mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Wednesday, 12 May 2021

ಭಾರತೀಯ ಸೇನಾ ದಿನ indian army day

 2021ರ ಜನವರಿ 15 ರಂದು ದೇಶಾದ್ಯಂತ 73ನೇ ಭಾರತೀಯ ಸೇನಾ ದಿನವನ್ನು ಆಚರಿಸಲಾಯಿತು. ಭಾರತೀಯ ARTY DAY ಸೇನೆಯು ಸ್ವರ್ಣಿಮಾ ವಿಜಯ ವರ್ಷದ ಹಿನ್ನೆಲೆಯಲ್ಲಿ Vijay Run ಹೆಸರಿನ ಮ್ಯಾರಥಾನ್ ಆಯೋಜಿಸಿತ್ತು. ಈ 2020 ದಿನದಂದು ದೆಹಲಿಯ ದಂಡು ಪ್ರದೇಶದಲ್ಲಿರುವ ಪರೇಡ್ ಮೈದಾನದಲ್ಲಿ ಸೇನಾ ಪಡೆಗಳ ಆಕರ್ಷಕ ಪಥಸಂಚಲನ ಮತ್ತು ಕವಾಯತು ಜರುಗಿತು. ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲು ನಡೆಸಿದ ಈ ಕಾರ್ಯಕ್ರಮದಲ್ಲಿ ಸೇನೆಯ ಮೂರೂ ಪಡೆಯ ಮುಖ್ಯಸ್ಥರುಗಳು ಭಾಗವಹಿಸಿದ್ದರು.

   ಭಾಗವಹಿಸಿದ್ದ ಪ್ರಮುಖರು: ಭೂಸೇನಾ ಮುಖ್ಯಸ್ಥರಾದ ಮೇಜರ್‌ ಎಂ.ಎಂ.

ನರವಣೆ ಅವರು ಪಥಸಂಚಲನ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು. ಸಶಸ್ತ್ರ ಪಡೆಗಳ ಮುಖ್ಯಸ್ಥ (CDS-Chief Of Defence Staff) ಜನರಲ್ ಬಿಪಿನ್ ರಾವತ್ ಅವರು ಸೇನಾ ದಿನದ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಕೇತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಪ್ಟನ್ ತಾನಿಯಾ ಶೆರ್ಗಿಲ್ (Captain Tania Shergill) ಪಥಸಂಚಲನದ ನೇತೃತ್ವ ವಹಿಸಿದ್ದರು.


ಸೇನಾ ದಿನದಂದು ಡೋನ್ ಸಮೂಹಗಳ ಪ್ರದರ್ಶನ


ಸೇನಾ ದಿನದ ಸಂದರ್ಭದಲ್ಲಿ ದೆಹಲಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪನವರ ಮೈದಾನದಲ್ಲಿ ನಡೆದ ಪರೇಡ್‌ನಲ್ಲಿ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 15 ಯುದ್ಧ ಡೋನ್‌ಗಳ ಸಮೂಹಗಳ ಪ್ರದರ್ಶನ ಜರುಗಿತು. ಹಕ್ಕಿಗಳ ಗುಂಪಿನಂತೆ ಆಗಸದಲ್ಲಿ ಒಂದಾಗಿ ಹಾರುತ್ತಾ ಶತ್ರು ಪಡೆಗಳ ಮೇಲೆ ನಾನಾ ರೀತಿಯ ದಾಳಿ ನಡೆಸಬಲ್ಲ ಶಕ್ತಿ ಹೊಂದಿರುವ 15 ಯುದ್ಧ ಡೋನ್‌ಗಳ ಪಡೆಯನ್ನು ಪ್ರದರ್ಶಿಸಲಾಯಿತು. ಶತ್ರುಪಾಳೆಯದ ಗಡಿಯೊಳಗೆ 50 ಕಿ.ಮೀ. ನಷ್ಟು ಪ್ರವೇಶಿಸಬಲ್ಲ ಸಾಮರ್ಥ್ಯವನ್ನು ಈ ಡೋನ್‌ಗಳು ಹೊಂದಿವೆ. ಹಕ್ಕಿಗಳಂತೆ ಧ್ವನಿ ಮಾಡುವ ಕಾರಣ ಇವುಗಳ ನಿರ್ವಹಣೆ ಮಾಡುವವರು ಶತ್ರುಗಳ ಕಣ್ಣಿಗೆ ಸಿಕ್ಕಿಬೀಳುವ ಸಾಧ್ಯತೆಯೂ ಕೂಡ ಕಡಿಮೆ, ವಿಶ್ವದ ಹಲವು ದೇಶಗಳ ಇಂತಹ ಹೊಸ ಮಾದರಿಯ ಭವಿಷ್ಯದ ಶಸ್ತ್ರಾಸ್ತ್ರ ಮತ್ತು ಯುದ್ಧ ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದು, ಇದೀಗ ಭಾರತೀಯ ಸೇನೆಯೂ ಕೂಡ ಈ ಸಾಲಿಗೆ ಸೇರ್ಪಡೆಗೊಂಡಿದೆ.

     ಭಾರತೀಯ ಭೂಸೇನೆಯಲ್ಲಿರುವ ಅತ್ಯುನ್ನತ ಹುದ್ದೆ : ಫೀಲ್ಡ್ ಮಾರ್ಷಲ್


ಭಾರತೀಯ ಭೂಸೇನೆಯ ಮುಖ್ಯಸ್ಥರಾಗಿ ಜನರಲ್ ಅವರು ಕಾರ್ಯನಿರ್ವಹಿಸುತ್ತಾರೆ. ಕೆಲವು ವಿಶಿಷ್ಟ ಮತ್ತು ಅಪರೂಪದ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಸೃಷ್ಟಿಸಲಾಗುತ್ತದೆ. ಈ ಹುದ್ದೆಯು 5 ಸ್ಟಾರ್‌ಗಳ ಬ್ಯಾಂಕ್‌ನ ಹುದ್ದೆಯಾಗಿದೆ. ಸ್ವತಂತ್ರ ಭಾರತದಲ್ಲಿ ಇದುವರೆಗೂ ಮಾಣಿಕ್ ಷಾ (ಮೊದಲ ಸೇನಾ ಮುಖ್ಯಸ್ಥ) ಮತ್ತು ಕೆ.ಎಂ.ಕಾರಿಯಪ್ಪ ಮಾತ್ರ ಫೀಲ್ಡ್ ಮಾರ್ಷಲ್ ಪದವಿಯನ್ನು ಪಡೆದಿದ್ದಾರೆ. ಇವರು ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಪಡೆದ ಎರಡನೇ ವ್ಯಕ್ತಿಯಾಗಿದ್ದಾರೆ.


ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾದ ಹುದ್ದೆಗಳು


ನೌಕಾ ಪಡೆಯಲ್ಲಿ ಅಡ್ಡಿರಲ್ ಆಫ್ ಫೀಟ್ ಹುದ್ದೆಯು ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾಗಿದೆ. ಆದರೆ ಭಾರತದಲ್ಲಿ ಇದುವರೆಗೆ


ಯಾರಿಗೂ ಪ್ರದಾನ ಮಾಡಲಾಗಿಲ್ಲ. ಭಾರತೀಯ ವಾಯುಪಡೆಯಲ್ಲಿ ಮಾರ್ಷಲ್ ಆಫ್ ದ ಇಂಡಿಯನ್


ಏರ್‌ಫೋರ್ಸ್‌ ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾಗಿರುತ್ತದೆ. ಈ ಹುದ್ದೆ ಪಡೆದ ಏಕೈಕ ಅಧಿಕಾರಿ - ಅರ್ಜನ್ ಸಿಂಗ್,


ನೆನಪಿರ: CDS

ಚೀಫ್ ಆಫ್ ಡಿಫೆನ್ಸ್ ಸ್ಟ್ಯಾಫ್, ಮಿಲಿಟರಿ

ವ್ಯವಹಾರಗಳ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಾಗಿದ್ದು, 2020ರ ಜನವರಿ 1 ರಿಂದ ಬಿಪಿನ್ ರಾವತ್ ಮೊದಲ ಸಿಡಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  ಜನರಲ್ ಕೆ.ಎಂ. ಕಾರಿಯಪ್ಪ ಅವರು 1949 ರ ಜನವರಿ 15 ರಂದು ಭಾರತೀಯ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮುನ್ನ ಸರ್, ಫ್ರಾನ್ಸಿಸ್ ರಾಬರ್ಟ್ ರಾಯ್ಬುಚ್ಚರ್ ಅವರು ಭಾರತದ ದೇಶದ ಸೇನೆಯ ಕಮಾಂಡರ್ ಆಗಿದ್ದರು. ಬುಚ್ಚರ್ ಅವರು ಕಾರಿಯಪ್ಪ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದ ಐತಿಹಾಸಿಕ ದಿನದ ನೆನಪಿಗಾಗಿ ಜನವರಿ 15 ಅನ್ನು ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. (2020ರ ಸೇನಾ ದಿನದ ಧೈಯವಾಕ್ಯ: ರಕ್ಷಣೆಯ ಡಿಜಿಟಲ್ ಪರಿವರ್ತನೆ)

2020ರ ರಾಷ್ಟ್ರೀಯ ಸೇನಾ ದಿನದ ವಿಶೇಷತೆ 2020ರಲ್ಲಿ ಕ್ಯಾಪ್ಟನ್ ತಾನಿಯಾ ಶೆರ್ಗಿಲ್‌ರವರು ಸೇನಾ ದಿನದಂದು ಮತ್ತು ಗಣರಾಜ್ಯೋತ್ಸವ ದಿನದಂದು ಪರೇಡ್‌ ಅನ್ನು ಮುನ್ನಡೆಸಿದ್ದು, ಈ ಮೂಲಕ ಪರೇಡ್‌ನಲ್ಲಿ ಕಮಾಂಡ್‌ ಅನ್ನು ಮುನ್ನಡೆಸಿದ ಮೊದಲ

ಮಹಿಳಾ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ರಾಷ್ಟ್ರಪತಿಗಳು ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆ : ಮಡಿಕೇರಿ ಕೊಡಗಿನ ವೀರಯೋಧ, ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ(General K.S. Thimayya) ಅವರು ಹುಟ್ಟಿ ಬೆಳೆದ ಮನೆ 'ಸನ್ನಿಸೈಡ್' (Sunny Side) ನಿವಾಸವನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. 2021ರ ಫೆಬ್ರವರಿ 6 ರಂದು ಭಾರತದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಮಡಿಕೇರಿಯಲ್ಲಿ ಈ ಮ್ಯೂಸಿಯಂ ಅನ್ನು ಉದ್ಘಾಟಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 5.5 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂನ ಕಾಮಗಾರಿ ನಡೆದಿದೆ. 1957-61 ರ ಅವಧಿಯಲ್ಲಿ ತಿಮ್ಮಯ್ಯ ಅವರು ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.


No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದಲ್ಲಿನ ಜಲಪಾತಗಳ ಪಟ್ಟಿ, ಅತಿ ಎತ್ತರದ, ದೊಡ್ಡದಾದ, ದೊಡ್ಡದಾದ, ಪ್ರಸಿದ್ಧವಾದ ಜಲಪಾತಗಳು

  ಭಾರತದ ಜಲಪಾತಗಳು: ಭಾರತದ ಅತಿ ದೊಡ್ಡ ಜಲಪಾತವೆಂದರೆ ಕುಂಚಿಕಲ್ ಜಲಪಾತ , ಇದು ಆಗುಂಬೆ ಕಣಿವೆಯಲ್ಲಿದೆ.   UPSC ಪರೀಕ್ಷೆಗಾಗಿ ಭಾರತದ ಎಲ್ಲಾ ಜಲಪಾತಗಳ ಸಂಪೂರ್ಣ ಪಟ್ಟಿ.     ಪರಿವಿಡಿ ಭಾರತದಲ್ಲಿ ಜಲಪಾತಗಳು ಭಾರತವು ವೈವಿಧ್ಯಮಯ ಜಲಪಾತಗಳನ್ನು ಹೊಂದಿದೆ.   ಜೋಗ್ ಫಾಲ್ಸ್ , ಧುಂಧರ್ ಫಾಲ್ಸ್ , ಚಿತ್ರಕೂಟ ಫಾಲ್ಸ್ , ಕುಟ್ರಾಲಂ ಫಾಲ್ಸ್ , ರಾಜ್ರಪ್ಪ ಫಾಲ್ಸ್ ಮತ್ತು ಹುಂಡ್ರು ಫಾಲ್ಸ್ ಭಾರತದ ಕೆಲವು ಮಹತ್ವದ ಜಲಪಾತಗಳಾಗಿವೆ.   ಲಂಬವಾದ ಹನಿ ಅಥವಾ ಕಡಿದಾದ ಹನಿಗಳ ಮೇಲೆ ಜಲಪಾತಗಳು ಬೀಳುವ ಸ್ಟ್ರೀಮ್ ಅಥವಾ ನದಿಯ ಪ್ರದೇಶವನ್ನು ಜಲಪಾತ ಎಂದು ಕರೆಯಲಾಗುತ್ತದೆ.   ಟೇಬಲ್ ಐಸ್ಬರ್ಗ್ ಅಥವಾ ಐಸ್ ಶೆಲ್ಫ್ನ ಅಂಚಿನಲ್ಲಿ ಕರಗಿದ ನೀರು ಚೆಲ್ಲಿದಾಗ ಜಲಪಾತಗಳನ್ನು ರಚಿಸಲಾಗುತ್ತದೆ.   ನದಿಯ ಮೇಲ್ಭಾಗದಲ್ಲಿ ಎತ್ತರದ ಪರ್ವತಗಳಲ್ಲಿ ಸರೋವರಗಳು ಕಣಿವೆಗಳಲ್ಲಿ ಸುರಿಯುತ್ತವೆ , ಜಲಪಾತಗಳು ಆಗಾಗ್ಗೆ ಹೊರಹೊಮ್ಮುತ್ತವೆ. ಭಾರತದ ಜಲಪಾತಗಳ ಪಟ್ಟಿ ಭಾರತದ ಜಲಪಾತಗಳ   ಸಂಪೂರ್ಣ ಪಟ್ಟಿ ಇಲ್ಲಿದೆ   : ಭಾರತದಲ್ಲಿ ಜಲಪಾತಗಳು ಸ್ಥಳ ಕುಂಚಿಕಲ್ ಜಲಪಾತ ಶಿವಮೊಗ್ಗ ಜಿಲ್ಲೆ , ಕರ್ನಾಟಕ ಬರೇಹಿಪಾನಿ ಜಲಪಾತ ಮಯೂರ್‌ಭಂಜ್ ಜಿಲ್ಲೆ , ಒಡಿಶಾ ನೋಹ್ಕಲಿಕೈ ಜಲಪಾತ ಪೂರ್ವ...

ಗ್ರಹಗಳ ಚಲನೆಯ ಕೆಪ್ಲರ್ ನಿಯಮಗಳು

ಖಗೋಳಶಾಸ್ತ್ರದಲ್ಲಿ ,   ಕೆಪ್ಲರ್ನ ಗ್ರಹಗಳ ಚಲನೆಯ ನಿಯಮಗಳು   ಸೂರ್ಯನ ಸುತ್ತ ಗ್ರಹಗಳ ಚಲನೆಯನ್ನು ವಿವರಿಸುವ ಮೂರು ವೈಜ್ಞಾನಿಕ ಕಾನೂನುಗಳಾಗಿವೆ. ಕೆಪ್ಲರ್ನ ಮೊದಲ ನಿಯಮ - ಕಕ್ಷೆಗಳ ನಿಯಮ ಕೆಪ್ಲರ್ನ ಎರಡನೇ ನಿಯಮ - ಸಮಾನ ಪ್ರದೇಶಗಳ ಕಾನೂನು ಕೆಪ್ಲರ್ನ ಮೂರನೇ ನಿಯಮ - ಅವಧಿಗಳ ನಿಯಮ ಪರಿವಿಡಿ ಪರಿಚಯ ಮೊದಲ ಕಾನೂನು ಎರಡನೇ ಕಾನೂನು ಮೂರನೇ ಕಾನೂನು ಕೆಪ್ಲರ್ ಕಾನೂನುಗಳ ಪರಿಚಯ ಚಲನೆ ಯಾವಾಗಲೂ ಸಾಪೇಕ್ಷವಾಗಿರುತ್ತದೆ.   ಚಲನೆಯಲ್ಲಿರುವ ಕಣದ ಶಕ್ತಿಯ ಆಧಾರದ ಮೇಲೆ , ಚಲನೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ: ಬೌಂಡೆಡ್ ಮೋಷನ್ ಅನಿಯಮಿತ ಚಲನೆ ಸೀಮಿತ ಚಲನೆಯಲ್ಲಿ , ಕಣವು ಋಣಾತ್ಮಕ ಒಟ್ಟು ಶಕ್ತಿಯನ್ನು ಹೊಂದಿರುತ್ತದೆ ( E <0) ಮತ್ತು ಒಟ್ಟು ಶಕ್ತಿಯು ಯಾವಾಗಲೂ ಕಣದ ಸಂಭಾವ್ಯ ಶಕ್ತಿಗೆ   ಸಮನಾಗಿರುವ ಎರಡು ಅಥವಾ ಹೆಚ್ಚು ತೀವ್ರವಾದ ಬಿಂದುಗಳನ್ನು ಹೊಂದಿರುತ್ತದೆ   , ಅಂದರೆ , ಕಣದ ಚಲನ ಶಕ್ತಿಯು ಶೂನ್ಯವಾಗುತ್ತದೆ. ವಿಕೇಂದ್ರೀಯತೆಗೆ 0 ≤ e <1, E < 0 ದೇಹವು ಸೀಮಿತ ಚಲನೆಯನ್ನು ಸೂಚಿಸುತ್ತದೆ.   ವೃತ್ತಾಕಾರದ ಕಕ್ಷೆಯು ವಿಕೇಂದ್ರೀಯತೆಯನ್ನು ಹೊಂದಿದೆ e = 0, ಮತ್ತು ದೀರ್ಘವೃತ್ತದ ಕಕ್ಷೆಯು ವಿಕೇಂದ್ರೀಯತೆಯನ್ನು ಹೊಂದಿದೆ e <1. ಅನಿಯಮಿತ ಚಲನೆಯಲ್ಲಿ , ಕಣವು ಧನಾತ್ಮಕ ಒಟ್ಟು ಶಕ್ತಿಯನ್ನು ಹೊಂದಿರುತ್ತದೆ ( E...

Current Affairs Quiz - September, 2021

  1 ಇತ್ತೀಚೆಗೆ ನಿಧನರಾದ ಬುದ್ಧದೇವ್ ಗುಹಾ ಯಾವ ವೃತ್ತಿಯೊಂದಿಗೆ ಸಂಬಂಧ ಹೊಂದಿದ್ದರು ? [A] ಕ್ರೀಡಾಪಟು [B] ಬರಹಗಾರ [C] ರಾಜಕಾರಣಿ [D] ವ್ಯಾಪಾರ-ವ್ಯಕ್ತಿ answar ಸರಿಯಾದ ಉತ್ತರ:   ಬಿ [ಬರಹಗಾರ] ಟಿಪ್ಪಣಿಗಳು: ಮಧುಕಾರಿ ಸೇರಿದಂತೆ ಹಲವಾರು ಜನಪ್ರಿಯ ಪುಸ್ತಕಗಳನ್ನು ಬರೆದ ಖ್ಯಾತ ಬಂಗಾಳಿ ಬರಹಗಾರ ಬುದ್ಧದೇವ್ ಗುಹಾ ಇತ್ತೀಚೆಗೆ ನಿಧನರಾದರು. ಬರಹಗಾರ ತನ್ನ 85 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಆನಂದ ಪುರಸ್ಕಾರ ಮತ್ತು ಶರತ್ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ಬಂಗಾಳಿ ಸಾಹಿತ್ಯದ ಲೇಖಕರು , ' ಕೋಯೆಲ್ ', ' ಕೋಜಗರ್ ', ' ಮಧುಕರಿ ', ' ಜಂಗಲಮಹಲ್ ', ' ಚರಿಬೇತಿ ' ಇತ್ಯಾದಿಗಳನ್ನು ಒಳಗೊಂಡಂತೆ ಗಮನಾರ್ಹ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬಂಗಾಳಿ ಸಾಹಿತ್ಯದಲ್ಲಿ ' ರಿವು ಮತ್ತು ರಿಜುಡಾ ' ಹೆಸರಿನ ಎರಡು ಜನಪ್ರಿಯ ಕಾಲ್ಪನಿಕ ಪಾತ್ರಗಳ ಸೃಷ್ಟಿಕರ್ತ. Current Affairs Quiz - October, 2021     2. ಇತ್ತೀಚೆಗೆ ಭಾರತ ಮತ್ತು ಅಲ್ಜೀರಿಯಾ ನಡುವಿನ ನೌಕಾ ವ್ಯಾಯಾಮವನ್ನು ಎಲ್ಲಿ ನಡೆಸಲಾಯಿತು ? [A] ಬಂಗಾಳ ಕೊಲ್ಲಿ [B] ಅರೇಬಿಯನ್ ಸಮುದ್ರ [C] ಹಿಂದೂ ಮಹಾಸಾಗರ [D] ಮೆಡಿಟರೇನಿಯನ್ ಸಮುದ್ರ answar ಸರಿಯಾದ ಉತ್ತರ:   ಡಿ [ಮೆಡಿಟರೇನಿಯನ್ ಸಮುದ್ರ] ಟಿಪ್ಪಣಿಗಳು: ಇತ್ತ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.