ಎನ್‌ಎಸ್‌ ಜಿ ಮುಖ್ಯಸ್ಥರಾಗಿ ಕನ್ನಡಿಗ ಎ.ಗಣಪತಿ ನೇಮಕ

     ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ)

ಮುಖ್ಯಸ್ಥರಾಗಿ ಕೊಡಗು ಹಿರಿಯ ಮೂಲದ ಅಧಿಕಾರಿ ಮನೆಯಪಂಡ ಎ. ಗಣಪತಿ ಐಪಿಎಸ್ (Maneyapanda A. Ganapa thy) ನೇಮಕಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕ ಸಮಿತಿಯು ಗಣಪತಿಯವರ ನೇಮಕಾತಿಗೆ ಅನುಮೋದನೆ ನೀಡಿದೆ. ಈ ಮೂಲಕ ಇವರು ದೇಶದ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸುತ್ತಿರುವ ಕನ್ನಡಿಗರಾಗಿದ್ದಾರೆ. ಭಯೋತ್ಪಾದಕ ನಿಗ್ರಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಎನ್‌ಎಸ್‌ ಮಹಾ ನಿರ್ದೇಶಕ ಹುದ್ದೆಯು ಸೇನೆಯ ಲೆಫ್ಟಿನೆಂಟ್ ಜನರಲ್, ವಾಯುಪಡೆಯ ಏರ್ ಮಾರ್ಷಲ್ ಹಾಗೂ ನೌಕಾ ಪಡೆಯ ವೈಸ್ ಅಡ್ಡಿರಲ್ ಹುದ್ದೆಗಳಿಗೆ ಸಮವಾಗಿದೆ. ಎನ್‌ಎಸ್‌ಜಿಯ

ಗಣಪತಿಯವರ ಬಗ್ಗೆ ಮಾಹಿತಿ: ಪ್ರಸ್ತುತವಾಗಿ

ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಂ.ಎ. ಗಣಪತಿಯವರು ಕೊಡಗಿನ ಮೂಲದವರು. ಗಣಪತಿಯವರು 1986ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಉತ್ತರಾಖಂಡ ಕೇಡರ್‌ಗೆ ಸೇರಿದ್ದಾರೆ. ಉತ್ತರಾಖಂಡ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಲಾಗಿದ್ದು, ಕೇಂದ್ರ ಗೃಹ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುವ ಜವಾಬ್ದಾರಿ ಹೊಂದಿದ್ದರು. ಪ್ರಸ್ತುತವಾಗಿ ನಾಗರಿಕ ವಿಮಾನಯಾನ ಭದ್ರತಾ ವಿಭಾಗದ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಣಪತಿಯವರು ಗೃಹ ಸಚಿವಾಲಯದಲ್ಲಿ ಆಂತರಿಕ ಭದ್ರತೆ ಮತ್ತು ಎಡಪಂಥೀಯ ಉಗ್ರವಾದದಂತಹ ಚಟುವಟಿಕೆಗಳನ್ನು ಹತ್ತಿಕ್ಕುವ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಎನ್‌ಎಸ್‌ಜಿಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಂ.ಎ. ಗಣಪತಿಯವರು 2024ರ ಫೆಬ್ರವರಿ 21 ರವೆಗೂ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ರಾಷ್ಟ್ರೀಯ ಭದ್ರತಾ ಪಡೆ (NSG-National Security Guard) ಕೇಂದ್ರ ಗೃಹ ವ್ಯವಹಾರ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಭಯೋತ್ಪಾದಕ ನಿಗ್ರಹ ಪಡೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಹಾಗೂ ಆಪರೇಷನ್ ಬ್ಲೂ ಸ್ಟಾರ್.


(1984) ಬಳಿಕ ರಾಷ್ಟ್ರೀಯ ಭದ್ರತಾ ಪಡೆ ಕಾಯ್ದೆ -1986 ಅನ್ವಯ 1986ರ ಸೆಪ್ಟೆಂಬರ್ 22ರಂದು ಸ್ಥಾಪಿಸಲಾಯಿತು. ಮುಂಬೈನಲ್ಲಿ 26/01 ಭಯೋತ್ಪಾದಕ ದಾಳಿ ಸಂಭವಿಸಿದಾಗ ಪಾಕಿಸ್ತಾನದ ಉಗ್ರರ ಹುಟ್ಟಡಗಿಸಿದ್ದು ಇದೇ ಪಡೆ. `Omnipresent,Omnipotent secu rity' ರಾಷ್ಟ್ರೀಯ ಭದ್ರತಾ ಪಡೆಯ ಧೈಯವಾಕ್ಯವಾಗಿದೆ.

ಎನ್‌ಎಸ್‌ಜಿ ಕೈಗೊಂಡ ಪ್ರಮುಖ ಕಾರ್ಯಾಚರಣೆಗಳು


* ಆಪರೇಶನ್ ಬ್ಲ್ಯಾಕ್ ಥಂಡರ್ 


* ಆಪರೇಶನ್ ಅಶ್ವಮೇಧ ಅಕ್ಷರಧಾಮ ದೇವಾಲಯದ ದಾಳಿಯ ಮೇಲಿನ ಕಾರ್ಯಾಚರಣೆ


* ಬ್ಲ್ಯಾಕ್ ಟಾರ್ನೆಡೊ (2008ರ ನವೆಂಬರ್ 26 ರ ಮುಂಬೈ ದಾಳಿ).

Post a Comment (0)
Previous Post Next Post