mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Wednesday, 12 May 2021

ರಾಷ್ಟ್ರೀಯ ಮತದಾರರ ದಿನ

     2021ರ ಜನವರಿ 25 ರಂದು ಭಾರತದಲ್ಲಿ IIನೇ ಆವೃತ್ತಿಯ ರಾಷ್ಟ್ರೀಯ ಮತದಾರರ ದಿನವನ್ನು (NVD National Voters Day) Making our Voters Empowered, Vigilant, Safe Informed & ಧೈಯವಾಕ್ಯದಲ್ಲಿ ಆಚರಿಸಲಾಗಿದೆ. ನವದೆಹಲಿಯಲ್ಲಿ ಚುನಾವಣಾ ಆಯೋಗದಿಂದ ಆಚರಿಸಿದ ಮತದಾರರ ದಿನದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯ ಅತಿಥಿಗಳಾಗಿದ್ದರು. ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಶುಭಾಶಯ ಕೋರಿದರು. ದೇಶಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ

ಘಟ್ಟವಾದ ಚುನಾವಣಾ ಪ್ರಕ್ರಿಯೆಯಲ್ಲಿ ಜವಾಬ್ದಾರಿಯುತ ನಾಗರಿಕರ ಮತದಾನದ ಬಗ್ಗೆ ಅರಿವನ್ನು ಮೂಡಿಸುವುದು, ಜತೆಗೆ ಮತದಾರರ ಪಟ್ಟಿಗೆ ಹೊಸದಾಗಿ ನೋಂದಣಿಯಾಗುವ ಯುವ ಮತದಾರರಿಗೆ ಗುರುತಿನ ಚೀಟಿ (EPIC-Elector Photo Identity Card) ವಿತರಿಸುವುದು ಉದ್ದೇಶವಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುವ ಯಾವುದೇ ಚುನಾವಣೆಗಳನ್ನು ಸುರಕ್ಷಿತವಾಗಿ ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕತೆ ಸಂದರ್ಭದಲ್ಲಿ ಕೈಗೊಂಡ ಚುನಾವಣೆಗಳ ಕೆಲವು ತುಣುಕುಗಳನ್ನು ತಿಳಿಸುವ ಫೋಟೋ, 2019ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೈಗೊಂಡ SVEEP Systematic Voters Education & Electoral Participation ಕಾರ್ಯಕ್ರಮದ ಅರಿವು ಪುಸ್ತಕ ಹಾಗೂ ಚುನಾವಣಾ ಆಯೋಗದ ವತಿಯಿಂದ ಸಿದ್ಧವಾಗಿರುವ ಮತದಾರರ ಶಿಕ್ಷಣದ ಕಾಮಿಕ್ ಪುಸ್ತಕವಾದ Chalo Karen Matdaan ಅನ್ನು ಬಿಡುಗಡೆ ಮಾಡಿದರು.

    

2021ರ ರಾಷ್ಟ್ರೀಯ ಚುನಾವಣಾ ಪ್ರಶಸ್ತಿ ಪ್ರದಾನ


        2021ರ ಜನವರಿ 25ರಂದು ಚುನಾವಣಾ ಆಯೋಗದ ವತಿಯಿಂದ ಆಯ್ಕೆಮಾಡಿದ 2020-21ರ ಅವಧಿಯ ರಾಷ್ಟ್ರೀಯ ಚುನಾವಣಾ 17 ಪ್ರಶಸ್ತಿಗಳನ್ನು (National Awards for the year 2020-21) ರಾಷ್ಟ್ರಪತಿಗಳು ಪ್ರದಾನ ಮಾಡಿದರು. ಐಟಿ ವಿಧಾನಗಳ ಅಳವಡಿಕೆ ಭದ್ರತಾ ನಿರ್ವಹಣೆ, ಕೋವಿಡ್-19ರ ಸಂದರ್ಭದಲ್ಲಿ ಸುರಕ್ಷಿತ ಚುನಾವಣಾ ನಿರ್ವಹಣೆ, ಮತದಾರರಲ್ಲಿ ಜಾಗೃತಿ ಮೂಡಿಸಿದ ಚುನಾವಣಾ ಅಧಿಕಾರಿಗಳನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿತ್ತು. ಕೋವಿಡ್-19ರ ಸಾಂಕ್ರಾಮಿಕತೆ ಅವಧಿಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಸಿದ ರಾಜ್ಯ ಎಂಬ ಹೆಗ್ಗಳಿಕೆಯನ್ನು ಬಿಹಾರ ರಾಜ್ಯವು ಹೊಂದಿದ್ದು, ಈ ರಾಜ್ಯದ ಚುನಾವಣಾ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದ ಆಯೋಗದ ಸಿಇಒ ಎಚ್.ಆರ್ ಶ್ರೀನಿವಾಸ್ ಸೇರಿದಂತೆ 7 ಜನ ಬಿಹಾರದ ಚುನಾವಣಾ ಅಧಿಕಾರಿಗಳಿಗೆ ರಾಷ್ಟ್ರೀಯ ಚುನಾವಣಾ ಪ್ರಶಸ್ತಿ (Best Electoral Practices Award)ಲಭಿಸಿದೆ. ಬಿಹಾರ ಮೂಲದ ಸರ್ಕಾರೇತರ ಸಂಘಟನೆಯಾದ JEEVIKA ಬಿಹಾರದ ಚುನಾವಣೆ ಸಂದರ್ಭದಲ್ಲಿ ಅರಿವು ಮೂಡಿಸಿದ್ದ ಕಾರಣದಿಂದಲೂ ಪ್ರಶಸ್ತಿ ಪಡೆದಿತ್ತು. ಮೇಘಾಲಯ ರಾಜ್ಯ ಚುನಾವಣಾ ಆಯೋಗವು ಚುನಾವಣೆಯಲ್ಲಿ ಉತ್ತಮ ಮಾಹಿತಿ ತಂತ್ರಜ್ಞಾನ ಅನ್ವಯಿಕೆಗಾಗಿ ವಿಶೇಷ ಪ್ರಶಸ್ತಿ ಪಡೆದಿದೆ.


   ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನದ ಆಚರಣೆ ಹಿನ್ನೆಲೆ


         1950ರ ಜನವರಿ 25 ರಂದು ಕೇಂದ್ರ ಚುನಾವಣಾ ಆಯೋಗವು ಸಂವಿಧಾನದ 15ನೇ ಭಾಗದ 324ನೇ ವಿಧಿ ಅನ್ವಯ ಸ್ಥಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 25 ಅನ್ನು ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ. 2011ರ ಜನವರಿ 25 ರಂದು ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದ ಅಂಗವಾಗಿ ಆಚರಿಸಲು ನಿರ್ಧರಿಸಿದರು. 2020ರ ಮತದಾರರ ದಿನದ Electoral Literacy for Stronger Democracy. ಹಲೋ ವೋಟರ್‌ (Hello Voters) ವೆಬ್ ರೇಡಿಯೋ : ಚುನಾವಣಾ ಆಯೋಗವು ಹಲೋ ವೋಟರ್ ಹೆಸರಿನ ಆನ್‌ಲೈನ್‌ ಡಿಜಿಟಲ್ ರೇಡಿಯೋ ಸೇವೆ ಆರಂಭಿಸಿದ್ದು, ಈ ಸೇವೆಗೆ ಭಾರತದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಚಾಲನೆ ನೀಡಿದರು. ಈ ರೇಡಿಯೋ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುವುದು. ಗೀತೆ, ನಾಟಕ, ಚರ್ಚೆ, ಕಥೆಗಳ ಮೂಲಕ ಚುನಾವಣೆಯ ಬಗ್ಗೆ ಹಿಂದಿ, ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಈ ರೇಡಿಯೋ ಸೇವೆ ನೀಡುತ್ತದೆ.


     ಚುನಾವಣಾ ಆಯುಕ್ತ ಸುನೀಲ್‌ ಅರೋರಾ ಅವರು 2021ರ ಜನವರಿ 15ರಂದು ಕೋಮಲ್ ಜೈನ್ ಅವರು ಬರೆದ “Electoral Reforms in India' ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್‌ರವರು ರಾಜ್ಯಮಟ್ಟದ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ಪಡೆದಿದ್ದಾರೆ.


   ಕೇಂದ್ರ ಚುನಾವಣಾ ಆಯೋಗ (ECI- Election Commission Of India) ದ ಬಗ್ಗೆ ಮಾಹಿತಿ


ಸ್ಥಾಪನೆ: 1950ರ ಜನವರಿ 25, 

ಕೇಂದ್ರ ಕಚೇರಿ: ನವದೆಹಲಿ, 

ವಿಶೇಷತೆ: ಸಾಂವಿಧಾನಿಕ ಮತ್ತು ಶಾಸನಬದ್ಧ ಸಂಸ್ಥೆ 

ಕಾರ್ಯಗಳು: 1950-1951ರ ಜನತಾ ಪ್ರಾತಿನಿಧ್ಯ ಕಾಯಿದೆ ಅನ್ವಯ ಚುನಾವಣೆಯನ್ನು ನಡೆಸುವುದು, ರಾಜಕೀಯ ಪಕ್ಷಗಳಿಗೆ ಮಾಹಿತಿ  ನೀಡುವುದು, ಚುನಾವಣಾ ನೀತಿ ಸಂಹಿತೆ (MCC-Model Code of Conduct) ರೂಪಿಸುವುದು. ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಸಭೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸದನಗಳ ಸದಸ್ಯರುಗಳನ್ನು ಆಯ್ಕೆ ಮಾಡುವ ಚುನಾವಣೆಯನ್ನು ನಡೆಸುತ್ತದೆ. 1951ರ ಅಕ್ಟೋಬರ್ 25 ರಿಂದ 1952ರ ಫೆಬ್ರವರಿ 21 ರವರೆಗೆ ಭಾರತದಲ್ಲಿ ಮೊದಲ ಬಾರಿಗೆ ಲೋಕಸಭಾ ಸಾರ್ವತ್ರಿಕ ಚುನಾವಣೆ ಜರುಗಿತ್ತು. ಕೇಂದ್ರ ಚುನಾವಣಾ ಆಯುಕ್ತರು: ರಾಷ್ಟ್ರಪತಿ ಅವರಿಂದ ಆಯುಕ್ತರು ನೇಮಕಗೊಂಡು 6 ವರ್ಷ ಅಥವಾ 65ನೇ ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿರುತ್ತಾರೆ. ಸುಕುಮಾರ್ ಸೇನ್ ಅವರು ಆಯೋಗದ ಸಂಸ್ಥಾಪಕ ಮತ್ತು ಮೊದಲ ಮುಖ್ಯ ಆಯುಕ್ತರಾಗಿದ್ದರು. ಆಯೋಗದ ಆಯುಕ್ತರಾಗಿ

ಕಾರ್ಯನಿರ್ವಹಿಸಿದ ಮೊದಲ ಮತ್ತು ಏಕೈಕ ಮಹಿಳೆ ಎಂಬ ಕೀರ್ತಿಗೆ ವಿ.ಎಸ್. ರಮಾದೇವಿ ಪಾತ್ರರಾಗಿದ್ದಾರೆ. ಭಾರತದ 10ನೇ ಚುನಾವಣಾ

ಆಯುಕ್ತರಾಗಿ ಮತ್ತು ದೇಶದ ಚುನಾವಣೆಗಳ ಸುಧಾರಕ ಎಂದು ಗುರುತಿಸಲ್ಪಟ್ಟಿದ್ದ ಟಿ.ಎನ್. ಶೇಷನ್ ಅವರು 2019ರ ನವೆಂಬರ್ 10 ನಿಧನರಾದರು.ಸುನೀಲ್ ಅರೋರಾ ಅವರು 23ನೇ ಚುನಾವಣಾ ಮುಖ್ಯ ಆಯುಕ್ತರಾಗಿ 2018ರ ಡಿಸೆಂಬರ್ 2 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ರಾಜೀವ್

ಕುಮಾರ್ ಮತ್ತು ಸುಶೀಲ್ ಚಂದ್ರ ಅವರು ಆಯೋಗದ ಇತರ ಆಯುಕ್ತರುಗಳಾಗಿದ್ದಾರೆ. (ಅಶೋಕ್ ಲವಾಸ ಅವರು 2020ರ ಆಗಸ್ಟ್ 18 ರಂದು ಚುನಾವಣಾ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿ ಮನಿಲಾದಲ್ಲಿರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ).

   

No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದ ಪ್ರಮುಖ ಗವರ್ನರ್‌ಗಳು-ಜನರಲ್ ಮತ್ತು ವೈಸ್‌ರಾಯ್

  ಪರಿಚಯ 1600 ರ ಡಿಸೆಂಬರ್ 31 ರಂದು ಈಸ್ಟ್ ಇಂಡಿಯಾ ಕಂಪನಿಯು ರಾಣಿ ಎಲಿಜಬೆತ್ I ರಿಂದ ರಾಯಲ್ ಚಾರ್ಟರ್ ಪಡೆದಾಗ ಭಾರತದ ಮೇಲೆ ಬ್ರಿಟಿಷ್ ಆಡಳಿತವು ಒಂದು ವ್ಯಾಪಾರ ಘಟಕವಾಗಿ ಪ್ರಾರಂಭವಾಯಿತು . ಸುಮಾರು ಮೂರು ಶತಮಾನಗಳ ಅವಧಿಯಲ್ಲಿ , ಬ್ರಿಟಿಷರು ವ್ಯಾಪಾರ ಶಕ್ತಿಯಿಂದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದರು ಜಗತ್ತಿನಲ್ಲಿ . ಸಣ್ಣ ದ್ವೀಪ ದೇಶವಾದ ನಂತರವೂ ಬ್ರಿಟನ್ ವಿಶ್ವದ ಅತಿದೊಡ್ಡ ಸಾಮ್ರಾಜ್ಯಗಳಲ್ಲಿ ಒಂದನ್ನು ಸ್ಥಾಪಿಸಲು ಸಾಧ್ಯವಾಯಿತು .  " ಸೂರ್ಯನು ಎಂದಿಗೂ ಅಸ್ತಮಿಸದ ಸಾಮ್ರಾಜ್ಯ " ಎಂಬ   ಪದಗುಚ್ by ದಿಂದ ಸಾಮ್ರಾಜ್ಯದ ವ್ಯಾಪ್ತಿಯನ್ನು ಚಿತ್ರಿಸಬಹುದು   . ತನ್ನ ವಸಾಹತುಗಳಲ್ಲಿ ಸ್ಥಾಪಿಸಿದ ಬಲವಾದ ಮತ್ತು ಪರಿಣಾಮಕಾರಿ ಅಧಿಕಾರಶಾಹಿಯ ಹಿನ್ನೆಲೆಯಲ್ಲಿ ಬ್ರಿಟನ್ ಈ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು .  ಭಾರತದಲ್ಲಿ , ಗವರ್ನರ್ - ಜನರಲ್ ಮತ್ತು ವೈಸ್ ‌ ರಾಯ್ ‌ ಗಳ ಮೂಲಕ ಬ್ರಿಟಿಷರು ಈ ನಿಯಂತ್ರಣವನ್ನು ಸ್ಥಾಪಿಸಲು ಸಾಧ್ಯವಾಯಿತು . §   ಬಂಗಾಳದ ಗವರ್ನರ್ - ಜನರಲ್ (1773-1833):   ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದಾಗ , ಅದು " ಬಂಗಾಳದ ಗವರ್ನರ್ "  (   ಬಂಗಾಳದ   ಮೊದಲ ಗವರ್ನರ್ : ರಾಬರ್ಟ್ ಕ್ಲೈವ್ )   ಎಂಬ ಹುದ್ದೆ...

Microsoft Word Shortcut Keys: Mastering Document Creation 📝✨

  Creating documents in Microsoft Word can be a seamless and efficient experience if you harness the power of keyboard shortcuts. In this blog post, we will dive into all the essential Microsoft Word shortcut keys, exploring their uses and practical applications. We'll also sprinkle in some helpful emojis, keywords, hashtags, and related article web links to enhance your reading experience. Let's get started! Table of Contents Introduction to Microsoft Word Shortcuts Basic Navigation and Selection Shortcuts Formatting Text and Paragraphs Working with Documents and Files Inserting and Editing Content Miscellaneous Shortcuts Practical Applications and Tips Conclusion 1. Introduction to Microsoft Word Shortcuts 🚀 Microsoft Word is a powerful word processing tool, but navigating through menus and ribbons can be time-consuming. By using keyboard shortcuts, you can speed up your workflow, reduce repetitive strain, and become more efficient in creating and editing documents. 2. Bas...

ಭಾರತದ ನದಿಗಳು, ನಕ್ಷೆ, ಪಟ್ಟಿ, ಹೆಸರು, ಭಾರತದ ಉದ್ದವಾದ ನದಿಗಳು Rivers of India, Map, List, Name, Longest Rivers of India..

  ಭಾರತದ ನದಿಗಳು ಭಾರತದ ಜನರು ಮತ್ತು ಪರಿಸರದ ಜೀವನ ಮತ್ತು ಪರಿಸರದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಭಾರತದ ನದಿಗಳ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ. UPSC, ಮುಖ್ಯಾಂಶಗಳು. ಪರಿವಿಡಿ   ಭಾರತದ ನದಿಗಳು ಭಾರತೀಯ ಜನರ ಜೀವನವು ಭಾರತದ ನದಿಗಳಿಂದ ಗಮನಾರ್ಹವಾಗಿ ಪ್ರಭಾವಿತವಾಗಿದೆ. ಶಕ್ತಿ , ಕೈಗೆಟುಕುವ ಸಾರಿಗೆ , ನೀರಾವರಿ ಮತ್ತು ಕುಡಿಯುವ ನೀರನ್ನು ಒದಗಿಸುವುದರ ಜೊತೆಗೆ , ರಾಷ್ಟ್ರದ ನದಿ ವ್ಯವಸ್ಥೆಗಳು ಹೆಚ್ಚಿನ ಸಂಖ್ಯೆಯ ಜನರ ಜೀವನೋಪಾಯವನ್ನು ಬೆಂಬಲಿಸುತ್ತವೆ. ಭಾರತದ ಪ್ರತಿಯೊಂದು ಪ್ರಮುಖ ನಗರವು ನದಿಯ ಉದ್ದಕ್ಕೂ ಏಕೆ ನೆಲೆಗೊಂಡಿದೆ ಎಂಬುದನ್ನು ಇದು ವಿವರಿಸುತ್ತದೆ. ದೇಶದ ಎಲ್ಲಾ ಹಿಂದೂಗಳು ನದಿಗಳನ್ನು ಪವಿತ್ರವೆಂದು ಪರಿಗಣಿಸುತ್ತಾರೆ ಏಕೆಂದರೆ ಅವು ಹಿಂದೂ ಪುರಾಣಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.   ಭಾರತೀಯ ನದಿ ವ್ಯವಸ್ಥೆಯು ಏಳು ಪ್ರಮುಖ ನದಿಗಳಿಂದ (ಸಿಂಧೂ , ಬ್ರಹ್ಮಪುತ್ರ , ನರ್ಮದಾ , ತಾಪಿ , ಗೋದಾವರಿ , ಕೃಷ್ಣ ಮತ್ತು ಮಹಾನದಿ) ದೊಡ್ಡ ಸಂಖ್ಯೆಯ ಉಪನದಿಗಳನ್ನು ಹೊಂದಿದೆ. ಬಂಗಾಳ ಕೊಲ್ಲಿಯು ಬಹುಪಾಲು ನದಿಗಳಿಂದ ನೀರನ್ನು ಪಡೆಯುತ್ತದೆ. ರಾಷ್ಟ್ರದ ಪಶ್ಚಿಮ ಪ್ರದೇಶದ ಮೂಲಕ ಮತ್ತು ಪೂರ್ವಕ್ಕೆ ಹಿಮಾಚಲ ಪ್ರದೇಶ ರಾಜ್ಯದ ಮೂಲಕ ಹರಿಯುವ ಕೆಲವು ನದಿಗಳು ಅರಬ್ಬಿ ಸಮುದ್ರಕ್ಕೆ ಬಿಡುತ್ತವೆ. ಒಳನಾಡಿನ ಒಳಚರಂಡಿಯನ್ನು ಲಡಾಖ್ , ಉತ್ತರ ಅರಾವಳಿ ಶ್ರೇಣಿ ಮತ್...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.