86ನೇ ಅಖಿಲ ಭಾರತ ಕನ್ನಡ ಸಾಹಿತ್ಯ

        2020ರ ಫೆಬ್ರವರಿ 5 ರಿಂದ 7 ರವರೆಗೆ ಕಲಬುರಗಿಯ ಗುಲ್ಬರ್ಗಾ ವಿವಿ ಆವರಣದಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರು ವಹಿಸಿದ್ದರು. ಕಲ್ಯಾಣ ಕರ್ನಾಟಕದ ಕೇಂದ್ರ ಕಚೇರಿ' ಶರಣರ ನಾಡು ಕಲಬುರಗಿಯಲ್ಲಿ ಈ ಸಮ್ಮೇಳನವು ವೈಭವದಿಂದ ಜರುಗಿತ್ತು. ಈ ಸಮ್ಮೇಳನದಲ್ಲಿ ಕಲಬುರಗಿಯ ಐತಿಹಾಸಿಕ ತಾಣ ಮತ್ತು ಕವಿರಾಜ ಮಾರ್ಗ ಕೃತಿಯ ಚಿತ್ರಣದ ಲಾಂಛನವಿತ್ತು. ಕನ್ನಡಾಂಬೆಯ ಭಾವಚಿತ್ರದೊಂದಿಗೆ ಸ್ಥಳೀಯ ಪ್ರಸಿದ್ಧ ಹಜರತ್ ಖಾಜಾ ಬಂದೆ ನವಾಜ್ ದರ್ಗಾ, ಶರಣ ಬಸವೇಶ್ವರ ದೇವಾಲಯ, ಕಲಬುರಗಿ ಕೋಟೆ, ಚರ್ಚ್, ಬೌದ್ಧವಿಹಾರ & ಕಲಬುರಗಿಯ ತೊಗರಿ ಬೆಳೆ ಚಿತ್ರಗಳನ್ನು ಈ ಲಾಂಛನದಲ್ಲಿ ಬಳಸಲಾಗಿತ್ತು.


ಸಾಹಿತ್ಯ ಸಮ್ಮೇಳನ ಮುಂದೂಡಿ……………


   2021ರ ಫೆಬ್ರವರಿ ಅಂತ್ಯದಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ಆಗಬೇಕಿರುವ ಪೂರ್ವಸಿದ್ಧತೆಗಳು ಅಪೂರ್ಣವಾಗಿದ್ದು ಕೋವಿಡ್ ನಿಯಮಗಳ ಪಾಲನೆಯು ಕಷ್ಟಕರವಾಗುತ್ತಿದೆ ಎಂಬ ಕಾರಣಕ್ಕೆ ಈ ಸಮ್ಮೇಳನವನ್ನು ಮುಂದೂಡಲಾಗಿದೆ. 2021ರ ಫೆಬ್ರವರಿ 5ರಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು  ಕೈಗೊಳ್ಳಲಾಗಿದೆ. 2021 ಮಾರ್ಚ್ ೨ರಂದು ನಡೆಯುವ ಸಭೆಯಲ್ಲಿ 86ನೇ ಸಮ್ಮೇಳನದ ದಿನಾಂಕವನ್ನು ನಿರ್ಧರಿಸಲಾಗುವುದು ಎನ್ನಲಾಗಿದೆ.


       ಕನ್ನಡ ಸಾಹಿತ್ಯ ಪರಿಷತ್ (ಕಸಾಪ)


*ಸ್ಥಾಪನೆ: 1915 ಮೇ 5, 

* ಕೇಂದ್ರ ಕಛೇರಿ:- ಬೆಂಗಳೂರು 

*ಸ್ಥಾಪಕರು: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ & ದಿವಾನ್ ಸರ್. ಎಂ. ವಿಶ್ವೇಶ್ವರಯ್ಯ


ಪ್ರಸ್ತುತ ಅಧ್ಯಕ್ಷರು: ಮನು ಬಳಿಗಾರ್ 

ಧೈಯವಾಕ್ಯ: ಮನುಷ್ಯ ಜಾತಿ ತಾನೊಂದೆ ವಲಂ, 

ಕಸಾಪ ಸಂಸ್ಥೆಯು ಬಿಎಂಟಿಸಿ ಸಹಯೋಗದಲ್ಲಿ ನೃಪತುಂಗ ಪ್ರಶಸ್ತಿಯನ್ನು ನೀಡುತ್ತದೆ. ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಖ್ಯಾತಿಯ ನೃಪತುಂಗ ಪ್ರಶಸ್ತಿಗೆ 

2020ರಲ್ಲಿ ಡಾ.ಜಿ.ಎಸ್. ಆಮೂರ ಅವರು ಭಾಜನರಾಗಿದ್ದರು. 


2019ರಲ್ಲಿ ಚನ್ನವೀರ ಕಣವಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.



Post a Comment (0)
Previous Post Next Post