mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Wednesday, 29 September 2021

ವಿಶ್ವ ಹೃದಯ ದಿನದ ಬಗ್ಗೆ

 ವಿಶ್ವ ಮತ್ತು ವಿಶ್ವ ಹೃದಯ ಒಕ್ಕೂಟ, ಸಿವಿಡಿಗಾಗಿ ವಿಶ್ವ ಹೃದಯ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 29 ರಂದು ಆಚರಿಸಲಾಗುತ್ತದೆ.


ಮೇ 2012 ರಲ್ಲಿ, ವಿಶ್ವ ನಾಯಕರು  2025 ರ ವೇಳೆಗೆ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ (NCD) ಜಾಗತಿಕ ಮರಣ ಪ್ರಮಾಣವನ್ನು 25% ರಷ್ಟು ಕಡಿಮೆ ಮಾಡಲು ಬದ್ಧರಾಗಿದ್ದರು ಹೃದಯರಕ್ತನಾಳದ ಕಾಯಿಲೆ (ಸಿವಿಡಿ) ವಿಶ್ವದ ಎನ್‌ಸಿಡಿ ಸಾವುಗಳಲ್ಲಿ ಅರ್ಧದಷ್ಟು ಕಾರಣವಾಗಿದೆ, ಇದು ವಿಶ್ವದ ಮೊದಲ ಕೊಲೆಗಾರ. ಆದ್ದರಿಂದ ವಿಶ್ವ ಹೃದಯ ದಿನವು ಸಿವಿಡಿ ಸಮುದಾಯವು ಸಿವಿಡಿ ವಿರುದ್ಧದ ಹೋರಾಟದಲ್ಲಿ ಒಂದಾಗಲು ಮತ್ತು ಜಾಗತಿಕ ಕಾಯಿಲೆಯ ಹೊರೆಯನ್ನು ಕಡಿಮೆ ಮಾಡಲು ಸೂಕ್ತ ವೇದಿಕೆಯಾಗಿದೆ.


ಹೃದ್ರೋಗ ಮತ್ತು ಪಾರ್ಶ್ವವಾಯು, ಪ್ರತಿವರ್ಷ 18.6 ದಶಲಕ್ಷ ಜೀವಗಳನ್ನು ಬಲಿ ತೆಗೆದುಕೊಳ್ಳುವ ವಿಶ್ವದ ಪ್ರಮುಖ ಕಾರಣವಾಗಿದೆ 

 

ವರ್ಲ್ಡ್ ಹಾರ್ಟ್ ಫೆಡರೇಶನ್ ರಚಿಸಿದ, ವಿಶ್ವ ಹೃದಯ ದಿನವು ಪ್ರಪಂಚದಾದ್ಯಂತ ಜನರಿಗೆ ತಿಳಿಸುತ್ತದೆ, ಹೃದಯ ರೋಗ ಮತ್ತು ಪಾರ್ಶ್ವವಾಯು ಸೇರಿದಂತೆ, ಪ್ರತಿ ವರ್ಷ 18.6 ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಳ್ಳುವ ವಿಶ್ವದ ಪ್ರಮುಖ ಕಾರಣ CVD, ಮತ್ತು ತಡೆಗಟ್ಟಲು ಮತ್ತು ನಿಯಂತ್ರಿಸಲು ವ್ಯಕ್ತಿಗಳು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಎತ್ತಿ ತೋರಿಸುತ್ತದೆ. ಸಿವಿಡಿ  ತಂಬಾಕು ಬಳಕೆ, ಅನಾರೋಗ್ಯಕರ ಆಹಾರ ಮತ್ತು ದೈಹಿಕ ನಿಷ್ಕ್ರಿಯತೆಯಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಹೃದಯ ರೋಗ ಮತ್ತು ಪಾರ್ಶ್ವವಾಯುವಿನಿಂದ ಕನಿಷ್ಠ 80% ಅಕಾಲಿಕ ಮರಣವನ್ನು ತಪ್ಪಿಸಬಹುದು ಎಂದು ಜನರಿಗೆ ಶಿಕ್ಷಣ ನೀಡುವ ಕ್ರಮವನ್ನು ಇದು ಗುರಿಯಾಗಿಸಿಕೊಂಡಿದೆ  .

 

ವಿಶ್ವ ಹೃದಯ ದಿನವು ಜಾಗತಿಕ ಅಭಿಯಾನವಾಗಿದ್ದು, ಈ ಸಮಯದಲ್ಲಿ ವ್ಯಕ್ತಿಗಳು, ಕುಟುಂಬಗಳು, ಸಮುದಾಯಗಳು ಮತ್ತು ಪ್ರಪಂಚದಾದ್ಯಂತದ ಸರ್ಕಾರಗಳು ತಮ್ಮ ಹೃದಯದ ಆರೋಗ್ಯ ಮತ್ತು ಇತರರ ಆರೋಗ್ಯದ ಉಸ್ತುವಾರಿ ವಹಿಸಿಕೊಳ್ಳಲು ಚಟುವಟಿಕೆಗಳಲ್ಲಿ ಭಾಗವಹಿಸುತ್ತವೆ  ಈ ಅಭಿಯಾನದ ಮೂಲಕ, ವಿಶ್ವ ಹೃದಯ ಒಕ್ಕೂಟವು   CVD ಹೊರೆಯ ವಿರುದ್ಧದ ಹೋರಾಟದಲ್ಲಿ ಎಲ್ಲಾ ದೇಶಗಳು ಮತ್ತು ಹಿನ್ನೆಲೆಗಳ ಜನರನ್ನು ಒಗ್ಗೂಡಿಸುತ್ತದೆ ಮತ್ತು ವಿಶ್ವದಾದ್ಯಂತ ಹೃದಯ-ಆರೋಗ್ಯಕರ ಜೀವನವನ್ನು ಪ್ರೋತ್ಸಾಹಿಸಲು ಅಂತರಾಷ್ಟ್ರೀಯ ಕ್ರಮವನ್ನು ಪ್ರೇರೇಪಿಸುತ್ತದೆ ಮತ್ತು ಚಾಲನೆ ಮಾಡುತ್ತದೆ. ನಾವು ಮತ್ತು ನಮ್ಮ ಸದಸ್ಯರು ಎಲ್ಲರಿಗೂ ಹೃದಯದ ಆರೋಗ್ಯವು ಮೂಲಭೂತ ಮಾನವ ಹಕ್ಕು ಮತ್ತು ಜಾಗತಿಕ ಆರೋಗ್ಯ ನ್ಯಾಯದ ನಿರ್ಣಾಯಕ ಅಂಶವಾಗಿರುವ ಜಗತ್ತನ್ನು ನಂಬುತ್ತೇವೆ.

 

Saturday, 25 September 2021

ವಾರ್ಡ್ ಸಭೆ

ಅಧ್ಯಾಯ II
ವಾರ್ಡ್ ಸಭೆ ಮತ್ತು ಗ್ರಾಮಸಭೆ

3. ವಾರ್ಡ್ ಸಭೆ.- (1) ಸರ್ಕಾರದ ಸಾಮಾನ್ಯ ಆದೇಶಗಳಿಗೊಳಪಟ್ಟು, ವಾರ್ಡ್ ಆರು ತಿಂಗಳುಗಳಿಗೆ ಒಂದು ಸಲ ಸಭೆ ಸೇರತಕ್ಕದ್ದು.

(2) ವಾರ್ಡ್ ಸಭೆಯು ಸಭೆ ಸೇರುವಾಗ, ವಾರ್ಡ್ ಸಭೆಯ ಸದಸ್ಯರ ಒಟ್ಟು ಸಂಖ್ಯೆಯ ಹತ್ತನೆಯ ಒಂದರಷ್ಟು ಅಥವಾ ಇಪ್ಪತ್ತು ಸದಸ್ಯರು, ಇವುಗಳಲ್ಲಿ ಯಾವುದು ಕಡಿಮೆಯೋ, ಅದು ಸಭೆಯ ಕೋರಂ
ಆಗಿರತಕ್ಕದ್ದು. ಸಾಧ್ಯವಾದಷ್ಟು ಮಟ್ಟಿಗೆ, ವಾರ್ಡ್ ಸಭೆಗೆ ಹಾಜರಾಗುವ ಮತದಾರರಲ್ಲಿ ಶೇಕಡಾ ಮೂವತ್ತಕ್ಕೆ ಕಡಿಮೆಯಲ್ಲದಷ್ಟು ಸಂಖ್ಯೆಯಲ್ಲಿ ಮಹಿಳೆಯರಿರತಕ್ಕದ್ದು. ಸಾಧ್ಯವಾದಷ್ಟು ಮಟ್ಟಿಗೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳು ಸಭೆಯಲ್ಲಿನ ಅವರ ಜನಸಂಖ್ಯೆಯ ಅನುಪಾತ ಪರವಾಗಿ ಪ್ರತಿನಿಧಿಸು ತಕ್ಕದ್ದು.


(3) ನಿಯಮಿಸಬಹುದಾದಂತೆ ಅಂತಹ ನಿಯಮಗಳಿಗೊಳಪಟ್ಟು, ವಾರ್ಡ್ ಸಭೆಯು ಈ ಮುಂದಿನ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಈ ಮುಂದಿನ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು, ಎಂದರೆ:

(ಎ) ವಾರ್ಡ್ ಸಭೆಯ ಪ್ರದೇಶದೊಳಗೆ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಸ್ತಾವಗಳನ್ನು ಮಾಡುವುದು ಮತ್ತು ಅವುಗಳ ಆದ್ಯತೆಯನ್ನು ನಿರ್ಧರಿಸುವುದು ಮತ್ತು ಗ್ರಾಮಪಂಚಾಯಿತಿಯ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ಅದನ್ನು ಗ್ರಾಮಸಭೆಯ ಮುಂದಿಡಲು ಕಳುಹಿಸಿಕೊಡುವುದು;

(ಬಿ) ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ಫಲಾನುಭವಿ ಆಧಾರಿತ ಯೋಜನೆಗಳಿಗಾಗಿ, ವಾರ್ಡ್ ಸಭೆಯ ಪ್ರದೇಶದಿಂದ ಅತ್ಯಂತ ಅರ್ಹ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಆದ್ಯತೆಯ ಕ್ರಮಕ್ಕನುಸಾರ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ಅದನ್ನು ಗ್ರಾಮಸಭೆಯ ಮುಂದಿಡಲು ಕಳುಹಿಸಿಕೊಡುವುದು;

(ಸಿ) ಸರ್ಕಾರದಿಂದ ನಿವೃತ್ತಿ ವೇತನಗಳು ಮತ್ತು ಸಬ್ಸಿಡಿಗಳಂಥ ವಿವಿಧ ಬಗೆಯ ಕಲ್ಯಾಣ ನೆರವನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿಗಳ ಅರ್ಹತೆಯ ಬಗ್ಗೆ ಸತ್ಯಾಪನೆ ಮಾಡುವುದು;

(ಡಿ) ಗ್ರಾಮ ಪಂಚಾಯತಿಯ ಅಧಿಕಾರಿಗಳು ಸಲ್ಲಿಸಬೇಕಾದ ಸೇವೆಗೆ ಮತ್ತು ವಾರ್ಡ್ ಸಭೆಯ ತರುವಾಯದ ಮುಂದಿನ ಆರು ತಿಂಗಳ ಅವಧಿಯಲ್ಲಿ ಅವರು ಮಾಡಲು ಉದ್ದೇಶಿಸಲಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅವರಿಂದ ಮಾಹಿತಿ ಪಡೆಯುವುದು;

(ಇ) ವಾರ್ಡ್ ಸಭೆಯ ಪ್ರದೇಶದ ಸಂಬಂಧದಲ್ಲಿ ಗ್ರಾಮ ಪಂಚಾಯಿತಿಯ ಪ್ರತಿಯೊಂದು ತೀರ್ಮಾನವು ಎಷ್ಟು ವಿವೇಚನಾಯುತವಾಗಿದೆಯೆಂಬ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆಯುವುದು;


(ಎಫ್) ವಾರ್ಡ್ ಸಭೆಯ ತೀರ್ಮಾನದ ಮೇಲೆ ಕೈಕೊಂಡ ಅನುಸರಣಾ ಕ್ರಮದ ಮೇಲೆ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆಯುವುದು

(ಜಿ) ಅಭಿವೃದ್ಧಿ ಕಾಮಗಾರಿಗಾಗಿ ಸ್ವಯಂ ಸೇವಾ ಕಾರ್ಮಿಕರನ್ನು ಹಾಗೂ ಹಣದ ರೂಪದಲ್ಲಿ ಮತ್ತು ವಸ್ತು ರೂಪದಲ್ಲಿ ವಂತಿಗೆಗಳನ್ನು ಒದಗಿಸುವುದು ಮತ್ತು ಸಂಗ್ರಹಿಸುವುದು ಮತ್ತು ಸ್ವಯಂ

ಸೇವಾ ತಂಡಗಳ ಮೂಲಕ ಅಂಥ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವುದು; (ಹೆಚ್) ವಾರ್ಡ್ ಸಭೆಯ ಸದಸ್ಯರು, ಗ್ರಾಮ ಪಂಚಾಯಿತಿಗೆ ತೆರಿಗೆಗಳನ್ನು ಸಂದಾಯ ಮಾಡುವಂತೆ

ಮತ್ತು ಸಾಲಗಳನ್ನು ಮರು ಸಂದಾಯ ಮಾಡುವಂತೆ ಪ್ರಯತ್ನಿಸುವುದು. (ಐ) ವಾರ್ಡ್ ಸಭೆಯ ಪ್ರದೇಶದೊಳಗೆ ಬೀದಿ ದೀಪಗಳು, ಬೀದಿ ಅಥವಾ ಸಮುದಾಯ ನಲ್ಲಿಗಳು, ಸಾರ್ವಜನಿಕ ಬಾವಿಗಳು, ಸಾರ್ವಜನಿಕ ನಿರ್ಮಲೀಕರಣ ಘಟಕಗಳು, ನೀರಾವರಿ ಸೌಲಭ್ಯಗಳು ಮತ್ತು ಅಂತಹ ಇತರ ಸಾರ್ವಜನಿಕ ಸೌಲಭ್ಯ ಯೋಜನೆಗಳಿಗಾಗಿ ಸ್ಥಳಗಳನ್ನು ಮಾಡುವುದು; ಸಲಹ

(ಜೆ) ವಾರ್ಡ್ ಸಭೆಯ ಪ್ರದೇಶದಲ್ಲಿ ನೀರು ಸರಬರಾಜು ಮತ್ತು ಬೀದಿ ದೀಪ ವ್ಯವಸ್ಥೆಗಳಲ್ಲಿ ಕೊರತೆಗಳನ್ನು ಗುರುತಿಸುವುದು ಮತ್ತು ಪರಿಹಾರ ಕ್ರಮಗಳನ್ನು ಸಲಹೆ ಮಾಡುವುದು; (ಕೆ) ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿವಾರಣೆಯಂಥ ಸಾರ್ವಜನಿಕ ಹಿತಾಸಕ್ತಿಯ

ವಿಷಯಗಳ ಬಗ್ಗೆ ಅರಿವು ಮೂಡಿಸುವುದು;

(ಎಲ್) ವಾರ್ಡ್ ಸಭೆಯ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆಗಳ ಸಂಬಂಧದಲ್ಲಿ ಗ್ರಾಮ ಪಂಚಾಯಿತಿಯ ನೌಕರರಿಗೆ ನೆರವು ನೀಡುವುದು ಮತ್ತು ಕಸವನ್ನು ತೆಗೆದು ಹಾಕುವಲ್ಲಿ ಸ್ವಯಂ ಸೇವೆ ಸಲ್ಲಿಸುವುದು;

(ಎಮ್) ವಾರ್ಡ್ ಸಭೆಯ ಪ್ರದೇಶದೊಳಗೆ ವಯಸ್ಕರ ಶಿಕ್ಷಣ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವುದು;

(ಎನ್), ವಿಶೇಷವಾಗಿ, ರೋಗ ಪತಿಬಂಧ ಮತ್ತು ಕುಟುಂಬ ಕಲ್ಯಾಣದ ವಿಷಯದಲ್ಲಿ ವಾರ್ಡ್ ಸಭೆಯ ಪ್ರದೇಶದಲ್ಲಿಯ ಸಾರ್ವಜನಿಕ ಆರೋಗ್ಯ ಕೇಂದ್ರಗಳ ಚಟುವಟಿಕೆಗಳಿಗೆ ನೆರವು ನೀಡುವುದು ಮತ್ತು ಸಾಂಕ್ರಾಮಿಕ ರೋಗಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಿದ ಬಗ್ಗೆ ಕೂಡಲೇ ವರದಿ ಮಾಡುವ ವ್ಯವಸ್ಥೆ ಮಾಡುವುದು.

(ಓ) ವಾರ್ಡ್ ಸಭೆಯ ಪ್ರದೇಶದಲ್ಲಿ ಜನರ ವಿವಿಧ ಸಮೂಹಗಳ ನಡುವೆ ಸಾಮರಸ್ಯ ಮತ್ತು ಐಕ್ಯತೆಯನ್ನು ಬೆಳೆಸುವುದು ಮತ್ತು ಆ ಸ್ಥಳದ ಜನರ ಪ್ರತಿಭೆಯನ್ನು ಅಭಿವ್ಯಕ್ತ ಗೊಳಿಸುವುದಕ್ಕಾಗಿ ಸಾಂಸ್ಕೃತಿಕ ಉತ್ಸವಗಳು ಮತ್ತು ಕ್ರೀಡಾಕೂಟಗಳನ್ನು ವ್ಯವಸ್ಥೆ ಮಾಡುವುದು, ಮತ್ತು

(ಪಿ) ನಿಯಮಿಸಬಹುದಾದಂತೆ ಅಂತಹ ಇತರ ಅಧಿಕಾರಗಳನ್ನು ಚಲಾಯಿಸುವುದು ಮತ್ತು ಅಂತಹ ಇತರ ಪ್ರಕಾರ್ಯಗಳನ್ನು ನೆರವೇರಿಸುವುದು.

(4) ವಾರ್ಡ್ ಸಭೆಯ ಸಭೆಗಳನ್ನು ಕರೆಯುವುದಕ್ಕಾಗಿ ಮತ್ತು ನಡೆಸುವುದಕ್ಕಾಗಿ ಕಾರ್ಯವಿಧಾನವು, ನಮಿಸಬಹುದಾಂಥದ್ದಾಗಿರತಕ್ಕದ್ದು. 


(5) ವಾರ್ಡ್ ಸಭೆಯ ಪ್ರತಿಯೊಂದು ಸಭೆಗೆ ಸಂಬಂಧಪಟ್ಟ ವಾರ್ಡ್ ಸಭೆಯ ಪ್ರದೇಶದಿಂದ ನಾಯಿತನಾದ ಗಾಮ ಪಂಚಾಯಿತಿಯ ಸದಸ್ಯರು ಮತ್ತು ಆವನ ಗೈರು ಹಾಜರಿಯಲ್ಲಿ ಗ್ರಾಮ ಪಂಚಾಯಿತಿಯು‌ ನಾಮನಿರ್ದೇಶನ ಮಾಡಿದ ಅದರ ಯಾವೊಬ್ಬ ಇತರ ಸದಸ್ಯನು ಅಧ್ಯಕ್ಷತೆ ವಹಿಸತಕ್ಕದ್ದು.

(6) ವಾರ್ಡ್ ಸಭೆಯ ಸಭೆಯಲ್ಲಿಯ ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಎಲ್ಲ ನಿರ್ಣಯಗಳನ್ನು ನಜರಿರುವ ಮತ್ತು ಮತಚಲಾಯಿಸುವ ಸದಸ್ಯರ ಬಹುಮತದಿಂದ ಅಂಗೀಕರಿಸತಕ್ಕದ್ದು.

Friday, 24 September 2021

ಕರ್ನಾಟಕದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದಮುಖ್ಯಮಂತ್ರಿ ಯಾರು ?

ಎ) ಆರ್. ಗುಂಡೂರಾವ್ 

ಬಿ) ಎಸ್.ಆರ್. ಬೊಮ್ಮಾಯಿ

ಸಿ) ಡಿ. ದೇವರಾಜ ಅರಸ್ 

ಡಿ) ರಾಮಕೃಷ್ಣ ಹೆಗಡೆ

ಉತ್ತರ: ಡಿ. ದೇವರಾಜ ಅರಸ್

ವಿವರಣೆ : ದೇವರಾಜ್ ಅರಸು ಅವರು ಕರ್ನಾಟಕದಲ್ಲಿ
1972 ರಿಂದ 1980ರವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಇವರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪಿತಾಮಹ, ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತದೆ. ಇವರು ಮೈಸೂರು ರಾಜ್ಯವು ಕರ್ನಾಟಕ
ಎಂದು ಮರುನಾಮಕರಣಗೊಂಡ ಸಂದರ್ಭದಲ್ಲಿ
ಮುಖ್ಯಮಂತ್ರಿಯಾಗಿದ್ದವರು. (1973 ನವೆಂಬರ್ 1)
ಬಿ.ಎಸ್.ಯಡಿಯೂರಪ್ಪ ಅವರು ಅತಿ ಹೆಚ್ಚು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.

ರಾಜಾರಾಮ್ ಮೋಹನ್‌ರಾಯ್ ಯಾವುದರಸ್ಥಾಪಕರಾಗಿದ್ದರು ?

ಎ) ಬ್ರಹ್ಮ ಸಮಾಜ 

ಬಿ) ಪ್ರಾರ್ಥನಾ ಸಮಾಜ

ಸಿ) ರಾಮಕೃಷ್ಣ ಮಿಷನ್ 

ಡಿ) ಆರ್ಯ ಸಮಾಜ

ಉತ್ತರ: ಬ್ರಹ್ಮ ಸಮಾಜ

ವಿವರಣೆ : ರಾಜಾರಾಮ್ ಮೋಹನ್‌ರಾಯ್ ಅವರು 1828ರಲ್ಲಿ ಕೊಲ್ಕತ್ತಾದಲ್ಲಿ ಬ್ರಹ್ಮ ಸಮಾಜ ಸ್ಥಾಪಿಸಿದರು. ಬಂಗಾಳಿ ಭಾಷೆಯಲ್ಲಿರುವ ಸಂವಾದ ಕೌಮುದಿ ಇವರ ಕೃತಿಯಾಗಿದ್ದು, ಇದನ್ನು ಬ್ರಹ್ಮ ಸಮಾಜದ ಬೈಬಲ್ ಎನ್ನುವರು. 1829ರಲ್ಲಿ ವಿಲಿಯಂ ಬೆಂಟಿಕ್ ರವರು ಸತಿ ಸಹಗಮನ ಪದ್ಧತಿ ನಿಷೇಧ ಮಾಡಲು ಇವರ ಹೋರಾಟ ಪ್ರೇರಣೆಯಾಗಿತ್ತು. ಮೋಹನ್ ರಾಯ್ ಅವರನ್ನು ಭಾರತದ ಪೆಟ್ರಾರ್ಕ್ & ಭಾರತದ ನವೋದಯ ಧೃವತಾರೆ ಎನ್ನುವರು. ಆರ್ಯ ಸಮಾಜದ ಸ್ಥಾಪಕರು ಸ್ವಾಮಿ ದಯಾನಂದ ಸರಸ್ವತಿ,

ಸಂವಿಧಾನದ ಯಾವ ಭಾಗವು ಪಂಚಾಯಿತಿಯೊಂದಿಗೆ ವ್ಯವಹರಿಸುತ್ತದೆ ?

ಎ) ಭಾಗ IX

ಬಿ) ಭಾಗ X 

ಸಿ) ಭಾಗ XI 

ಡಿ) ಭಾಗ XII

ಉತ್ತರ: ಭಾಗ - IX

ವಿವರಣೆ : ಸಂವಿಧಾನದ 9ನೇ ಭಾಗದ 243 ವಿಧಿಯಿಂದ 243ಒ ವಿಧಿವರೆಗೆ ಪಂಚಾಯಿತಿ ಬಗ್ಗೆ ವಿವರಣೆ ನೀಡುತ್ತದೆ. ಸಂವಿಧಾನದ 11ನೇ ಅನುಸೂಚಿಯು ಪಂಚಾಯತ್ ರಾಜ್ ಸಂಸ್ಥೆಗಳ ಅಧಿಕಾರ ಮತ್ತು ಜವಾಬ್ದಾರಿಗಳನ್ನು ತಿಳಿಸುವುದು.

ಮೂಲ ಸಂವಿಧಾನದಲ್ಲಿ 22 ಭಾಗಗಳಿದ್ದು, ಪ್ರಸ್ತುತ 25 ಭಾಗಗಳಿವೆ. 1992ರಲ್ಲಿ ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಪಂಚಾಯತ್ ರಾಜ್ ಕಾಯ್ದೆಯನ್ನು ರಚಿಸಿ 1993ರ ಏಪ್ರಿಲ್ 24ರಂದು ಜಾರಿಗೊಳಿಸಿತು. (1993ರ ಮೇ 10 ರಂದು ಕರ್ನಾಟಕದಲ್ಲಿ ಜಾರಿ). ಹೀಗಾಗಿ ಏಪ್ರಿಲ್ 24 ಅನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಎಂದು ಆಚರಿಸಲಾಗುತ್ತಿದೆ. ಸಂವಿಧಾನದ 10ನೇ ಭಾಗವು ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶ, 11ನೇ ಭಾಗವು ಕೇಂದ್ರ ರಾಜ್ಯಗಳ ನಡುವಿನ ಸಂಬಂಧ ಹಾಗೂ 12ನೇ ಭಾಗವು ಹಣಕಾಸು, ಆಸ್ತಿ, ಒಪ್ಪಂದ ವಿವಾದದ ಬಗ್ಗೆ ತಿಳಿಸುವುದು. ಸಂವಿಧಾನದ ಭಾಗ-1 (ಕೇಂದ್ರ ಮತ್ತು ಭೂ ಪ್ರದೇಶಗಳು), ಭಾಗ-2 (ಪೌರತ್ವ), ಭಾಗ-3 (ಮೂಲಭೂತ ಹಕ್ಕುಗಳು), ಭಾಗ -4 (ರಾಜ್ಯ ನಿರ್ದೇಶಕ ತತ್ವಗಳು)

ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ಯಾವನಗರದಲ್ಲಿದೆ ?

ಎ) ಮೈಸೂರು

ಬಿ) ಬೆಂಗಳೂರು

ಸಿ) ಧಾರವಾಡ 

ಡಿ) ಉಡುಪಿ


(ಉತ್ತರ: ಮೈಸೂರು

ವಿವರಣೆ : ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆಯು ಮೈಸೂರಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ (ಮೊದಲ ಹೆಸರು ಎಂಹೆಚ್‌ಆರ್‌ಡಿ) ದ ಭಾಷಾ ಬ್ಯೂರೋ ಭಾಗವಾಗಿ 1969 ಜುಲೈ 17 ರಂದು ಸ್ಥಾಪನೆಗೊಂಡಿತು. ಕೇಂದ್ರೀಯ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ), ಕರ್ನಾಟಕದ ಏಕೈಕ ರೈಲ್ವೆ ಮ್ಯೂಸಿಯಂ, ಗಂಗೂಬಾಯಿ ಹಾನಗಲ್ ನಾಟ್ಯಕಲಾ ಅಕಾಡೆಮಿ, ಮಾನಸ ಗಂಗೋತ್ರಿ ಹೆಸರಿನ ವಿವಿ ಮೈಸೂರಿನಲ್ಲಿದೆ. ಕರ್ನಾಟಕದಲ್ಲಿ ಮೊದಲು ಆಕಾಶವಾಣಿ ಕೇಂದ್ರ ಕಚೇರಿ ಕೂಡ ಮೈಸೂರಿನಲ್ಲಿ

ಆರಂಭವಾಗಿದೆ. (ಕರ್ನಾಟಕದ ಸ್ವಚ್ಛ ನಗರ - ಮೈಸೂರು)

ತಮಿಳುನಾಡಿನ ಮಾಮಲ್ಲಾಪುರಂನ ರಥವನ್ನು ಯಾವ ರಾಜವಂಶವು ನಿರ್ಮಿಸಿದೆ ?

ಎ) ಚೋಳ

ಬಿ) ಪಲ್ಲವ 

ಸಿ) ಹೊಯ್ಸಳ

ಡಿ) ರಾಷ್ಟ್ರಕೂಟ

ಉತ್ತರ: ಪಲ್ಲವ

ವಿವರಣೆ : ಮಹಾಬಲಿಪುರಂ ಅಥವಾ ಮಾಮಲ್ಲಾಪುರಂ ಎಂಬುದು ಪಲ್ಲವ ರಾಜ ಮನೆತನದ ಪ್ರಮುಖ ಬಂದರು ನಗರ. ಪಲ್ಲವರ ದೊರೆ 1ನೇ ನರಸಿಂಹ ವರ್ಮನು ತಮಿಳುನಾಡಿನ ಮಹಾಬಲಿಪುರಂ ಬಳಿ ಪಂಚರಥಗಳನ್ನು ಮತ್ತು ಪಂಚ ದೇವಾಲಯಗಳನ್ನು ನಿರ್ಮಿಸಿದನು. ಪಲ್ಲವರು ಕಂಚಿಯಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದ್ದು, ದೇವಾಲಯಗಳ ನಗರ ಎನ್ನುವರು. ಪಲ್ಲವರ ರಾಜಧಾನಿ ಕಂಚಿಯಾಗಿದ್ದು, ಇವರ ರಾಜ್ಯ ಲಾಂಛನ ನಂದಿ. ವಾತಾಪಿಕೊಂಡ ಬಿರುದಾಂಕಿತ ದೊರೆ 1ನೇ ನರಸಿಂಹವರ್ಮ

ವೋಲ್ಟಾಯಿಕ್ ಸೆಲ್‌ನಲ್ಲಿ ಕೆಳಗಿನ ಯಾವ ಲೋಹವನ್ನು ಬಳಸಲಾಗುತ್ತದೆ ?


ಎ) ಸತು ಮತ್ತು ಸೀಸ 

ಬಿ) ಇಂಗಾಲ ಮತ್ತು ಸತು 

ಸಿ) ಸತು ಮತ್ತು ತಾಮ್ರ, 

ಡಿ) ಇಂಗಾಲ ಮತ್ತು ನಿಕಲ್

ಉತ್ತರ: ಸತು ಮತ್ತು ತಾಮ್ರ

ವಿವರಣೆ : ವೋಲ್ಟಾಯಿಕ್ ಸೆಲ್‌ನಲ್ಲಿ ಸತ್ತು ಮತ್ತು ತಾಮ್ರ ಲೋಹವನ್ನು ಬಳಸಲಾಗುತ್ತದೆ. ಗ್ಯಾಲ್ವನಿಕ್ ಕೋಶ ಅಥವಾ ವೋಲ್ಟಾಯಿಕ್ ಕೋಶವು ಎಲೆಕ್ಟ್ ಕೆಮಿಕಲ್ ಕೋಶವಾಗಿದ್ದು, ಕೋಶದೊಳಗೆ ನಡೆಯುವ ಸ್ವಯಂ ಪ್ರೇರಿತ ರೆಡಾಕ್ಸ್ ಪ್ರತಿಕ್ರಿಯೆಗಳಿಂದ ವಿದ್ಯುತ್ ಶಕ್ತಿಯನ್ನು ಪಡೆಯುತ್ತದೆ. ವಿದ್ಯುತ್ ಬ್ಯಾಟರಿಯ ವೋಲ್ಟಾಯಿಕ್ ರಾಶಿಯನ್ನು ವೋಲ್ಪಾ ಮೊದಲ ಬಾರಿ ಕಂಡು ಹಿಡಿದರು. ಲೂಯಿಗಿ ಗ್ಯಾಲ್ವನಿ ಅವರು 1780ರಲ್ಲಿ ಎರಡು ವಿಭಿನ್ನ ಲೋಹಗಳಾದ ತಾಮ್ರ ಮತ್ತು ಸತುವಿನ ಮೂಲಕ ವಿದ್ಯುತ್ ಪ್ರವಾಹವನ್ನು ಪತ್ತೆ ಮಾಡಿದ್ದರು.

ಚೆನಾಬ್' ಯಾವ ನದಿಯ ಉಪನದಿಯಾಗಿದೆ ?

ಎ) ಇಂಡಸ್ 

ಬಿ) ಗಂಗಾ 

ಸಿ) ಬ್ರಹ್ಮಪುತ್ರಾ

ಡಿ) ಕಾವೇರಿ

ಉತ್ತರ: ಇಂಡಸ್

ವಿವರಣೆ : ಚೆನಾಬ್, ರಾವಿ, ಸಟೇಜ್, ಝೇಲಂ & ಬಿಯಾಸ್ ನದಿಗಳು ಸಿಂಧೂ (ಇಂಡಸ್) ನದಿಯ ಪ್ರಮುಖ ಉಪನದಿಗಳಾಗಿವೆ. ಸತ್ತೇಜ್ ನದಿಯು ಸಿಂಧೂ ನದಿಯ ಅತಿ ದೊಡ್ಡ ಉಪನದಿ. ಈ ನದಿಗೆ ಹಿಮಾಚಲ ಪ್ರದೇಶದಲ್ಲಿ ಭಾಕ್ರಾ ಅಣೆಕಟ್ಟ (ಗೋಬಿಂದಸಾಗರ ಜಲಾಶಯ)ನ್ನು ನಿರ್ಮಿಸಲಾಗಿದೆ. ಚೆನಾಬ್ ನದಿಯು ಪಂಜಾಬ್ ಪ್ರಾಂತ್ಯದಲ್ಲಿ ಹರಿಯುವ 5 ಪ್ರಮುಖ ನದಿಗಳಲ್ಲಿ ಒಂದಾಗಿದ್ದು, ಭಾರತ & ಪಾಕಿಸ್ತಾನ ಎರಡೂ ದೇಶಗಳಲ್ಲಿ ಹರಿಯುತ್ತದೆ. 1960 ಸೆಪ್ಟೆಂಬರ್ 19ರ ಇಂಡಸ್ ಜಲ ಒಪ್ಪಂದ ಅನ್ವಯ ಚೆನಾಬ್ ನದಿಯ ನೀರನ್ನು ಪಾಕಿಸ್ತಾನ ದೇಶಕ್ಕೆ ಹಂಚಿಕೆ ಮಾಡಲಾಗಿದೆ.

B.C. ರಾಯ್ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ?

ಎ) ಸಂಗೀತ 

ಸಿ) ಔಷಧ

ಬಿ) ಪತ್ರಿಕೋದ್ಯಮ

ಡಿ) ಪರಿಸರ ಕ್ಷೇತ್ರದಲ್ಲಿ

ಉತ್ತರ: ಔಷಧ

ವಿವರಣೆ : ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆ ವತಿಯಿಂದ ಬಿ.ಚಂದ್ರರಾಯ್ ಅವರ ಜನ್ಮ ದಿನದ ನೆನಪಿಗಾಗಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. 1962ರಲ್ಲಿ ಬಿ.ಸಿ.ರಾಯ್ ಪ್ರಶಸ್ತಿಯನ್ನು ಎಂಸಿಐ ಸಂಸ್ಥೆಯು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ನೀಡಲಾಗುವುದು. ಪುಲಿಟ್ಟರ್‌ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಲಾಗುತ್ತದೆ. ದಿ ಟೈಲರ್‌ ಪ್ರಶಸ್ತಿಯನ್ನು ಪರಿಸರ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. ಫ್ರಿಟ್ಟೋಕರ್ ಪ್ರಶಸ್ತಿಯನ್ನು ವಾಸ್ತುಶಿಲ್ಪದ ನೊಬೆಲ್ ಎಂದು ಕರೆಯಲಾಗುತ್ತದೆ. ಗ್ರಾಮಿ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರದಲ್ಲಿ ನೀಡಲಾಗುತ್ತದೆ.

ಪೊಲೀಸ್ ಸ್ಮರಣಾರ್ಥ (Police Commemoration Day) ವನ್ನು ಯಾವಾಗ ಆಚರಿಸಲಾಗುತ್ತದೆ ?


ಎ) 21ನೇ ಜೂನ್

ಬಿ) 21ನೇ ಅಕ್ಟೋಬರ್

ಸಿ) 21ನೇ ನವೆಂಬರ್

ಡಿ) 31ನೇ ಡಿಸೆಂಬರ್

ಉತ್ತರ: 21ನೇ ಅಕ್ಟೋಬರ್

ವಿವರಣೆ : 1959ರ ಅಕ್ಟೋಬರ್-21ರಂದು ಲಡಾಖ್‌ನಲ್ಲಿ 20 ಭಾರತೀಯ ಸೈನಿಕರ ಮೇಲೆ ಚೀನಾ ಸೈನ್ಯವು ಆಕ್ರಮಣ ನಡೆಸಿತು. ಈ ಸಮಯದಲ್ಲಿ 10 ಜನ ಪೊಲೀಸರು ಹೋರಾಡುತ್ತಾ ಸಾವಿಗೀಡಾದರು. ಹೀಗೆ ಕರ್ತವ್ಯ ನಿರ್ವಹಿಸುವಾಗ ಪ್ರಾಣತ್ಯಾಗ ಮಾಡಿದ ಪೊಲೀಸರನ್ನು ನೆನಪಿಸಿಕೊಳ್ಳಲು ಪ್ರತಿವರ್ಷ ಅಕ್ಟೋಬರ್ 21 ಅನ್ನು ಪೊಲೀಸ್ ಸ್ಮರಣಾರ್ಥ ದಿನಾಚರಣೆಯೆಂದು ಆಚರಿಸಲಾಗುತ್ತದೆ. 2018ರಲ್ಲಿ ಭಾರತದ ಮೊದಲ ರಾಷ್ಟ್ರೀಯ ಪೊಲೀಸ್ ಮ್ಯೂಸಿಯಂಅನ್ನು ದೆಹಲಿಯ ಚಾಣಕ್ಯಪುರಿಯಲ್ಲಿ ಆರಂಭಿಸಲಾಯಿತು. ಜೂನ್ 21 (ಅಂತಾರಾಷ್ಟ್ರೀಯ ಯೋಗ ದಿನ), ಮಾರ್ಚ್ 21 (ಅಂತಾರಾಷ್ಟ್ರೀಯ ಅರಣ್ಯ ದಿನ), ಮೇ 21 (ಭಯೋತ್ಪಾದನಾ ನಿಗ್ರಹ ದಿನ), ಸೆಪ್ಟೆಂಬರ್ 21 (ಅರಣ್ಯ ಹುತಾತ್ಮರ ದಿನ)

KSRPಯ ವಿಸ್ತೃತ ರೂಪ?

ಎ) ಕರ್ನಾಟಕ ಸ್ಟೇಟಿಕ್ ರಿಸರ್ವ್ ಪೊಲೀಸ್

ಸಿ) ಕರ್ನಾಟಕ ಸ್ಟೇಟ್ ರಿಕ್ರೂಟ್‌ಮೆಂಟ್ ಪೊಲೀಸ್

ಬಿ) ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್

ಡಿ) ಕರ್ನಾಟಕ ಸೇಫ್ ರೋಡ್ ಪೊಲೀಸ್

ಉತ್ತರ: ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ (Karnataka State Reserve Police)

ವಿವರಣೆ : ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಎಂಬುದು ಕೆಎಸ್‌ಆರ್‌ಪಿಯ ವಿಸ್ತ್ರತ ರೂಪವಾಗಿದೆ. ಈ ಪಡೆದ ಅಧ್ಯಕ್ಷರಾಗಿ ಹೆಚ್ಚುವರಿ ಪೊಲೀಸ್ ಡೈರೆಕ್ಟರ್ ಜನರಲ್ ಬ್ಯಾಂಕ್‌ನ ಅಧಿಕಾರಿ ಇರುತ್ತಾರೆ. ಇದು 10 ಬೆಟಾಲಿಯನ್‌ಗಳನ್ನು ಹೊಂದಿದ್ದು, ಬೆಂಗಳೂರು (4), ಮೈಸೂರು, ಬೆಳಗಾವಿ, ಕಲ್ಬುರ್ಗಿ, ಮಂಗಳೂರು, ಶಿವಮೊಗ್ಗ ಮತ್ತು ಶಿಗ್ಗಾಂವ್‌ನಲ್ಲಿ ತಲ ಒಂದು ಬೆಟಾಲಿಯನ್‌ ಇದೆ. ಕೆಎಸ್‌ಆರ್‌ಪಿ ತರಬೇತಿ ಶಾಲೆಯು ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿದೆ. ಸ ಪೊಲೀಸ್ ತರಬೇತಿ ಶಾಲೆಯು ಬೆಂಗಳೂರಿನಲ್ಲಿದೆ. ಕರ್ನಾಟಕ ಪೊಲೀಸ್ ಅಕಾಡೆಮಿ - ಮೈಸೂರು.

1983ರಲ್ಲಿ ಕೇಂದ್ರ – ರಾಜ್ಯ ಸಂಬಂಧ'ಕ್ಕೆ ಕೇಂದ್ರ ಸರ್ಕಾರವು ಈ ಕೆಳಗಿನ ಯಾವ ಆಯೋಗವನ್ನು ರಚಿಸಿತು ?

ಎ) ಸರ್ಕಾರಿಯಾ ಆಯೋಗ 

ಬಿ) ದತ್ತ ಆಯೋಗ 

ಸಿ)  ಸತ್ವಲದ್ ಆಯೋಗ 

ಡಿ) ರಾಜಮನ್ನಾರ್ ಆಯೋಗ

ಉತ್ತರ: ಸರ್ಕಾರಿಯಾ ಅಯೋಗ

ವಿವರಣೆ : ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ಆಯೋಗಗಳಲ್ಲಿ ಸರ್ಕಾರಿಯಾ ಆಯೋಗ ಒಂದಾಗಿದೆ. ಇದನ್ನು 1983ರಲ್ಲಿ ನೇಮಕ ಮಾಡಿದ್ದು, ನ್ಯಾಯಮೂರ್ತಿ ರಂಜಿತ್ ಸಿಂಗ್ ಸರ್ಕಾರಿಯಾ ಅವರು ಅಧ್ಯಕ್ಷರಾಗಿದ್ದು, ಬಿ.ಶಿವರಾಮನ್, ಎಸ್.ಆರ್.ಸೇನ್ ಮತ್ತು ರಾಮ ಸುಬ್ರಹ್ಮಣ್ಯಂ ಅವರು ಈ ಆಯೋಗದ ಸದಸ್ಯರಾಗಿದ್ದರು. ಈ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆಡಳಿತಾತ್ಮಕ ಸಂಬಂಧದ ಸುಧಾರಣೆಗೆ ಸಂಬಂಧಿಸಿದೆ.

ಪಿ.ವಿ.ರಾಜಮನ್ನಾರ್ ಅವರು 1957-58ರಲ್ಲಿ ಮದ್ರಾಸ್ ರಾಜ್ಯದ ಗವರ್ನರ್ ಆಗಿದ್ದು, 1948-68ರಲ್ಲಿ ಮದ್ರಾಸ್ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿದ್ದರು. ನವದೆಹಲಿಯಲ್ಲಿರುವ ಸಂಗೀತ ನಾಟಕ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದರು. ಇವರು 1964ರಲ್ಲಿ ನೇಮಕವಾದ 4ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದರು. ಎಂ.ಸಿ.ಸೆಟಲ್‌ವಾಡ್ ಅವರು ಭಾರತದ ಮೊದಲ ಮತ್ತು ದೀಘಾವಧಿ ಅವಧಿ ಸೇವೆ ಸಲ್ಲಿಸಿದ ಅಟಾರ್ನಿ ಜನರಲ್ ಹಾಗೂ ಭಾರತದ ಮೊದಲ ಕಾನೂನು ಆಯೋಗದ (1955-58) ಅಧ್ಯಕ್ಷರಾಗಿದ್ದರು.

1969ರಲ್ಲಿ ಸುಭೀಮಲ್ ದತ್ತ ಅಧ್ಯಕ್ಷತೆಯ ಕೈಗಾರಿಕಾ ಪರವಾನಗಿ ನೀತಿ ಶೋಧನಾ ಸಮಿತಿಯು ವರದಿಯನ್ನು ಸಲ್ಲಿಸಿತ್ತು.

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

United Nations (UN): A Pillar of Global Governance 🌍🕊️

  The United Nations (UN) is a cornerstone of international diplomacy and global governance, promoting peace, security, human rights, and development across the world. Established in the aftermath of World War II, the UN has been instrumental in shaping the post-war international order, addressing global challenges, and fostering cooperation among its member states. Origins and Evolution of the UN 📜🕰️ Founding of the UN The UN was founded on October 24, 1945, with the primary objective of preventing future conflicts and fostering international cooperation. This date is now celebrated annually as United Nations Day. The UN replaced the League of Nations, which had failed to prevent the outbreak of World War II. Charter and Structure The UN Charter, signed by 50 countries in San Francisco, outlines the organization's purposes, principles, and structure. The UN has six main organs: General Assembly : Comprising all member states, it serves as a forum for deliberation and policymakin...

ಭಾರತದಲ್ಲಿ ಆರ್ಥಿಕ ಉದಾರೀಕರಣ, ಪರಿಕಲ್ಪನೆ, ಉದ್ದೇಶ, ಪರಿಣಾಮಗಳು

ಭಾರತದಲ್ಲಿನ ಆರ್ಥಿಕ ಉದಾರೀಕರಣವು ಬೆಳವಣಿಗೆಯನ್ನು ಉತ್ತೇಜಿಸಲು , ಹೂಡಿಕೆಗಳನ್ನು ಆಕರ್ಷಿಸಲು ಮತ್ತು ದೇಶದ ಉದ್ಯಮಶೀಲತಾ ಮನೋಭಾವವನ್ನು ಹೊರಹಾಕಲು ವೇದಿಕೆಯನ್ನು ಸ್ಥಾಪಿಸಿತು.   ಆರ್ಥಿಕ ಉದಾರೀಕರಣದ ಪರಿಕಲ್ಪನೆಯನ್ನು ಇಲ್ಲಿ ತಿಳಿಯಿರಿ.   ಭಾರತದಲ್ಲಿ ಆರ್ಥಿಕ ಉದಾರೀಕರಣ ಭಾರತದ ಆರ್ಥಿಕ ಅಭಿವೃದ್ಧಿಯ ಇತಿಹಾಸದಲ್ಲಿ , ಆರ್ಥಿಕ ಉದಾರೀಕರಣದ ಪ್ರಾರಂಭದೊಂದಿಗೆ ಮಹತ್ವದ ತಿರುವು ಬಂದಿತು.   ಈ ಪರಿವರ್ತಕ ಯುಗವು ಹಿಂದಿನ ಕಾಲದಿಂದ ನಿರ್ಗಮನವನ್ನು ಗುರುತಿಸಿತು ಮತ್ತು ದೇಶದ ಆರ್ಥಿಕ ಭೂದೃಶ್ಯವನ್ನು ಮರುರೂಪಿಸುವ ಗುರಿಯನ್ನು ಹೊಂದಿರುವ ಸುಧಾರಣೆಗಳ ಸರಣಿಯನ್ನು ತಂದಿತು.   ಹೊಸ ನೀತಿಗಳು ಮತ್ತು ಕ್ರಮಗಳ ಅಳವಡಿಕೆಯೊಂದಿಗೆ , ಭಾರತವು ಮುಕ್ತತೆ , ಅನಿಯಂತ್ರಣ ಮತ್ತು ಜಾಗತಿಕ ಆರ್ಥಿಕತೆಯೊಂದಿಗೆ ಏಕೀಕರಣದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸಿತು.   ಭಾರತದಲ್ಲಿ ಆರ್ಥಿಕ ಉದಾರೀಕರಣದ ಯುಗವು ಆಳವಾದ ಬದಲಾವಣೆಗಳಿಗೆ , ಬೆಳವಣಿಗೆಯನ್ನು ಉತ್ತೇಜಿಸಲು , ಹೂಡಿಕೆಗಳನ್ನು ಆಕರ್ಷಿಸಲು ಮತ್ತು ದೇಶದ ಉದ್ಯಮಶೀಲತಾ ಮನೋಭಾವವನ್ನು ಹೊರಹಾಕಲು ವೇದಿಕೆಯನ್ನು ಸ್ಥಾಪಿಸಿತು. ಇದರ ಬಗ್ಗೆ ಓದಿ:   ಭಾರತದಲ್ಲಿ LPG ಸುಧಾರಣೆಗಳು ಉದಾರೀಕರಣದ ಪರಿಕಲ್ಪನೆ ಉದಾರೀಕರಣದ ಪರಿಕಲ್ಪನೆಯು ಆರ್ಥಿಕತೆಯ ವಿವಿಧ ವಲಯಗಳಲ್ಲಿನ ಸರ್ಕಾರದ ನಿಯಮಗಳು ಮತ್ತು ನಿರ್ಬಂಧಗಳ ಸಡಿಲಿಕೆಯನ್ನು ಸೂಚಿಸುತ್ತದೆ.   ಇದು ವ...

Nudi Kannada Typing: A Comprehensive Guide

  In today's digital age, the need for localized content has never been more significant. For Kannada speakers, typing in their native script can sometimes be a challenge. Enter Nudi Kannada Typing - a solution that has revolutionized how Kannada is typed on digital platforms. Whether you're a student, professional, or casual user, this guide will walk you through everything you need to know about Nudi Kannada Typing. 🌐📱 What is Nudi Kannada Typing? Nudi is a software developed by the Kannada Ganaka Parishat to facilitate typing in the Kannada language on computers. It supports various fonts and keyboard layouts that cater to different user preferences. Nudi is compatible with Windows OS and provides an intuitive interface for typing in Kannada. Why Use Nudi? Ease of Use : Nudi is designed to be user-friendly, making it accessible even for beginners. Wide Acceptance : It is widely accepted and used in many government and private institutions across Karnataka. Customization ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.