿ ಕಾರ್ಯಾಂಗ (ಮಂತ್ರಿಮಂಡಲವು ಸಂಸತ್ತಿಗೆ ಹೊಣೆಯಾಗಿರುತ್ತದೆ. ಕಾರ್ಯಾಂಗದ ಈ ರೀತಿಯ ಹೊಣೆಗಾರಿಕೆಯನ್ನು ಸಿ.ಎ.ಜಿಯ ಲೆಕ್ಕಪತ್ರ ಪರಿಶೀಲನಾ ವರದಿಯ ಮೂಲಕ ಸಾಕಾರಗೊಳಿಸಲಾಗುತ್ತದೆ. ಸಿಎಜಿ, ಸಂಸತ್ತಿನ ನಿಯೋಗಿಯಾಗಿದ್ದು, ಕಾರ್ಯಾಂಗದಿಂದ ಮಾಡಲಾದ ವೆಚ್ಚಕ್ಕೆ ಸಂಬಂಧಿಸಿದ ಲೆಕ್ಕವನ್ನು ಸಂಸತ್ತಿನ ಪರವಾಗಿ ಪರಿಶೀಲಿಸುತ್ತಾನೆ. ಆದ್ದರಿಂದ ಸಿಎಜಿ ಸಂಸತ್ತಿಗೆ ಮಾತ್ರ ಹೊಣೆಯಾಗಿದ್ದಾರೆ. ಇವರು ಕೇಂದ್ರ ಅಥವಾ ರಾಜ್ಯಗಳ ಆದಾಯದಿಂದ ಭಾರತದ ಹೊರಗಡೆ ಅಥವಾ ಒಳಗಡೆ ಮಾಡಿದ ಎಲ್ಲ ವೆಚ್ಚಗಳ ಪರಿಶೀಲನೆ ಮಾಡುತ್ತಾರೆ, ಲೆಕ್ಕದಲ್ಲಿ ತೋರಿಸಲಾದ ವಿನಿಯೋಗದ ಹಣ ಕಾನೂನುಬದ್ಧವಾಗಿ ನೀಡಲ್ಪಟ್ಟದ್ದೋ ಅಥವಾ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅಲ್ಲದೆ ಯಾವ ಉದ್ದೇಶಕ್ಕಾಗಿ ಹಣವನ್ನು ನೀಡಲಾಗಿದೆಯೋ, ಅದೇ ಉದ್ದೇಶಕ್ಕಾಗಿ ಹಣ ವೆಚ್ಚವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಇವರು ಹಣದ ಅಪವ್ಯಯ ಅಥವಾ ದುರುಪಯೋಗ ನಡೆದಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸುತ್ತಾರೆ. ನಂತರ ಈ ವಿಷಯಗಳಿಗೆ ಸಂಬಂಧಿಸಿದ ವರದಿಯನ್ನು ಶಾಸಕಾಂಗದ ಮುಂದೆ ಮಂಡಿಸಲಾಗುತ್ತದೆ. ಲೆಕ್ಕಪರಿಶೋಧಕನು ಸಾರ್ವಜನಿಕ ವೆಚ್ಚದಲ್ಲಿ ನಿಷ್ಠೆ, ಬುದ್ಧಿವಂತಿಕೆ ಹಾಗೂ ಮಿತವ್ಯಯವನ್ನು ಕುರಿತು ವರದಿ ಮಾಡುತ್ತಾನೆ.



ಸ್ನೇಹಿತರೆ ಈ ಕೆಳಕಾಣಿಸಿದ ಲಿಂಕಗಳ 

ಮೂಲಕ ವಿವಿಧ ವಿಷಯಗಳ ಮೇಲೆ ಪಠ್ಯವನ್ನು ನೀಡಲಾಗಿದೆ ಅದರ ಜೊತೆಗೆ ಅದಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಕ್ವಿಜ್ ಮೂಲಕ ನೀಡಲಾಗಿದೆ ಕೆಳಕಾಣಿಸಿದ

Link ಗಳನ್ನು ಓಪನ್ ಮಾಡಿ ಆನ್ಲೈನ್ ಕ್ವಿಜ್ ಸೆಂಡ್ ಮಾಡಿ


ರಾಷ್ಟ್ರಕೂಟರು

https://www.mahitiloka.co.in/2021/05/blog-post_48.html



ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು

https://www.mahitiloka.co.in/2021/05/blog-post_91.html



📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು

📌https://www.mahitiloka.co.in/2021/05/blog-post_20.html




ಕೃಷಿ ವಿಧಗಳು

👉https://tinyurl.com/yf9437kz




ವಾಯುಮಂಡಲದ ರಚನೆ

👉https://tinyurl.com/yj8wkk36





ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು

👉https://tinyurl.com/yj4rzwog



ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ


🙏🙏🙏🙏🙏🙏🙏🙏🙏🙏🙏🙏🙏



OUR SOCIAL LINKS ;-


YOU TUBE :-https://youtube.com/c/SGKKANNADA


TELEGRAM :-https://telegram.me/s/spardhakiran



INSTAGRAM :-https://instagram.com/shoyal2000?utm_medium=copy_link



FACE BOOK :-https://www.facebook.com/SGK-Kannada-112808230846685/



SHARECHAT :-https://b.sharechat.com/s2xoaNCEW7


https://b.sharechat.com/KaG9DabEGcb


No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

Demystifying Vitamin B Complex: A Comprehensive Guide to the B1 to B12 Spectrum 🌈💊

  Introduction: Greetings, wellness enthusiasts and nutrition aficionados! 🍇🥦 Today, we embark on a journey through the vibrant world of Vitamin B Complex—an essential group of micronutrients that play a crucial role in maintaining our health and well-being. From their sources to functions, benefits, and a look at the pioneers behind their discovery, let's unravel the secrets of the B1 to B12 spectrum. The Marvelous Spectrum of Vitamin B Complex 🌟💡 The Inventors of Vitamin B Complex: The B Vitamins' Pioneers 🔍🔬: The concept of Vitamin B Complex was introduced by a group of researchers, including Sir Jack Drummond, Sir Frederick Gowland Hopkins, and others, during the early 20th century. They identified that there were multiple B vitamins, each with unique properties, which collectively played a vital role in maintaining health. The Members of the B Vitamin Family 🌱🌈: B1 (Thiamine): Found in whole grains, nuts, and pork, thiamine supports energy metabolism. B2 (Riboflav...

ಅಸಹಕಾರ ಚಳುವಳಿ, ಕಾರಣಗಳು, ಪರಿಣಾಮಗಳು, ಮಹತ್ವ

ಬ್ರಿಟಿಷ್ ಸರ್ಕಾರದ ನಿಯಮಗಳನ್ನು ಬಹಿಷ್ಕರಿಸಲು ಮತ್ತು ಭಾರತದಲ್ಲಿ ಪೂರ್ಣ ಸ್ವರಾಜ್ಯವನ್ನು ಜಾರಿಗೆ ತರಲು ಮಹಾತ್ಮಾ ಗಾಂಧಿಯವರು 1920 ರಲ್ಲಿ ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದರು.  1922 ರ ವೇಳೆಗೆ ಅಸಹಕಾರ ಚಳುವಳಿ ಕೊನೆಗೊಂಡಿತು. ಪರಿವಿಡಿ ಅಸಹಕಾರ ಚಳುವಳಿ ಎಂದರೇನು ? ಭಾರತಕ್ಕೆ ಸ್ವರಾಜ್ ಅಥವಾ ಸ್ವರಾಜ್ಯ ನೀಡಲು ಭಾರತದ ಬ್ರಿಟಿಷ್ ಸರ್ಕಾರವನ್ನು ಮನವೊಲಿಸಲು ಮಹಾತ್ಮ ಗಾಂಧಿಯವರು 1920-1922 ರಿಂದ   ಅಸಹಕಾರ ಚಳವಳಿಯನ್ನು   ಸಂಘಟಿಸಿದರು .   ಇದು ವ್ಯಾಪಕವಾದ ನಾಗರಿಕ ಅಸಹಕಾರ ಚಳವಳಿಯ  ( ಸತ್ಯಾಗ್ರಹ) ಗಾಂಧಿಯವರ ಆರಂಭಿಕ ಯೋಜಿತ ನಿದರ್ಶನಗಳಲ್ಲಿ ಒಂದಾಗಿದೆ  .  ಅಸಹಕಾರ ಚಳವಳಿಯು ಸೆಪ್ಟೆಂಬರ್ 1920 ಮತ್ತು ಫೆಬ್ರವರಿ 1922 ರ ನಡುವೆ ಅಸ್ತಿತ್ವದಲ್ಲಿತ್ತು ಎಂದು ಹೇಳಲಾಗುತ್ತದೆ. ಇದು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಪ್ರತಿನಿಧಿಸುತ್ತದೆ. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವು ಅಸಹಕಾರ ಚಳವಳಿಯ ಆರಂಭಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಿತು , ನಂತರ 1922 ರ   ಚೌರಿ ಚೌರಾ ಘಟನೆಯ   ಕಾರಣದಿಂದಾಗಿ ಅದನ್ನು ಸ್ಥಗಿತಗೊಳಿಸಲಾಯಿತು . ಮಹಾತ್ಮಾ ಗಾಂಧಿಯವರ   ಅಸಹಕಾರ ಚಳುವಳಿ ಮಹಾತ್ಮಾ ಗಾಂಧಿಯವರು ಅಸಹಕಾರ ಚಳವಳಿಯ   ಪ್ರಮುಖ ಪ್ರತಿಪಾದಕರು  .  ಅವರು ಮಾರ್ಚ್ 1920 ರಲ್ಲಿ ಚಳುವಳಿಯ ಅಹಿಂಸಾತ್ಮಕ ಅ...

Exploring the World of Number Systems: A Comprehensive Guide

  In the vast landscape of mathematics, there exists a fundamental concept that serves as the foundation for all numerical computations - number systems! 🧮✨ Let's embark on an enlightening journey to explore everything you need to know about number systems, from their basic principles to their diverse applications in various fields of study. #NumberSystems101 #MathematicsExplained #NumericalComputations Understanding Number Systems: What Are They? At its core, a number system is a structured way of representing and manipulating numerical quantities. It provides a set of symbols, rules, and conventions for expressing numbers and performing arithmetic operations. From the familiar decimal system to the exotic binary and hexadecimal systems, number systems come in various forms, each with its unique properties and advantages. Understanding different number systems is essential for mastering mathematical concepts and solving real-world problems. 🔢🔍 #MathBasics #NumericalRe...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.