mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header
Showing posts with label study material. Show all posts
Showing posts with label study material. Show all posts

Sunday, 2 May 2021

Gk nots fundamental duties

 ಮೂಲಭೂತ ಕರ್ತವ್ಯ ಎಂದರೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ದೇಶಕ್ಕಾಗಿ ಮಾಡಬೇಕಾದ ಹೊಣೆ. ಮೂಲಭೂತ ಕರ್ತವ್ಯಗಳ ಪರಿಕಲ್ಪನೆಯನ್ನು ರಷ್ಯಾದಿಂದ ಎರವಲು ಪಡೆಯಲಾಗಿದೆ. 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿ ಮೂಲಕ 10 ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಭಾಗ 4ಎ ನಲ್ಲಿ 51ಎ ವಿಧಿ ಅಡಿಯಲ್ಲಿ ಸೇರ್ಪಡೆ ಮಾಡಲಾಯಿತು. 2002ರ 86ನೇ ತಿದ್ದುಪಡಿ, ಅನ್ವಯ 11ನೇ ಕರ್ತವ್ಯವಾಗಿ ಶಿಕ್ಷಣದ ಕರ್ತವನ್ನು ಸೇರ್ಪಡೆ ಮಾಡಲಾಯಿತು. ಪ್ರಸ್ತುತ 11 ಮೂಲಭೂತ ಕರ್ತವ್ಯಗಳಿವೆ.


1) ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು. 

2) ಸ್ವಾತಂತ್ರ್ಯ ಚಳವಳಿಯ ಉನ್ನತ ಆದರ್ಶಗಳನ್ನು ಪಾಲಿಸುವುದು.


3) ಭಾರತದ ಏಕತೆಯನ್ನು ರಕ್ಷಿಸುವುದು.


4) ಮಾತೃ ಭೂಮಿಯನ್ನು ರಕ್ಷಿಸುವುದು.


5) ಭಾರತೀಯರಾದ ನಾವೆಲ್ಲಾ ಒಂದು ಭಾವನೆಯನ್ನು ಬೆಳೆಸುವುದು. 

6) ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು. 

7) ಪ್ರಾಕೃತಿಕ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ಧಿ ಪಡಿಸುವುದು.


8) ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವುದು. 


9) ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ಹಿಂಸೆಯನ್ನು ತ್ಯಜಿಸುವುದು.


10) ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆ ಪಡೆದು ದೇಶದ ಪ್ರಗತಿಗೆ ಶ್ರಮಿಸುವುದು.


11) ಎಲ್ಲಾ ತಂದೆ ತಾಯಿಯಂದಿರು ಹಾಗೂ ಪೋಷಕರು 6 ರಿಂದ 14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶಗಳನ್ನು ಒದಗಿಸುವುದು.

Friday, 30 April 2021

Indian council act 1919


ಭಾರತ ಕೌನ್ಸಿಲ್ ಕಾಯ್ದೆ 1909

ಭಾರತ ಕೌನ್ಸಿಲ್ ಕಾಯ್ದೆ 1909 ಅನ್ನು ಮಾರ್ಲೆ ಮಿಂಟೋ ಸುಧಾರಣೆಗಳು ಎಂದು ಸಹ ಕರೆಯುತ್ತಾರೆ ಈ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಲಾರ್ಡ್ ಮಾರ್ಲೆ ಕಾರ್ಯದರ್ಶಿಯಾಗಿದ್ದರು ಮತ್ತು ಲಾರ್ಡ್ ಮಿಂಟೋ ಭಾರತದ ವೈಸರಾಯ ರಾಗಿದ್ದರು.


 ಕಾಯ್ದೆಯ ಪ್ರಮುಖ ಲಕ್ಷಣಗಳು : 


1. ಈ ಕಾಯ್ದೆಯ ಮೂಲಕ ಕೇಂದ್ರ ಶಾಸನಸಭೆ ಹಾಗೂ ಪ್ರಾಂತೀಯ ಶಾಸನ ಸಭೆಗಳ ಸದಸ್ಯರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾ ಇ ಯಿತು. ಕೇಂದ್ರ ಶಾಸನಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 68ಕ್ಕೆ ಹೆಚ್ಚಿಸಲಾಯಿತು. ಅದರಲ್ಲಿ 36 ಮಂದಿ ಸರ್ಕಾರಿ (Official) ಸದಸ್ಯರಾಗಿದ್ದರು ಹಾಗೂ 32 ಮಂದಿ ಸರ್ಕಾರೇತರ (Non-official) ಸದಸ್ಯರಾಗಿದ್ದರು. 32 ಮಂದಿ ಸರ್ಕಾರೇತರ ಸದಸ್ಯರ ಪೈಕಿ 5 ಮಂದಿ ನಾಮಕರಣಗೊಂಡ ಸದಸ್ಯರಾಗಿದ್ದು, ಉಳಿದವರನ್ನು ಪರೋಕ್ಷವಾಗಿ ಚುನಾಯಿಸಲಾಗುತ್ತಿತ್ತು. ಪ್ರಾಂತೀಯ ಶಾಸನ ಸಭೆಗಳ ಸದಸ್ಯರ ಸಂಖ್ಯೆ ಏಕರೂಪವಾಗಿರದೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನವಾಗಿತ್ತು. 


2. ಕೇಂದ್ರ ಶಾಸನ ಸಭೆಯಲ್ಲಿ ಸರ್ಕಾರಿ ಸದಸ್ಯರು ಬಹುಮತದಲ್ಲಿದ್ದರು. ಆದರೆ ಪ್ರಾಂತೀಯ ಶಾಸನ ಸಭೆಗಳಲ್ಲಿ ಖಾಸಗಿ ಸದಸ್ಯರ (ಸರ್ಕಾರ ತರ ಸದಸ್ಯರ) ಬಹುಮತಕ್ಕೆ ಅವಕಾಶ ನೀಡಲಾಯಿತು.


3. ಶಾಸನ ಸಭೆಗಳ ಅವಧಿಯನ್ನು 3 ವರ್ಷಗಳಿಗೆ ನಿಗದಿಪಡಿಸಲಾಯಿತು.


4. ಶಾಸನ ಸಭೆಗಳ ಅಧಿಕಾರವನ್ನು ಹೆಚ್ಚಿಸಲಾಯಿತು. ಕೇಂದ್ರ ಹಾಗೂ ಪ್ರಾಂತೀಯ ಶಾಸನ ಸಭೆಗಳ ಸದಸ್ಯರಿಗೆ ಪೂರಕ ಪ್ರಶ್ನೆಗಳನ್ನು ಕೇಳುವ, ನಿರ್ಣಯಗಳನ್ನು ಮಂಡಿಸುವ ಹಾಗೂ ಆಯವ್ಯಯ ಪಟ್ಟಿಯನ್ನು ಕುರಿತು ಚರ್ಚಿಸುವ ಅಧಿಕಾರ ನೀಡಲಾಯಿತು.


5. ವೈಸ್‌ರಾಯ್‌ರವರ ಕಾರ್ಯ ನಿರ್ವಾಹಕ ಸಮಿತಿಗೆ ಒಬ್ಬ ಭಾರತೀಯನನ್ನು ನಾಮಕರಣ ಮಾಡಲು ಪ್ರಥಮ ಬಾರಿಗೆ ಅವಕಾಶ ನೀಡಲಾಯಿತು. ಸತ್ಯೇಂದ್ರ ಪ್ರಸಾದ್‌ ಸಿನ್ಹಾರವರು ವೈಸ್‌ರಾಯ್‌ರವರ ಕಾರ್ಯ ನಿರ್ವಾಹಕ ಸಮಿತಿಗೆ ಸದಸ್ಯರಾಗಿ ನಾಮಕರಣಗೊಂಡ ಪ್ರಥಮ ಭಾರತೀಯರಾಗಿದ್ದಾರೆ. ಅವರನ್ನು ಕಾನೂನು ಸದಸ್ಯರಾಗಿ ನೇಮಿಸಲಾಯಿತು.


6. ಬಾಂಬೆ, ಮದ್ರಾಸ್ ಮತ್ತು ಬೆಂಗಾಳ ಪ್ರಾಂತ್ಯಗಳಲ್ಲಿ ಕಾರ್ಯ ನಿರ್ವಾಹಕ ಕೌನ್ಸಿಲರ್‌ಗಳ ಸಂಖ್ಯೆಯನ್ನು 4ಕ್ಕೆ ಏರಿಸಲಾಯಿತು. ಈ ನಾಲ್ವರ ಪೈಕಿ ಇಬ್ಬರು ಕನಿಷ್ಠ 12 ವರ್ಷಗಳ ಕಾಲ ಬ್ರಿಟಿಷ್ ಸರ್ಕಾರದಲ್ಲಿ ಸೇವೆ ಸಲ್ಲಿಸಿರಬೇಕಿತ್ತು.


7. ಪ್ರತ್ಯೇಕ ಮತದಾರ ವರ್ಗದ (Seperate electorate) ಪರಿಕಲ್ಪನೆಯನ್ನು ಒಪ್ಪಿಕೊಳ್ಳುವುದರ ಮೂಲಕ ಮುಸ್ಲಿಮರಿಗೆ ಕೋಮು ಪ್ರಾತಿನಿಧ್ಯ ಪದ್ಧತಿಯನ್ನು ಜಾರಿಗೆ ತರಲಾಯಿತು. ಈ ಪದ್ಧತಿಯ ಪ್ರಕಾರ ಮುಸ್ಲಿಂ ಪ್ರತಿನಿಧಿಗಳು ಮುಸ್ಲಿಂ ಮತದಾರರಿಂದಲೇ ಚುನಾಯಿಸಲ್ಪಡಬೇಕು. ಈ ಪದ್ಧತಿ ಕೋಮುವಾದವನ್ನು ಕಾನೂನುಬದ್ಧಗೊಳಿಸಿತು. ಆದ್ದರಿಂದ ಲಾರ್ಡ್ ಮಿಂಟೋರವರನ್ನು ಕೋಮು ಮತದಾರ ವರ್ಗ (Communal Electorate) ದ ಪಿತಾಮಹ ಎಂದು ಕರೆಯಲಾಗುತ್ತದೆ. ಇಬ


8. ಪ್ರೆಸಿಡೆನ್ಸಿ ಕಾರ್ಪೋರೇಷನ್‌ಗಳಿಗೆ, ವಾಣಿಜ್ಯೋದ್ಯಮಿಗಳಿಗೆ, ವಿಶ್ವವಿದ್ಯಾಲಯಗಳಿಗೆ ಹಾಗೂ ಜಮೀನ್ದಾರರಿಗೆ ಶಾಸನ ಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯತೆ ನೀಡಲಾಯಿತು.

Tuesday, 27 April 2021

Firsts in the state of Karnataka

 




1) ಮೊದಲ ವಾರ್ತಾ ಪತ್ರಿಕೆ : ಮಂಗಳೂರು ಸಮಾಚಾರ್:-

ಮಂಗಳೂರಿನಿಂದ 1843 ರಲ್ಲಿ ಬಾಸೆಲ್ ಮಿಷನ್‌ನ ಮಿಷನರಿಯಾರ ಹರ್ಮನ್ ಮೊಗ್ಲಿಂಗ್‌ರವರು ಕನ್ನಡ ಮೊದಲ ವಾರ್ತಾ ಪತ್ರಿಕೆಯಾದ ಮಂಗಳೂರು ಸಮಾಚಾರ್ ಅನ್ನು ಪ್ರಕಟಿಸಿದರು.


2) ಕನ್ನಡದ ಮೊದಲ ಮಾಸಪತ್ರಿಕೆ : ಮೈಸೂರು ವೃತ್ತಾಂತ ಬೋಧಿನಿ (Mysore Vrittanta Bodhini) ಇದು ಮೈಸೂರಿನಲ್ಲಿ ಭಾಷ್ಯಂ ಭಾಷ್ಯಾಚಾರ್ಯ ಅವರಿಂದ ಆರಂಭವಾಗಿದೆ. 

3) ಮೊದಲ ದೂರದರ್ಶನ ಪ್ರಸಾರ : ಕಲಬುರಗಿ ,ಕರ್ನಾಟಕದಲ್ಲಿ ಮೊದಲ ಬಾರಿಗೆ 1977 ರಲ್ಲಿ ಕಲಬುರಗಿಯಲ್ಲಿ ದೂರದರ್ಶನ ಕೇಂದ್ರವು ಆರಂಭಗೊಂಡಿತು.


4) ಕರ್ನಾಟಕದ ಮೊದಲ ವಿಮಾನ ನಿಲ್ದಾಣ - ಬಳ್ಳಾರಿ ಕರ್ನಾಟಕದಲ್ಲಿ ಮೊದಲ ವಿಮಾನ ನಿಲ್ದಾಣವು ಬಳ್ಳಾರಿಯಲ್ಲಿ 1932 ರಲ್ಲಿ ಆರಂಭವಾಯಿತು. ಈ ವಿಮಾನ ನಿಲ್ದಾಣವು ಕರಾಚಿ-ಅಹಮದಾಬಾದ್ ಮುಂಬೈ-ಬಳ್ಳಾರಿ ಮತ್ತು ಮದ್ರಾಸ್ ವಿಮಾನ ಸೇವೆಗೆ ಸಂಪರ್ಕವಾಗಿತ್ತು.

 * ಸುಧಾಮ ಎಂಬುದು ಸಂಸ್ಕೃತ ಭಾಷೆಯಲ್ಲಿ ಮೈಸೂರಿನಿಂದ

ಪ್ರಕಟವಾಗುತ್ತಿರುವ ದೈನಂದಿನ ಏಕೈಕ ಪತ್ರಿಕೆಯಾಗಿದೆ.

Niti aayog in kannada gk

 



ವಿಸ್ತ್ರತ ರೂಪ: National Institution

for Transforming India (NITI)


* ಮೊದಲ ಹೆಸರು: ರಾಷ್ಟ್ರೀಯ ಯೋಜನಾ Goioen- (NPC-National Planning Comission) (1950 ಮಾರ್ಚ್ 15 ರಲ್ಲಿ ಸ್ಥಾಪನೆ-ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರು


* ಮರುನಾಮಕರಣ ವರ್ಷ: 2015ರ ಜನವರಿ 1


ಕೇಂದ್ರ ಕಚೇರಿ: ನವದೆಹಲಿ


Official website :-http://niti.gov.in/


 ವಿಶೇಷತೆ: ಸಂವಿಧಾನೇತರ ಸಂಸ್ಥೆ, ಥಿಂಕ್ ಟ್ಯಾಂಕ್ ಸಂಸ್ಥೆ, ನವ ಭಾರತ ನಿರ್ಮಾಣದ ಮುಂದಾಳು ಹಾಗೂ ಸುಸ್ಥಿರ ಅಭಿವೃದ್ಧಿ

ಗುರಿಗಳನ್ನು ಅನುಷ್ಠಾನಕ್ಕೆ ತರುತ್ತಿರುವ ನೋಡಲ್ ಘಟಕವಾಗಿದೆ. ಆಯೋಗದ ಪದನಿಮಿತ್ತ ಅಧ್ಯಕ್ಷರು: ಪ್ರಧಾನ ಮಂತ್ರಿ (ಪ್ರಸ್ತುತ ಹಾಗೂ


ಮೊದಲ ಅಧ್ಯಕ್ಷರು : ನರೇಂದ್ರ ಮೋದಿ ಉಪಾಧ್ಯಕ್ಷರು: ಡಾ|| ರಾಜೀವ್ ಕುಮಾರ್ (ಪ್ರಸ್ತುತ), (ಆಯೋಗದ


ಮೊದಲ ಉಪಾಧ್ಯಕ್ಷ - ಅರವಿಂದ್

ಪನಗರಿಯಾ)

Sunday, 25 April 2021

quad group countries

 



ಇದರ ಅರ್ಥ 'ಚತುರ್ಭುಜ ಭದ್ರತಾ ಸಂವಾದ'. ಇದು ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಬಹುಪಕ್ಷೀಯ ಒಪ್ಪಂದವಾಗಿದೆ. ಈ ಸಂಸ್ಥೆ ಮೂಲತಃ ಏಷ್ಯಾ-ಪೆಸಿಫಿಕ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವುದು ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವುದು ಇದರ ಉದ್ದೇಶ. 2007ರಲ್ಲಿ, ಅಂದಿನ ಜಪಾನ್‌ನ ಪ್ರಧಾನಿ ಶಿಂಜೊ ಅಬೆ QUAD ಅನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾಪವನ್ನು ಭಾರತ, ಯುಎಸ್ ಮತ್ತು ಆಸ್ಟ್ರೇಲಿಯಾ ಬೆಂಬಲಿಸಿದವು. 2019ರಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರು ಭೇಟಿಯಾದರು. ಇದರ ನಂತರ, ನಾಲ್ಕು ದೇಶಗಳ ಉನ್ನತ ನಾಯಕರ ನಡುವೆ ಮೊದಲ ಶೃಂಗಸಭೆಯನ್ನು 2021ರ ಮಾರ್ಚ್ 12ರಂದು ಆನ್‌ಲೈನ್ ಆಗಿ ಆಯೋಜಿಸಲಾಯಿತು.


ಆಡು ಭಾಷೆಯಲ್ಲಿ ಈ ನಾಲ್ಕು ದೇಶಗಳ ಕೂಟವನ್ನು ಕ್ವಾಡ್ (ನಾಲ್ವರ ಕೂಟ) ಎಂದು ಕರೆಯಲಾಗುತ್ತದೆ. ಕ್ವಾಡ್ ಸದಸ್ಯರ ಪ್ರಕಾರ ಈ ಕೂಟವನ್ನು ಅಂತರರಾಷ್ಟ್ರೀಯ ಕಾನೂನುಗಳ ಬಗ್ಗೆ ಗೌರವ ಹಾಗೂ ನಿಯಮ ಬದ್ಧ ಆಳ್ವಿಕೆಯ ಆಧಾರದಲ್ಲಿ ಕಟ್ಟಿಕೊಳ್ಳಲಾಗಿದೆ.

Saturday, 24 April 2021

HFI-Human Freedom Index

 2020ರ ಡಿಸೆಂಬರ್ 17 ರಂದು ಪ್ರಕಟವಾದ ಮಾನವ ಸ್ವಾತಂತ್ರ್ಯ ಸೂಚ್ಯಂಕದ ವರದಿಯನ್ವಯ ಭಾರತವು 162 ದೇಶಗಳ ವರದಿಯಲ್ಲಿ 111ನೇ ಸ್ಥಾನ ಪಡೆದಿದೆ.

 ಫ್ರೆಡ್ ಮ್ಯಾಕ್‌ಮೋಹನ್ ಮತ್ತು ಇಯಾನ್ ವಾಸ್‌ಕ್ವೆಜ್ ಅವರು ಈ ವರದಿಯ ಲೇಖಕರಾಗಿದ್ದಾರೆ. ಅಮೆರಿಕಾದ ಥಿಂಕ್‌ಟ್ಯಾಂಕ್ ಕ್ಯಾಟೋ ಇನ್‌ಸ್ಟಿಟ್ಯೂಟ್ ಮತ್ತು ಕೆನಡಾದ ಫೇಜರ್ ಇನ್‌ಸ್ಟಿಟ್ಯೂಟ್‌ ಜಂಟಿಯಾಗಿ ವರದಿ ಪ್ರಕಟಿಸಿವೆ. ಇದು ನಾಗರಿಕ, ಆರ್ಥಿಕ ಮತ್ತು ವೈಯಕ್ತಿಕ ಸ್ವಾತಂತ್ರಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿದೆ. 2019 ರ ವರದಿಯಲ್ಲಿ ಭಾರತವು 94ನೇ ಸ್ಥಾನ ಪಡೆದಿತ್ತು.


 2020ರ ವರದಿಯಲ್ಲಿ ಭಾರತವು ಒಟ್ಟಾರೆ ಬ್ಯಾಂಕಿಂಗ್‌ನಲ್ಲಿ 6.43 ಅಂಕ ಪಡೆದಿದೆ. ವೈಯಕ್ತಿಕ ಸ್ವಾತಂತ್ರದಲ್ಲಿ 6.3 ಅಂಕ, ಆರ್ಥಿಕ ಸ್ವಾತಂತ್ರ್ಯದಲ್ಲಿ 6.56 ಅಂಕ

ಪಡೆದಿವೆ. 


ನ್ಯೂಜಿಲೆಂಡ್, ಸ್ವಿಟ್ಟರ್ಲೆಂಡ್ ಮತ್ತು ಹಾಂಕಾಂಗ್ ದೇಶಗಳು ಈ ಸೂಚ್ಯಂಕದಲ್ಲಿ ಮೊದಲ 3 ಸ್ಥಾನ ಪಡೆದಿವೆ. ಸಿರಿಯಾ ದೇಶವು ವರದಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಭಾರತದ ಪ್ರಮುಖ ನೆರೆಯ ದೇಶ ಚೀನಾವು 129ನೇ ಸ್ಥಾನ ಮತ್ತು ಬಾಂಗ್ಲಾದೇಶವು 139ನೇ ಸ್ಥಾನ ಪಡೆದಿದೆ.




World's Highest Railway Bridge

 ಜಮ್ಮು-ಕಾಶ್ಮೀರದಲ್ಲಿ ಚಿನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ


ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆಯ (World's Highest Railway Bridge) ಪ್ರಮುಖ


ಭಾಗವಾಗಿರುವ ಬೃಹತ್ ಕಮಾನಿನ (Arch) ನಿರ್ಮಾಣ ಕಾರ್ಯವು 2021ರ ಏಪ್ರಿಲ್ ರಂದು 5 ಪೂರ್ಣಗೊಂಡಿದೆ. 5.6 ಮೀಟರ್


ಉದ್ದದ ಕೊನೆಯ ಲೋಹದ ಭಾಗವನ್ನು ಕಮಾನಿನ ಅತಿ ಎತ್ತರದ ಭಾಗದಲ್ಲಿ ಅಳವಡಿಸಲಾಯಿತು. ಕಮಾನಿನ ಆಕಾರವು ಪೂರ್ಣಗೊಂಡಿತು. ಈ ಮೂಲಕ ನದಿಯ ಎರಡೂ ದಡಗಳನ್ನು ಸೇರಿಸುವ ಕಮಾನನ್ನು ಜೋಡಿಸಿದಂತಾಗಿದೆ. ಈ ಸೇತುವೆಯ ಕಾಮಗಾರಿಯು 2 ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಇದು ಹೊಸ ಇತಿಹಾಸವನ್ನು ಸೃಷ್ಟಿಸಲಿದೆ.


ಸೇತುವೆಯ ವಿಶೇಷತೆ: ಉದಾಮ್‌ಪುರ-ಶ್ರೀನಗರ-ಬಾರಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಭಾಗವಾಗಿ 1.315 ಕಿ.ಮೀ (1,315 ಮೀಟರ್) ಉದ್ದದ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಸೇತುವೆಯು ನೆಲಮಟ್ಟದಿಂದ 359 ಮೀಟರ್ ಎತ್ತರವಿದ್ದು ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಿರಲಿದೆ. ಅಂದಾಜು 1,486 ಕೋಟಿ ರೂ. ಮೊತ್ತದ ಈ ಯೋಜನೆಯ ಪ್ರಮುಖ ಭಾಗವಾದ ಕಮಾನಿನ ಕಾಮಗಾರಿಯು ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಇತರೆ ತಾಂತ್ರಿಕ ಹಾಗೂ ಸಿವಿಲ್ ಕಾಮಗಾರಿಗಳು ತ್ವರಿತವಾಗಿ ಸಾಗುತ್ತಿವೆ. 28,660 ಮೆಟ್ರಿಕ್ ಟನ್ ಸ್ಟೀಲ್, 66 ಸಾವಿರ ಕ್ಯುಬಿಕ್ ಮೀಟರ್ ಕಾಂಕ್ರೀಟ್ ಬಳಕೆಯಾಗಲಿದೆ. ಗಂಟೆಗೆ 266 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯ ವೇಗ ಹಾಗೂ ಪ್ರಬಲ ಭೂಕಂಪವನ್ನು ತಡೆದುಕೊಳ್ಳುವಂತೆ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಸೇತುವೆಯು ಕಾಶ್ಮೀರ ಮತ್ತು ದೇಶದ ಇತರ ಭಾಗಗಳೊಂದಿಗೆ ಸರ್ವಋತು ಸಂಪರ್ಕ ಕಲ್ಪಿಸಲು ನೆರವಾಗಲಿದೆ. ಈ ಸೇತುವೆಯ ಆಯಸ್ಸು 120 ವರ್ಷಗಳಾಗಿದ್ದು, ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ರೈಲು ಪ್ರಯಾಣಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

Sunday, 21 March 2021

NATO all about in kannada

 ನ್ಯಾಟೋವನ್ನು ಏಕೆ ಸ್ಥಾಪಿಸಲಾಯಿತು?



North Atlantic Treaty Organization:-NATO



 ಉತ್ತರ ಅಟ್ಲಾಂಟಿಕ್ ಒಕ್ಕೂಟವನ್ನು ಎರಡನೆಯ ಮಹಾಯುದ್ಧದ ನಂತರ ಸ್ಥಾಪಿಸಲಾಯಿತು.  ಯುರೋಪಿನಲ್ಲಿ ಶಾಂತಿಯನ್ನು ಕಾಪಾಡುವುದು, ಅದರ ಸದಸ್ಯರಲ್ಲಿ ಸಹಕಾರವನ್ನು ಉತ್ತೇಜಿಸುವುದು ಮತ್ತು ಅವರ ಸ್ವಾತಂತ್ರ್ಯವನ್ನು ಕಾಪಾಡುವುದು ಇದರ ಉದ್ದೇಶವಾಗಿತ್ತು - ಇವೆಲ್ಲವೂ ಸೋವಿಯತ್ ಒಕ್ಕೂಟವು ಆ ಸಮಯದಲ್ಲಿ ಎದುರಿಸಿದ ಬೆದರಿಕೆಯನ್ನು ಎದುರಿಸುವ ಸಂದರ್ಭದಲ್ಲಿ.  ಅಲೈಯನ್ಸ್ ಸ್ಥಾಪನಾ ಒಪ್ಪಂದವನ್ನು ವಾಷಿಂಗ್ಟನ್‌ನಲ್ಲಿ 1949 ರಲ್ಲಿ ಒಂದು ಡಜನ್ ಯುರೋಪಿಯನ್ ಮತ್ತು ಉತ್ತರ ಅಮೆರಿಕಾದ ದೇಶಗಳು ಸಹಿ ಹಾಕಿದವು.  ಇದು ಮಿತ್ರರಾಷ್ಟ್ರಗಳನ್ನು ಪ್ರಜಾಪ್ರಭುತ್ವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕಾನೂನಿನ ನಿಯಮಗಳಿಗೆ ಹಾಗೂ ವಿವಾದಗಳ ಶಾಂತಿಯುತ ಪರಿಹಾರಕ್ಕೆ ಬದ್ಧವಾಗಿದೆ.  ಮುಖ್ಯವಾಗಿ, ಈ ಒಪ್ಪಂದವು ಸಾಮೂಹಿಕ ರಕ್ಷಣೆಯ ಕಲ್ಪನೆಯನ್ನು ರೂಪಿಸುತ್ತದೆ, ಅಂದರೆ ಒಬ್ಬ ಮಿತ್ರನ ವಿರುದ್ಧದ ದಾಳಿಯನ್ನು ಎಲ್ಲಾ ಮಿತ್ರರಾಷ್ಟ್ರಗಳ ವಿರುದ್ಧದ ದಾಳಿ ಎಂದು ಪರಿಗಣಿಸಲಾಗುತ್ತದೆ.  ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ - ಅಥವಾ ನ್ಯಾಟೋ - ತನ್ನ ಯುರೋಪಿಯನ್ ಸದಸ್ಯ ರಾಷ್ಟ್ರಗಳ ಸುರಕ್ಷತೆಯನ್ನು ಅದರ ಉತ್ತರ ಅಮೆರಿಕಾದ ಸದಸ್ಯ ರಾಷ್ಟ್ರಗಳೊಂದಿಗೆ ಬೇರ್ಪಡಿಸಲಾಗದಂತೆ ಸಂಪರ್ಕ ಹೊಂದಿದೆ ಎಂದು ಖಚಿತಪಡಿಸುತ್ತದೆ.  ಸಂಸ್ಥೆ ಅಟ್ಲಾಂಟಿಕ್‌ನಾದ್ಯಂತ ಸಂವಾದ ಮತ್ತು ಸಹಕಾರಕ್ಕಾಗಿ ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ.

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

Nudi Kannada Typing: A Comprehensive Guide

  In today's digital age, the need for localized content has never been more significant. For Kannada speakers, typing in their native script can sometimes be a challenge. Enter Nudi Kannada Typing - a solution that has revolutionized how Kannada is typed on digital platforms. Whether you're a student, professional, or casual user, this guide will walk you through everything you need to know about Nudi Kannada Typing. 🌐📱 What is Nudi Kannada Typing? Nudi is a software developed by the Kannada Ganaka Parishat to facilitate typing in the Kannada language on computers. It supports various fonts and keyboard layouts that cater to different user preferences. Nudi is compatible with Windows OS and provides an intuitive interface for typing in Kannada. Why Use Nudi? Ease of Use : Nudi is designed to be user-friendly, making it accessible even for beginners. Wide Acceptance : It is widely accepted and used in many government and private institutions across Karnataka. Customization ...

Understanding the International Monetary Fund (IMF) 🌍💰

  The International Monetary Fund (IMF) plays a pivotal role in the global economy by promoting international monetary cooperation, securing financial stability, facilitating international trade, and reducing poverty. Founded in 1944, the IMF has become one of the most influential financial institutions in the world. Let's delve into the history, functions, and global impact of the IMF, highlighting why it is essential to the global economy. The Genesis of the IMF 📜🌟 The IMF was established in July 1944 during the Bretton Woods Conference in New Hampshire, USA. This conference aimed to create a framework for economic cooperation that would prevent the economic turmoil experienced during the Great Depression and World War II. The IMF officially came into existence on December 27, 1945, when 29 countries signed the Articles of Agreement. The founding vision of the IMF was to stabilize the international monetary system and provide a stable financial environment conducive to global e...

ಭಾರತದ ನೆರೆಯ ರಾಷ್ಟ್ರಗಳು, ಪಟ್ಟಿ, ನಕ್ಷೆ, ರಾಜಧಾನಿಗಳು, ಧ್ವಜಗಳು

ಭಾರತದ ನೆರೆಯ ರಾಷ್ಟ್ರಗಳು ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ. UPSC ಗಾಗಿ ಭಾರತದ ನೆರೆಯ ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ     ಪರಿವಿಡಿ ಭಾರತದ ನೆರೆಯ ರಾಷ್ಟ್ರಗಳು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಭಾರತದ ಗಡಿಯಲ್ಲಿರುವ ದೇಶಗಳು. ಮ್ಯಾನ್ಮಾರ್ ಮತ್ತು ಶ್ರೀಲಂಕಾ ಭಾರತದೊಂದಿಗೆ ಕರಾವಳಿ ಗಡಿಯನ್ನು ಹಂಚಿಕೊಂಡಿವೆ. ಭಾರತದ ಭೂ ಗಡಿಯು 15,106.7 ಕಿಮೀ ಉದ್ದವಾಗಿದೆ ಮತ್ತು ಅದರ ಕರಾವಳಿ 7,516.6 ಕಿಮೀ ಉದ್ದವಾಗಿದೆ. ಏಕೈಕ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಮೂರು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ. ಈ ಲೇಖನದಲ್ಲಿ ನಾವು ಭಾರತದ ಗಡಿಯಲ್ಲಿರುವ ನೆರೆಯ ದೇಶಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಚೀನಾ ಮತ್ತು ರಷ್ಯಾ ನಂತರ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ದುರ್ಬಲ ಗಡಿಯಾಗಿದೆ, ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಒಳನುಸುಳುವಿಕ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.